ಬೀದಿ ಬೀದಿಯಲ್ಲಿ ಕಚ್ಚಾ ಬಾದಾಮ್ ಹಾಡುತ್ತಿದ್ದ ಹಾಡುಗಾರನ ಇಂದಿನ ಆಸ್ತಿ ಪಾಸ್ತಿ ಎಷ್ಟು ಗೊತ್ತಾ…ನೋಡಿ ದಂಗಾಗುತ್ತೀರಾ..

162

ಹೌದು ಯಾರ ಸಮಯ ಯಾವಾಗ ಬೇಕಾದರೂ ಬದಲಾಗಬಹುದು ಅದಕ್ಕೆ ಈ ವ್ಯಕ್ತಿಯೇ ಸತ್ಯ ನಿದರ್ಶನರಾಗಿದ್ದಾರೆ ನೋಡಿ. ಹೌದು ಯಾರ ಅದೃಷ್ಟ ಯಾವಾಗ ಬೇಕಾದರೂ ಬದಲಾಗಬಹುದು ಆ ಅದೃಷ್ಟದಿಂದ ಆ ವ್ಯಕ್ತಿ ತೀರಾ ಬಡವನಾಗಿದ್ದರೂ ಒಂದೇ ರಾತ್ರಿಯಲ್ಲಿ ಜನಪ್ರಿಯತೆ ಖ್ಯಾತಿ ಪಡೆದು ಕೊಳ್ಳುವುದರ ಜೊತೆಗೆ ಲಕ್ಷ ಲಕ್ಷ ಹಣ ಕೂಡ ಅವರ ಪಾಲಾಗಿದೆ ಅಂದರೆ ಅದು ಅದೃಷ್ಟವಲ್ಲದೇ ಮತ್ತೇನು ಅಲ್ವಾ. ಎಷ್ಟೋ ಜನರಿಗೆ ಪ್ರತಿಭೆ ಇದ್ದರೂ ಅದೃಷ್ಟ ಇಲ್ಲದೆ ಆ ವ್ಯಕ್ತಿ ಕುಖ್ಯಾತಿ ಪಡೆದುಕೊಂಡಿರುತ್ತಾರೆ ಆದರೆ ಇವತ್ತಿನ ದಿನಗಳಲ್ಲಿ ಯಾರ ಅದೃಷ್ಟ ಖುಲಾಯಿಸುತ್ತೆ ನೋಡಿ ಅವರಲ್ಲಿ ಪ್ರತಿಭೆ ಇದ್ದರೆ ಒಂದೇ ರಾತ್ರಿ ಸಾಕು ಪ್ರಪಂಚದೆಲ್ಲೆಡೆ ಖ್ಯಾತಿ ಪಡೆದುಕೊಳ್ಳುವುದಕ್ಕೆ.

ಇವರ ಹೆಸರು ಭುವನ್ ಬಡಿಯಾಂಕರ್ ಎಂದು ಇವರು ಪಶ್ಚಿಮ ಬಂಗಾಳದ ಪುಟ್ಟಗ್ರಾಮವೊಂದರಲ್ಲಿ ವಾಸ ಮಾಡುತ್ತಾ ಇರುತ್ತಾರೆ ತಮ್ಮ ಹೊಟ್ಟೆಪಾಡಿಗಾಗಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಾ ಇರುತ್ತಾರೆ ಈ ವ್ಯಕ್ತಿ. ಹೌದು ಹೊಟ್ಟೆಪಾಡಿಗಾಗಿ ಯಾವುದಾದರೂ ಕೆಲಸ ಮಾಡಲೇ ಬೇಕು ಅಲ್ವಾ ವಿದ್ಯಾವಂತರೂ ಹೋಗಿ ಆಫೀಸ್ ನಲ್ಲಿ ದುಡಿದರೆ ವಿದ್ಯಾ ಇಲ್ಲದವರೂ ಉತ್ತಮ ಹೊಟ್ಟೆಗಾಗಿ ತಮ್ಮ ಕುಟುಂಬಕ್ಕಾಗಿ ತಮ್ಮ ಮುಂದಿನ ಪೀಳಿಗೆಗಾಗಿ ಕಷ್ಟವೋ ನಷ್ಟವೋ ಯಾವುದನ್ನೂ ಯೋಚಿಸದೆ ಕಷ್ಟಪಟ್ಟು ದುಡಿಯುತ್ತಾರೆ.

ಅದೇ ರೀತಿ ಈ ವ್ಯಕ್ತಿ ಕೂಡ ಸೈಕಲ್ ತುಳಿದು ಊರು ಊರು ಸುತ್ತಿ ಕಡಲೆಕಾಯಿ ಮಾರುತ್ತಾ ತಮ್ಮ ಹೊಟ್ಟೆಪಾಡಿಗಾಗಿ ಹಣ ಸಂಪಾದನೆ ಮಾಡುತ್ತಾ ಇರುತ್ತಾರೆ ಹಾಗೆ ಅದೊಂದು ದಿನ ಆ ವ್ಯಕ್ತಿ ಕಡಲೆಕಾಯಿ ಮಾರುವ ಹಾಡುತ್ತಿದ್ದ ಹಾಡನ್ನು ದಾರಿಹೋಕರೊಬ್ಬರು ಆ ವ್ಯಕ್ತಿ ಹಾಡುವ ಹಾಡನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡಿದ್ದಾರೆ ಅಷ್ಟೇ ಅಲ್ಲ ಇವರು ಹಾಡಿದ ಹಾಡು ರಾತ್ರೋರಾತ್ರಿ,

ಹೆಚ್ಚು ಫೇಮಸ್ ಆಗಿ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುವ ಮೂಲಕ ಈ ವ್ಯಕ್ತಿ ಇದೀಗ ಒಬ್ಬ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಷ್ಟೇ ಅಲ್ಲ ಈ ವ್ಯಕ್ತಿಗೆ ಬಹಳಷ್ಟು ಯೂಟ್ಯೂಬ್ ಚಾನೆಲ್ ಅವರು ಬಂದು ಹಣ ನೀಡಿ ಸಂದರ್ಶನ ಮಾಡುತ್ತಿದ್ದಾರೆ ಹಾಗೆಯೇ ಈ ವ್ಯಕ್ತಿ ಹಾಡಿದ ಕಚ್ಚಾ ಬಾದಾಮ್ ಹಾಡನ್ನು ರಿಮಿಕ್ಸ್ ಮಾಡುವ ಮೂಲಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದು ಕೂಡ ಉಂಟು ಅದೊಂದು ಸಮಯದಲ್ಲಿ ಟ್ರೆಂಡ್ ಆಗಿತ್ತು ಕೂಡ ಆ ರಿಮಿಕ್ಸ್ ಹಾಡು.

ಭುವನ್ ಬಡಿಯಾಂಕರ್ ಅವರು ತಾವು ಹಾಡಿದ ಆ ಹಾಡಿನಿಂದ ತಮ್ಮ ಪ್ರತಿಭೆಯಿಂದ ಸದ್ಯ 25ಲಕ್ಷ ರೂಪಾಯಿಗಳ ಒಡೆಯನಾಗಿದ್ದು ಇದೇ ವೇಳೆ ತಮ್ಮದೇ ಆದ ಕಾರ್ ಅನ್ನು ಕೂಡ ಕೊಂಡುಕೊಂಡು ಸೆಕೆಂಡ್ ಹ್ಯಾಂಡ್ ಗಾಡಿ ಅನ್ನು ಕೊಂಡುಕೊಂಡು ಕಾರ್ ಕಲಿಯುವಾಗ ಅಪಘಾತಕ್ಕೊಳಗಾಗಿದ್ದಾರೆ ಭುವನ್ ಆದರೆ ದೇವರ ದಯೆಯಿಂದ ದೊಡ್ಡ ಗಾಯವೇನೂ ಆಗದೆ ಎದೆಯ ಭಾಗಕ್ಕೆ ಸ್ವಲ್ಪ ಇಂಜುರಿ ಆಗಿತ್ತು ಇದೀಗ ಚೇತರಿಸಿಕೊಂಡಿರುವ ಭುವನ್ ಅವರು ತಮ್ಮ ಹಳ್ಳಿಯಲ್ಲಿಯೇ ಸೈಟ್ ಕೊಂಡುಕೊಂಡು ಹೊಸದಾದ ಮನೆಯನ್ನು ಸಹ ಕಟ್ಟಿಸಿದ್ದಾರೆ.

ಪಶ್ಚಿಮ ಬಂಗಾಳದ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಭುವನ್ ಅವರನ್ನು ಭೇಟಿ ನೀಡಿ ತಮ್ಮ ಹೊಸ ಸಿನಿಮಾಗೆ ಹಾಡನ್ನು ಬರೆಯುವುದಕ್ಕಾಗಿ ಮತ್ತು ಹಾಡನ್ನು ಹಾಡುವುದಕ್ಕಾಗಿ ಈಗಾಗಲೇ ಅಡ್ವಾನ್ಸ್ ಕೂಡ ನೀಡಿದ್ದಾರೆ ಎಂಬ ವಿಚಾರ ಸದ್ಯ ತಿಳಿದು ಬಂದಿದ್ದು, ಭುವನ್ ಅವರು ನನ್ನ ಹೊಸ ಕಾರು ಎಂಬ ಸಾಲಿನಿಂದ ಶುರುವಾಗುವ ಹಾಡೊಂದನ್ನ ಮತ್ತೆ ಹಾಡಿ, ಆ ಹಾಡು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ ಭುವನ್ ಅವರ ಕಚ್ಚಾ ಬಾದಾಮ್ ಹಾಡು ನಿಮಗೂ ಕೂಡ ಲೈಕ್ ಆಗಿತ್ತ ತಪ್ಪದೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ…

WhatsApp Channel Join Now
Telegram Channel Join Now