ಇದನ್ನ ಏನಾದ್ರು ಬಳಸಿದ್ದೆ ಆದಲ್ಲಿ ಡಾಕ್ಟರ್ ಹತ್ರ ಹೋಗೋ ಅವಶ್ಶ್ಯಕತೆ ಬರೋದೇ ಇಲ್ಲ .. ನಿಮ್ಮ ದೇಹ ವಜ್ರಕಾಯ ಆಗುತ್ತೆ..

124

ಈ ಗಿಡದ ಅದ್ಭುತ ಶಕ್ತಿಯ ಬಗ್ಗೆ ತಿಳಿದರೆ ನೀವು ಸಹ ಇದರ ಪ್ರಯೋಜನ ಪಡೆದುಕೊಳ್ಳಲು ಮುಂದೆ ಸ್ಥಿರ ಹಾಗೆ ಈ ಗಿಡದ ಕುರಿತೂ ರಾಮಾಯಣದಲ್ಲಿ ಕಥೆಯೊಂದು ಸಹ ಉಲ್ಲೇಖಗೊಂಡಿದೆ ಮೊದಲು ಕತೆಯೇನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ವಿಶ್ವಾಮಿತ್ರರು ಒಮ್ಮೆ ರಾಮ ಲಕ್ಷ್ಮಣರಿಗೆ ಬಲ ಮತ್ತು ಅತಿಬಲ ಎಂಬ ಮಂತ್ರವನ್ನ ಪ್ರವಚನ ಮಾಡುವುದಕ್ಕಾಗಿ ಬೆಳಗಿನ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಯಾರೂ ಇಲ್ಲದ ಕಡೆ ಕರೆದುಕೊಂಡು ಬಂದಿರುತ್ತಾರೆ ಇನ್ನೂ ಈ ಮಂತ್ರವನ್ನು ಯಾರೂ ಸಹ ತಿಳಿಯಬಾರದೆಂದು .

ಅತಿ ರಹಸ್ಯವಾಗಿ ರಾಮಲಕ್ಷ್ಮಣರಿಗೆ ಈ ಮಂತ್ರದ ಪ್ರವಚನ ಮಾಡಲೆಂದು ವಿಶ್ವಾಮಿತ್ರರ ಮುಂದಾದಾಗ ಅಲ್ಲಿಯೇ ಇದ್ದ ಗಿಡ ಈ ಮಂತ್ರವನ್ನು ಹಾಗೂ ವಿಶ್ವಾಮಿತ್ರರು ರಾಮಲಕ್ಷ್ಮಣರ ಗೆ ತಿಳಿಸಿದ ರಹಸ್ಯವನ್ನ ಕೇಳಿಸಿಕೊಳ್ಳುತ್ತದೆ. ಇದಾದ ಬಳಿಕ ಭಯಗೊಂಡ ಗಿಡವು, ವಿಶ್ವಾಮಿತ್ರರ ಬಳಿ ಕ್ಷಮೆಯಾಚಿಸುತ್ತದೆ ಹಾಗೂ ವಿಶ್ವಾಮಿತ್ರರು ನೀವು ಇಡೀ ಪ್ರಪಂಚದಾದ್ಯಂತ ಬೆಳೆದುಕೊಂಡು, ಈ ಸಸ್ಯಗಳ ಬಳಕೆಯನ್ನು ಯಾರು ಮಾಡುತ್ತಾರೊ ಅವರಿಗೆ, ಬಲ ಮತ್ತು ಅತಿಬಲವನ್ನ ನೀಡಿ ಎಂದು ಆಶೀರ್ವಾದ ನೀಡುತ್ತಾರೆ.

ಅಂದಿನಿಂದ ಈ ಗಿಡದ ಎಲೆಯ ಪ್ರಯೋಜನವನ್ನ ಯಾರೆಲ್ಲ ಮಾಡ್ತಾರೆ ಅವರಿಗೆ ಅಗಾಧವಾದ ಆರೋಗ್ಯಕರ ಲಾಭಗಳು ಲಭಿಸುತ್ತದೆ ಎಂಬ ನಂಬಿಕೆ ಉಂಟಾಯಿತು. ಹಾಗಾದರೆ ಬಲ ಅತಿಬಲದ ಪ್ರಯೋಜನದಿಂದ ಉಂಟಾಗುವ ಲಾಭಗಳ ಕುರಿತು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಮತ್ತು ಇದರ ಬಳಕೆ ಅನ್ನೋ ನೀವು ಸಹ ಮಾಡಿ ಇದರಿಂದ ಉಂಟಾಗುವ ಆರೋಗ್ಯಕರ ಲಾಭಗಳನ್ನು ನೀವು ಸಹ ಪಡೆದುಕೊಳ್ಳಿ.ಅತಿಬಲದ ಎಲೆಯ ಕಷಾಯವನ್ನು ಮಾಡುವ ವಿಧಾನ ಹೇಗೆ ಅಂದರೆ ಅತಿಬಲದ ಎಲೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ರಾತ್ರಿಯೆಲ್ಲಾ ನೀರಿನಲ್ಲಿ ನೆನೆಸಿಡಬೇಕು ನಂತರ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ನೀರನ್ನು ಕುದಿಸಿ ಸೇವನೆ ಮಾಡಬೇಕು. ಇದರಿಂದ ಅಸ್ತಮಾ ಕೆಮ್ಮಿನಂತಹ ಸಮಸ್ಯೆ ದೂರವಾಗುತ್ತದೆ. ಅತಿಬಲದ ಹೂವುಗಳು ಹಳದಿ ಮತ್ತು ಮಿಶ್ರ ಬಣ್ಣದ ಹೂವುಗಳು ಆಗಿರುತ್ತದೆ. ಈ ಹೂವುಗಳು ಅಂಟು ಸ್ವಭಾವವನ್ನು ಹೊಂದಿದ್ದು ಎಲೆ ಮತ್ತು ಹೂವು ಎರಡೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಯಾರು ಕಣ್ಣಿನ ದೃಷ್ಟಿಯ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂಥವರಿಗೆ ಅತಿಬಲದ ಎಲೆಯ ಕಷಾಯ ಉತ್ತಮವಾಗಿದೆ ಅಷ್ಟೇ ಅಲ್ಲ ನಾಯಿ ಕಚ್ಚಿದವರು ಈ ಎಲೆಯನ್ನು ಅರೆದು ಅದರ ರಸವನ್ನು ನಾಯಿ ಕಚ್ಚಿದ ಭಾಗಕ್ಕೆ ಲೇಪ ಮಾಡಬೇಕು ಈ ರೀತಿ ಮಾಡುತ್ತಾ ಬರುವುದರಿಂದ ನಾಯಿ ಕಚ್ಚಿದ ನಂಜು ಬೇಗನೆ ಇಳಿಯುತ್ತದೆ ಹಾಗೂ ಯಾವುದೇ ತರದ ಅಡ್ಡಪರಿಣಾಮಗಳು ದೇಹದ ಮೇಲೆ ಉಂಟಾಗುವುದಿಲ್ಲ ನಂತರ ಪ್ರಥಮ ಚಿಕಿತ್ಸೆ ಪಡೆದುಕೊಳ್ಳುವುದು ಕಡ್ಡಾಯ. ಜ್ವರ ಸಮಸ್ಯೆ ಇದ್ದಾಗ ತಪ್ಪದೆ ಈ ಅತಿಬಲದ ಎಲೆಯ ಕಷಾಯವನ್ನು ಸೇವಿಸಿ ಇದರಿಂದ ದೇಹದ ಉಷ್ಣಾಂಶ ಬೇಗನೆ ಇಳಿಯುತ್ತದೆ ಜ್ವರ ಕೂಡ ಬೇಗ ಪರಿಹಾರವಾಗುತ್ತದೆ.

ಯಾರಲ್ಲಿ ಪುರುಷತ್ವಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗಿರುತ್ತದೆ ಅಂಥವರು ತಪ್ಪದೆ ಇದರ ಪ್ರಯೋಜನ ಪಡೆದುಕೊಳ್ಳುತ್ತಾ ಬನ್ನಿ ಇದರಿಂದ ಖಂಡಿತವಾಗಿಯೂ ಪುರುಷತ್ವ ಸಮಸ್ಯೆ ದೂರವಾಗಿ ಆರೋಗ್ಯಕರ ವಾಗಿರಬಹುದು. ರಕ್ತಸ್ರಾವ ಉಂಟಾದಾಗ ಹಿಂದಿನ ಕಾಲದಲ್ಲಿ ಈ ರೀತಿಯ ಆಸ್ಪತ್ರೆಗಳಿಗೆ ಹೋಗಿ ಡ್ರೆಸ್ಸಿಂಗ್ ಮಾಡಿಸಿಕೊಂಡು ಬರುತ್ತಾ ಇರಲಿಲ್ಲ ಇದಕ್ಕೆ ಹಿರಿಯರು ಮಾಡುತ್ತಾ ಇದ್ದ ಪರಿಹಾರ ರಸ್ತೆಯ ಬದಿಯಲ್ಲಿ ಬೆಳೆದಿರುವ ಕೆಲವೊಂದು ಎಲೆಯ ರಸದಿಂದ ರಕ್ತಸ್ರಾವ ಆಗುವುದು ನಿಲ್ಲಿಸುತ್ತಿದ್ದರು ಹೌದು ಈ ಅತಿಬಲದ ಎಲೆಯ ರಸವನ್ನು ಸಹ ರಕ್ತಸ್ರಾವ ಆಗುವುದರ ಮೇಲೆ ಹಾಕುವುದರಿಂದ ರಕ್ತಸ್ರಾವ ಆಗುವುದು, ಅತಿ ಬೇಗ ಕಡಿಮೆ ಆಗುತ್ತದೆ.

ಮಕ್ಕಳಿಗೂ ಸಹ ವೈದ್ಯರ ಸಲಹೆಯ ಮೇಲೆ ಈ ಅತಿಬಲದ ಎಲೆಯ ರಸವನ್ನು ನೀಡಬಹುದು ಇದರಿಂದ ಮಕ್ಕಳಿಗೆ ಉಂಟಾಗಿರುವ ಕೆಮ್ಮು ಸಮಸ್ಯೆ ಶೀತದ ಸಮಸ್ಯೆ ದೂರವಾಗುತ್ತದೆ. ಇನ್ನೂ ಮುಖ್ಯವಾಗಿ ಯಾರೆಲ್ಲ ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂಥವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಬಂದರೆ ಸೊಂಟದ ಮೂಳೆ ಸಮಸ್ಯೆ ಕೂಡ ದೂರವಾಗುತ್ತದೆ ಜೊತೆಗೆ ಹೃದಯದ ಆರೋಗ್ಯವು ಸಹ ಉತ್ತಮವಾಗಿರುತ್ತದೆ ಇದರ ಎಣ್ಣೆ ಅಂದರೆ ಅತಿಬಲದ ಎಲೆಯ ಎಣ್ಣೆ ಅನ್ನೂ ಬಳಸಿ ಮಸಾಜ್ ಮಾಡುವುದರಿಂದ ಕೀಲು ನೋವಿನ ಸಮಸ್ಯೆ ದೂರವಾಗುತ್ತದೆ ಚರ್ಮಸಂಬಂಧಿ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ.