ದಿನ ನಿತ್ಯ 35 ಕೆಜಿ ತಿನ್ನೋ ಆಹಾರದ ಜೊತೆ ವಿ”ಷ ಕೂಡ ಜೊತೆಗೆ ತಿನ್ನುತ್ತಿದ್ದನಂತೆ.. ಆತನ ಬಟ್ಟೆ ಮುಟ್ಟಿದರೆ ಸಾಕು ಮನೆ ಮುಂದೆ ಹೊಗೆನೆ , ಇತಿಹಾಸದಲ್ಲೇ ಮರೆಯಾದ ರಾಜನ ರೋಚಕ ಕಥೆ

144

ಇತಿಹಾಸ ತೆರೆದು ನೋಡಿದರೆ ಅಲ್ಲಿ ನಾವು ರಾಜಮನೆತನಗಳ ಪಟ್ಟಿಯನ್ನು ಸಾಕಷ್ಟು ಕಾಣಬಹುದು ಹಾಗೂ ಆ ರಾಜರು ಅದೆಷ್ಟು ಐಷಾರಾಮಿಯಾಗಿ ಜೀವನ ನಡೆಸಿ ಶತ್ರುಗಳ ವಿರುದ್ಧ ಹೋರಾಡಿ ತಮ್ಮ ರಾಜ್ಯವನ್ನು ವೈವಿಧ್ಯಮ ವನ್ನಾಗಿಸಿ ಇತಿಹಾಸ ಸೇರಿದರೆ ಹೌದು ಇತಿಹಾಸ ಪುಟದಲ್ಲಿ ಇರುವ ರಾಜ ಮಹಾರಾಜರುಗಳ ಬಗ್ಗೆ ತಿಳಿಯುತ್ತಾ ಹೋದರೆ ಅವರು ನಡೆಸುತ್ತಿದ್ದ ಅಂತಹ ಐಷಾರಾಮಿ ಜೀವನವನ್ನು ಓದುತ್ತಿದ್ದರೆ ಮೈ ರೋಮಾಂಚನ ಅನಿಸುತ್ತಿತ್ತೋ ಇನ್ನೂ ಕೆಲವರು ಭಯಂಕರವಾಗಿ ತಮ್ಮ ಆಡಳಿತ ನಡೆಸುತ್ತ ಇದ್ದರು. ಇಲ್ಲೊಬ್ಬ ರಾಜಾ ಸಹ ತಾನು ಕತ್ತರಿಸುತ್ತಾ ಇದ್ದ ಉಡುಗೆ ತೊಡುಗೆಗಳಲ್ಲಿ ವಿ..ಷವನ್ನು ತುಂಬಿ ಕೊಂಡಿದ್ದನಂತೆ ಅಷ್ಟೇ ಅಲ್ಲ ಈ ರಾಜ ತನ್ನ ಊಟಕ್ಕೆ ಪ್ರತಿ ದಿನ 35ಕೆಜಿಗೂ ಅಧಿಕ ಆಹಾರವನ್ನು ಸೇವಿಸುತ್ತಾ ಇದ್ದನಂತೆ.

