Ad
Home Kannada Cinema News ಸೌಂದರ್ಯ ಸಾವಿನ ಕೊನೆಯ ಕ್ಷಣಗಳಲ್ಲಿ ನಡೆದಿದ್ದಾದರು ಏನು ಅವರ ಸಾವಿಗಿಂತಲೂ ಭೀಕರವಾದ ದುರಂತ ಏನು ಗೊತ್ತಾ?

ಸೌಂದರ್ಯ ಸಾವಿನ ಕೊನೆಯ ಕ್ಷಣಗಳಲ್ಲಿ ನಡೆದಿದ್ದಾದರು ಏನು ಅವರ ಸಾವಿಗಿಂತಲೂ ಭೀಕರವಾದ ದುರಂತ ಏನು ಗೊತ್ತಾ?

Do you know what happened in the last moments of Soundarya's death and what is worse than her death
Do you know what happened in the last moments of Soundarya's death and what is worse than her death

ಜುಲೈ ಹದಿನೆಂಟು ಸಾವಿರದ ಒಂಬೈನೂರ ಎಪ್ಪತ್ತೆರಡರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಷ್ಟ ಗ್ರಾಮದಲ್ಲಿ ಜನಿಸಿದರು ಸೌಮ್ಯ ಅಲಿಯಾಸ್ ಸೌಂದರ್ಯ ಸೌಂದರ್ಯ ಅವರಿಗೆ ಒಬ್ಬ ಅಣ್ಣ ಇದ್ದರು ಸೌಂದರ್ಯ ಅವರ ತಂದೆ ಕನ್ನಡ ಸಿನಿಮಾ ರಂಗದಲ್ಲಿ ಬರಹಗಾರರಾಗಿ ನಿರ್ದೇಶಕರಾಗಿ ಹಾಗು producer ಆಗಿ ಗುರುತಿಸಿಕೊಂಡಿದ್ದರು ಸೌಂದರ್ಯ ಅವರು ಪ್ರಾರ್ಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಹೈಸ್ಕೂಲ್ ವಿದ್ಯಾಭ್ಯಾಸದವರೆಗೂ ಬೆಂಗಳೂರಿನಲ್ಲಿಯೇ ಮುಗಿಸಿದರು ಅವರ ತಂದೆಯವರು ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದರಿಂದ ಸೌಂದರ್ಯ ಮನೆಗೆ ಸಿನಿಮಾಗೆ ಸಂಬಂಧಪಟ್ಟ ವ್ಯಕ್ತಿಗಳು ಆಗಾಗ ಬರುತ್ತಿದ್ದರು ಆಗ ಚಿಕ್ಕ ಹುಡುಗಿ ಆಗಿದ್ದ ಸೌಂದರ್ಯ ಅವರನ್ನು ನೋಡಿ ಅವರ ತಂದೆಯವರನ್ನು request ಮಾಡಿ ಒಂದು ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಬೇಕೆಂದು ಕೇಳಿದರು ಆದರೆ ಸೌಂದರ್ಯ ಅವರ ತಂದೆ ಅದಕ್ಕೆ ಒಪ್ಪಿಕೊಳ್ಳಲಿಲ್ಲ ಆದರೆ ಸೌಂದರ್ಯ ಅವರು ಅವರ ತಂದೆಯವರ ಜೊತೆಯಲ್ಲಿ ,

ಗುಡುವಿನ ಸಮಯದಲ್ಲಿ ಡಬ್ಬಿಂಗ್ ಥಿಯೇಟರಗೆ ಶೂಟಿಂಗ್ ನಡೆಯುತ್ತಿದ್ದ ಲೊಕೇಶನ್ ಗೆ ಔಟ್ ಡೋರ್ ಲೊಕೇಶನ್ ಗಳಿಗೆ ಹೋಗುತ್ತಿದ್ದರು ಬೇಸಿಗೆಯ ರಜೆಯಲ್ಲಿ ಒಂದು ದಿನ ಅವರ ತಂದೆಯ ಜೊತೆಯಲ್ಲಿ ಒಂದು ಡಬ್ಬಿಂಗ್ ಥಿಯೇಟರಗೆ ಹೋಗಿದ್ದರು ಆಗ ಸಂಗೀತ ನಿರ್ದೇಶಕ ಹಂಸಲೇಖ ಅವರು ಸೌಂದರ್ಯ ಅವರನ್ನು ನೋಡುತ್ತಾರೆ ಅದೇ ಸಮಯದಲ್ಲಿ ಅವರು ಗಂಧರ್ವ ಎನ್ನುವ ಸಿನಿಮಾಗೆ ಕಥೆ ಬರೆಯುತ್ತಿದ್ದರು ಆ ಸಿನೆಮಾಗೆ ಸೆಕೆಂಡ್ ಹೀರೋಯಿನ್ ಆಗಿ ತುಂಬಾ ಹುಡುಗಿಯರನ್ನು ನೋಡಿದರು ಯಾರು ಹಿಡಿಸಲಿಲ್ಲ ಆ ಸಮಯದಲ್ಲಿಯೇ ಸೌಂದರ್ಯ ಅವರನ್ನು ನೋಡಿದ ಹಂಸಲೇಖ ಅವರು ಸೌಂದರ್ಯ ಅವರ ತಂದೆಗೆ request ಮಾಡಿಕೊಂಡು ವಿಷಯವೆಲ್ಲ ಹೇಳಿದರು ನಿಮ್ಮ ಮಗಳಿಗೆ ಈಗ ಹೇಗಿದ್ದರೂ ಬೇಸಿಗೆ ರಜೆ ಶೂಟಿಂಗ್ ಕೇವಲ ಹತ್ತು ದಿನ ಮಾತ್ರ ಇರುತ್ತದೆ ಎಂದು ಹೇಳಿ ಸೌಂದರ್ಯ ಅವರು ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಳ್ಳುತ್ತಾರೆ ಹಂಸಲೇ ಅವರು ಸೌಂದರ್ಯ ಅವರ ತಂದೆಯವರನ್ನು ತುಂಬಾ ಕೇಳಿಕೊಂಡ ,

