ಹೀರೋ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರುವ ಮುಖ್ಯಮಂತ್ರಿ ಚಂದ್ರು ಮಗ….ಹೇಗಿದ್ದಾನೆ ನೋಡಿ

231

ನಮ್ಮ ಕರ್ನಾಟಕದ ಖಾಯಂ ಮುಖ್ಯಮಂತ್ರಿಗಳು ಅಂದರೆ ಇವರೇ ನೋಡಿ ಹೌದು ಮುಖ್ಯಮಂತ್ರಿ ಅಂದಕೂಡಲೇ ನಮಗೆ ನೆನಪಿಗೆ ಬರುವುದು ಅದರಲ್ಲಿಯೂ ಸಿನಿರಸಿಕರಿಗೆ ನೆನಪಿಗೆ ಬರುವುದು ನಟ ಮುಖ್ಯಮಂತ್ರಿ ಚಂದ್ರು ಅವರು. ಹೌದು ಖಾಯಂ ಮುಖ್ಯಮಂತ್ರಿಯಾಗಿ ತಮ್ಮ ಸೀಟನ್ನು ಉಳಿಸಿಕೊಂಡಿರುವವರು ಅಂದರೆ ಅವರೆ ಮುಖ್ಯಮಂತ್ರಿ ಚಂದ್ರು ಎಂದು ಹೇಳಬಹುದು. ಹೌದು ಕನ್ನಡ ಚಿತ್ರರಂಗದಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಬಹುಮುಖ ಕಲಾವಿದರಾಗಿದ್ದರೂ ಹಾಗೂ ಹಲವು ಸಿನಿಮಾಗಳಲ್ಲಿ ಇವರು ಖಳನಾಯಕನ ಪಾತ್ರದಲ್ಲಿ ಅಭಿನಯ ಮಾಡಿ ಮೊದಲ ಬಾರಿಗೆ ಖಳನಾಯಕನ ಪಾತ್ರದಿಂದ ಅಭಿನಯ ಮಾಡುವ ಮೂಲಕವೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು ಆ ನಂತರ ಹಾಸ್ಯ ಕಲಾವಿದನಾಗಿ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಯೂ ಕೂಡ ಅಭಿನಯ ಮಾಡುವ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಚಂದ್ರು ಅವರು, ‌ರಂಗಭೂಮಿಯ‌ ಹಿನ್ನೆಲೆಯಿಂದ ಕನ್ನಡ ಚಿತ್ರರಂಗಕ್ಕೆ ಬಂದರು. ಇವರು ಕಲಾ ಗಂಗೋತ್ರಿ ತಂಡದ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ ಮೇಲೆ ಇವರ ಹೆಸರಿನಲ್ಲಿ ಮುಖ್ಯಮಂತ್ರಿ ಎನ್ನುವ ಹೆಸರು ಸೇರಿಕೊಂಡಿದೆ.

 

ಇನ್ನೂ ಸುಮಾರು 40 ವರ್ಷಗಳ ನಂತರವೂ ಕೂಡ ನಾಟಕದ ಜನಪ್ರಿಯತೆ ಕಡಿಮೆ ಮಾಡಿಕೊಳ್ಳದೆ ಇರುವ ಇವರು ಇಂದಿಗೂ ಕೂಡ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸುತ್ತಾ ಇದ್ದಾರೆ ಎಂದು ಹೇಳಲಾಗಿದೆ. 1983 ರಲ್ಲಿ ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ ಸಿನಿಮಾ ಚಕ್ರವ್ಯೂಹ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರದ ಮೂಲಕ ಚಿತ್ರ ರಂಗವನ್ನು ಪ್ರವೇಶಿಸಿದ ಚಂದ್ರು ಅವರು ಸರಿ ಸುಮಾರು 500 ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡಪರ ಹೋರಾಟಗಳಿಗೆ ಹೆಸರಾಗಿರುವ ಚಂದ್ರು ಅವರು ಕನ್ನಡದ ಅಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ಸ್ಥಾನವನ್ನು ಕೂಡ ವಹಿಸಿರುವುದು ವಿಶೇಷ.

ನಟ ಮುಖ್ಯಮಂತ್ರಿ ಚಂದ್ರು ಅವರು 1953 ರಲ್ಲಿ ನೆಲಮಂಗಲದ ಹೊನ್ನಾಸಂದ್ರದ ರೈತರ ಕುಟುಂಬದಲ್ಲಿ ಜನಿಸಿದರು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ ಚಂದ್ರು ಆ ನಂತರ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸಿದರು ಈ ಸಮಯದಲ್ಲಿ ನಾಟಕದ ಕಡೆ ಹೆಚ್ಚು ಆಸಕ್ತಿ ಹೊಂದಿದ ಮುಖ್ಯಮಂತ್ರಿ ಚಂದ್ರು ಅವರು, ನಂತರ ಇದನ್ನೆ ತಮ್ಮ ವೃತ್ತಿಯಾಗಿ ಆರಿಸಿಕೊಂಡರು. ಇನ್ನೂ‌ ಮುಖ್ಯಮಂತ್ರಿ ಚಂದ್ರು ಅವರು ಪದ್ಮ ಎಂಬುವವರನ್ನು ಮದುವೆ ಆಗಿದ್ದು ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇವರ ವೃತ್ತಿ ಜೀವನ ಬಹಳ ಯಶಸ್ ಸ್ವೀಕಾರವಾಗಿದ್ದು ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮೊದಲ ಮಗನ ಹೆಸರು ಭರತ್ ಚಂದ್ರು ಎಂದು ಹಾಗೂ ಎರಡನೆಯ ಮಗನ ಹೆಸರು ಶರತ್ ಚಂದ್ರು ಎಂದು ಮೊದಲ ಮಗ ಭರತ್ ಚಂದ್ರು ಅವರು ತಮ್ಮದೆ ಆದ ಸಾಫ್ಟವೇರ್ ಕಂಪನಿಯನ್ನು ನಡೆಸುತ್ತ ಇದ್ದಾರೆ. ಇನ್ನೂ ಇವರ ಎರಡನೇ ಮಗ ಶರತ್ ಚಂದ್ರು ಅವರು ಕಿಚ್ಚ ಸುದೀಪ್ ಅವರ ರನ್ನ ಹಾಗು ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದು ಮುಖ್ಯಮಂತ್ರಿ ಚಂದ್ರು ಅವರು ಮಗ ಶರತ್ ಚಂದ್ರು ಅವರು ಪೂರ್ಣ ಪ್ರಮಾಣದ ನಾಯಕರಾಗಿ ಸಿನಿಮಾದ ರಂಗಕ್ಕೆ ಬರುತ್ತಿದ್ದಾರೆ ಎನ್ನುವ ವಿಷಯ ಸದ್ಯ ತಿಳಿದು ಬಂದಿದೆ.

ಇತ್ತೀಚಿಗಷ್ಟೆ ಪೋಷಕ ನಟಿ ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರೂ ಅದರ ಹಿಂದೆಯೇ ಇದೀಗ ಕನ್ನಡದ ಖ್ಯಾತ ಪೋಷಕ ನಟರಾಗಿ ರುವ ಮುಖ್ಯಮಂತ್ರಿ ಚಂದ್ರು ಅವರ ಕುಟುಂಬದ ಕುಡಿಯಾಗಿರುವ ಶರತ್ ಚಂದ್ರ ಅವರು ಸಹ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಇವರು ನಟನಾಗಲು ಸಜ್ಜಾಗಿದ್ದಾರೆ. ಉತ್ತಮ ಮಗನಾಗಿರುವ ಶರತ್ ಅವರನ್ನು ಕೂಡ ಒಬ್ಬ ನಟ ಮಾಡಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಬಹು ವರ್ಷದ ಕನಸಾಗಿತ್ತು. ಏನು ಚಂದ್ರು ಅವರ ಕನಸು ಇದೀಗ ನನಸಾಗುವ ಸಮಯ ಬಂದಿದೆ. ಯಾಕಂದ್ರೆ ಈ ಹಿಂದೆ ಕೆಲವು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಈಗ ಮೊದಲ ಬಾರಿಗೆ ಹೀರೋ ಆಗಲಿದ್ದಾರೆ. ಇನ್ನು ಚಂದ್ರು ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now