ಹೌದು ಕೇಳಿದರೆ ಶಾಕ್ ಅನಿಸುತ್ತದೆ ಭಯಾನಕ ಅಂತ ಕೂಡ ಅನಿಸಬಹುದು ಇನ್ನೂ ಈ ರಾಜನ ಬಗ್ಗೆ ಹೇಳೋದಿದೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ರಾಜ ಅಂದರೆ ಆತನನ್ನು ಆ ರಾಜ್ಯದ ಜನರು ದೈವಾಂಶ ಸಂಭೂತರಂತೆ ಕಾಣುತ್ತಾ ಇದ್ದರು. ರಾಜರೂ ಸಹ ತಮ್ಮ ಪ್ರಜೆಗಳ ಕಷ್ಟಗಳನ್ನು ತಿಳಿಯುವುದಕ್ಕಾಗಿ ಆಗಾಗ ಅವರು ಇರುವ ಸ್ಥಳಕ್ಕೆ ಭೇಟಿ ನೀಡಿ ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರವನ್ನು ಸಹ ನೀಡುತ್ತಿದ್ದರು. ರಾಜನನ್ನು ಕಂಡರೆ ಅಂದಿನ ಕಾಲದಲ್ಲಿ ಪ್ರಜೆಗಳು ಬಹಳ ಭಯಭಕ್ತಿಯಿಂದ ಕಾಣುತ್ತಾ ಇದ್ದರು. ಇನ್ನೂ ಕೆಲ ರಾಜರುಗಳು ತಮ್ಮ ಐಷಾರಾಮಿ ಜೀವನಕ್ಕೆ ತಮ್ಮ ವೈಭವ ದಿಂದ ಕೂಡಿದ ಆಡಳಿತಕ್ಕೆ ಬಹಳ ಜನಪ್ರಿಯತೆ ಸಹ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಅಂದಿನ ರಾಜರುಗಳು ಉಡುಪು-ಆಭರಣಗಳ ಭಕ್ಷ ಭೋಜನದ ಪ್ರಿಯರಾಗಿರುತ್ತಿದ್ದರು. ಗರಡಿ ಮನೆಗಳಲ್ಲಿ ತಮ್ಮ ದೇಹವನ್ನು ದಂಡಿಸುತ್ತಿದ್ದರು ಅದರಂತೆ ಅವರ ದೇಹಧಾರ್ಢ್ಯ ಕೂಡ ಅಜಾನುಬಾಹುವಾಗಿರುತಿತ್ತು.

ಇಲ್ಲೊಬ್ಬ ರಾಜ ಊಟದ ವಿಚಾರದಲ್ಲಿ ಅಪಾರ ಅತೀವ ರುಚಿ ಕಂಡಿದವನಾಗಿದ್ದನು. ತಾನು ಇಷ್ಟಪಟ್ಟ ನಂತಹ ಭೋಜನವನ್ನು ಆತ ಸೇವೆ ಸವಿಯುತ್ತಿದ್ದ. ಈ ರಾಜ ಯಾವ ಮಟ್ಟಿಗೆ ಆಹಾರ ಪ್ರಿಯ ಅಂದರೆ ದಿನವೊಂದಕ್ಕೆ ಸರಿ ಸುಮಾರು ಮೂವತ್ತೈದು ಕೆಜಿಯಷ್ಟು ಆಹಾರವನ್ನು ಸೇವಿಸುತ್ತಿದ್ದನು. ಇವರು ಸೇವಿಸುತ್ತಿದ್ದ ಆಹಾರದಲ್ಲಿ ವಿವಿಧ ರೀತಿಯ ಹಣ್ಣು-ಹಂಪಲು ತರಕಾರಿಗಳು ಜೊತೆಗೆ ಅಚ್ಚರಿ ಎಂಬಂತೆ ವಿಷವೂ ಕೂಡ ಇರುತಿತ್ತು ಹೌದು ಅಂದರೆ ವಿಷಕಾರಿ ಪದಾರ್ಥಗಳನ್ನು ಕೂಡ ಈ ರಾಜ ತಿನ್ನುತ್ತಾ ಇದ್ದ ಆ ವಿಷ ಪದಾರ್ಥಗಳನ್ನು ತಿನ್ನುವುದು ರಾಜನಿಗೆ ಬಾಲ್ಯದಿಂದಲೂ ರೂಡಿಯಾಗಿತ್ತು. ಇಂತಹ ವಿಚಿತ್ರ ಹವ್ಯಾಸ ಬೆಳೆಸಿಕೊಂಡಿದ್ದ ಆ ರಾಜ ಯಾರು ಎಂದು ತಿಳಿದುಕೊಳ್ಳಬೇಕು ಅಂತ ನಿಮಗೂ ಅನ್ನಿಸುತ್ತಾ ಇದ್ದರೆ ಇಲ್ಲಿ ನೋಡಿ ಇವರ ಬಗ್ಗೆ ಮಾಹಿತಿ ಇವರ ಹೆಸರು ಮಹಮೂದ್ ಬೆಗಾಡಾ. ಈ ರಾಜ ಗುಜರಾತ್ ಸುಲ್ತಾನರ ಪ್ರಬಲ ಆಡಳಿತಗಾರರಲ್ಲಿ ಪ್ರಮುಖರಾಗಿದ್ದರು ಇವರು ಆಹಾರದ ಪದ್ದತಿಯನ್ನ ಇತಿಹಾಸದ ಪುಟಗಳಲ್ಲಿ ದಾಖಲು ಮಾಡಿರುವುದು ಅಂದು ಭಾರತಕ್ಕೆ ಪ್ರವಾಸಿಗರಾಗಿ ಬಂದಿದ್ದಂತಹ ಇಟಲಿ ಪೋರ್ಚುಗಲ್ ದೇಶದ ಪ್ರವಾಸಿಗರು ತಮಗಾದ ಅನುಭವ,ತಮಗೆ ಕಂಡಂತಹ ದರ್ಶನಗಳನ್ನ ತಮ್ಮ ಪುಟದಲ್ಲಿ ದಾ‌ಖಲು ಮಾಡಿದ್ದಾರೆ.

ಇವರು ದಾಖಲು ಮಾಡಿದ ಪ್ರತಿಗಳು ಜಗತ್ತಿನಾದ್ಯಂತ ಈ ಮಹಮೂದ್ ಬೆಗಾಡಾ ರಾಜನ ಆಹಾರ ಕ್ರಮ ತಿಳಿದು ಆಶ್ಚರ್ಯ ಪಟ್ಟಿದ್ದಾರೆ ಹಾಗೂ ಈ ರಾಜನ ಆಹಾರ ಕ್ರಮ ಏನು ಎಂದು ತಿಳಿಯುವುದಾದರೆ ಬೆಳಗ್ಗಿನ ಉಪಾಹಾರವಾಗಿ ಇವರು ಬಟ್ಟಲಿನಷ್ಟು ಜೇನು ತುಪ್ಪ ಬೆಣ್ಣೆ ಕನಿಷ್ಠ ಅಂದರೆ ನೂರು ಬಾಳೆ ಹಣ್ಣು ಸೇವನೆ ಮಾಡುತ್ತಾ ಇದ್ದರೂ ಹಾಗೂ ರಾತ್ರಿಯ ಊಟ ಕಂತು ಅವರಿಗೆ ಮನಸ್ಫೂರ್ತಿಯಾಗಿ ಸಾಕು ಅನ್ನುವಷ್ಟು ಟೈರ ಬೇಕಾಗಿತ್ತಂತೆ. ಅದು ಕೂಡ ತನ್ನಿಚ್ಚೆಯ ಊಟವಾಗಿರಬೇಕಿತ್ತು. ಈ ಭೋಜನದ ಜೊತೆಗೆ ವಿಷವನ್ನು ಬಾಲ್ಯದಿಂದ ಸೇವಿಸುತ್ತ ಇದ್ದ ಈ ರಾಜ ನ ದೇಹ ಸಂಪೂರ್ಣವಾಗಿ ವಿ”ಷಕಾರಿಯಾಗಿ ಬದಲಾವಣೆ ಯಾಗಿತ್ತು. ತಾನು ಮಲಗುವ ಕೋಣೆಯ ಹಾಸಿಗೆಯ ಎರಡು ಬದಿಯಲ್ಲಿಯೂ ಹಣ್ಣು ಹಂಪಲು ಕಡ್ಡಾಯವಾಗಿ ಇರಲೇಬೇಕಿತ್ತು.

ಮಹಮೂದ್ ಬೆಗಾಡಾ ರಾಜ ತನ್ನ ಹದಿಮೂರನೇ ವಯಸ್ಸಿನಲ್ಲಿಯೇ ಪಟ್ಟಾ ಏರುತ್ತಾನೆ ತನ್ನ ಚಿಕ್ಕ ವಯಸ್ಸಿಗೆ ಅಧಿಕಾರ ಪಡೆದ ಇವರು ರಾಜ್ಯದ ಪ್ರತಿಯೊಂದು ವ್ಯವಹಾರಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ಬರೋಬ್ಬರಿ ಐದು ದಶಕಗಳ ಕಾಲ ಯಶಸ್ವಿಯಾಗಿ ರಾಜ್ಯವನ್ನಾಳಿದ ಮಹಮೂದ್ ಅದ್ಬುತ ಸಾಹಸಿ ಆಡಳಿತಗಾರ ಎಂದು ಹೆಸರು ಪಡೆದಿದ್ದನು. ಮಹಮೂದ್ ರಾಜ ತುಂಬಾ ಉದ್ದವಾಗಿ ಮೀಸೆ ಬಿಟ್ಟಿದ್ದ. ಅದರ ಆರೈಕೆ ಮಾಡುವುದಕ್ಕೆ ಅಂತಾನೆ ಸೇವಕರನ್ನು ಸಹ ಇಟ್ಟುಕೊಂಡಿದ್ದನಂತೆ ಈತ ಇನ್ನೂ ದೀರ್ಘವಾದ ಸೊಂಪು ಸೊಂಪಾದ ತನ್ನ ಮೀಸೆಯನ್ನು ತಲೆಯ ಸುತ್ತ ಸುತ್ತಿಕೊಂಡಿರುತ್ತಿದ್ದ. ತನ್ನ ಆಡಳಿತದಲ್ಲಿ ಗಿರ್ನಾರ್ ಮತ್ತು ಜುನಾಗಡ್ ಚಂಪೇನರ್ ಕೋಟೆ ಪ್ರಾಂತ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡಾಗ ಮಹಮೂದ್ ರಾಜನಿಗೆ ಬೇಡದ ಎಂಬ ಬಿರುದನ್ನ ನೀಡಲಾಯಿತು.

ನಂತರ ಈ ರಾಜ ಇಸ್ಲಾಂ ಧರ್ಮವನ್ನು ಸ್ವೀಕಾರ ಮಾಡುತ್ತಾನೆ. ನಂತರ ತನ್ನ ಸೈನ್ಯವನ್ನು ಸುಲ್ತಾನರ ಸೈನ್ಯಕ್ಕೆ ಕೂಡಿಸಲಾಗಿತ್ತು. ಇನ್ನು ಈ ಗುಜರಾತ್ ಸುಲ್ತಾನರ ಪ್ರಮುಖ ಆಡಳಿತಗಾರ ಮಹಮೂದ್ ಬೆಗಾಡಾ ರಾಜನ ದೇಹ ಸಂಪೂರ್ಣ ವಿಷಕಾರಿಯಾದ್ದರಿಂದ ಈತ ಇಹಲೋಕ ತ್ಯಜಿಸಿದ ಮೇಲೆ ಇವನ ದೇಹದ ಮೇಲೆ ನೊಣ ಕೂತರೂ ಸಹ ಸಾವನ್ನಪ್ಪುತ್ತಿಂತೆ. ಈ ಕಾರಣಕ್ಕಾಗಿಯೇ ಈ ರಾಜನ ದೇಹವನ್ನು ಈತ ಇದ್ದಲ್ಲಿಯೆ ಬೆಂಕಿ ಇಟ್ಟು ಸುಟ್ಟರು ಎಂದು ಇಟಲಿ ಮತ್ತು ಪೋರ್ಚುಗೀಸರ ಪ್ರವಾಸಿಗರು ತಮ್ಮ ಪ್ರವಾಸ ಪುಸ್ತಕಗಳಲ್ಲಿ ದಾಖಲು ಮಾಡಿದ್ದಾರೆ. ಎಂತಹ ಭಯಾನಕ ಅನಿಸುವ ರಾಜರು ಇರುತ್ತಾರೆ ಮತ್ತು ಇಂತಹ ರಾಜರುಗಳ ಬಗ್ಗೆ ಇತಿಹಾಸದಲ್ಲಿ ತಿಳಿಯುವಾಗ ಮೈ ಜುಮ್ಮೆನಿಸುತ್ತದೆ.