ಈಗೂ ನಟ ಬಿರಾದಾರ್ ಸಣ್ಣ ಬಾಡಿಗೆ ಮನೆಯಲ್ಲಿ ವಾಸ, ಅವಕಾಶವೂ ಇಲ್ಲ ಕನ್ನಡ ಚಿತ್ರರಂಗ ಇವ್ರನ್ನ ಮರೆತೆಬಿಡ್ತಾ

244
Actor Biradar also lives in a small rented house.There is no chance that Kannada cinema will forget him
Actor Biradar also lives in a small rented house.There is no chance that Kannada cinema will forget him

ಬಂಧುಗಳೇ ನಮಸ್ಕಾರ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದ್ಭುತವಾದಂತಹ ನಟರು ಇದ್ದಾರೆ ಬೇರೆ ಬೇರೆ ಭಾಷೆಯ ನಟರಿಗೆ ಪೈಪೋಟಿ ನೀಡುವಂತ ಅಭಿನಯವನ್ನ ನೀಡುವಂತ ತಾಕತ್ತು ನಮ್ಮ ನಟರಿಗೆ ಇದೆ ಆದರೆ ಕನ್ನಡ ಸಿನಿಮಾ ಇಂಡಸ್ಟ್ರಿಯ ದುರಂತ ಅಂದ್ರೆ ಬಹುತೇಕ ದೊಡ್ಡ ದೊಡ್ಡ ಸಿನಿಮಾಗಳಿಗೆ ಹೊರಗಡೆ ಕಲಾವಿದರನ್ನ ಕರ್ಕೊಂಡು ಬರ್ತಾರೆ ಬಿಟ್ರೆ ನಮ್ಮ ಮಣ್ಣಿನ ಕಲಾವಿದರಿಗೆ ನಮ್ಮ ಮಣ್ಣಿನ ಸೊಗಡನ್ನ ಪ್ರತಿಬಿಂಬಿಸುವಂತ ಕಲಾವಿದರಿಗೆ ಸರಿಯಾದ ರೀತಿಯಲ್ಲಿ ಅವಕಾಶವನ್ನ ಕೊಡೋದೇ ಇಲ್ಲ ಅಂತಹ ನಟರಲ್ಲಿ ಒಬ್ಬರು ಬಿರಾದಾರ್ ಬಿರಾದರ್ ಅಂತಿದ್ದಾರೆ ನಮಸ್ಕಾರ್ sir ಚೆನ್ನಾಗಿದ್ದೀರಾ ಈ dialogue ನಮ್ಮೆಲ್ಲರಿಗೂ ಕೂಡ ನೆನಪಾಗುತ್ತೆ ಬಹುತೇಕ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಂತ ನಟ ಕನಸು ಎಂಬ ಕುದುರೆ ಏರಿ ಆ ಸಿನಿಮಾದ ನಟನೆಯನ್ನಂತೂ ಮರೆಯೋದಕ್ಕೆ ಸಾಧ್ಯವೇ ಇಲ್ಲ ಆ ಸಿನೆಮಾಗೆ ರಾಷ್ಟ್ರ ಪ್ರಶಸ್ತಿಯನ್ನ ಪಡೆಯುವ ಪೈಪೋಟಿಯನ್ನ ಕೂಡ ಅಮಿತ್ ಬಚ್ಚನ್ ಗೆ,

ನೀಡಿದ್ರು ಕೊನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನ ಕೂಡ ಪಡೆದುಕೊಂಡರು ಅಮಿತಾ ಬಚ್ಚನ್ ಅವರಿಗೆ ಪೈಪೋಟಿಯನ್ನ ಕೊಟ್ಟು ಸ್ವತಃ ಅಮಿತ್ ಬಚ್ಚನ್ ಅವರೇ ಕಾಲ್ಮಾಡಿ ಶುಭಾಶಯವನ್ನ ತಿಳಿಸಿದರು ಕೂಡ ಈ ನಟನಿಗೆ ಜೊತೆಗೆ ಈ ಬಡ ಅಥವಾ ತುಂಬಾ ಕಷ್ಟದಲ್ಲಿರುವವರನ್ನ ತುಂಬಾ ತುಂಬಾ ರೀತಿಯಲ್ಲಿ ಶೋಷಣೆಗೆ ಒಳಗಾಗುವಂತವರನ್ನ ಇವರೆಲ್ಲರನ್ನು ಕೂಡ ಪ್ರತಿನಿಧಿಸುವ ನಟ ಅಂದ್ರೆ ನಮ್ಮೆಲ್ಲರ ಪ್ರೀತಿಯ ಬಿರಾದರ್ ಆದರೆ ಬಿರಾದರ್ ಅವರಿಗೆ ಸರಿಯಾದ ರೀತಿಯಲ್ಲಿ ಅವಕಾಶಗಳು ಸಿಗ್ತಾಯಿದ್ಯಾ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಇವರನ್ನ ಬಳಸ್ಕೊಳ್ತಾ ಇದೆಯಾ.

