ಭೂತ ಪ್ರೇತ ಪಿಶಾಚಿಗಳು ನಿಮ್ಮ ಮನೆಯ ಬಾಗಿಲು ದಾಟಬಾರದು ಅಂದರೆ ಈ ಗಿಡದ ಒಂದು ಬೇರಿನಿಂದ ಮನೆಯಲ್ಲೇ ಈ ಒಂದು ಸಣ್ಣ ತಂತ್ರ ಮಾಡಿ ಸಾಕು… ಅಷ್ಟಕ್ಕೂ ಆ ಬೇರು ಯಾವುದು ಗೊತ್ತ …

641

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಮನೆಯ ಮೇಲೆ ಮಾಟ ಮಂತ್ರದ ಪ್ರಯೋಗ ಆಗಿದ್ದರೆ ಅಥವಾ ಯಾವುದಾದರೂ ವ್ಯಕ್ತಿಯ ಮೇಲೆ ಇಂಥದ್ದೊಂದು ಕೆಟ್ಟ ಶಕ್ತಿಗಳ ಪ್ರಭಾವ ಬೀರಿದ್ದರೆ ಇದಕ್ಕೆ ನೀವು ಮಾಡಿಕೊಳ್ಳಬೇಕಾದ ಪರಿಹಾರವೇನು ಗೊತ್ತಾ? ಹೌದು ಸ್ನೇಹಿತರೆ ಹಲವರಿಗೆ ಹಲವು ಸಮಸ್ಯೆಗಳಿರುತ್ತವೆ ಜೊತೆಗೆ ಮತ್ತೊಂದು ಸಮಸ್ಯೆ ಅಂದರೆ ಎಷ್ಟು ನೋವಾಗುತ್ತದೆ ಅಲ್ವಾ. ಇಂತಹ ಸನ್ನಿವೇಶಗಳನ್ನು ಬಹಳಷ್ಟು ಮಂದಿ ಎದುರಿಸಿರುತ್ತಾರೆ ಅದರಲ್ಲಿಯೂ ಮಧ್ಯಮ ವರ್ಗದ ಜನರು ಆಗಲೇ ಬಹಳಷ್ಟು ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ ಅದೇ ಸಮಯದಲ್ಲಿ ಶಾಕ್ ಎಂಬಂತೆ ಇಲ್ಲದ ಸಲ್ಲದ ಸಮಸ್ಯೆಗಳು ಹುಟ್ಟಿಕೊಂಡಿರುತ್ತದೆ.

ಹೌದು ಕೆಲವರಿಗಂತೂ ಜೀವನ ಚೆನ್ನಾಗಿ ಇದೆ ಅನಿಸುತ್ತ ಇರುತ್ತದೆ ಅಷ್ಟರಲ್ಲಿ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಾಡಿರುತ್ತದೆ ಅದೇ ವೇಳೆ ಕೆಲಸ ಕೈಬಿಟ್ಟು ಹೋಗುತ್ತದೆ ಇಂತಹ ಸನ್ನಿವೇಶಗಳನ್ನು ಎದುರಿಸಿರುವವರು ಕಡಿಮೆಯೇನು ಇಲ್ಲ ಬಿಡಿ. ಇದೇ ವೇಳೆ ಹಲವರಿಗೆ ಕಾಡುವ ಪ್ರಶ್ನೆ ಯಾಕೆ ಈ ರೀತಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಾ ಇದೆ ಏನಾಗುತ್ತಿದೆ ಅಂತಾನೇ ಗೊತ್ತಾಗುತ್ತಿಲ್ಲ ಅಂತ ತಲೆ ಮೇಲೆ ಕೈಹೊತ್ತು ಕೂರುತ್ತಾರೆ. ಇನ್ನು ಕೆಲವರಿಗಂತೂ ಮನೆಯಲ್ಲಿ ಕೆಟ್ಟ ಸುದ್ದಿಯ ಮೇಲೆ ಕೆಟ್ಟ ಸುದ್ದಿ ಕೇಳುತ್ತಲೇ ಇರುತ್ತಾರೆ ಹಾಗೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಇಂತಹ ಸಮಯದಲ್ಲಿ ನೀವು ಮಾಡಿಕೊಳ್ಳಬೇಕಾದ ಈ ಪರಿಹಾರ ಏನಪ್ಪಾ ಅಂದರೆ ಶಿವನನ್ನು ನಂಬಿ ಶಿವನ ಸ್ವರೂಪವೇ ಆಗಿರುವ ಈ ಗಿಡದ ಬೇರನ್ನು ಮನೆಗೆ ತಂದು ಈ ಸಣ್ಣ ಪರಿಹಾರವನ್ನ ಮಾಡಿಕೊಳ್ಳಿ ಕಾಡುತ್ತಿರುವ ಹಲವು ಸಮಸ್ಯೆ ಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಹೌದು ಮಾಟಮಂತ್ರದ ಪ್ರಯೋಗ ಆಗಿದೆ ಅಂದರೆ ಮನೆಗೆ ಬಂದಾಗ ಮನಸ್ಸಿಗೆ ಶಾಂತಿ ಇರುವುದಿಲ್ಲ ಕೆಲಸಕ್ಕೆ ಹೋದಾಗ ಅಲ್ಲಿಯು ಕೂಡ ಕಿರಿಕಿರಿ ಆಗುವುದು. ಇದೇ ವೇಳೆ ಅನಾರೋಗ್ಯ ಸಮಸ್ಯೆ ಬೇರೆ ಉಂಟಾಗಿಬಿಡುತ್ತದೆ. ನಿಮ್ಮ ಮನೆಯ ಸುತ್ತಮುತ್ತ ಅಥವಾ ಉಮ್ಮತಿ ಗಿಡ ಎಲ್ಲೇ ಇದ್ದರೂ ಅದರ ಬೇರನ್ನು ಮನೆಗೆ ತಂದು ಇಡಿ ಇದನ್ನು ಶನಿವಾರ ಮನೆಗೆ ತರಬೇಕು. ಹೌದು ಉಮ್ಮತಿ ಗಿಡ ಅಂದರೆ ಅದು ಶಿವನ ಸ್ವರೂಪ ಆಗಿರುತ್ತದೆ ಇದನ್ನು ಮನೆಗೆ ತಂದ ಮೇಲೆ ತುಂಬಿದ ಕೊಡವೊಂದಕ್ಕೆ ಆ ಗಿಡದ ಬೇರನ್ನು ಹಾಕಿ ಇಡಬೇಕು, ಬಳಿಕ ಭಾನುವಾರ ಬೇರನ್ನು ತೆಗೆದು ನೀರನ್ನು ಮನೆಯ ಪ್ರತಿಯೊಂದು ಮೂಲೆಗು ಪ್ರೋಕ್ಷಣೆ ಮಾಡಬೇಕು.

ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ತರಹದ ಕೆಟ್ಟ ಶಕ್ತಿಯೇ ನೆಲೆಸಿದ್ದರೂ ಅದು ಪರಿಹಾರವಾಗತ್ತೆ. ಅದರಿಂದ ನಿಮಗೆ ಮುಕ್ತಿ ಸಿಗುತ್ತದೆ ಹೌದು ಉಮ್ಮತಿ ಗಿಡ ಅಂದರೆ ಅದನ್ನು ಶಿವನ ಸ್ವರೂಪ ಅಂತ ಕೆಲವರು ಕರೆದರೆ, ಇನ್ನು ಕೆಲವರು ಶಿವನಿಗೆ ಪ್ರಿಯವಾದ ಗಿಡಾ ಈ ಉಮ್ಮತ್ತಿ ಗಿಡ ಅಂತ ಹೇಳ್ತಾರೆ. ಆದ್ದರಿಂದಲೇ ಹಲವರು ಈ ಉಮ್ಮತಿ ಗಿಡವನ್ನು ಹಳ್ಳಿಯ ಕಡೆ ತಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಸುತ್ತಾರೆ. ಉಮ್ಮತಿ ಗಿಡದ ಪೂಜೆ ಮಾಡುವುದರಿಂದ ಶಿವನ ಅನುಗ್ರಹ ನಮಗೆ ಸಿಗುತ್ತೆ ಅಂತ ಹೇಳ್ತಾರೆ. ಉಮ್ಮತ್ತಿ ಗಿಡದ ಬೇರು ಮನೆಯಲ್ಲಿದ್ದರೆ ಕೆಟ್ಟ ಶಕ್ತಿಯ ನೆಲೆ ಅಲ್ಲಿ ಇರುವುದಿಲ್ಲ ಅಂತ ಹೇಳ್ತಾರೆ.

ಮಾಟ ಮಂತ್ರದ ಶಕ್ತಿಯ ಪ್ರಭಾವ ಆಗಿದೆ ಅಂತ ಹೇಗೆ ತಿಳಿಸುವುದು ಅಂತ ಹಲವರಿಗೆ ಸಂಶಯವಿರುತ್ತದೆ ನಿಮ್ಮ ಮನೆಯ ಅಂಗಳದಲ್ಲಿ ಏನಾದರೂ ತುಳಸಿಗಿಡ ಆಗಾಗ ಬತ್ತಿ ಹೋಗುತ್ತಾ ಇದ್ದರೆ ಆದಷ್ಟು ಬೇಗ ಒಣಗಿ ಹೋಗುತ್ತ ಇದೆ ಅಂದರೆ ಅಂತಹ ಮನೆಯಲ್ಲಿ ಕಿತ್ತು ಶಕ್ತಿಯ ಪ್ರವೇಶ ಆಗಿದೆ ಎಂಬುದರ ಅರ್ಥವಾಗಿರುತ್ತದೆ. ಆದ್ದರಿಂದಲೇ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಒಣಗಲು ಬಿಡಬಾರದು ಅಂತ ಹೇಳುವುದು. ಇನ್ನೂ ಕೆಲವರಿಗೆ ಇದರ ಸೂಚನೆ ತಿಳಿಯುತ್ತದೆ ಹೇಗೆಂದರೆ, ಮನಸ್ಸಿಗೆ ನೆಮ್ಮದಿ ಎನ್ನುವುದು ಇರುವುದಿಲ್ಲ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇರುತ್ತದೆ ಅಂಥವರು ನಾವು ಈ ದಿನ ತಿಳಿಸಿದ ಪರಿಹಾರವನ್ನ ಪಾಲಿಸಿ ಈ ಸರಳ ಪರಿಹಾರ ಪಾಲಿಸಿ ಶಿವನ ಅನುಗ್ರಹದಿಂದ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ.

WhatsApp Channel Join Now
Telegram Channel Join Now