ದೇವಸ್ಥಾನದ ದೇವರ ಕಾಣಿಕೆ ಡಬ್ಬದಲ್ಲಿ ಸಿಗ್ತು ಅಪ್ಪುಗಾಗಿ ಭಕ್ತನೊಬ್ಬ ಬರೆದ ಒಂದು ಅಪರೂಪದ ಪತ್ರ …ನಿಜಕ್ಕೂ ಅದರಲ್ಲಿ ಏನಿತ್ತು ನೋಡಿ…

251

ಕಲಿಯುಗದಲ್ಲಿ ಮುಗ್ಧತೆಗಾಗಲಿ ಒಳ್ಳೆಯತನಕ್ಕಾಗಲಿ ಜಾಗವಿಲ್ಲ ಅಂತಾರೆ ಆದರೆ ಈ ಘಟನೆ ಅದನ್ನ ಸುಳ್ಳು ಮಾಡಿದೆ….ಹೌದು ಇವತ್ತಿನ ದಿವಸದಲ್ಲಿ ನಮ್ಮವರೇ ನಮಗೆ ಆಗುವುದಿಲ್ಲ ಇನ್ನೂ ನಮ್ಮವರು ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಅನ್ನೋದು ಕೂಡ ಎಷ್ಟು ಸುಳ್ಳಿನ ಮಾತು ಅಲ್ವಾ. ಆದರೆ ಇಲ್ಲೊಂದು ನಡೆದಿರುವ ಘಟನೆ ಕೇಳಿದಾಗ ಖಂಡಿತ ಅಚ್ಚರಿಯಾಗತ್ತೆ! ಒಬ್ಬ ಅಭಿಮಾನಿ ತನ್ನ ಇಷ್ಟವಾದ ನಟನೆಗಾಗಿ ದೇವರ ಬಳಿ ಬರೆದಿರುವ ಪತ್ರ ಇದರೊಳಗಿರುವ ವಿಚಾರ ಯಾರನ್ನಾಗಲಿ ಶಾಕ್ ಆಗುವಂತೆ ಮಾಡಿದೆ ಹೌದು ನಾವು ಒಬ್ಬರನ ಬಹಳ ಇಷ್ಟಪಡುತ್ತಾ ಇರುತ್ತವೆ ಆದರೆ ಒಮ್ಮೆ ಅವರು ನಮ್ಮಿಂದ ಕಣ್ಮರೆಯಾದಾಗ ಅವರ ನಾವು ಎಷ್ಟು ದಿವಸಗಳು ಅಂತ ನೆನಪಿನಲ್ಲಿ ಇಟ್ಟುಕೊಳ್ಳಿ ಅಲ್ವಾ.

ಆ ಭಗವಂತ ಮನುಷ್ಯನ ಸೃಷ್ಟಿ ಎಂಬುದನ್ನೇ ಹಾಗೆ ಸೃಷ್ಟಿ ಮಾಡಿ ಬಿಟ್ಟಿದ್ದಾನೆ ಒಬ್ಬ ವ್ಯಕ್ತಿ ನಮ್ಮಿಂದ ಕಣ್ಮರೆಯಾದಾಗ ಅಥವಾ ನಮ್ಮಿಂದ ದೂರವಾದಾಗ ಹೆಚ್ಚು ದಿನಗಳ ಕಾಲ ನಾವು ಅವನ ನೆನಪಿಸಿಕೊಳ್ಳುವುದಿಲ್ಲ. ಅವನನ್ನು ಆದಷ್ಟು ಬೇಗ ಮರೆತು ಬಿಡ್ತೇವೆ, ಅದ್ದರಿಂದಲೇ ಅಲ್ವಾ ಈ ದಿನ ಜಗತ್ತು ಹೇಗಿರಲು ಸಾಧ್ಯ ವಾಗಿರುವುದು ನಮ್ಮಿಂದ ದೂರವಾದ ವರನ್ನೆ ನಾವು ನೆನಪಿಸಿಕೊಳ್ಳುತ್ತಾ ಕುಳಿತಿದ್ದರೆ. ಖಂಡಿತ ಈ ದಿನ ಯಾರೂ ಕೂಡ ಭೂಮಿ ಮೇಲೆ ಸಂತಸದಿಂದ ಇರಲು ಸಾಧ್ಯವೇ ಆಗುತ್ತಿರಲಿಲ್ಲ.

