ಮೂಲವ್ಯಾದಿ ಸಮಸ್ಸೆ ನಿಮ್ಮನ್ನ ತುಂಬಾನೇ ಕಾಡುತ್ತ ಇದ್ರೆ ಈ ಮನೆ ಮದ್ದು ಬಳಸಿ ನೋಡಿ.. ಒಳ್ಳೆ ಮನೆಮದ್ದು

225

ಮೂಲವ್ಯಾಧಿ ಸಮಸ್ಯೆಯಿಂದ ಬಹಳ ಕಷ್ಟ ಪಡುತ್ತಿದ್ದಲ್ಲಿ ಈ ಸಮಸ್ಯೆಗೆ ಮಾಡಿ ಈ ಚಿಕ್ಕ ಪರಿಹಾರ ಹೌದು ಕೇವಲ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಎರಡೇ ಸಾಮಾಗ್ರಿಗಳು.ಇವತ್ತಿನ ದಿನಗಳಲ್ಲಿ ಹೇಗಾಗಿದೆ ಅಂದರೆ ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಮಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡೋದೆ ಕಡಿಮೆಯಾಗಿ ಹೋಗಿದೆ ಹಾಗಾಗಿ ಇಂದು ಯಾವ ಆಸ್ಪತ್ರೆಗಳಲ್ಲಿ ನೋಡಿದರೂ ಉದ್ದ ಉದ್ದ ಕ್ಯೂ ಚಿಕ್ಕ ಪುಟ್ಟ ಶೀತ ಜ್ವರ ಕೆಮ್ಮು ಸಮಸ್ಯೆಗಳಿಗೂ ಮಂದಿ ಆಸ್ಪತ್ರೆ ಅತ್ತ ಧಾವಿಸುತ್ತಾರೆ ಇಂತಹದೊಂದು ಪರಿಸ್ಥಿತಿ ಬಂದಿದೆ.

ಹಾಗಾಗಿ ಇಂದು ಹೆಚ್ಚು ಮಾತ್ರೆ ಇಂಜೆಕ್ಷನ್ ಗಳನ್ನು ತೆಗೆದುಕೊಂಡು ತೆಗೆದುಕೊಂಡು ಮಂದಿಯ ಆರೋಗ್ಯ ಸ್ಥಿತಿ ಹೇಗಾಗಿದೆ ಅಂದರೆ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಆ ನೋವನ್ನ ತಡೆಯಲು ಸಾಧ್ಯವಾಗದೆ ಜನರು ಈ ನೋವಿಗೆ 1 ಪೇನ್ ಕಿಲ್ಲರ್ ಇಂಜೆಕ್ಷನ್ ಹಾಕಿಸಿಕೊಂಡು ಬಂದರೆ ಬಹಳ ಬೇಗ ಪರಿಹಾರ ಆಗುತ್ತದೆ ಅನ್ನುವ ಆಲೋಚನೆ ಅಲ್ಲೇ ಇರುತ್ತಾರೆ ಯಾವ ನೋವನ್ನು ತಳೆಯದೆ ಮೊದಲು ಇಂಜೆಕ್ಷನ್ ಹಾಕಿಸಿಕೊಂಡು ತಕ್ಷಣ ಪರಿಹಾರ ಪಡೆದುಕೊಳ್ಳುತ್ತಾರೆ.

ಆದರೆ ಈ ರೀತಿ ಚುಚ್ಚುಮದ್ದುಗಳಿಗೆ ಅಡಿಕ್ಟ್ ಆಗಿರುವುದರಿಂದ ಆಗುವುದೇನು ಅನ್ನೋದು ನಿಮಗೆ ಗೊತ್ತಿಲ್ಲ ಅಲ್ವಾ ಹೌದು ಸದಾ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಇಂತಹ ರೂಢಿಯನ್ನ ಮಾಡಿಕೊಂಡರೆ ನಮ್ಮ ಆರೋಗ್ಯದ ನೈಸರ್ಗಿಕ ಸ್ಥಿತಿ ಅಂತ ಏನು ಹೇಳುತ್ತಾರೆ ಅದನ್ನು ನಾವು ಕಳೆದುಕೊಳ್ಳುತ್ತಾ ಹೋಗುತ್ತೇವೆ ಹಾಗಾಗಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ ನಿಮ್ಮ ಆರೋಗ್ಯದ ಬಗ್ಗೆ ಚಿಕ್ಕಪುಟ್ಟ ವಿಚಾರಗಳ ಬಗ್ಗೆಯೂ ಕೂಡ ಮಾಹಿತಿ ತಿಳಿದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನಿಮ್ಮ ಆರೋಗ್ಯ ನಿಮ್ಮ ಭಾಗ್ಯ ಹಾಗಾಗಿ ಹಣ ಇಂದಲ್ಲ ನಾಳೆ ಬರಬಹುದು ಸಮಯ ಬರೋದಿಲ್ಲ ಹಾಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯ ಕಾಳಜಿ ಮಾಡಿ.

ಹೌದು ಮೂಲವ್ಯಾಧಿ ಕುರಿತು ಮಾತನಾಡುತ್ತಿದ್ದೇವೆ ಇಂದಿನ ಲೇಖನಿಯಲ್ಲಿ. ಈ ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಚುಕ್ಕಿ ಬಾಳೆಹಣ್ಣು ಹೌದು ಈ ಬಾಳೆಹಣ್ಣು ಪೂರ್ಣವಾಗಿಯೂ ಕಳಿತಿರಬಾರದು ಸ್ವಲ್ಪ ಹಣ್ಣಾಗಿದ್ದರೆ ಸಾಕು.ಈ ಪರಿಹಾರ ಮಾಡುವುದಕ್ಕಾಗಿ ಬೇಕಾಗಿರುವುದು ಮತ್ತೊಂದು ಪದಾರ್ಥವೆಂದರೆ ಅದು ಪಚ್ಚಕರ್ಪೂರ ಹೌದು ಈ ಪಚ್ಚ ಕರ್ಪೂರ ಹೂವು ಆಯುರ್ವೇದ ಅಥವ ಗ್ರಂಥಿಗೆ ಅಂಗಡಿಗಳಲ್ಲಿ ದೊರೆಯುತ್ತದೆ. ಇದನ್ನು ನೀವು ತಂದು ಈ ಮೂಲವ್ಯಾಧಿ ಸಮಸ್ಯೆಗೆ ಪರಿಹಾರವನ್ನು ಮಾಡಿಕೊಳ್ಳಿ.

ಈ ಮನೆಮದ್ದು ಮಾಡುವುದಕ್ಕೆ ಇದಿಷ್ಟೇ ಪದಾರ್ಥಗಳ ಸಾಕು ಬಾಳೆಹಣ್ಣನ್ನು ತೆಗೆದುಕೊಂಡು ಆ ಬಾಳೆಹಣ್ಣಿನ ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ ಬಳಿಕ ಆ ಬಾಳೆಹಣ್ಣಿನ ತುಂಡೊಂದಕ್ಕೆ ಪಚ್ಚ ಕರ್ಪೂರದ ತುಂಡನ್ನು ಸೇರಿಸಿ ಅದನ್ನು ತಿನ್ನಬೇಕು.ಇದನ್ನು ಬೇಕಾದರೆ ನೀವು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಬಳಿಕ ಉಳಿದ ಬಾಳೆಹಣ್ಣಿನ ತುಂಡುಗಳೊಂದಿಗೆ ಪಚ್ಚಕರ್ಪೂರದ ಪುಡಿ ಮಿಶ್ರ ಮಾಡಿ ಅದನ್ನು ಕೂಡ ತಿನ್ನಿ ದಿನಕ್ಕೆ 1 ಬಾಳೆಹಣ್ಣನ್ನು ಈ ರೀತಿ ತಿನ್ನುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆಗೆ ಬಹಳ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು.

ಹಾಗಾಗಿ ಮೂಲವ್ಯಾಧಿ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ ಇದು ತುಂಬಾ ಬಾಧೆ ನೀಡುವ ತೊಂದರೆ ಆಗಿರುತ್ತದೆ, ಹಾಗಾಗಿ ಮೊದಲು ಈ ಪರಿಹಾರವನ್ನು ಪಾಲಿಸಿ ನಿಮ್ಮ ಈ ಮೂಲವ್ಯಾದಿ ಸಮಸ್ಯೆಗೆ ಪರಿಹಾರವನ್ನೂ ಕಂಡುಕೊಳ್ಳಿ ಹಾಗೂ ಮೂಲವ್ಯಾಧಿ ಸಮಸ್ಯೆ ಇರುವವರು ಹೆಚ್ಚು ಹೆಚ್ಚು ನೀರು ಕುಡಿಯುವ ರೂಢಿಯನ್ನು ಮಾಡಿಕೊಳ್ಳಿ ಧನ್ಯವಾದ.