ಇವರ ಪರಿಸ್ಥಿತಿ ಹೇಗಿದೆ ವೀರಾದರ್ ಸಧ್ಯ ಏನು ಮಾಡ್ತಿದ್ದಾರೆ ಅದೆಲ್ಲವನ್ನು ಕೂಡ ಇವತ್ತಿನ ಈ ಸ್ಟೋರಿಯಲ್ಲಿ ನೋಡ್ತಾ ಹೋಗೋಣ ಅದಕ್ಕೂ ಮುನ್ನ ಬಿರಾದರ್ ಅವರಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ವಿಚಾರಗಳನ್ನ ತಿಳ್ಕೊಳೋಣ ಬಿರಾದರ್ ಅವರ ಮೂಲ ಹೆಸರು ವೈಜನಾಥ್ ಬಿರಾದರ್ ಹುಟ್ಟಿದ್ದು ಸಾ ಒಂಬೈನೂರ ಐವತ್ತೆರಡರಲ್ಲಿ ಬೀದರ್ನ ಭಾಲ್ಕಿಯ ಬೇಗಂಪುರ್ ಅನ್ನುವಲ್ಲಿ ಬಿರಾದರ್ ಅವರು ಜನಿಸುತ್ತಾರೆ ಆ ಭಾಗದಲ್ಲಿ ತುಂಬಾ ಜನರಿಗೆ ಭಜನೆ, ಏಕಪಾತ್ರ, ಅಭಿನಯ ಇಂಥಾದ್ರಲ್ಲಿ ವಿಪರೀತವಾದಂತಹ ಆಸಕ್ತಿ ಇರುತ್ತೆ ಅದೇ ರೀತಿಯಾಗಿ ಬಿರಾದರ್ ಅವರಿಗೂ ಕೂಡ ಬಾಲ್ಯದಿಂದಲೇ ಈ ಭಜನೆ ಅಂತದೆಲ್ಲದರ ಮೇಲು ಕೂಡ ಆಸಕ್ತಿಯನ್ನ ಬೆಳೆಸಿಕೊಳ್ಳುತ್ತಾರೆ.

Education ವಿಚಾರಕ್ಕೆ ಬಂದರೆ ಮೂರನೇ ತರಗತಿಗೆ ಅವರು education ಅನ್ನು ಬಿಡಬೇಕಾಗುತ್ತೆ, ಕಾರಣ ಅವರ ತಂದೆ ತೀರಿಕೊಳ್ಳುತ್ತಾರೆ. ಮನೆಯ ಹಿರಿಯ ಮಗ ಆದ ಕಾರಣಕ್ಕಾಗಿ ಹೊಲದಲ್ಲಿ ಕೆಲಸ ಮಾಡುವುದಕ್ಕೆ ಅವರು ತಾವು ಕ್ಲಾಸ್ಗೆ ಹೋಗುವುದನ್ನು ಬಿಟ್ಟು ಬಿಡುತ್ತಾರೆ.ಒಂದು ಕಡೆಯಿಂದ ಹೊಲದಲ್ಲಿ ಕೆಲಸ ಮತ್ತೊಂದು ಕಡೆಯಿಂದ ಈ ಭಜನೆ, ನಾಟಕ, ಕೋಲಾಟ ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಆಗ ಒಂದಷ್ಟು ಊರಿಗೆ ನಾಟಕದ ಕಂಪನಿಗಳು ಬಂದಂತಹ ಸಂದರ್ಭದಲ್ಲಿ ಅವರನ್ನು ಕಾಡಿ ಬೇಡಿ ಒಂದಷ್ಟು ನಾಟಕಗಳಲ್ಲೂ ಕೂಡ ಪಾತ್ರವನ್ನು ಮಾಡುತ್ತಾರೆ ಹೆಚ್ಚು ಕಡಿಮೆ ಒಂದು ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದಂತಹ ಖ್ಯಾತಿ ಬಿರಾದರ್ ಅವರದ್ದು, ಒಂದು ಕಡೆಯಿಂದ ನಾಟಕ ಮತ್ತೊಂದು ಕಡೆಯಿಂದ ಒಂದು ಪುಟ್ಟ ದಿನಸಿ ಅಂಗಡಿಯನ್ನು ಕೂಡ ಬಿರಾದರ್ ಅವರು ಹಾಕಿಕೊಂಡಿರುತ್ತಾರೆ ಹಾಗೂ ಹೀಗೂ ಒಂದು ಕಷ್ಟದ ಜೀವನ ಸಾಗ್ತಾ ಇರುತ್ತೆ ವಿರಾಟರ್ ಅವರದು, ಇದರ ನಡುವೆ ವಿರಾಧರ್ ಅವರಿಗೆ ವಿಪರೀತವಾದಂತಹ ಸಿನಿಮಾ ಇರುತ್ತೆ ಅವನು ಏನಾದರೂ ಮಾಡಿ ಸಿನಿಮಾದಲ್ಲಿ ಅಭಿನಯಿಸಬೇಕು ಅಂತ ಪ್ರಯತ್ನವನ್ನು ಪಡುತ್ತಾ ಇರುತ್ತಾರೆ .