ನಂತರ ಅವರ ತಂದೆ ಸೌಂದರ್ಯ ಅವರ ಕಡೆ ಒಮ್ಮೆ ತಿರುಗಿ ನೋಡುತ್ತಾರೆ ಆಕೆಗೆ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲ ಎನ್ನುವುದು ಅರ್ಥವಾಗುತ್ತದೆ ಮನೆಗೆ ಹೋದನಂತರ ಹೇಳುತ್ತೇನೆ ಎಂದು ಹಂಸಲೇಖ ಅವರಿಗೆ ತಿಳಿಸಿ ಸೌಂದರ್ಯ ಅವರ ತಂದೆ ಮನೆಗೆ ವಾಪಸ್ ಬರುತ್ತಾರೆ ಮನೆಗೆ ಬಂದ ಮೇಲೆ ಸೌಂದರ್ಯ ತಾಯಿ ಹಾಗೂ ಮಾವ ಸೌಂದರ್ಯ ಅವರ ಅಣ್ಣ ಎಲ್ಲರೂ ಮಾಡಬಹುದು ಅಲ್ವ ಸಿನಿಮಾದಲ್ಲಿ ಎಂದು ಹೇಳುತ್ತಾರೆ ಆದರೆ ಸೌಂದರ್ಯ ಅವರಿಗೆ ಯಾರು ಕೂಡ ಫೋರ್ಸ್ ಮಾಡುವುದಿಲ್ಲ ಮತ್ತೆ ಹಂಸಲೇಖ ಅವರು ಮನೆಗೆ ಬಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ ಸರಿ ಮನೆಯವರು ಕೂಡ ಮಾಡು ಎನ್ನುತ್ತಿದ್ದಾರೆ ಎಂದು ಸೌಂದರ್ಯ ಒಪ್ಪಿಕೊಳ್ಳುತ್ತಾರೆ ಅವರು ಹೇಳಿದಂತೆ ತುಂಬಾ ಬೇಗನೆ ಶೂಟಿಂಗ್ ಮುಗಿಸುತ್ತಾರೆ ಶೂಟಿಂಗ್ ನಂತರದಲ್ಲಿ ರಜೆ ಕೂಡ ಮುಗಿಯುತ್ತದೆ ಸೌಂದರ್ಯ ಅವರಿಗೆ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು ಸೌಂದರ್ಯ ಅವರಿಗೆ MBBS ಸೀಟ್ ಕೂಡ ಸಿಕ್ಕಿತ್ತು MBBS ಓದುತ್ತಿರುವ ಸಮಯದಲ್ಲಿ ಗಂಧರ್ವ ಸಿನಿಮಾ ನೋಡಿದ ಒಬ್ಬ ನಿರ್ದೇಶಕರು ಸೌಂದರ್ಯ ಅವರ ವಿವರಗಳನ್ನು ತಿಳಿದುಕೊಂಡು ತಾನು ತೆಗೆಯುತ್ತಿರುವ ನನ್ನ ತಂಗಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುವಂತೆ ಸೌಂದರ್ಯ ಅವರ ತಂದೆಯವರನ್ನು ಕೇಳಿಕೊಳ್ಳುತ್ತಾರೆ ,

ಆಗ ಸೌಂದರ್ಯ ಅವರ ಸೌಂದರ್ಯ ಅವರನ್ನು ನಟಿಸುತ್ತೀಯಾ ಎಂದು ಕೇಳುತ್ತಾರೆ ನಾನು ಡಾಕ್ಟರ್ ಆಗಬೇಕು ಅಂತ ಇದ್ದರೆ ಹೀಗೆ ಮಧ್ಯದಲ್ಲಿ ಸಿನಿಮಾ ಶೂಟಿಂಗ್ ಎಂದು ಡಿಸ್ಟರ್ಬ್ ಮಾಡಬೇಡಿ ಅಪ್ಪ ಆದರೂ ಕೂಡ ನೀನು ತುಂಬಾ ಕೇಳುತ್ತಿದ್ದೀಯ ಅಂತ ಒಪ್ಪಿಕೊಳ್ಳುತ್ತಿದ್ದೇನೆ ಆದರೆ ಇದರಿಂದ ನನ್ನ ಎಜುಕೇಶನ್ ಗೆ ತೊಂದರೆ ಆಗಬಾರದು ಅಷ್ಟೇ ಎನ್ನುತ್ತಾರೆ ಸೌಂದರ್ಯ ಈ ಸಿನಿಮಾ ಶೂಟಿಂಗ್ ಅನ್ನು ಇವಿನಿಂಗ್ ಪ್ಲಾನ್ ಮಾಡಿ ಕಾಲೇಜು ಮುಗಿಯುತ್ತಿದ್ದಂತೆ ಸೌಂದರ್ಯ ಅವರು ಅಭಿನಯಿಸುವ ಭಾಗದ ಶೂಟಿಂಗ್ ಮಾಡುತ್ತಿದ್ದರು ಇಲ್ಲ ಎಂದರೆ ಬೆಳಗಿನ ಜಾವ shooting plan ಮಾಡಿಕೊಂಡು ಕಾಲೇಜು ಟೈಮಗೆ ಕಾಲೇಜಿನಲ್ಲಿ ಬಿಟ್ಟು ಬರುತ್ತಿದ್ದ ಹಾಗು ಕಾಲೇಜು ರಜಾ ದಿನಗಳಲ್ಲಿ full day shooting plan ಮಾಡುತ್ತಿದ್ದರು ಇನ್ನು ಸೌಂದರ್ಯ ಅವರು ಮೊದಲು ನಟಿಸಿದ ಗಂಧರ್ವ ಸಿನಿಮಾಗಿಂತ ಎರಡನೆಯದಾಗಿ ನಟಿಸಿದ ನನ್ನ ತಂಗಿ ಸಿನಿಮಾ ಸಾವಿರದ ಒಂಬೈನೂರ ತೊಂಬತ್ತೆರಡು ಏಪ್ರಿಲ್ ಹತ್ತರಂದು ಬಿಡುಗಡೆಯಾಯಿತು,

ಇದರ ನಂತರ ಸೌಂದರ್ಯ ಅವರು ನಟಿಸಿದ ಮೊದಲ ಸಿನಿಮಾ ಗಂಧರ್ವ ಸಾವಿರದ ಒಂಬೈನೂರ ತೊಂಬತ್ತೆರಡು ಜುಲೈ ಹದಿನಾರರಂದು ಬಿಡುಗಡೆಯಾಯಿತು ನಂತರ ಸಿನಿಮಾಗಳಲ್ಲಿ busy ಆಗುವ ಸೌಂದರ್ಯ ಅವರು MBBS ಅನ್ನು ಪೂರ್ಣಗೊಳಿಸುವುದಿಲ್ಲ ಸೌಂದರ್ಯ ಅವರಿಗೆ ತೆಲುಗಿನಲ್ಲಿಯೂ ಕೂಡ ತುಂಬಾ offerಗಳು ಬರುತ್ತವೆ ಕನ್ನಡದಲ್ಲೂ ಕೂಡ ಭಾರಿ ಬರುತ್ತದೆ ಆದರೆ ತೆಲುಗಿನಲ್ಲಿ ಸೌಂದರ್ಯ ಹೆಚ್ಚಾಗಿ ನಟಿಸುತ್ತಾರೆ ಅಮ್ಮೋರು ಸಿನಿಮಾದ ನಂತರ ಸೌಂದರ್ಯ ಅವರಿಗೆ ತೆಲುಗಿನಲ್ಲಿ ತುಂಬಾ ಹೆಸರು ಬರುತ್ತದೆ ಅಮ್ಮರು ಚಿತ್ರ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಬಿಡುಗಡೆಯಾಗಿ ತುಂಬಾ ಯಶಸ್ಸು ಗಳಿಸುತ್ತದೆ ಇನ್ನು ಈ ಸಿನಿಮಾ ತಮಿಳಿಗೂ ಕೂಡ ಡಬ್ ಆಗಿ ಅಲ್ಲಿಯೂ ಕೂಡ ದೊಡ್ಡ ಹಿಟ್ ಆಗುತ್ತದೆ ಹೀಗೆ ