ದೇವರಿಗೆ ದೀಪವನ್ನ ಹಚ್ಚುವಾಗ ದೀಪದಲ್ಲಿ ಈ ಒಂದು ವಸ್ತುವನ್ನ ಹಾಕಿ ನಂತರ ದೇವರಿಗೆ ಅರ್ಪಣೆ ಮಾಡಿ… ಈ ಜನ್ಮದಲ್ಲಿ ಮಾತ್ರ ಅಲ್ಲ ಜನ್ಮ ಜನ್ಮದಲ್ಲಿ ನಿಮಗೆ ಕಷ್ಟಗಳು ಬರೋದೇ ಇಲ್ಲ ಸುಖದ ಸುಪ್ಪತ್ತಿಗೆಯಲ್ಲಿ ಮೆರಿತೀರಾ … ಅಷ್ಟಕ್ಕೂ ಆ ವಸ್ತು ಯಾವುದು ಗೊತ್ತ …

429

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಶಾಂತಿ ನೆಲೆಸಲು ಮನೆಯಲ್ಲಿರುವ ಸದಸ್ಯರು ಕತ್ತಲಿಂದ ಬೆಳಕಿನೆಡೆಗೆ ಬರಲು ಅಂದರೆ ಅಜ್ಞಾನದಿಂದ ಜ್ಞಾನದ ಕಡೆ ಜೀವನದಲ್ಲಿ ಹಿಂದುಳಿದ ದಿನಗಳನ್ನು ಮುಗಿಸಿ ಮುಂದೆ ಭವಿಷ್ಯದಲ್ಲಿ ಉತ್ತಮ ಆಲೋಚನೆ ಕಡೆ ಮುಖಮಾಡಿ ನಿಲ್ಲಲು ಮನೆಯಲ್ಲಿ ನಾವು ಪ್ರತಿದಿನ ದೇವರ ಆರಾಧನೆ ಮಾಡುತ್ತ ಆರಾಧನೆ ಮಾಡುವ ಸಮಯದಲ್ಲಿ ಕತ್ತಲಲ್ಲಿರುವ ನಮ್ಮ ಆಲೋಚನೆಯನ್ನು ಬೆಳಕಿನೆಡೆಗೆ ಕೊಂಡೊಯ್ಯಲು ದೀಪವನ್ನು ಇದರ ಸಂಖೇತವಾಗಿ ಹಚ್ಚುತ್ತೇವೆ.

ಆದ್ದರಿಂದ ಈ ಲೇಖನವನ್ನ ಸಂಪೂರ್ಣವಾಗಿ ತಿಳಿರೇ ಮನೆಯಲ್ಲಿ ದೀಪವನ್ನ ಉರಿಸುವಾಗ ತಪ್ಪದೆ ಈ ವಸ್ತುವನ್ನು ದೀಪದ ಒಳಗೆ ಹಾಕಿ ದೀಪವನ್ನು ಹಚ್ಚಿ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ ಹಾಗೆಯೇ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯು ಕೂಡ ನೆಲೆಸಿರುತ್ತದೆ ಹಾಗಾದರೆ ಬನ್ನಿ ತಿಳಿಯೋಣ ದೀಪವನ್ನು ಹಚ್ಚುವಾಗ ಯಾವೆಲ್ಲಾ ನಿಯಮಗಳನ್ನ ಪಾಲಿಸಬೇಕು ಹಾಗೆ ತಪ್ಪದೆ ಯಾವ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ದೀಪವನ್ನು ಆರಾಧಿಸಬೇಕು ದೀಪಕ್ಕೆ ಯಾವ ವಸ್ತುವನ್ನು ಹಾಕಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ ತಿಳಿಯೋಣ.

ಹೌದು ದೀಪ ಹಚ್ಚುವಾಗ ನಮ್ಮ ಮನಸ್ಸು ಪೂರ್ಣವಾಗಿ ಭಕ್ತಿಗೆ ಪರವಶ ಆಗಿರಬೇಕು ಇದೇ ಸಮಯದಲ್ಲಿ ನಾವು ದೇವರನ್ನು ನೆನೆಯುತ್ತಾ ದೇವರ ಮಂತ್ರವನ್ನು ಪಠಿಸುತ್ತಾ ಅಥವಾ ದೀಪವನ್ನ ಹಚ್ಚುವಾಗಲೇ ಪಠಿಸುವ ಮಂತ್ರ ಕೂಡ ಇರುತ್ತದೆ. ಅದನ್ನು ಕೂಡ ಹಲವು ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಮಂತ್ರವನ್ನು ಪಠಣೆ ಮಾಡುತ್ತಾ ನೀವೇನಾದರೂ ದೀಪವನ್ನು ಹಚ್ಚಿ ದೇಹದಲ್ಲಿ ನಿಮ್ಮ ಜೀವನದಲ್ಲಿ ಇರುವ ಕತ್ತಲೆ ದೂರವಾಗಿ ಬೆಳಕಿನೆಡೆಗೆ ನೀವು ಪಯಣ ಮಾಡುತ್ತೀರಾ ಹಾಗೂ ದೀಪ ಹಚ್ಚುವಾಗ ತಿಳಿದಿರಬೇಕಾದ ವಿಚಾರವೇನು ಅಂದರೆ ಯಾವುದೇ ಕಾರಣಕ್ಕೂ ಮಣ್ಣಿನ ದೀಪವನ್ನು ಮನೆಯಲ್ಲಿ ಹಚ್ಚಲೇಬಾರದು ಮಣ್ಣಿನ ದೀಪವನ್ನು ಹಚ್ಚಿದರೆ ಅದು ಕಷ್ಟಗಳ ಸಂಕೇತವಾಗಿರುತ್ತದೆ ಪಂಚಲೋಹದ ದೀಪವನ್ನು ಅಥವಾ ಬೆಳ್ಳಿ ದೀಪವನ್ನು ಮನೆಯಲ್ಲಿ ಹಚ್ಚುವುದು ಒಳ್ಳೆಯದು.

ಯಾವುದೇ ಕಾರಣಕ್ಕೂ ಮನೆಯಲ್ಲಿ ಒಂದು ದೀಪವನ್ನು ಉರಿಸಬಾರದು ಹೌದು ಒಂಟಿ ದೀಪವನ್ನು ಎಂದಿಗೂ ಮನೆಯಲ್ಲಿ ಒರೆಸಬಾರದು ಇದು ಅಪಶಕುನ ಅಂತ ಹೇಳ್ತಾರೆ. ಮತ್ತೊಂದು ವಿಚಾರವೇನು ಅಂದರೆ ದೀಪ ಉರಿಸುವ ಅಂದರೆ ದೀಪಾರಾಧನೆ ಮಾಡಿದ ಬಳಿಕ ಇದಕ್ಕೆ ಅಂದರೆ ದೀಪದ ಒಳಗೆ ಕರ್ಪೂರವನ್ನು ಹಾಕಿ ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಹೌದು ಸ್ನೇಹಿತರೆ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುತ್ತಾ ಇರಲಿ ಮನೆಯಲ್ಲಿ ನೆಮ್ಮದಿ ಇಲ್ಲ ಅಂತ ಅನ್ನುವುದಾದರೆ ಆ ನೆಮ್ಮದಿಯನ್ನು ಪಡೆದುಕೊಳ್ಳುವುದಕ್ಕಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವುದಕ್ಕಾಗಿ ದೀಪದ ಒಳಗೆ ಕರ್ಪೂರವನ್ನು ಹಾಕಿ ಉರಿಸಿ.

ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಸಮಸ್ಯೆಗಳು ಪರಿಹಾರವಾಗುತ್ತದೆ. ದೀಪವನ್ನು ಹಚ್ಚುವಾಗ ದೊಡ್ಡ ದೊಡ್ಡ ದೀಪವನ್ನು ಹಚ್ಚುವ ಅವಶ್ಯಕತೆ ಇರುವುದಿಲ್ಲ ಚಿಕ್ಕ ದೀಪಗಳನ್ನೇ ಉರಿಸಿರುವ ಆ ದೀಪಾ ಕನಿಷ್ಠ ಪಕ್ಷ 2 ಗಂಟೆಗಳಾದರೂ ಮನೆಯಲ್ಲಿ ಉರಿಯಬೇಕು. ಹೌದು ದೀಪ ಹಚ್ಚಿದ ಮೇಲೆ ಆ ದೀಪ ಮನೆಯಲ್ಲಿ 2ಗಂಟೆಗಳಾದರೂ ಉರಿಯಲೇ ಬೇಕು ಮತ್ತೊಂದು ವಿಚಾರವೇನು ಅಂದರೆ 2 ಗಂಟೆಗಳ ಮುಂಚೆಯೇ ನಾವು ಮನೆಯಲ್ಲಿ ಹಚ್ಚಿದ ದೀಪ ಆರಿ ಹೋಗಬಾರದು ಇದನ್ನು ಕೂಡ ಅಪಶಕುನ ಅಂತ ನಂಬಲಾಗಿದೆ.

ಮನೆಯಲ್ಲಿ ಮನೆಯ ದೇವರ ಮುಂದೆ ದೀಪವನ್ನು ಹಚ್ಚಿದರೆ ತುಳಸಿ ಮಾತೆಯ ಮೊನ್ನೆ ಅಂದರೆ ತುಳಸಿ ಗಿಡದ ಮುಂದೆಯೂ ಕೂಡಾ ಪ್ರತಿ ಸಂಜೆ ದೀಪವನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಏಳಿಗೆ ಕಾಣುತ್ತಿರುವ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಕಷ್ಟ ಬಂದಾಗ ಸಮಸ್ಯೆಗಳಿಗೆ ಪರಿಹಾರ ಏನು ಎಂಬುದು ತಿಳಿಯುತ್ತದೆ. ಈ ಕೆಲವೊಂದು ಪರಿಹಾರವನ್ನು ಮಾಡುವುದರಿಂದ ಹಾಗೂ ದೀಪ ಹಚ್ಚುವಾಗ ದೀಪಕ್ಕೆ ತಪ್ಪದೆ ಕರ್ಪೂರವನ್ನು ಹಾಕಿ ದೀಪವನ್ನು ಉರಿಸಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಧನ್ಯವಾದ.