ಕಜ್ಜಿ ತುರಿಕೆ ಏನೇ ಇದ್ರೂ ಸಹ ಮನೆಯಲ್ಲಿ ಈ ಒಂದು ಮನೆಮದ್ದು ಮಾಡಿ ಹಚ್ಚಿ ಸಾಕು ಕ್ಷಣ ಮಾತ್ರದಲ್ಲಿ ನಿವಾರಣೆ ಆಗುತ್ತದೆ…

266

ಕಜ್ಜಿ ತುರಿಕೆ ಗಜಕರ್ಣ ಇಂತಹ ಸಮಸ್ಯೆ ಕಾಡುತ್ತಿದ್ದಲ್ಲಿ ಈ ಲೇಖನ ತಿಳಿದು ಈ ಸಮಸ್ಯೆ ಪರಿಹಾರ ಮಾಡಿಕೊಳ್ಳುವುದಕ್ಕೆ, ಸುಲಭ ವಾದಂತಹ ಮನೆಮದ್ದು ಮಾಡಿ.ನಮಸ್ಕಾರಗಳು ಸಾಮಾನ್ಯವಾಗಿ ಚರ್ಮ ಸಂಬಂಧಿ ತೊಂದರೆಗಳು ಯಾವಾಗ ಉಂಟಾಗುತ್ತದೆ ಅಂದರೆ ರಕ್ತ ಕೆಟ್ಟಾಗ ಮತ್ತೊಂದು ಕಾರಣ ಈ ಅಲರ್ಜಿ ಸಮಸ್ಯೆ ಎದುರಾದಾಗ ಈ ಕೆಲವೊಂದು ಕಾರಣಗಳಿಗೆ ಚರ್ಮ ಸಂಬಂಧಿ ತೊಂದರೆಗಳು ಉಂಟಾದರೆ ಮತ್ತೊಂದು ಕಾರಣಕ್ಕೂ ಸಹ ಚರ್ಮ ಸಂಬಂಧಿ ತೊಂದರೆಗಳು ಎದುರಾಗುತ್ತದೆ ಅದೇನೆಂದರೆ ಅಂಟುರೋಗ ವಾಗಿರುವ ಈ ಗಜಕರ್ಣ ಸಮಸ್ಯೆ.

ನಿಮಗೆ ಗೊತ್ತಾ ಗಜಕರ್ಣ ಸಮಸ್ಯೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಗಜಕರ್ಣ ತೊಂದರೆ ಇದ್ದವರ ಬಟ್ಟೆ ಬಳಸುವುದು ಅವರು ಬಳಸಿದ ಸೋಪ್ ಬಳಸುವುದು ಅಥವಾ ಅವರ ಪರ್ಸನಲ್ ಕೇರ್ ಪ್ರಾಡಕ್ಟ್ ಗಳನ್ನು ಬಳಸಿದಾಗ ಈ ಚರ್ಮ ಸಂಬಂಧಿ ತೊಂದರೆ ಎದುರಾಗುತ್ತದೆ.ಹೌದು ಮುಖ್ಯವಾಗಿ ಚರ್ಮ ಸಂಬಂಧಿ ತೊಂದರೆಗಳಿಂದ ನೀವೇನಾದರೂ ಬಳಲುತ್ತಿದ್ದಲ್ಲಿ ಮಾಡಿ ಈ ಪರಿಹಾರ, ಇದಕ್ಕೆ ಬೇಕಾಗಿರುವುದು ಏನು ಗೊತ್ತಾ ಈ ಪರಿಹಾರ ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಪರಂಗಿ ಎಲೆ ಮತ್ತು ಬೆಳ್ಳುಳ್ಳಿ

ಈಗ ಈ ಮನೆಮದ್ದು ಮಾಡುವುದಕ್ಕೆ ನಾವು ಮಾಡಬೇಕಾಗಿರುವುದೇನೆಂದರೆ ಮೊದಲಿಗೆ ಬೆಳ್ಳುಳ್ಳಿಯನ್ನು ಚೆನ್ನಾಗಿ ತಿದ್ದಿಕೊಳ್ಳಬೇಕು ಬಳಿಕ ಪರಂಗಿ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು ಈಗ ಎಣ್ಣೆಯನ್ನು ಕಾಯಲು ಇಟ್ಟು ಅಂದರೆ ಇಲ್ಲಿ ನಾವು ಕೊಬ್ಬರಿಎಣ್ಣೆಯನ್ನ ಬಳಸಬೇಕು. ಯಾಕೆಂದರೆ ಕೊಬ್ಬರಿ ಎಣ್ಣೆ ಯಾವುದೇ ಚರ್ಮ ಸಂಬಂಧಿತ ತೊಂದರೆ ನಿವಾರಿಸಲು ಸಹಕಾರಿಯಾಗಿರುತ್ತದೆ.

