Homeಉಪಯುಕ್ತ ಮಾಹಿತಿರಾಜ್ಯ ಸರ್ಕಾರದಿಂದ ಸಿಗುವ ವಿಧವಾ ವೇತನ ಹೇಗೆ ಪಡೆಯುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ...

ರಾಜ್ಯ ಸರ್ಕಾರದಿಂದ ಸಿಗುವ ವಿಧವಾ ವೇತನ ಹೇಗೆ ಪಡೆಯುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ … ಗೊತ್ತಿಲ್ಲದವರಿಗೆ ತಿಳಿಸಿ

Published on

ಹೌದು ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಹಾಗೂ ಹಲವು ನಿಯಮಗಳನ್ನು ಜಾರಿಗೆ ತರುತ್ತಾ ಸಮಾಜದ ಹಿತದೃಷ್ಠಿಯನ್ನು ಹಾಗೂ ಸಮಾಜದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತ ಇರುತ್ತದೆ. ಇನ್ನು ಕೆಲವೊಂದು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಸಮಾಜಕ್ಕೆ ಅನುಕೂಲ ಮಾಡುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಭಾರತ ದೇಶದ ಪ್ರಸ್ತುತ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ನಂತರ ಹಲವು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಅನೇಕ ಬದಲಾವಣೆಗಳನ್ನು ಯೋಜನೆಗಳಲ್ಲಿ ತರುವ ಮೂಲಕ ಜನರಿಗೆ ಒಳ್ಳೆ ಒಳ್ಳೆಯ ಯೋಜನೆಗಳ ಫಲವನ್ನು ಜನರಿಗೆ ನೀಡುತ್ತಾ ಇದ್ದಾರೆ ಅದೇ ರೀತಿ ದುಡ್ಡಿನ ವಿಚಾರದಲ್ಲಿ ಆಗಿರಬಹುದು ಹಾಗೂ ಎಲ್ಲಾ ರೀತಿಯ ಜನರಿಗೂ ಅನುಕೂಲ ಆಗುವಂತೆ ಅದರಲ್ಲಿಯೂ ಮಧ್ಯಮ ವರ್ಗದವರಿಗೆ ಮತ್ತು ನಿರ್ಗತಿಕರಿಗೆ ಕೆಲವೊಂದು ಸಹಾಯಗಳನ್ನು ಮಾಡಿಕೊಡಬೇಕೆಂದು. ಕೆಲವೊಂದು ನಿಯಮಗಳನ್ನು ಮತ್ತು ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಹಾಗೆ ಅಂತಹ ಯೋಜನೆಗಳಿಂದ ಜನರಿಗೆ ಸೇವೆ ಮಾಡುತ್ತಾ ಇದ್ದಾರೆ. ಹೌದು ಅಂತಹ ಯೋಜನೆಯಲ್ಲಿ ವಿವಿಧ ವಿಧವಾ ವೇತನ ಸಹ ಒಂದಾಗಿದೆ.

ಇನ್ನೂ ಸರ್ಕಾರವು ಹಮ್ಮಿಕೊಳ್ಳುವ ಕೆಲ ಯೋಜನೆಗಳು ಯಾವ ದೃಷ್ಟಿಯಿಂದ ಇರುತ್ತದೆ ಅಂದರೆ ಜನರ ಸೇವೆ ಮಾಡಲೆಂದು ಮತ್ತು ಜನರಿಗೆ ಅನುಕೂಲವಾಗಲಿ ಎಂದು ಹಾಗೆ ವಿಧವಾವೇತನ ಎಂಬ ಯೋಜನೆಯೂ ಸಹ ವಿವಾಹವಾಗಿ ಪತಿಯನ್ನು ಕಳೆದುಕೊಂಡ ಮಹಿಳೆಯರು ಜೀವನದಲ್ಲಿ ಕಷ್ಟ ಪಡಬಾರದೆಂದು ತಿಂಗಳಿಗೊಮ್ಮೆ ಸರ್ಕಾರದಿಂದ ನೀಡುವ ಹಣದ ಸೌಲಭ್ಯ ಈ ವಿಧವಾ ವೇತನದ ಆಗಿರುತ್ತದೆ. ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿ’ರ್ಗತಿಕ ವಿಧವೆಯರಿಗೆ, ವಿಧವಾ ವೇತನವನ್ನು ಸರ್ಕಾರದ ಆದೇಶದ ಮೇರೆಗೆ 1ನೇ ಏಪ್ರಿಲ್ 1984ರಿಂದ ಜಾರಿಗೆ ತರಲಾಗಿದೆ. ನಿರ್ಗತಿಕ ವಿಧವೆ ಅಂದರೆ ಪತಿಯು ಜೀವಿಸಿಲ್ಲದ ಅಥವಾ ಮೃತಪಟ್ಟಿರುವ ವ್ಯಕ್ತಿಯ ಪತ್ನಿ ಹಾಗೆಯೇ ಈ ವಿಧವಾ ವೇತನವನ್ನು ಪಡೆಯಲು ಒಂದಷ್ಟು ನಿಯಮಗಳು ಸಹ ಇರುತ್ತದೆ,

ಯಾರೆಂದರೆ ಅವರು ಈ ವಿಧವಾ ವೇತನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿಯಮಗಳೇನು ಅಂದರೆ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ 12 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು.ಇನ್ನು ನಗರ ಪ್ರದೇಶಗಳಲ್ಲಿ ರೂ.17ಸಾವರ ರೂಪಾಯಿ ಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಅರ್ಜಿದಾರ ಹೆಣ್ಣು ಮಗಳು ಅಥವಾ ಆಕೆಯ ಮರಣ ಹೊಂದಿದ ಪತಿಯ ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ 3ವರ್ಷಗಳ ಅವಧಿಗೆ ಕಡಿಮೆಯಿಲ್ಲದಂತೆ ರಾಜ್ಯದ ನಿವಾಸಿ ಆಗಿರಬೇಕಾಗುತ್ತದೆ. ವಿಧವಾ ವೇತನವು ತಿಂಗಳಿಗೆ ರೂ. 500 ಆಗಿದ್ದು, ಅಂದರೆ ತಿಂಗಳಿಗೆ 500ರೂ.ಗಳನ್ನು ಸರ್ಕಾರ ವಿ’ಧವ ಹೆಣ್ಣುಮಕ್ಕಳಿಗಾಗಿ ನೀಡುತ್ತದೆ ಎನ್ನುವ ವಿಧವಾ ವೇತನಕ್ಕಾಗಿ ಸಲ್ಲಿಸಬೇಕಾಗಿರುವ ಅರ್ಜಿಯ ಗೊತ್ತುಪಡಿಸಿದ ನಮೂನೆಯಲ್ಲಿ ಇರಬೇಕಾಗುತ್ತದೆ ಹಾಗೂ ಅದನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಸಲ್ಲಿಸಬೇಕು. ಇನ್ನೂ ವಿಧವಾ ವೇತನ ಪಿಂಚಣಿ ಅನ್ನು ಪಡೆದುಕೊಳ್ಳ ಬೇಕು ಅಂದರೆ ಅವರು ಯಾವುದೇ ತರಹದ ಬೇರೆ ಪಿಂಚಣಿ ಅನ್ನು ಪಡೆಯಬಾರದು.

ಇನ್ನು ಹೆಣ್ಣು ಮಕ್ಕಳು ವಿಧವಾ ವೇತನವನ್ನು ತೆರೆದುಕೊಳ್ಳುತ್ತಾ ಇರುವಂತಹವರು ಮೃತ ಆಗುವವರೆಗೂ ಅಥವಾ ಪುನರ್ ವಿವಾಹ ಆಗುವವರೆಗೆ ಏನೂ ಉದ್ಯೋಗ ಪಡೆದು ನಿಗದಿತ ವಾರ್ಷಿಕ ಆದಾಯಕ್ಕಿಂತ ಅವರುಗಳು ಹೆಚ್ಚಿನ ಆದಾಯ ಪಡೆಯುವ ವರೆಗೂ ಈ ವಿಧವಾವೇತನ ಅಡಿ ಸರ್ಕಾರದಿಂದ ಈ ಹೆಣ್ಣುಮಕ್ಕಳು ಹಣವನ್ನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಇದಕ್ಕೆ ಅರ್ಜಿ ಸಲ್ಲಿಸಲು ಹಲವಾರು ದಾಖಲಾತಿಗಳು ಬೇಕಾಗಿರುತ್ತದೆ . ಇನ್ನೂ ಆ ದಾಖಲಾತಿಗಳು ಅಂದರೆ ಜನನ ಪ್ರಮಾಣ ಪತ್ರ ವೈದ್ಯಕೀಯ ದೃಢೀಕರಣ ಪತ್ರ ಪತಿಯ ಮರಣ ಪ್ರಮಾಣಪತ್ರ ಹಾಗೂ ವಾಸಸ್ಥಳ ದೃಢೀಕರಣ ಪತ್ರ ಆದಾಯ ಪ್ರಮಾಣಪತ್ರ ಅಂದರೆ ಇನ್ಕಮ್ ಸರ್ಟಿಫಿಕೇಟ್ ವಯಸ್ಸಿನ ದೃಢೀಕರಣ ಪತ್ರ ಜೊತೆಗೆ ವಯಸ್ಸಿನ ದೃಢೀಕರಣ ಪತ್ರ ಹಾಗೂ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿ ಅಂದರೆ ಐಡಿ ಕಾರ್ಡ್ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ. ಈ ದಾಖಲಾತಿಗಳೊಂದಿಗೆ ಅರ್ಜಿ ಅನ್ನೋ ಸಲ್ಲಿಸಬೇಕಾಗಿರುತ್ತದೆ.

Latest articles

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...