ನಿಮಗೆ ಕರುಳಿನ ಸಮಸ್ಸೆ ಜೀವನದಲ್ಲಿ ಬರದೇ ಇರಲು , ಜಾಂಡಿಸ್ , ಇನ್ನು ಹಲವಾರು ವ್ಯಾಧಿಗಳಿಗೆ ಈ ಹಣ್ಣು ಸಿದ್ದ ಔಷಧಿ ಅದರಲ್ಲೂ ಚಿಕ್ಕ ಮಕ್ಕಳಿಗೆ ರಾಮಬಾಣ ಇದು… ಅಷ್ಟಕ್ಕೂ ಯಾವುದು ಈ ಹಣ್ಣು …

939

ಜಾಂಡೀಸ್ ಗೆ ಕಾಡಿನಲ್ಲಿ ಬಿಡುವ ಈ ಹಣ್ಣು ಅತ್ಯದ್ಭುತ ಔಷಧಿ ಅಮೃತದಂತೆ ಕೆಲಸ ಮಾಡುತ್ತೆ! ಲಿವರ್ ಸಂಬಂಧಿ ಸಮಸ್ಯೆಗೆ ಈ ಹಣ್ಣು ಪರಿಣಾಮಕಾರಿ…ನಮಸ್ಕಾರ ಪ್ರಿಯ ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಲಿವರ್ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಬಹಳಷ್ಟು ಮಂದಿ. ಹೌದು ಇಂದಿನ ಆಹಾರ ಪದ್ಧತಿ ನಾವು ಸೇವಿಸುತ್ತಿರುವ ಗಾಳಿ ಹಾಗೆ ನಮ್ಮ ಆರೋಗ್ಯ ಪದ್ದತಿ ಜೀವನಶೈಲಿ ಇವೆಲ್ಲವೂ ಆರೋಗ್ಯವನ್ನು ಬಹಳಾನೇ ಕ್ಷೀಣಿಸುತ್ತದೆ ಅದರಲ್ಲಿಯೂ ಮುಖ್ಯವಾಗಿ ನಾವು ಸೇವಿಸುತ್ತಿರುವ ಆಹಾರ ದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಅಂಶ ಇರುವುದರಿಂದ ಇದು ಲಿವರ್ ಮೇಲೆ ಕೆಟ್ಟ ಪ್ರಭಾವ ಬೀರಿ ನಮ್ಮ ಆರೋಗ್ಯವನ್ನು ಕ್ಷೀಣಿಸುತ್ತದೆ. ಹಾಗಾಗಿ ಕೆಲವೊಂದು ಆಹಾರ ಪದಾರ್ಥವನ್ನು ಇತ್ತೀಚಿನ ದಿನಗಳಲ್ಲಿ ಸೇವಿಸುವುದು ಅವಶ್ಯಕವಾಗಿರುತ್ತದೆ.

ಇವತ್ತಿನ ಲೇಖನಿಯಲ್ಲಿ ಲಿವರ್ ಆರೋಗ್ಯದಿಂದ ಹಿಡಿದು, ಬಹಳ ದೊಡ್ಡದಿದೆ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲ ಕಾಡಿನಲ್ಲಿ ದೊರೆಯುವ ಅತ್ಯದ್ಭುತ ಹಣ್ಣು ಇದರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಈ ಹಣ್ಣಿನ ಹೆಸರು ಇಂಗಲಾರದ ಹಣ್ಣು, ಹೌದು ಇದನ್ನು ಇಂಗ ಅಷ್ಟಕ ಅಂತ ಕರೀತಾರೆ. ಈ ಹಣ್ಣಿನ ಹೆಸರಿನ ಅರ್ಥವೇನು ಅಂದರೆ 8 ವಿಧದ ರೋಗಗಳಿಗೂ ಈ ಹಣ್ಣು ಉಪಶಮನವನ್ನು ನೀಡುತ್ತದೆ ಹಾಗಾಗಿ ಇದನ್ನು ಇಂಗ ಅಷ್ಟಕ ಅಂತ ಕರೆಯುತ್ತಾರೆ.

ಈ ಹಣ್ಣು ಯಾವ ಸಮಯದಲ್ಲಿ ಬಿಡುತ್ತದೆ ಅಂದರೆ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳಿನ ವರೆಗೂ ಈ ಹಣ್ಣು ಬೆಳೆಯುತ್ತದೆ ಹಾಗೆ ಈ ಹಣ್ಣನ್ನು ಸೀಸನಲ್ ಹಣ್ಣು ಅಂತ ಕರೆಯಬಹುದು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಜಾಂಡೀಸ್ ನಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಹೌದು ಧೂಮಪಾನ ಮದ್ಯಪಾನ ಮಾಡುವವರಿಗೆ ಶ್ವಾಸಕೋಶ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳು ಇರುತ್ತದೆ ಹಾಗೂ ಲಿವರ್ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಈ ಹಣ್ಣು ನಿಮಗೆ ಸಹಕಾರಿಯಾಗಿದೆ. ಹೌದು ಸಾಮಾನ್ಯವಾಗಿ ಜಾಂಡಿಸ್ ಬಂದವರಿಗೆ ಲಿವರ್ ಯಾವ ಸ್ಥಿತಿಯಲ್ಲಿ ಇರುತ್ತದೆ ಎಂದು ತಿಳಿದೇ ಇದೆ ಅಂಥವರು ಪತ್ಯೆ ಮಾಡಬೇಕಿರುತ್ತದೆ ಹಾಗೂ ಲಿವರ್ ಗೆ ಪೋಷಣೆ ಮಾಡುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕಿರುತ್ತದೆ.

ಅಂತಹ ಆಹಾರಗಳಲ್ಲಿ ಲಿವರ್ ಗೆ ಪೋಷಣೆ ಮಾಡುವಂತಹ ಆಹಾರ ಪದಾರ್ಥಗಳಲ್ಲಿ, ಈ ಹಣ್ಣು ಕೂಡ ಒಂದಾಗಿದೆ ಇದರ ಸೇವನೆ ಯಿಂದಾಗಿ ಲಿವರ್ ಗೆ ಪುಷ್ಟಿ ನೀಡುತ್ತದೆ ಮತ್ತು ಇದರಲ್ಲಿರುವ ಪೋಷಕಾಂಶಗಳು ಹೆಪಟೈಟಿಸ್ ಬಿ ಅಂತಹ ಸಮಸ್ಯೆಗೂ ಶಮನ ನೀಡುತ್ತದೆ.ಸಾಮಾನ್ಯವಾಗಿ ಈ ಹಣ್ಣು ಕಾಡುಗಳಲ್ಲಿ ಬೆಳೆಯುವುದರಿಂದ ಇದರ ಪರಿಚಯ ಹೆಚ್ಚಿನ ಜನರಿಗೆ ಇರುವುದಿಲ್ಲ ಆದರೆ ಹಳ್ಳಿ ಮಂದಿಗೆ ಆಯುರ್ವೇದ ಔಷಧಿ ಬಗ್ಗೆ ತಿಳಿದಿರುವವರಿಗೆ ಈ ಹಣ್ಣಿನ ಪರಿಚಯವಿರುತ್ತದೆ .

ಅಂಥವರು ಈ ಹಣ್ಣಿನ ಪ್ರಯೋಜನವನ್ನ ಪಡೆದುಕೊಂಡಿರುತ್ತಾರೆ. ಹಿಂದಿನ ಕಾಲದಲ್ಲಿ ಆರೋಗ್ಯ ವೃದ್ಧಿಗಾಗಿ ಹಿರಿಯರು ಕೇವಲ ಮನೆ ಆಹಾರವನ್ನ ತಿನ್ನುತ್ತಿರಲಿಲ್ಲ ಪ್ರಕೃತಿಯಲ್ಲಿ ದೊರೆಯುವ ಹಣ್ಣು ಕಾಯಿ ತರಕಾರಿಗಳನ್ನು ತಿನ್ನುತ್ತಿದ್ದರು ಆದಕಾರಣವೇ ತಮಗೆ ತಿಳಿಯದೇ ಕೆಲವೊಂದು ಪೋಷಕಾಂಶಗಳು ಸೇವನೆ ಮಾಡುತ್ತಿದ್ದದರಿಂದ ಆರೋಗ್ಯ ವೃದ್ಧಿ ಆಗುತ್ತಿತ್ತು ಹೆಚ್ಚಿನ ಕಾಲ ಅರೋಗ್ಯಕರವಾಗಿರಲು ಸಹಕಾರಿಯಾಗಿರುತ್ತಿತ್ತು, ಆಯಸ್ಸು ಕೂಡ ವೃದ್ದಿ ಆಗುತ್ತಿತ್ತು.

ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲು ಈ ಹಣ್ಣಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಕರುಳು ಸಂಬಂಧಿ ಸಮಸ್ಯೆಗಳು ಕೂಡ ಪರಿಹಾರವಾಗುತ್ತಿತ್ತು. ಹೌದು ನಿಮಗೆ ಗೊತ್ತಾ? ಕರುಣೆ ನಿಂದಲೇ ಬಹಳಷ್ಟು ಜನರಿಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ ಹಾಗಾಗಿ ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ ಈ ಹಣ್ಣು ಅಥವಾ ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಬಹಳ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಶಮನ ನೀಡಬಲ್ಲ ಈ ಹಣ್ಣು ನಿಮಗೂ ಕೂಡ ದೊರೆತರೆ ಇದರ ಪ್ರಯೋಜನ ಪಡೆದುಕೊಳ್ಳಿ ಧನ್ಯವಾದ.