ಈ ಮನೆ ಮದ್ದು ಮಾಡುವುದು ಹೇಗೆಂದರೆ ಕೊಬ್ಬರಿ ಎಣ್ಣೆಗೆ ಬೆಳ್ಳುಳ್ಳಿ ಮತ್ತು ಪರಂಗಿ ಎಲೆಯ ಪೇಸ್ಟ್ ಅನ್ನು ಹಾಕಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು ನಂತರ ಈ ಎಣ್ಣೆಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತೊಮ್ಮೆ ಎಣ್ಣೆಯನ್ನು ಬಿಸಿ ಮಾಡಿಕೊಂಡು ಈಗ ಈ ಎಣ್ಣೆಯನ್ನು ತುರಿಕೆ ಅದೇ ಭಾಗದಲ್ಲಿ ಅಂದರೆ ಅಜ್ಜಿಯಾದ ಭಾಗದಲ್ಲಿ, ಹತ್ತಿಯ ಸಹಾಯದಿಂದ ದಪ್ಪದಾಗಿ ಲೇಪ ಮಾಡಬೇಕು ಇಡೀ ದಿನದಲ್ಲಿ 3 ಬಾರಿ ಮಾಡುತ್ತ ಬರಬೇಕು.

ಈ ರೀತಿ ಮಾಡುತ್ತಾ ಬಂದಿದ್ದಲ್ಲಿ ತುರಿಕೆಯಂತಹ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ ಕೊಬ್ಬರಿ ಎಣ್ಣೆ ತುಂಬಾನೇ ಪ್ರಭಾವಶಾಲಿಯಾದ ಮನೆಮದ್ದಾಗಿದೆ ಯಾವುದೇ ಚರ್ಮ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು.ಬೆಳ್ಳುಳ್ಳಿ ತುರಿಕೆಯನ್ನು ನಿವಾರಿಸುತ್ತದೆ ಹಾಗೂ ಪರಂಗಿ ಎಲೆ ಸಹ ಚರ್ಮದ ತೊಂದರೆಗಳನ್ನು ನಿವಾರಣೆ ಮಾಡಲು ತುಂಬಾನೇ ಪ್ರಯೋಜನಕಾರಿ, ಹಾಗಾಗಿ ಈ ಸರಳ ಪರಿಹಾರವನ್ನು ಪಾಲಿಸುವುದರಿಂದ ಪ್ರಭಾವವಾಗಿ ಚರ್ಮ ಸಂಬಂಧಿ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ಹೌದು ಕೆಲವರು ಗಜಕರ್ಣದಂಥ ಸಮಸ್ಯೆಗೆ ಎಷ್ಟೆಲ್ಲಾ ಖರ್ಚು ಮಾಡಿರುತ್ತಾರೆ ಆದರೆ ಫಲಿತಾಂಶ ಮಾತ್ರ ದೊರೆತಿರುವುದಿಲ್ಲ ತುರಿಕೆ ಮಾತ್ರ ನಿವಾರಣೆಯಾಗಿರುವುದಿಲ್ಲ ಕೆಲವರಂತೂ ಬಹಳಷ್ಟು ಇಂಜೆಕ್ಷನ್ ಗಳನ್ನು ಸಹ ತೆಗೆದುಕೊಳ್ತಾರೆ ತುರಿಕೆ ಕಡಿಮೆಯಾಗಲಿ ಅಂತಾ.ಆದರೆ ಅದ್ಯಾವುದೂ ಸಹ ನಿಮಗೆ ಫಲಿತಾಂಶ ಕೊಡದೇ ಹೋದಾಗ ಕೊನೆಯಲ್ಲಿ ಈ ಪರಿಹಾರ ನೀವು ಕೂಡ ಪಾಲಿಸಿ ನೋಡಿ ಖಂಡಿತವಾಗಿಯೂ ತೊಂದರೆ ನಿವಾರಣೆಯಾಗುತ್ತದೆ ಹಾಗೂ ಈ ಚರ್ಮ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರು ರಾತ್ರಿ ಸಮಯದಲ್ಲಿ ಮಲಗುವ ಮುನ್ನ ಹಾಲಿಗೆ ಅರಿಶಿನ ಹಾಕಿ ಹುರಿಯುತ್ತ ಬರಬೇಕು ಮತ್ತು ಸ್ನಾನ ಮಾಡುವ ನೀರಿಗೆ ಕಲ್ಲುಪ್ಪು ಮತ್ತು ಬೇವಿನ ಎಲೆಗಳನ್ನು ಮಿಶ್ರಣ ಮಾಡಿ, ಆ ನೀರಿನಿಂದ ಸ್ನಾನ ಮಾಡಬೇಕು ಇದರಿಂದ ಸಹ ಚರ್ಮದ ತೊಂದರೆಗಳು ಬಹಳಷ್ಟು ಬೇಗ ನಿವಾರಣೆಯಾಗುತ್ತದೆ.