ತನ್ನ ಹತ್ರ ಇರೋ 200 ಎಕೆರೆ ಜಾಗವನ್ನು ಯೋಧರಿಗೆ ದಾನವಾಗಿ ನೀಡಿದ ಕನ್ನಡದ ಖ್ಯಾತ ನಟ..

171

ನಮ್ಮ ಭಾರತ ದೇಶದ ಯೋಧರು ಅಂದರೆ ನಮ್ಮ ಭಾರತೀಯರು ಬಹಳ ಗೌರವ ನೀಡುತ್ತಾರೆ ಹೌದು ತಮ್ಮ ಕುಟುಂಬದವರನ್ನು ಬಿಟ್ಟು ದೇಶ ಕಾಯಲೆಂದು ಹೋದ ಯೋಧರು ಮತ್ತು ಯಾವ ಲಾಭವನ್ನೂ ಲೆಕ್ಕಿಸದೇ ಜನರ ಹೊಟ್ಟೆ ತುಂಬಿಸುವುದಕ್ಕಾಗಿ ಶ್ರಮಿಸುವ ರೈತರು ಇವರಿಬ್ಬರೂ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ಹೌದು ಅವರನ್ನು ಸದಾ ಗೌರವಿಸುವುದು ಪ್ರೀತಿಸುವುದು ನಮ್ಮ ಕರ್ತವ್ಯ. ತಮಗೆ ಸೇರಿರುವ ಬರೋಬ್ಬರಿ ನೂರೆಪ್ಪತ್ತೈದು ಎಕರೆಯನ್ನು ದಾನ ಮಾಡಿರುವ ಕನ್ನಡದ ಈ ನಟ ಯಾರು ಗೊತ್ತಾ. ಹೌದು ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟರು ತಮ್ಮ ಸಿನಿಮಾಗಳ ಜೊತೆಗೆ ಈಗಾಗಲೇ ಸಾಕಷ್ಟು ಸಮಾಜಸೇವೆ ಅಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ .

ಮತ್ತು ಕೆಲ ನಟರು ತಮ್ಮದೇ ಆದ ಸ್ವಂತ ಫೌಂಡೇಶನ್ ಗಳ ಮೂಲಕ ಹಲವರಿಗೆ ಸಹಾಯವನ್ನು ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವು ಸ್ಟಾರ್ಸ್ ಅನಾಥಾಶ್ರಮ ವೃದ್ದಾಶ್ರಮ ಚಾರಿಟಿ ಟ್ರಸ್ಟ್ ಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಬಹುಭಾಷಾ ನಟ ಸುಮನ್ ಕೂಡ ಭಾರತೀಯ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದಾಗಿ, ತಮ್ಮ ಮಾಲೀಕತ್ವದ ಸರಿ ಸುಮಾರು ನೂರೆಪ್ಪತ್ತೈದು ಎಕರೆ ಭೂಮಿಯನ್ನು ನೀಡಿದ್ದಾರೆ.

ಹೌದು ನಟ ಸುಮನ್ ಅವರ ಪರಿಚಯ ನಿಮಗೆ ಇದ್ದೇ ಇರುತ್ತದೆ ದಕ್ಷಿಣ ಭಾರತದ ಖ್ಯಾತ ನಟ ಇವರು ನಟ ಸುಮನ್ ಅವರು ತೆಲುಗು ತಮಿಳು ಚಿತ್ರರಂಗದಲ್ಲಿ ಬಹಳ ಜನಪ್ರಿಯತೆ ಇರುವ ನಟ ಆಗಿದ್ದಾರೆ ಹಾಗೂ ಭಾರಿ ಬೇಡಿಕೆಯಿದ್ದ ನಟ ಕೂಡ ಹೌದು. ನಟ ಸುಮನ್ ಅವರು ಮೂಲತಃ ಕರ್ನಾಟಕದ ಕರಾವಳಿ ಭಾಗದವರು. ಮಂಗಳೂರಿನವರಾಗಿರುಚ ನಟ ಸುಮನ್ ಅವರು ಕನ್ನಡ ಒಂದಷ್ಟು ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ನಮ್ಮ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹಳ ಖ್ಯಾತ ನಟರು ಗಳಲ್ಲಿ ಒಬ್ಬರಾಗಿರುವ ನಟ ಸುಮನ್ ಅವರು ಅವರು ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇತ್ತೀಚೇಗೆ ಒಂದು ಮಹತ್ವದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿರುವ ನಟ ಸುಮನ್ ಅವರು ನಾನು ಸಿನಿಮಾ ಕ್ಷೇತ್ರಕ್ಕೆ ಬಂದು 40 ವರ್ಷಗಳಾಗಿವೆ.ನಾನು ಹೈದರಾಬಾದ್ ನ ಹೊರ ಭಾಗದಲ್ಲಿ ಒಂದು ಸ್ಟುಡಿಯೋ ಮಾಡಬೇಕು ಎಂದು ವಿಶಾಲ ಪ್ರದೇಶವಾದ ಸುಮಾರು ನೂರೈವತ್ತಕ್ಕೂ ಹೆಚ್ಚು ಎಕರೆಯಷ್ಟು ಜಾಗ ಖರೀದಿ ಮಾಡಿದ್ದೆ‌. ಆದರೆ ನನ್ನ ಪತ್ನಿ ಸಿರಿಶಾ ಸ್ಟುಡಿಯೋ ಬದಲು ಸಮಾಜಕ್ಕೆ ಏನಾದರು ಉಪಯೋಗವಾಗುವಂತಹ ಸಾರ್ಥಕ ಸೇವೆಯನ್ನ ಮಾಡಿ ಎಂದು ಸಲಹೆ ಕೊಟ್ಟರು.

ಅವರ ಸಲಹೆ ಮೇರೆಗೆ ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಸೇನೆಯ ಮೃತಪಟ್ಟ ಯೋಧರ ಕುಟುಂಬಗಳಿಗೆ ನಾನು ಖರೀದಿಸಿದ ಈ ಜಾಗವನ್ನು ನೀಡಲು ನಿರ್ಧರಿಸಿದ್ದೇನೆ.ಖ್ಯಾತ ನಟರಾಗಿರುವ ನಟ ಸುಮನ್ ಅವರು ಸೈನಿಕರನ್ನ ಕುರಿತು, ಸೇನೆಯಲ್ಲಿ ಎಷ್ಟರ ಮಟ್ಟಿಗೆ ಸಂಕಷ್ಟಕರ ಬದುಕನ್ನ ಎದುರಿಸಬೇಕಾಗಿರುತ್ತದೆ ಎಂಬುದು ನನಗೆ ತಿಳಿದಿದೆ. ಚಳಿ ಮಳೆ ಗಾಳಿ ಎಂಬುದನ್ನು ಕೂಡ ಲೆಕ್ಕಿಸದೆ ನಮ್ಮ ಭಾರತದ ಯೋಧರು ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತ ಇದ್ದಾರೆ ನಮ್ಮ ಭಾರತ ದೇಶದ ಜನತೆಯನ್ನು ನಮ್ಮ ಭಾರತ ದೇಶವನ್ನು ಕಾಯುತ್ತಾ ಇದ್ದಾರೆ. ನನಗೆ ಭಾರತೀಯ ಸೇನೆ ಮತ್ತು ವಾಯುನೆಲೆಯ ಬಗ್ಗೆ ಅಪಾರ ಗೌರವ ಹಾಗೂ ಹೆಮ್ಮೆಯಿದೆ. ಇಲ್ಲಿ ದುಡಿದು ತಮ್ಮ ಪ್ರಾಣ ಮುಡಿಪಾಗಿಟ್ಟ ಯೋಧರ ಕುಟುಂಬಕ್ಕೆ ನನ್ನ ಚಿಕ್ಕ ಸಹಾಯ ಆದ್ದರಿಂದ ನನಗೆ ಸೇರಿರುವ ಜಾಗವನ್ನು ಯೋಧರ ಕುಟುಂಬಕ್ಕೆ ನೀಡಲು ಮುಂದಾಗಿದ್ದೇನೆ.

ಇಲ್ಲಿ ಅವರು ಮನೆಯನ್ನು ನಿರ್ಮಿಸಿಕೊಳ್ಳಬಹುದು. ಹಣ ನೀಡಿದರೆ ಬಳಸಿಕೊಳ್ಳಬಹುದು. ಮನೆಯೊಂದನ್ನ ಕಟ್ಟಿಕೊಂಡರೆ ಅವರ ಜೀವನಕ್ಕೂ ಕೂಡ ಅದು ಆಶ್ಚರ್ಯ ವಾಗಬಹುದು ಎಂಬ ಕಾರಣಕ್ಕಾಗಿ ನನಗೆ ಸೇರಿರುವ ಆಸ್ತಿಯನ್ನು ನಾನು ನಮ್ಮ ಭಾರತ ಕಾಯುವ ಯೋಧರಿಗಾಗಿ ಮುಡಿಪಾಗಿಡುತ್ತೇನೆ ಎಂದು ಹೇಳಿದ್ದಾರೆ ನಟ ಸುಮನ್ ನಿಜಕ್ಕೂ ಇಂತಹ ವ್ಯಕ್ತಿ ಸಮಾಜದಲ್ಲಿ ಅತಿ ವಿರಳ ಇವತ್ತಿನ ದಿವಸದಲ್ಲಿ ತಮ್ಮ ಸಂಸಾರದ ಬಗ್ಗೆ ಯೋಚನೆ ಮಾಡುವ ಇವರು ನಮ್ಮ ಭಾರತ ಕಾಯುವ ಯೋಧರಿಗೆ ಯೋಧರ ಕುಟುಂಬಕ್ಕೆ ಇಷ್ಟು ದೊಡ್ಡ ಸಹಾಯ ಮಾಡಿದರೆ ನಿಜಕ್ಕೂ ಇಂತಹ ವ್ಯಕ್ತಿಗಳು ನಿಜಜೀವನದಲ್ಲಿಯೂ ನಾಯಕ ನಟರು.