ಆಗ ಬರ ಚಿತ್ರತಂಡದವರು ಅವರ ಊರಿಗೆ ಬಂದಂತಹ ಸಂದರ್ಭದಲ್ಲಿ ಆ ಬರ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರವನ್ನು ಮಾಡುತ್ತಾರೆ ಆ ನಂತರ ಸಿನಿಮಾ ಸೆಳೆತ ಸಿನಿಮಾ ಹುಚ್ಚು ಎಲ್ಲವೂ ಕೂಡ ಜಾಸ್ತಿಯಾಗಿ ಅದನ್ನು ಹುಡುಕಿಕೊಂಡು ಅವರು ಬೆಂಗಳೂರಿಗೆ ಬಂದು ಬಿಡುತ್ತಾರೆ ಅಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ಹಾಗೂ ಹೀಗೋ ಹರಸಾಹಸ ಪಟ್ಟು ಭೇಟಿಯಾಗುತ್ತಾರೆ ಅವರಿಂದಲೂ ಕೂಡ ಒಂದಷ್ಟು ಭರವಸೆ ಸಿಗುತ್ತದೆ ಆ ನಂತರ ಬೆಂಗಳೂರಿನಲ್ಲಿ ಹೊತ್ತಿನ ತುತ್ತಿಗೂ ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತೆ ಹೋಟೆಲ್ ಅಲ್ಲಿ ಕೂಡ ಚಿಕ್ಕಪುಟ್ಟ ಕೆಲಸವನ್ನು ಮಾಡಿದ್ದರಂತೆ ಹಾಗೆ ಬೆಂಗಳೂರಿನಲ್ಲಿ ಹಿಂಗೆ ಅವಕಾಶಗಳನ್ನು ಹುಡುಕಿಕೊಂಡು ಅಲೆ ಅಲೆದಾಡಿ, ಅಲೆದಾಡಿ, ಕೊನೆಗೆ ಬಿರಾದರ್ ಅವರಿಗೆ ಅವಕಾಶ ಸಿಗೋದಕ್ಕೆ ಶುರುವಾಗುತ್ತೆ, ಅದು ಶಂಕನಾದ ಸಿನಿಮಾ ಮೂಲಕ ಅಂತರ್ ಕಾಶಿನಾಥ್ ಅವರಿಗೆ ಅವರು ಇವರಿಗೆ ಒಂದಷ್ಟು ಅವಕಾಶಗಳನ್ನ ಕೊಡ್ತಾ ಹೋಗ್ತಾರೆ, ಕಾಶಿನಾಥ್ ಈ ರೀತಿಯಾಗಿ ತುಂಬಾ ಪ್ರತಿಭೆಗಳನ್ನ ಬೆಳೆಸಿದಂತ ನಟ, ಅದೇ ರೀತಿಯಾಗಿ ಪಿರಿಯಾದರರಿಗೂ ಕೂಡ ಒಂದಷ್ಟು ಅವಕಾಶಗಳನ್ನ ಕೊಡ್ತಾರೆ.

Love training ಎನ್ನುವಂತ ಸಿನಿಮಾದಲ್ಲಿ ನಟಿಸ್ತಾರೆ. ಅನಂತರ ಅಜಗಜಾಂತರ ಸಿನಿಮಾದಲ್ಲೂ ಕೂಡ ಅಭಿನಯಿಸ್ತಾರೆ. ಆ ನಂತರ ಬಿರಾದರ್ ಅವರಿಗೆ ಒಂದಷ್ಟು ಅವಕಾಶಗಳು ಸಿಗೋದಿಕ್ಕೆ ಶುರುವಾಗುತ್ತೆ. ದೊಡ್ಡ ದೊಡ್ಡ ಪಾತ್ರಗಳು ಅಲ್ಲದೆ ಇದ್ರೂ ಕೂಡ ಚಿಕ್ಕಪುಟ್ಟ ಪಾತ್ರಗಳನ್ನ ಕೊಡಲಾಗುತ್ತೆ. ಸ್ವಲ್ಪ ಒಳ್ಳೆ ಪಾತ್ರೆ ಇದ್ದ ಮಠ ಸಿನಿಮಾದಲ್ಲಿ ಹಾಗೆ ಅಳಿಯಲ್ಲ ಮಗಳ ಗಂಡ ಓ ಮಲ್ಲಿಗೆ ಸಿನಿಮಾದಲ್ಲಿ ಬಿರಾದರ್ ಅವರ ಅಭಿನಯವನ್ನ ಯಾರು ಇಂದಿಗೂ ಕೂಡ ಮರೆಯೋದಕ್ಕೆ ಸಾಧ್ಯವೇ ಇಲ್ಲ ಅದರಲ್ಲೂ ಕೂಡ ಒಂದಷ್ಟು ಪಾತ್ರದ scene ಗಳಂತೂ ಸದಾ ಕಾಲ ಬಿರಾದರು ನಮಗೆ ನೆನಪಿಸುತ್ತೆ ದರ್ಶನ್ ಅವರ ಸಿನಿಮಾ ಒಂದರಲ್ಲಿ ಸಾಧುಕೋಕಿಲ ಮತ್ತು ಬಿರಾದರ್ ನಡುವಿನ conversation ಆಗುತ್ತೆ ಕಬಾಬ್ ತಿಂತೀಯಾ ಇಲ್ಲ ಅಂತ ಹೇಳಿ ಅವರಿಗೆ ಹೆದರಿಸುವಂತ scene ಅಂತದೆಲ್ಲವನ್ನು ಕೂಡ ಮರೆಯೋದಕ್ಕೆ ಆಗೋದಿಲ್ಲ ಈ ರೀತಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನ ಮಾಡಿಕೊಂಡು ಹೋಗಿದ್ದಾರೆ ನ ಬಿರಾದರ್ ಅದರಲ್ಲಿ ಬಹುತೇಕ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರವನ್ನ ಬಿರಾದರ್ ಅವರಿಗೆ ಕೊಡಲಾಗುತ್ತಿತ್ತು ಅವರು ನೋಡೋದಕ್ಕೆ ಆಗಿದ್ದ ಕಾರಣಕ್ಕಾಗಿಯೋ ಅಥವಾ ಇನ್ನೊಂದು ಯಾವ ಕಾರಣಕ್ಕಾಗಿ ಗೊತ್ತಿಲ್ಲ ಭಿಕ್ಷುಕನ ಪಾತ್ರವನ್ನ ನೀಡಲಾಗುತ್ತಿತ್ತು ಈ ಕಾರಣಕ್ಕಾಗಿ ಬಿರಾದಾರ್ ಅವರು ಎಲ್ಲ ಕಡೆ ಹೇಳಿಕೊಳ್ಳುತ್ತಾರೆ ಅದೇ ಭಿಕ್ಷುಕನ ಪಾತ್ರ ನನಗೆ ಒಂದು ರೀತಿಯಲ್ಲಿ ಅಕ್ಷಯ ಪಾತ್ರ ಇದ್ದಹಾಗೆ ಅದನ್ನ ಕಣ್ಣಿಗೆ ಹೊತ್ತುಕೊಂಡು ನಾನು ಮಾಡ್ತಾಯಿದ್ದೆ .

ಅಂತ ಹೇಳಿ ಭಿಕ್ಷುಕನ ಪಾತ್ರ ಬಿಟ್ರೆ ಬಹುತೇಕ ಸಿನಿಮಾಗಳು ನಾನು ಆರಂಭದಲ್ಲಿ ಹೇಳಿದ ಹಾಗೆ ಶೋಷಣೆಗೆ ಒಳಗಾದಂತ ವ್ಯಕ್ತಿಯ ಪಾತ್ರ ಬಡತನವನ್ನ ಬಿಂಬಿಸುವಂತಹ ಪಾತ್ರ ಆ ಅಂತೂ ಇಂತವೇ ಒಂದಷ್ಟು ಪಾತ್ರಗಳು ಬಿರಾದರ್ ಅವರಿಗೆ ಸಿಗ್ತಾ ಹೋಗುತ್ತೆ ಅದರಲ್ಲಿ ಕನಸೆಂಬ ಕುದುರೆ ಏರಿ ಪಾತ್ರವಂತೂ ಮರೆಯೋದಕ್ಕೆ ಸಾಧ್ಯವೇ ಇಲ್ಲ ಅದ್ಬುತವಾದಂತ ಸಿನಿಮಾ ಜೊತೆಗೆ ಅದ್ಭುತವಾದಂತ ಪಾತ್ರ ಆ ಪಾತ್ರದಿಂದ ಬಿರಾದರ್ ಅವರ ಅಭಿನಯದ ತಾಕತ್ತು ಏನಿದೆ ಅನ್ನೋದು ಗೊತ್ತಾಗುತ್ತೆ ಯಾಕಂದ್ರೆ ನಾವು ಬಿರಾದಾರ್ ಅಂತಿದ್ದ ಹಾಗೆ ಬರಿ ಹಾಸ್ಯ ಪಾತ್ರ ಮಾತ್ರ ಅವರು ನೋಡ್ತಾ ಇದ್ದೀವಿ ಆ ಹಾಸ್ಯ ಪಾತ್ರ ಅಥವಾ ಇಂಥ ಚಿಕ್ಕಪುಟ್ಟ ಪಾತ್ರಗಳು ಬಟ್ ಅದರಲ್ಲಿ ಒಂದು ದೊಡ್ಡ ಪಾತ್ರ ಅಂದ್ರೆ ಕನಸು ಎಂಬ ಕುದುರೆ ಏರಿ ಈ ನಟನಿಗೆ ಎಲ್ಲ ತಾಕತ್ತು ಇದೆ ಅಂತ ತೋರಿಸಿದ ಸಿನಿಮಾವು ಕೂಡ ಇದೆ ಆ ನಂತರ ಇತ್ತೀಚಿಗೆ ಅವರು ಕೊನೆಯದಾಗಿ ನೈನ್ಟಿ ಹೊಡಿ ಮನೆಗೆ ನಡಿ ಎನ್ನುವಂತ ಒಂದು ಸಿನಿಮಾದಲ್ಲೂ ಕೂಡ ಮಾಡಿದ್ದರು ಅದರ ಹೊರತಾಗಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಿರಾದರ್ ಕಾಣಿಸಿ ತೀರಾ ತೀರಾ ಅಪರೂಪ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಇನ್ನು ಅವರ ಫ್ಯಾಮಿಲಿ ವಿಚಾರಕ್ಕೆ ಬರುವುದಾದರೆ ನಿರ್ಮಲ ಎನ್ನುವಂತ ಪತ್ನಿ ಹಾಗೆ ಮೂವರು ಮಕ್ಕಳಿದ್ದಾರೆ ಅವರೆಲ್ಲರೂ ಕೂಡ ಇನ್ನು ಓದುತ್ತಿದ್ದಾರೆ ಮಂಜುನಾಥ್ ನಗರ ಬೆಂಗಳೂರಿನ ಮಂಜುನಾಥ ನಗರದಲ್ಲಿ ಸದ್ಯ ವಾಸ ಇದ್ದಾರೆ ಬಿರಾದರ್ ಈಗ ಬಿರಾದರ್ ಅವರ ಸದ್ಯದ ಬದುಕಿನ ವಿಚಾರಕ್ಕೆ ಬರುತ್ತೇನೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ನಡೆಸಿಕೊಳ್ಳುವಂತ ಒಂದಷ್ಟು ವಿಚಾರಗಳನ್ನು ಕೂಡ ಈಗ ಪ್ರಸ್ತಾಪ ಮಾಡುತ್ತ ಹೋಗುತ್ತೇನೆ ನಾವು ಕನ್ನಡ ಸಿನಿಮಾಗಳು ಬರ್ತಾನೆ .

ಇರುತ್ತವೆ ವರ್ಷ ಪೂರ್ತಿ ಸಾಕಷ್ಟು ಸಿನಿಮಾಗಳು ರೆಡಿ ಆಗುತ್ತಾ ಇರುತ್ತೆ ಅದರಲ್ಲಿ ಒಂದು ದೊಡ್ಡ ಸಿನಿಮಾ ಅಂತ ಇರುತ್ತೆ ಒಂದು ಚಿಕ್ಕ ಸಿನಿಮಾಗಳಲ್ಲೂ ಕೂಡ ಬರುತ್ತೆ ಸ್ಟಾರ್ಗಳು ಅಭಿನಯಿಸುವಂತ ದೊಡ್ಡ ದೊಡ್ಡ ಸಿನಿಮಾಗಳು ಮತ್ತೊಂದು ಚಿಕ್ಕಪುಟ್ಟ ಸಿನಿಮಾಗಳಲ್ಲೂ ಕೂಡ ಬಂದಿದ್ದು ಹೋಗಿದ್ದು ಯಾವುದು ಕೂಡ ಗೊತ್ತಾಗೋದಿಲ್ಲ ಇಂತಹ ನಟರು ಯಾಕೆ ಕಷ್ಟದ ಜೀವನವನ್ನ ಅನುಭವಿಸ್ತಾರೆ ಅಂತ ಈಗ ಬಿರಾದರ್ ಅವರಿಗೆ ಹೆಚ್ಚು ಕಡಿಮೆ ಐನೂರು ಸಿನಿಮಾ ಆಗಿದೆ ಐನೂರು ಸಿನಿಮಾ ಆದರೂ ಕೂಡ ಈಗಲೂ ಬಿರಾದಾರ್ ಅವರು ತೀರಾ ತೀರಾ ಸಂಕಷ್ಟದಲ್ಲಿದ್ದಾರೆ ಕೋರೋನಾ ಟೈಮನಲ್ಲಿ ಅಂತೂ ತೀರಾ ತೀರಾ ಬಿರಾದರ್ ಅವರು ಪರದಾಡಿದರು ಸಾಕಷ್ಟು ವಾಹಿನಿಗಳಲ್ಲೂ ಕೂಡ ಅವರು ಮಾತನಾಡಿದರು ನನಗೆ ಈಗಲೂ ಕೂಡ ಜೀವನ ನಡೆಸುವುದಕ್ಕೆ ಬಹಳ ಕಷ್ಟ ಆಗುತ್ತಿದೆ ಮೂರೂ ಮಕ್ಕಳು ಇದ್ದಾರೆ ಹಾಗೆ ಹೀಗೆ ಅಂತ ಹೇಳಿ ಹಾಗೆ ಬಿರಾದರ್ ಅವರು ಇಷ್ಟು ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ದುಡಿದ್ರು ಕೂಡ ಅವರಿಗೆ ಸ್ವಂತ ಮನೆ ಇಲ್ಲ ಈಗಲೂ ಕೂಡ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ ಇದ್ದಾರೆ ಬಿಟ್ಟರೆ ಈಗಲೂ ಅವರ ಸೈಟ್ ಮನೆ ಅಂತದ್ದು ಏನು ಕೂಡ ಮಾಡಿಕೊಂಡಿಲ್ಲ ಹೇಳುವುದಕ್ಕೆ ಐನೂರು ಸಿನಿಮಾಗಳಲ್ಲಿ ಬಿರಾದರ್ ಅವರು ಅಭಿನಯಿಸಿದ್ದಾರೆ ದೊಡ್ಡ ಕಲಾವಿದ ಇಡೀ ಕರ್ನಾಟಕವನ್ನು ಗುರುತಿಸುತ್ತದೆ ನಾವೆಲ್ಲರೂ ಕೂಡ ಅಂದುಕೊಳ್ಳುತ್ತೇವೆ ಕಲಾವಿದ ಬಹಳ ಅದ್ಭುತವಾದಂತಹ ಜೀವನವನ್ನು ಮಾಡುತ್ತಿರಬಹುದು .

ಅಂತ ಹೇಳಿ ಆದರೆ ಈಗಲೂ ಕೂಡ ಆ ನಟನಿಗೆ ಸ್ವಂತ ಮನೆ ಅನ್ನುವುದು ಇಲ್ಲವೆ ಇಲ್ಲ ಈಗಲೂ ಕೂಡ ಕಂಪ್ಲೀಟ್ ಆಗಿ ಆರ್ಥಿಕವಾಗಿ ಸಶಕ್ತ ಕೂಡ ಆಗಿಲ್ಲ ಯಾಕೆ ಹೀಗೆ ಆಗುತ್ತೆ ಅಂದರೆ ಇಂತಹ ನಟರಿಗೆ ಚಿಕ್ಕಪುಟ್ಟ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತೆ ಆ ಸಿನಿಮಾಗಳ ಬಜೆಟ್ ಕಡಿಮೆ ಇರುತ್ತೆ ಆ ಸಿನಿಮಾ ಮುಗಿದ್ರೆ ಕಷ್ಟಪ ಎನ್ನುವಂತ ಪರಿಸ್ಥಿತಿ ಇರುತ್ತೆ ಆ ಸಿನಿಮಾದವರು ಇವರಿಗೆ ಹೆಚ್ಚು ಸಂಭಾವನೆಯನ್ನ ಕೊಡುವಂತ ಪರಿಸ್ಥಿತಿಯಲ್ಲಂತೂ ಇರೋದೇ ಇಲ್ಲ ಸ್ವಲ್ಪ ಸ್ವಲ್ಪ ಸಂಭಾವನೆಯನ್ನ ಕೊಡ್ತಾರೆ ಅದೇ ಸಂಭಾವನೆಯಲ್ಲಿ ಇವರು ಜೀವನವನ್ನ ಮಾಡಬೇಕಾಗುತ್ತೆ ಇನ್ನು ದೊಡ್ಡ ದೊಡ್ಡ ಸಿನಿಮಾಗಳ ಕಥೆಗಳನ್ನ ಹೇಳ್ತ ಹೋಗೋದಾದ್ರೆ ಈ ಹಿಂದೆ ಏನಾಗ್ತಾಯಿತ್ತು ಒಂದು ಕಾಲದಲ್ಲಿ ಇಂತಹ ನಟರಿಗೆ ಎಲ್ಲರಿಗು ಕೂಡ ಹುಡುಕಿ ಹುಡುಕಿ ಅವಕಾಶಗಳನ್ನ ಕೊಡ್ತಾಯಿದ್ರು ಅವರಿಗೋಸ್ಕರನೇ ಒಂದಷ್ಟು ಪಾತ್ರಗಳನ್ನು ಕೂಡ create ಮಾಡ್ತಾಯಿದ್ರು ಕೈ ತುಂಬಾ ಒಂದು ಲೆವೆಲಗೆ ಸಂಭಾವನೆ ಎಲ್ಲವನ್ನು ಕೂಡ ಕೊಡ್ತಾಯಿದ್ದರು ಆದರೆ ಇತ್ತೀಚಿನ ಸಿನಿಮಾಗಳಲ್ಲಿ ಏನಾಗ್ತಾ ಇದೆ ಇಂತಹ ನಟರಿಗೆ ಒಂದು ಅವಕಾಶಗಳು ಸಿಗೋದೇ ಇಲ್ಲ ಇನ್ನೊಂದು ಅವಕಾಶ ಸಿಕ್ಕರೂ ಕೂಡ ಎಲ್ಲೋ ಒಂದು ಸಣ್ಣ ಪಾತ್ರಕ್ಕೆ ಸೀಮಿತಗೊಳಿಸಿಬಿಡುತ್ತಾರೆ ಎಲ್ಲೋ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೆ ಹೆಚ್ಚು ಅಂತ ಒಂದು ಐದರಿಂದ ಹತ್ತು ಸೆಕೆಂಡ್ ಸೀನು ಅಬ್ಬಬ್ಬಾ ಅಂದರೆ ಒಂದರಿಂದ ಎರಡು ನಿಮಿಷದ ಸೀನಿನಲ್ಲಿ ಇವರೆಲ್ಲರೂ ಕೂಡ ಕಾಣಿಸಿಕೊಳ್ಳುತ್ತಾರೆ.

