ನಿಮಗೆ ಗೊತ್ತೇ ಆಗದೆ ಇರೋ ನಿಮ್ಮ ಮೇಲೆ ಪ್ರಯೋಗ ಮಾಡುವ ದುಷ್ಟ ಶಕ್ತಿಗಳು ನಿಮಗೆ ಏನು ಮಾಡೋದಂಗೆ ಮಾಡಿಕೊಳ್ಳೋದಕ್ಕೆ ಬಿಳಿ ಸಾಸಿವೆಯಿಂದ ರಾತ್ರಿ ಹೀಗೆ ಮಾಡಿ ಸಾಕು… ನಿಮ್ಮನ್ನ ನೋಡಿ ಹೊಟ್ಟೆ ಉರಿದುಕೊಂಡು ಏನೇ ಪ್ರಯೋಗ ಮಾಡಿದರು ನಿಮಗೆ ತಟ್ಟೋದಿಲ್ಲ ಹಾಗೆ ಅವರು ಮಾಡಿದ ಕೆಲ್ಸಕ್ಕೆ ಅವರಿಗೆ ತಿರುಗು ಬಾಣ ಆಗುತ್ತದೆ… ಅಷ್ಟಕ್ಕೂ ಇದನ್ನ ಹೇಗೆ ಮಾಡಬೇಕು ಗೊತ್ತ ..

521

ಬಿಳಿ ಸಾಸಿವೆಯಿಂದ ಈಶ್ವರನ ಬಳಿ ಈ ಪರಿಹಾರವನ್ನು ನೀವು ಪಾಲಿಸಿದ್ದೇ ಆದಲ್ಲಿ ನಿಮ್ಮ ಸಕಲ ಕಷ್ಟಗಳು ದೂರ ಆಗುತ್ತದೆ. ಹೌದು ಕಷ್ಟಗಳು ಬಂತು ಅಂತ ಅದನ್ನ ಯೋಚಿಸುತ್ತಾ ಕುಳಿತರೆ ಕಷ್ಟಗಳು ದೂರವಾಗುವುದಿಲ್ಲ ಕಷ್ಟ ಈ ದಿನ ಬಂದು ನಾಳೆ ದಿನ ನಮ್ಮಿಂದ ದೂರ ಆಗಿರುತ್ತದೆ ಆದರೆ ಕಷ್ಟಗಳು ಬಂದು ಹೋಗುತ್ತದೆ ಅಂತ ಅದನ್ನ ಹಾಗೆ ಬಿಡುವುದಕ್ಕೂ ಸಾಧ್ಯ ಇಲ್ಲ ಅಲ್ವಾ ಅದಕ್ಕೆ ಮಾಡಿಕೊಳ್ಳಬೇಕಾದ ಪರಿಹಾರಗಳನ್ನೂ ಕೂಡ ನಾವು ಮಾಡಬೇಕಿರುತ್ತದೆ. ಅದೇ ರೀತಿ ಮನುಷ್ಯನಿಗೆ ಕಷ್ಟ ಬರದೆ ಮರಕ್ಕೆ ಬರುತ್ತಾ ಅಂತ ಹೇಳುತ್ತಾರೆ. ಹೌದು ಅವರವರ ಕಷ್ಟ ಅವರವರಿಗೆ ದೊಡ್ಡದು ಅಲ್ವಾ. ಹಾಗೆ ಈ ದಿನದ ರೇಖನಿ ಯಲ್ಲಿಯೂ ಸಹ ಕಷ್ಟ ಬಂದಾಗ ಮಾಡಿಕೊಳ್ಳಬಹುದಾದ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇವೆ ವೈಯಕ್ತಿಕ ಸಮಸ್ಯೆಗಳ ಬೇರೆ ಕುಟುಂಬದ ನಡುವೆ ಸಂಸಾರಕ್ಕೆ ಎದುರಾಗುತ್ತಿರುವ ಕಷ್ಟಗಳೇ ಬೇರೆ ಆಗಿರುತ್ತದೆ.

ಆದಕಾರಣ ಈ ದಿನದ ಲೇಖನಿಯಲ್ಲಿ ನಾವು ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಆಗಿರಲಿ ಅಥವಾ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಮನೆಯ ವಾತಾವರಣವೇ ಬದಲಾಗಿ ಹೋಗಿದೆ ಮನೆಯಲ್ಲಿ ಕೆಲ ಸದಸ್ಯರು ಇದ್ದಕ್ಕಿದ್ದ ಹಾಗೆ ಬದಲಾಗಿದ್ದಾರೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣುತ್ತಾ ಇದ್ದೇವೆ ಅದು ತುಂಬ ವಿಭಿನ್ನವಾಗಿದೆ ಅನ್ನುವ ಭಾವನೆ ಅನುಭವ ನಿಮಗೆ ಗೊತ್ತಿದ್ದಲ್ಲಿ ನಾವು ಗಳಿಸುವ ಈ ಸುಲಭ ಪರಿಹಾರವನ್ನು ಪಾಲಿಸಿ ಇದನ್ನು ನೀವು ಶಿವನ ಜಪ ಮಾಡುತ್ತಾ ಶಿವನನ್ನು ನೆನೆಸಿಕೊಳ್ಳುತ್ತಾ ಮಾಡಿದ್ದೇ ಆದಲ್ಲಿ ಖಂಡಿತ ಈ ಕುಟುಂಬಗಳ ನಡುವೆ ಆಗಲಿ ಅಥವಾ ಕುಟುಂಬದ ಸದಸ್ಯರ ನಡುವೆ ಉಂಟಾದ ಭಿನ್ನಾಭಿಪ್ರಾಯ ಕಷ್ಟಗಳು ಇವೆಲ್ಲವನ್ನ ಪರಿಹಾರ ಮಾಡಿಕೊಳ್ಳಬಹುದು ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದರೆ ಅಂತಹ ಮನೆಯಲ್ಲಿ ಮನೆಯ ಸದಸ್ಯರ ನಡುವೆ ಇದ್ದಕ್ಕಿದ್ದ ಹಾಗೆ ಜಗಳಗಳು ಉಂಟಾಗುತ್ತದೆ ಮನಸ್ತಾಪಗಳು ಉಂಟಾಗುತ್ತದೆ ಆದ್ದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದಲ್ಲಿ ಅಂಥವರೂ ಸಹ ಈ ಪರಿಹಾರವನ್ನು ಪಾಲಿಸಿ ತುಂಬಾ ಸುಲಭವಾದ ಪರಿಹಾರ ಆಗಿರುತ್ತದೆ. ಇವುಗಳನ್ನು ನೀವು ಪಾಲಿಸಿದ್ದೇ ಆದಲ್ಲಿ ಜೀವನದಲ್ಲಿ ಯಾವ ಕಷ್ಟಗಳ ಆದಷ್ಟು ಬೇಗ ಶಿವನ ಕೃಪೆಯಿಂದ ಪರಿಹಾರ ಮಾಡಿಕೊಳ್ಳಬಹುದು.

ಯಾವ ದಿನದಂದು ಪರಿಹಾರವನ್ನ ಮಾಡಬೇಕು :ಹೌದು ಈ ದಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಈ ಪರಿಹಾರವನ್ನು ನೀವು ಸೋಮವಾರದ ದಿನದಂದು ಪಾಲಿಸಬೇಕು, ಹೌದು ನೀವು ಯಾವುದೇ ಪರಿಹಾರವನ್ನು ಮಾಡಿಕೊಳ್ಳಲು ಮುಂದಾಗಿದ್ದರೆ, ಆ ಪರಿಹಾರವನ್ನು ಸೋಮವಾರದ ದಿನದಂದು ಪಾಲಿಸಿ ಇದರಿಂದ ಶಿವನ ಅನುಗ್ರಹದ ಜತೆಗೆ ನಿಮ್ಮ ಪರಿಹಾರಗಳು ಉತ್ತಮವಾಗಿ ನಿಮಗೆ ಫಲ ನೀಡುತ್ತದೆ. ಸೋಮವಾರದ ದಿನದಂದು ನೀವು ಪಾಲಿಸುವ ಪರಿಹಾರದ ಜೊತೆಗೆ ಶಿವನ ದೇವಾಲಯಕ್ಕೆ ಹೋಗಿ ಶಿವನ ಲಿಂಗಕ್ಕೆ ಹಾಲಿನಭಿಷೇಕವನ್ನು ಮಾಡಿಸಬೇಕು.

ಜೊತೆಗೆ ಮನೆಯಲ್ಲಿ ನೀವು ಮಾಡಬೇಕಿರುವ ಪರಿಹಾರವೇನು ಅಂದರೆ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಅದನ್ನು ಪೇಪರ್ ನಲ್ಲಿ ಕಟ್ಟಬೇಕು ನಂತರ ಈ ಪಟ್ಟಣವನ್ನು ಮನೆಯ ಪ್ರತಿ ಮೂಲೆಯಲ್ಲಿಯೂ ಇರಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ಪ್ರತಿ ಮೂಲೆಯಲ್ಲಿಯೂ ಈ ಬಿಳಿ ಸಾಸಿವೆಯ ಪಟ್ಟಣವನ್ನು ಇರಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಇದು ಆಕರ್ಷಣೆ ಮಾಡಿ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಉಂಟು ಮಾಡುತ್ತದೆ. ಹೀಗೆ ಈ ಚಿಕ್ಕ ಪರಿಹಾರವನ್ನ ಪಾಲಿಸೋದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ನಕಾರಾತ್ಮಕ ಶಕ್ತಿಯಿಂದ ಪರಿಹಾರ ಪಡೆದು ನಿಮ್ಮ ಕಷ್ಟಗಳು ಕೂಡ ಇದರಿಂದ ದೂರ ಆಗುತ್ತದೆ, ಶಿವನ ನಾಮಸ್ಮರಣೆ ಮಾಡುತ್ತಾ ಶಿವನನ್ನು ನೆನೆದು ಈ ಪರಿಹಾರವನ್ನು ಪಾಲಿಸಿ.

ಪ್ರತಿ ಸೋಮವಾರ ಈ ಪರಿಹಾರವನ್ನು ಮಾಡಿ ಅಂದರೆ ಶಿವನ ದೇವಾಲಯಕ್ಕೆ ಹೋಗಿ ಶಿವನ ಲಿಂಗಕ್ಕೆ ಅಭಿಷೇಕ ಮಾಡಿಸಿ ಜೊತೆಗೆ ಮನೆಯ ಮೂಲೆಯಲ್ಲಿ ಇಟ್ಟಂತಹ ಈ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಮನೆಯ ಮುಖ್ಯದ್ವಾರದ ಎದುರು ಅದನ್ನು ಸುಟ್ಟು ಹಾಕಬೇಕು ಈ ರೀತಿ ಮಾಡೋದ್ರಿಂದ ನಕಾರಾತ್ಮಕ ಶಕ್ತಿಯ ಅಟ್ಟಹಾಸ ಮನೆಯಿಂದ ತೊಲಗುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ…