ಈ ಒಂದು ಕಾಯಿಯನ್ನ ಎಲ್ಲಿ ಸಿಕ್ಕರೂ ಕೂಡ ಬಿಡಬೇಡಿ , ದೃಷ್ಟಿದೋಷ , ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ..

253

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗದಿರುವ ಕೆಲವೊಂದು ಹಣ್ಣುಗಳು ಹಳ್ಳಿಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾಡುಗಳಲ್ಲಿ ಸಿಗುತ್ತದೆ ಅಂತಹ ಹಣ್ಣುಗಳಲ್ಲಿ ಈ ಸಿಹಿ ಹುಣಸೆ ಕೂಡ ಒಂದು, ಇದನ್ನು ಈಚಲು ಹಣ್ಣು ಅಂತ ಕೂಡ ಕರಿತಾರೆ…ನಿಮಗೇನಾದರೂ ಈ ಸಿಹಿ ಹುಣಸೆ ಎಲ್ಲಿಯಾದರೂ ದೊರೆತರೆ ತಪ್ಪದೆ ಅದರ ರುಚಿ ಸವಿಯಿರಿ ಇದರಿಂದ ನಿಮ್ಮ ನಾಲಿಗೆಗೆ ರುಚಿ ಮಾತ್ರವಲ್ಲ ಅಗಾಧವಾದ ಆರೋಗ್ಯಕರ ಲಾಭಗಳು ಕೂಡ ದೊರೆಯುತ್ತದೆ. ಈ ಹಣ್ಣು ನಿಮಗೇನೂ ವರುಷಪೂರ್ತಿ ದೊರೆಯುವುದಿಲ್ಲ ಆದರೆ ಈ ಹಣ್ಣು ಲಭಿಸುವ ಕಾಲದಲ್ಲಿ ಈ ಹಣ್ಣಿನ ರುಚಿ ಸವಿಯಿರಿ.

ಹೌದು ಯಾಕೆ ಹಿರಿಯರು ಗಿಡಮರಗಳನ್ನು ನಶಿಸಲು ಬಿಡಬೇಡಿ ಅಂತ ಹೇಳುತ್ತಿದ್ದರು ಅಂದರೆ ಪ್ರಕೃತಿಯಲ್ಲಿ ಇರುವ ಪ್ರತಿಯೊಂದು ಮರ ಗಿಡ ಬಳ್ಳಿ ಗಳಲ್ಲಿ ಮನುಷ್ಯನಿಗೆ ಆರೋಗ್ಯ ನೀಡುವಂತಹ ಅಂಶಗಳು ಇರುತ್ತಿತ್ತು. ಅಷ್ಟೇ ಅಲ್ಲ ಈ ಪ್ರಕೃತಿಗೆ ಎಲ್ಲಾ ತರಹದ ಗಿಡಮರ ಗಳು ಶಕ್ತಿಯ ಸ್ವರೂಪ ಆಗಿರುತ್ತಿತ್ತು ಹಾಗಾಗಿ ಗಿಡ ಮರಗಳನ್ನು ಕಡಿಯಬೇಡಿ ಗಿಡಮರಗಳನ್ನು ಬೆಳೆಸಿ ಅಂತ ಹಿರಿಯರು ಹೇಳುತ್ತಾ ಇದ್ದರು.

ಈ ಬಿಳಿ ಹುಣಸೆ ನಿಮಗೆ ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿಯೂ ಕೂಡ ದೊರೆಯುವುದಿಲ್ಲ ಆದರೆ ಹಳ್ಳಿ ಕಡೆ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಹೊಲಗದ್ದೆಗಳ ಬದಿಯಲ್ಲಿ ಕೆಲವೊಂದು ಗಿಡಮರಗಳು ಬೆಳೆದುಕೊಂಡಿರುತ್ತದೆ ಅಂತಹ ಗಿಡಮರಗಳಲ್ಲಿ ದೊರೆಯುವ ಹಣ್ಣು ಈ ಬಿಳಿ ಹುಣಸೆಹಣ್ಣು ಇದರ ರುಚಿ ಬಹಳ ಸವಿಯಾಗಿರುತ್ತದೆ ಮತ್ತು ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿರುತ್ತದೆ. ನಿಮಗೇನಾದರೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಅಂತಹ ಸಮಸ್ಯೆಗಳಿಂದ ಶಮನ ಪಡೆದುಕೊಳ್ಳುವುದಕ್ಕಾಗಿ ಈ ರೀತಿ ಹಣ್ಣುಗಳನ್ನು ತಿನ್ನುವುದರಿಂದ ಯಾವುದೇ ಚಿಕಿತ್ಸೆಗಳು ಇಲ್ಲದೆ ನಿಮ್ಮ ಈ ಅನಾರೋಗ್ಯ ಸಮಸ್ಯೆಯನ್ನೂ ದೂರ ಮಾಡಿಕೊಳ್ಳಬಹುದು.

ಬಿಳಿ ಹುಣಸೆ ಅಥವಾ ಈಚಲು ಹಣ್ಣು ಈ ಮೊದಲೇ ಹೇಳಿದಂತೆ ಇದು ಸೀಸನಲ್ ಹಣ್ಣು ಅಪರೂಪದ ಎಲ್ಲಾ ಸಮಯದಲ್ಲಿಯೂ ಈ ಹಣ್ಣು ದೊರೆಯುವುದಿಲ್ಲ ಆದರೆ ಈ ಹಣ್ಣು ಸಿಕ್ಕಾಗ ಮಾತ್ರ ಬಿಡಬೇಡಿ ರುಚಿಯೂ ಹೌದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ ಕೂಡ ಹೌದು.

ಹಾಗಾಗಿ ಈಚಲು ಹಣ್ಣು ನಿಮಗೆ ದೊರೆತರೆ ಆ ಹಣ್ಣನ್ನು ತಪ್ಪದೆ ಚಿಹ್ನೆ ಮತ್ತೊಂದು ಮುಖ್ಯ ಮಾಹಿತಿ ಏನು ಅಂದರೆ ಈ ಬಿಳಿ ಹುಣಸೆ ಹಣ್ಣನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಹಾಗೆ ಅಧಿಕ ಪೋಷಕಾಂಶಗಳನ್ನು ಹೊಂದಿರುವಂತಹ ಈ ಈಚಲು ಹಣ್ಣು ಕಣ್ಣಿನ ದೃಷ್ಟಿ ಸಮಸ್ಯೆಗೆ ಬಹಳ ಪ್ರಯೋಜನಕಾರಿ ಹೌದು ಇಂದಿನ ದಿನ ಹೆಚ್ಚಿನ ಮಂದಿ ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದು ಕನ್ನಡಕಗಳನ್ನೂ ಧರಿಸುತ್ತಾರೆ.

ಈ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಂದಲ್ಲ ಎರಡಲ್ಲ ಕಾರಣಗಳು ಬಹಳಷ್ಟು ಕಾರಣಗಳಿಂದ ಈ ಸಮಸ್ಯೆ ಉಂಟಾಗುತ್ತದೆ ಅದರಲ್ಲಿ ನಮ್ಮ ಕಣ್ಣಿನ ದೃಷ್ಟಿಗೆ ಸಮಸ್ಯೆ ಉಂಟಾಗಿದೆ ಅಂದರೆ ಅದಕ್ಕೆ ಕೆಲವೊಂದು ವಿಟಮಿನ್ ಗಳ ಕೊರತೆ ಇರಬಹುದು ಹಾಗಾಗಿ ಕೆಲವೊಂದು ಹಣ್ಣು ತರಕಾರಿಗಳನ್ನು ಸೊಪ್ಪುಗಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಅದರಲ್ಲಿ ಈ ಹಣ್ಣು ಸಹ ಒಂದಾಗಿದೆ ಈಚಲು ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯುವುದಲ್ಲದೆ ಈ ದೃಷ್ಟಿ ಸಮಸ್ಯೆ ಕೂಡ ಪರಿಹಾರ ಆಗುತ್ತದೆ.

ಇಂತಹ ಅದ್ಭುತ ಔಷಧೀಯ ಗುಣವನ್ನು ಹೊಂದಿರುವಂತಹ ಸಾಕಷ್ಟು ಹಣ್ಣು ಕಾಯಿಗಳು ನಮಗೆ ಪ್ರಕೃತಿಯಲ್ಲಿ ದೊರೆಯುತ್ತದೆ, ಇನ್ನೂ ಅದನ್ನು ತಿಂದೆ ನಮ್ಮ ಹಿರಿಯರು ಪೂರ್ವಜರು ಗಳು ಅಷ್ಟೇ ಆರೋಗ್ಯಕರವಾಗಿರಲು ಸಾಧ್ಯವಾಗಿತ್ತು, ಅಷ್ಟು ದಷ್ಟಪುಷ್ಟವಾಗಿರಲು ಸಾಧ್ಯವಾಗುತ್ತಿತ್ತು. ನೀವು ಸಹ ಈ ಹಣ್ಣು ಎಲ್ಲಿಯೆ ದೊರೆತರೂ ಬಿಡಬೇಡಿ ಇದರ ರುಚಿ ಸವಿಯಿರಿ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ.