ಕನ್ನಡದ ಖ್ಯಾತ ನಟಿ ಒಂದು ದೇವಸ್ಥಾನ ಕಟ್ಟಿಸಿದ್ದಾರೆ ಅದರಲ್ಲಿ ಏನೆಲ್ಲಾ ಇದೆ ಗೊತ್ತ .. ಅಷ್ಟಕ್ಕೂ ಕಟ್ಟಿಸಿದ್ದು ಯಾಕೆ

115

ನಮ್ಮ ಸ್ಯಾಂಡಲ್ ವುಡ್ ನಲ್ಲಿ 80ರ ದಶಕದ ಹಲವು ಸಿನೆಮಾಗಳು ಇವತ್ತಿಗೂ ಬಹಳ ಫೇಮಸ್ ಮತ್ತು ಅಂತಹ ಸಿನಿಮಾಗಳನ್ನ ಜನರು ಇವತ್ತಿಗೂ ಬಹಳ ಮೆಚ್ಚುಗೆ ಎಂದ ಸಿನಿಮಾಗಳನ್ನ ವೀಕ್ಷಿಸುತ್ತಾರೆ ಅಷ್ಟೇ ಅಲ್ಲ ಅಂದಿನ ಕಾಲದ ನಟ ನಟಿಯರು ಸಹ ವೆಲ್ತ್ ಇವತ್ತಿಗೂ ಬಹಳ ಫೇಮಸ್ ಅವರ ಹೆಸರು ಇವತ್ತಿಗೂ ಎವರ್ ಗ್ರೀನ್ ಆಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಅತ್ಯದ್ಭುತ ನಟಿಯಾಗಿರುವ ಇವರು ಗಯ್ಯಾಳಿ ಪಾತ್ರ ಗಳಲ್ಲಿ ಹೆಚ್ಚಿನದಾಗಿ ಕಾಣಿಸಿಕೊಂಡು ಎವರ್ ಟೈಮ್ ಗಯ್ಯಾಳಿ ಅಂತಾನೇ ಫೇಮಸ್ ಆಗಿದ್ದಾರೆ ಹೌದು ಇವರನ್ನು ನಮ್ಮ ಸ್ಯಾಂಡಲ್ ವುಡ್ ನ ಬಜಾರಿ ಅಂತಾನೇ ಕರೆಯಬಹುದು ಈ ರೀತಿ ಬಿರುದು ಪಡೆದುಕೊಂಡಿರುವ ಆ ನಟಿ ಯಾರು ಎಂದು ಈಗಾಗಲೇ ನಿಮಗೆ ತಿಳಿದಿದೆ. ಹೌದು ಅವರೇ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟಿಯಾಗಿರುವ ನಟಿ ಮಂಜುಳಾ ಅವರು ಇವರು ಕನ್ನಡ ಸಿನಿಮಾರಂಗದ ದಿಗ್ಗಜರು ಗಳ ಜೊತೆ ತೆರೆ ಹಂಚಿಕೊಂಡಿದ್ದು ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ಹಾಗೂ ಸಿನಿಮಾ ರಂಗಕ್ಕೆ ಹೆಚ್ಚಿನ ಕೊಡುಗೆ ನೀಡುವಲ್ಲಿ ಪಾತ್ರಧಾರಿಯಾಗಿ ಇದ್ದಾರೆ ನಟಿ ಮಂಜುಳಾ.

ಒಂದು ಚಿತ್ರದಲ್ಲಿ ಸಣ್ಣ ಹುಡುಗಿ ಪಾರ್ಟ್ ಮಾಡುವ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ ನಟಿ ಮಂಜುಳಾ ಕಮಲಾಕ್ಷಿ ಎಂಬ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಾಯಕಿ ನಟಿಯಾಗಿ ಸಿನಿಮಾ ರಂಗದಲ್ಲಿ ಮಿಂಚಿದರು ಹೇಗೆ ನಟಿ ಮಂಜುಳಾ ಅವರ ಬಗ್ಗೆ ಮಾತನಾಡುವಾಗ ಮತ್ತೊಂದು ವಿಚಾರವನ್ನು ಅವರ ಅಭಿಮಾನಿಗಳ ಬಳಿ ಹಂಚಿಕೊಳ್ಳಲೇಬೇಕು ಹಾಗಾದರೆ ಆ ವಿಚಾರ ಏನು ಅಂತ ಚೈತನ್ಯದ ಇದೇ ಜನಜೀವನ ಸಂಪೂರ್ಣವಾಗಿ ತಿಳಿಯಿರಿ. ನಟಿ ಮಂಜುಳಾ ಅವರು ತುಮಕೂರಿನ ಹೊನ್ನೇನಹಳ್ಳಿಯ ಲಿಂಗಾಯತ ಕುಟುಂಬದಲ್ಲಿ ಜನಿಸಿದರು ಇವರ ತಂದೆ ಪೋಲಿಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಇವರ ತಂದೆಯ ಹೆಸರು ಶಿವಣ್ಣ ಎಂದು. ನಾಟಕ ದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನಟಿ ಮಂಜುಳಾ ಅವರು ಪ್ರಭಾತ್ ಕಲಾವಿದರ ನಾಟಕ ಸಂಘದಲ್ಲಿ ಅಭಿನಯವನ್ನು ಪ್ರಾರಂಭಿಸಿದರು. ಇವರು 1966 ರಲ್ಲಿ ತೆರೆಕಂಡ ಮನೆಕಟ್ಟಿ ನೋಡು ಚಿತ್ರದಿಂದ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಬಳಿಕ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ನಟನೆ ಮಾಡಿರುವ ಮಂಜುಳಾ 1972ರಲ್ಲಿ ತೆರೆಕಂಡ ಸಾಕ್ಷ್ಯ ಚಿತ್ರದ ಮೂಲಕ ನಾಯಕಿ ನಟಿಯಾಗಿ ಉತ್ತಮ ಅಭಿನಯ ಪ್ರಾರಂಭ ಮಾಡಿದರು.

ನಟಿ ಮಂಜುಳಾ ಅವರು 1972ರಲ್ಲಿ ತೆರೆಕಂಡ ತಹ ಸಾಕ್ಷಿ ಎಂಬ ಚಲನಚಿತ್ರ ಬಿಡುಗಡೆಯಾದ ಮುಂದಿನ ವರ್ಷವೇ 3ವರೆ ವಜ್ರಗಳು ಎಂಬ ಚಲನಚಿತ್ರದಲ್ಲಿ ರಾಜಕುಮಾರ್ ಅವರ ಜೊತೆ ಅಭಿನಯ ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ನಂತರ ಕನ್ನಡದ ನಟ ಸಾರ್ವಭೌಮ ರಾಜಕುಮಾರ್ ಅವರ ಜೊತೆ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯ ಮಾಡಿದರು ನಟಿ ಮಂಜುಳೆ ಹೌದು ಎರಡು ಕನಸು ಸಂಪತ್ತಿಗೆ ಸವಾಲ್ ಭಕ್ತ ಕುಂಬಾರ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಫ್ರೌಡಿಮೆಯನ್ನು ಪ್ರದರ್ಶಿಸಿದರು. ಇನ್ನು ನಟಿ ಮಂಜುಳಾ ಅವರು ನಮ್ಮ ಕನ್ನಡ ಸಿನಿಮಾ ರಂಗದ ಜನಪ್ರಿಯ ನಟರಾಗಿರುವ ವಿಷ್ಣುವರ್ಧನ್ ಶಂಕರ್ ನಾಗ್ ಶ್ರೀನಾಥ್ ರವಿಚಂದ್ರನ್ ಇನ್ನು ಮುಂತಾದ ನಟರೊಂದಿಗೆ ಅಭಿನಯ ಮಾಡಿದ್ದಾರೆ. ತಮ್ಮ ಅಭಿನಯಕ್ಕೆ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮಂಜುಳಾ ಅವರು ನಿರ್ದೇಶಕರಾಗಿರುವ ಅಮೃತಂ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ನಟಿಯಾಗಿರುವ ನಟಿ ಮಂಜುಳಾ ಅವರ ಅಭಿಮಾನಿಗಳು ತುಮಕೂರಿನಲ್ಲಿ ಅವರ ದೇವಾಲಯವನ್ನು ನಿರ್ಮಿಸಿದ್ದಾರೆ.

ನಟಿ ಮಂಜುಳಾ ಅವರ ತಮ್ಮ ಹೇಳುವ ಹಾಗೆ ಅವರ ತಂದೆಗೆ ಶಿವಲಿಂಗ ಸಿಕ್ಕಿತ್ತು ಹಾಗೆ ಅದನ್ನು 28ನೇ ತಾರೀಕು 1977ನೇ ಜನವರಿಯಂದು ಶುಕ್ರವಾರ ಶ್ರೀ ಶಿವಕುಮಾರ್ ಸ್ವಾಮಿ ಇವರಿಂದ ಶಿವಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮವು ನೆರವೇರಿಸಲಾಯಿತು. ಹಾಗೆ ಅಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಮಂಜುಳಾ ಅವರ ಸಮಾಧಿಯನ್ನು ಕಟ್ಟಲಾಗಿದೆ. ಮಂಜುಳಾ ಅವರ ತಮ್ಮನ ಮಗಳನ್ನು ಕೂಡ ಮಂಜುಳಾ ಅವರು ಭರತನಾಟ್ಯ ಕಲಿತಲ್ಲಿಯೆ ಸೇರಿಸಲಾಗಿದೆಯಂತೆ. ಆದ್ದರಿಂದ ಇಬ್ಬರಿಗೂ ಒಂದೇ ಗುರು ಎಂದು ಹೇಳಬಹುದು.

WhatsApp Channel Join Now
Telegram Channel Join Now