ಅದು ಕೂಡ ಭಿಕ್ಷುಕನ ಪಾತ್ರವೋ ಯಾವುದೋ ಒಂದು ಸಣ್ಣದೊಂದು ಪಾತ್ರವೋ ಯಾವುದೋ ಒಂದು ಬಂದ್ ಪಾಸ್ ಆಗುವಂತಹ ಹಾಸ್ಯ ಪಾತ್ರವು ಇಂಥಕ್ಕೆ ಈ ನಟರನ್ನು ಸೀಮಿತಗೊಳಿಸಿ ಬಿಟ್ಟಿದ್ದಾರೆ ಅದೇ ನಮ್ಮ ಸಿನಿಮಾ ಇಂಡಸ್ಟ್ರಿ ಹೇಗೆ ಆಗಿಬಿಟ್ಟಿದೆ ಅಂದರೆ ಹೊರಗಡೆಯವರು ಬಂದು ಬಿಟ್ಟ ಅದ್ಬುತವಾದಂತಹ ಸ್ವಾಗತವನ್ನು ಕೋರುತ್ತಾರೆ ಅವರನ್ನು ಕಾಡಿ ಬೇಡಿ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕರೆದುಕೊಂಡು ಬಂದು ಅವರ ಹತ್ತಿರ ಒಳ್ಳೊಳ್ಳೇ ಪಾತ್ರಗಳನ್ನು ತೂಕದ ಪಾತ್ರಗಳನ್ನು ಕೂಡ ಮಾಡಿಸುತ್ತಾರೆ ಅದೇ ಪಾತ್ರವನ್ನು ಇವರ ಬಳಿಯೂ ಕೂಡ ಮಾಡಿಸಬಹುದು ಇವರಿಗೂ ಕೂಡ ನಟನೆಯ ತಾಕತ್ತಿದೆ ಒಮ್ಮೆ ಕನಸು ಎಂಬ ಕುದುರೆಯಲ್ಲಿ ಸಿನಿಮಾ ನೋಡಬೇಕು ಇವರದ್ದು ಆ ಸಿನಿಮಾ ನೋಡಿದರೆ ಎಲ್ಲರೂ ಕೂಡ ಇವರಿಗೆ ಅವಕಾಶವನ್ನು ಕೊಡುತ್ತಾರೆ ಕೇವಲ ಬಿರಾದರ್ ಅವರ ವಿಚಾರಕ್ಕೆ ನಾನು ಹೇಳುತ್ತಿಲ್ಲ ಈಗಿನ ಬಹುತೇಕ ಕನ್ನಡ ನಟರು ಕೂಡ ಅವಕಾಶಗಳು ಸರಿಯಾದ ರೀತಿಯಲ್ಲಿ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ ಹೇಳಬೇಕು ಅಂದರೆ ಸಾಧುಕೋಕಿಲ ಒಬ್ಬರೇ ಆ ಕಾಲದಿಂದ ಈ ಕಾಲದ ಕೂಡ survive ಆಗ್ತಿರೋರು ಈಗ್ಲೂ ಕೂಡ ಅವರು ಬೇಡಿಕೆಯನ್ನ ಉಳಿಸಿಕೊಂಡಿರುವಂತ ನಟ ಅದರ ಹೊರತಾಗಿ ಯಾವ ನಟರಿಗೂ ಕೂಡ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶಗಳು ಸಿಗೋದಿಲ್ಲ ಸಿಕ್ಕರು ಕೂಡ ಎಲ್ಲೋ ಸಣ್ಣ ಪುಟ್ಟ ಪಾತ್ರಗಳು ಆಗ್ಬಂದು ಹೀಗೆ ಹೋಗುವಂತ ಪಾತ್ರಗಳನ್ನ ಇವರಿಗೆ ಕೊಡಲಾಗುತ್ತೆ ಈಗಲೂ ಕೂಡ ಇವರಿಗೆ ನಟನೆಯ ತಾಕತ್ತಿದೆ ಒಳ್ಳೊಳ್ಳೆ ಪಾತ್ರಗಳಿಗೆ ಇವರನ್ನ ಬಳಸಿಕೊಳ್ಳಬಹುದು ಅದೇ ಶೋಷಿತರನ್ನು ಪ್ರತಿಬಿಂಬಿಸುವ ಪಾತ್ರವು ಬಡತನವನ್ನ ಬಿಂಬಿಸುವಂತ ಪಾತ್ರವೋ ಅಂತ ಪಾತ್ರಗಳು ಸಿನಿಮಾದಲ್ಲಿ ಬೇಕಾದಷ್ಟು ಇರ್ತಾವೆ ಅಂತ ಪಾತ್ರಗಳನ್ನ ಯಾರ್ಯಾರಿಗೋ ತಂದು ಕೊಡ್ತಾರೆ ಅದರ ಬದಲಾಗಿ ಇಂಥವರಿಗೆ ಕೊಟ್ರೆ ಇಂತವರಿಗೆ ಒಂದು ಅವಕಾಶ ಸಿಕ್ಕಾಗೂ ಆಗುತ್ತೆ ಇವರ ಬದುಕು ಕೂಡ ರೂಪಿತಗೊಳ್ಳುತ್ತೆ ಹಿರಿಯ ನಟರಿಗೆ ಒಂದು ಗೌರವವನ್ನು ಕೂಡ ಕೊಟ್ಟ ಹಾಗೆ ಆಗುತ್ತೆ ಏನಂತೀರಿ ಬಂಧುಗಳೇ