ಚಿರಂಜೀವಿ ಸರ್ಜಾ ಜೊತೆಗೆ ಇಲ್ಲದೆ ಎರಡು ವರ್ಷ ಕಳೆದಿದೆ…ತನ್ನ ಪ್ರೀತಿಯ ಅಣ್ಣನ ನೆನಪಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ನಟ ಧ್ರುವ ಸರ್ಜಾ

244

ತನ್ನ ಅಣ್ಣನಿಲ್ಲದ ಈ ಸಮಯದಲ್ಲಿ ನಟ ಧ್ರುವ ಸರ್ಜಾ ಅವರು ತೆಗೆದುಕೊಂಡಿರುವ ನಿರ್ಧಾರ ನೋಡಿ ಕಣ್ಣೀರು ಬರುತ್ತೆ ,ನಿಜಕ್ಕೂ ಧ್ರುವ ಸರ್ಜಾ ಅವರ ಧೈರ್ಯಕ್ಕೆ ಮೆಚ್ಚಬೇಕು….ಇವತ್ತಿನ ದಿವಸಗಳಲ್ಲಿ ಅಣ್ಣ ತಮ್ಮ ಸಹ ದಾಯಾದಿಗಳಂತೆ ಕಿತ್ತಾಡುತ್ತಾ ತಮ್ಮ ಕುಟುಂಬದ ನೆಮ್ಮದಿ ಹಾಳು ಮಾಡಿಕೊಂಡಿರುತ್ತಾರೆ ಆದರೆ ಇಡೀ ಸಮಾಜಕ್ಕೆ ಮಾದರಿ ಯಂತೆ ಎದ್ದು ತೋರಿಸಿ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕೂಡ ಬೇರೆಯವರಿಗೆ ಮಾದರಿಯಾಗಿರುವ ಈ ಅಣ್ಣತಮ್ಮ ನಿಜಕ್ಕೂ ಗ್ರೇಟ್. ಹೌದು ಥೇಟ್ ರಾಮ ಲಕ್ಷ್ಮಣರಂತೆ ಇದ್ದ ಇವರುಗಳು ಅದ್ಯಾಕೆ ದೇವರಿಗೆ ಅಣ್ಣನ ಮೇಲೆ ಅದೆಷ್ಟು ಬೇಗ ಪ್ರೀತಿ ಬಂತು 2 ವರ್ಷಗಳ ಹಿಂದೆ ಅವರನ್ನ ಕೂಡ ಕರೆದುಕೊಂಡುಬಿಟ್ಟ. ಹೌದು ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಎಂದು ಈಗಾಗಲೇ ನಿಮಗೆ ಗೊತ್ತಿದೆ ಚಂದನವನದ ಬೆಸ್ಟ್ ಬ್ರದರ್ ಅಂತಾನೆ ಇವರನ್ನು ಹೇಳ್ತಾರೆ ಸ್ನೇಹಿತರೆ. ಹೌದು ಚಿರು ಮತ್ತು ಧ್ರುವ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು ಈ ಅಣ್ಣ ತಮ್ಮನನ್ನು ನೋಡಿ ಬೇರೆಯವರು ಕಲಿಯಬೇಕಿತ್ತು ಹಾಗಿತ್ತು ಇವರ ಬಾಂಧವ್ಯ.

ಹೌದು ಚಿರು ಸರ್ಜಾ ಮತ್ತು ಧ್ರುವ ಸರ್ಜಾ ಅವರು ಅರ್ಜುನ್ ಸರ್ಜಾ ಅವರ ಸೋದರಳಿಯ ಅಂದರೆ ನಮ್ಮ ಚಿತ್ರರಂಗದ ಖ್ಯಾತ ಕಲಾವಿದರಾಗಿರುವ ಶಕ್ತಿ ಪ್ರಸಾದ್ ಅವರ ಮೊಮ್ಮಕ್ಕಳು ಚಿರು ಮತ್ತು ಧ್ರುವ ಕಲೆ ಎಂಬುದು ರಕ್ತಗತವಾಗಿ ಇವರಿಗೆ ಬಂದಿದೆ. ಇದೇ ವೇಳೆ ಚಿರು ಅವರು ತಮ್ಮ ವೃತ್ತಿ ಜೀವನ ಶುರು ಮಾಡಿದ್ದು ಸಹ ನಿರ್ದೇಶಕರಾಗುವ ಮೂಲಕ ಬಳಿಕ ಚಿರು ವಾಯುಪುತ್ರ ಸಿನಿಮಾ ಮೂಲಕ ತಮ್ಮದೇ ಆದ ಡಿಫರೆಂಟ್ ಸ್ಟೈಲ್ ನಟನೆಯಿಂದಾಗಿ ನಗುವಿನಿಂದಾಗಿ ತಮ್ಮ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಚಿರು.

ಕನ್ನಡ ಸಿನಿಮಾರಂಗದಲ್ಲಿ ಚಿರು ಅವರ ಕೊಡುಗೆ ಎಂದಿಗೂ ಮರೆಯುವಂತಿಲ್ಲಾ, ಇನ್ನು ಚಿರು ಅವರ ಸಹೋದರ ಧ್ರುವ ಸರ್ಜಾ ಅವರು ಕೂಡ ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟರಾಗಿದ್ದಾರೆ. ಚಿರು ಅಗಲಿಕೆಯಿಂದ ಧ್ರುವ ಸರ್ಜಾ ಅವರು ಬಹಳ ಮನನೊಂದಿದ್ದು, ಯಾವಾಗಲೂ ತನ್ನ ಅಣ್ಣನ ಜೊತೆಯೇ ಇರುತ್ತಿದ್ದ ಧ್ರುವ ಸರ್ಜಾ ಈಗ ತನ್ನ ಅಣ್ಣನ ಅಗಲಿಕೆಯಿಂದ ಬಹಳ ನೊಂದಿದ್ದಾರೆ. ಕಳೆದ ವರ್ಷ ನಟ ಧ್ರುವ ಸರ್ಜಾ ತನ್ನ ಅಣ್ಣನ ಮೊದಲ ಪುಣ್ಯಸ್ಮರಣೆಯಂದು ಚಿರು ಅವರಿಗಾಗಿ ಪತ್ರವೊಂದನ್ನು ಬರೆದಿದ್ದಾರೆ.

ಹೌದು ಆ ಪತ್ರದಲ್ಲಿ ಅವರನ್ನು ನೆನಪಿಸಿಕೊಂಡು ಧ್ರುವ ಬರೆದಿರುವುದೇನು ಗೊತ್ತಾ ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ, ಚಿರು ನೀನಿಲ್ಲದ ಈ 1 ವರುಷ ಅಂದರೆ 365ದಿನಗಳು ನಿನ್ನನ್ನು ನೆನಪಿಸಿಕೊಳ್ಳದ ದಿನವೇ ನೀನು ಬಾರದಿರುವ ಕನಸುಗಳೇ ಇಲ್ಲ ನೀನು ಕುಟುಂಬಕ್ಕೆ ಕೊಡುತ್ತಿದ್ದ ಗೌರವ ಜನರಿಗೆ ತೋರುತ್ತಿದ್ದ ಪ್ರೀತಿ ನಿನ್ನ ನೆನಪುಗಳು ಇದೇ ನಮಗೆ ಬೆಲೆ ಕಟ್ಟಲಾರದ ಕರಗದ ಆಸ್ತಿ, ಎಂದಿಗೂ ನಿನ್ನನ್ನೂ ಮರೆಯಲು ಸಾಧ್ಯವಿಲ್ಲ ನಿನ್ನ ಆತ್ಮ ಸದಾ ಶಾಂತಿಯಿಂದ ಇರಬೇಕು ಎಂದು ಚಿರು ಅವರ ನೆನಪಿನಲ್ಲಿ ಧ್ರುವ ಸರ್ಜಾ ಅವರು ಪತ್ರವನ್ನು ಬರೆದು ಅದನ್ನು ಚಿರು ಅವರ ಮುಂದೆ ಓದಿದ್ದಾರೆ.

ಹೌದು ಚಿರು ಮತ್ತು ಧ್ರುವ ಅವರಿಗೆ ಮೇಘನಾ ರಾಜ್ ಅವರು ಬಹಳ ಫ್ರೆಂಡ್ಲಿಯಾಗಿದ್ದರು ಮತ್ತು ಸದಾ ಈ ಮೂವರು ಒಟ್ಟಿಗೆ ಇರುತ್ತಿದ್ದರು ಹಾಗೆ ಈ ಮೂವರು ಒಟ್ಟಿಗೆ ಇರುವಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ನೋಡಿರುತ್ತೇವೆ. ಈ ಮೂವರ ಬಾಂಧವ್ಯಕ್ಕೆ ಅದ್ಯಾರ ಕಣ್ಣು ಬಿತ್ತೋ ಮತ್ತೆ ಈ ಮೂವರನ್ನು ನಾವು ಒಟ್ಟಿಗೆ ನೋಡಲು ಎಂದೆಂದಿಗೂ ಸಾಧ್ಯವಿಲ್ಲ. ಆದರೆ ಅವರು ಮಾತ್ರ ಅವರ ನಗುವಿನಿಂದ ಅವರ ಒಳ್ಳೆಯ ಗುಣದಿಂದ ಸದಾ ನಮ್ಮ ಜೊತೆ ಜೀವಂತವಾಗಿರುತ್ತಾರೆ.

WhatsApp Channel Join Now
Telegram Channel Join Now