ಆದರೆ ಆ ಒಬ್ಬ ವ್ಯಕ್ತಿ ಮಾತ್ರ ಇವತ್ತಿಗೂ ನಮ್ಮ ಕಣ್ಮುಂದೆ ಇಲ್ಲ ಅವನು ನಮಗೆ ಬಂಧುವಲ್ಲ ಬಳಗವು ಅಲ್ಲ ಸ್ನೇಹಿತನೂ ಅಲ್ಲಾ! ನಾವು ಅವರನ್ನು ಕೇವಲ ತೆರೆ ಮೇಲೆ ನೋಡಿದ್ದೇವೆ ಅಷ್ಟೇ ಅವರೊಬ್ಬರು ತಾರಾ ನಟರು ಆದರೆ ಅವರಿಲ್ಲ ಅನ್ನುವ ಅನ್ನೊ ನೋವು ಮಾತ್ರ ಅವರ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ ಇಡೀ ಜಗತ್ತಿಗೆ ಹಬ್ಬಿತ್ತು ಅವರನ್ನ ನೋಡದಿರುವವರು ನೋಡಿರುವವರು ಎಲ್ಲರು ಸಹ ನೋವಿನಲ್ಲಿ ಕತ್ತಲಲಿ  ಮುಳುಗಿದ್ದರು. ಹೌದು ನಾವು ಮಾತಾಡ್ತಾ ಇರೋದು ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ.

ನಟ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಭಕ್ತನೊಬ್ಬ ದೇವರ ಬಳಿ ಕೇಳಿಕೊಂಡು ಪತ್ರವೊಂದನ್ನು ಬರೆದು ಅದನ್ನು ಕಾಣಿಕೆ ಹುಂಡಿಗೆ ಹಾಕಿ ಬಂದಿದ್ದಾನೆ ಇಂಥದ್ದೊಂದು ಘಟನೆ ಜರುಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯವರು ಈ ಚೀಟಿಯನ್ನು ನೋಡಿ ನಿಬ್ಬೆರಗಾಗಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಕ್ತನೊಬ್ಬ ಬರೆದ ಆ ಚೀಟಿಯ ಫೋಟೋ ಭಾರೀ ವೈರಲ್ ಆಗುತ್ತಿದ್ದು ಕೆಲವರು ಈ ಚೀಟಿಯನ್ನು ನೋಡಿ ಅವನದ್ದು ಎಂತಹ ಮುಗ್ಧ ಮನಸ್ಸು ಅಂತ ತಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿದ್ದಾರೆ ಹಾಗೆ ಪುನೀತ್ ರಾಜ್ ಕುಮಾರ್ ಅಂದರೆ ಯಾರು ಸಹ ಅವರ ಬಗ್ಗೆ ಯಾವ ವಿಚಾರವನ್ನು ತಪ್ಪಾಗಿ ಮಾತನಾಡೋಲ್ಲ ಅವರನ್ನು ಎಲ್ಲರೂ ಪ್ರೀತಿಸುವವರ ಅವರೊಬ್ಬರು ಅಜಾತ ಶತ್ರು ನಮ್ಮ ಕರುನಾಡ ರಾಜಕುಮಾರ.

ಕರುನಾಡ ರಾಜಕುಮಾರ ಅಪ್ಪು ಇಲ್ಲ ಅನ್ನುವ ವಿಚಾರ ತಿಳಿಯುತ್ತಿದ್ದ ಹಾಗೆ ಆಸ್ಪತ್ರೆಯ ಬಳಿ ಅಭಿಮಾನಿಗಳ ದಂಡು ಹರಿದುಬಂದಿತ್ತು ಅವರನ್ನು ಉಳಿಸು ಅವರು ಆದಷ್ಟು ಬೇಗ ಹುಷಾರಾಗಿ ಬರಲಿ ಅಂತ ಪ್ರಾರ್ಥಿಸಿಕೊಂಡ ಮನಸ್ಸುಗಳು ಅದೆಷ್ಟೋ ದೇವರ ಬಳಿ ಕೇಳಿಕೊಂಡ ಬರೆದಷ್ಟು ಚಿಕ್ಕ ಮಕ್ಕಳು ಕೂಡ ಅಪ್ಪು ಅವರು ಮತ್ತೆ ಬರಲಿ ಅಂತ ಕೇಳಿಕೊಂಡಿದ್ದರು. ಇನ್ನು ಹಲವು ಮಕ್ಕಳು ಅಪ್ಪು ಮಾಮ ಬೇಕು ಅಂತ ಹಠ ಹಿಡಿದಿದ್ದು ಉಂಟು ಇಂತಹ ಮುಗ್ಧ ಮನಸ್ಸುಗಳ ನಡುವೆ ಆ ಮುಗ್ಧ ಮನಸ್ಸು ಕೂಡ ಒಂದಾಗಿದೆ.

ಮಕ್ಕಳ ಹಾಗೆ ಬೇಡಿಕೊಂಡು ದೇವರಿಗೆ ಚೀಟಿ ಬರೆದಿರುವ ಆ ಭಕ್ತ ನಿಜಕ್ಕೂ ಮುಗ್ಧರಲ್ಲಿ ಮುಗ್ಧನಾಗಿ ಬಿಟ್ಟಿದ್ದಾನೆ ಅಪ್ಪು ಅವರನ್ನು ಕಳೆದುಕೊಂಡು ಸುಮಾರು 7ತಿಂಗಳುಗಳೇ ಕಳೆಯುತ್ತಾ ಬಂತು ಆದರೂ ಅಪ್ಪು ಅವರನ್ನ ಮರೆಯಲು ಸಾಧ್ಯವಾಗಿಲ್ಲ ಅವರು ಶೂಟಿಂಗ್ ಹೋಗಿದ್ದಾರೆ ಅವರು ನಮ್ಮ ನಡುವೆಯೇ ಇದ್ದಾರೆ ಅನ್ನುವ ಭಾವನೆ.

ಅಪ್ಪ ಅವರು ಕೇವಲ ಸಿನೆಮಾ ರಂಗಕ್ಕೆ ಅಥವಾ ಅವರ ಮನೆಗೆ ಮಾತ್ರ ಸೀಮಿತರಾಗಿರಲಿಲ್ಲ ಇಡೀ ಕರುನಾಡ ಮನೆ ಮಗನಾಗಿದ್ದರು. ಇದಕ್ಕೆಲ್ಲ ಕಾರಣ ಅವರ ಮುಗ್ಧತೆ ಅವರ ನಿಸ್ವಾರ್ಥ ಸೇವೆ ಆ ಮುಗ್ಧ ಹಾಗೂ ಎಲ್ಲರಲ್ಲಿಯೂ ಬೆರೆತುಹೋಗುವ ಮುಗ್ಧ ಮನಸ್ಸು ಅಪ್ಪು ಅವರ ಬಗ್ಗೆ ಮಾತನಾಡುತ್ತಾ ಹೋದರೆ ಪದಗಳೇ ಸಾಲದು ಎಲ್ಲರೂ ತಮ್ಮವರೆಂದು ಭಾವಿಸಿದ್ದ ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಅಂತ ಯಾರೂ ಅಂದುಕೊಂಡಿರಲಿಲ್ಲ.

ಮಾಹಿತಿಗೆ ಬರುವುದಾದರೆ ಅಪ್ಪು ಅವರ ಕುರಿತು ಭಕ್ತನೊಬ್ಬ ದೇವರಿಗೆ ಹೀಗೆ ಚೀಟಿ ಬರೆದಿದ್ದಾನೆ ನೋಡಿ ಸ್ನೇಹಿತರೆ, ಅದೇನೆಂದರೆ ಅಪ್ಪು ಅವರನ್ನು ಮತ್ತೆ ಕಳುಹಿಸಿಕೊಡಿ ಎಂದು ಭಕ್ತನೊಬ್ಬ ದೇವರಲ್ಲಿ ಕೇಳಿಕೊಳ್ಳುತೇನೆ ದೇವರಿಗೆ ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿದ್ದಾನೆ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯವರು ಕಾಣಿಕೆ ಹುಂಡಿಯನ್ನು ತೆರೆದು ನೋಡಿದಾಗ ಅಲ್ಲಿ ಆ ಚೀಟಿ ಸಿಕ್ಕಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಭಾರೀ ಚರ್ಚೆಗೆ ಒಳಗಾಗಿದೆ ಅಪ್ಪು ಅವರು ಖಂಡಿತ  ಹುಟ್ಟಿ ಬರುತ್ತಾರೆ ಮತ್ತೆ ಆ ಮುಗ್ಧ ನಗುವಿನೊಂದಿಗೆ.  ನಾವು ಸಹ ದೇವರಲ್ಲಿ ಕೇಳಿಕೊಳ್ಳೋಣ ಕರುನಾಡ ರಾಜಕುಮಾರ ನಮ್ಮ ನಡುವೆಯೇ ಮತ್ತೆ ಹುಟ್ಟಿ ಬರಲಿ ಎಂದು ಅಪ್ಪು ಸದಾ ಅಜರಾಮರ…

WhatsApp Channel Join Now
Telegram Channel Join Now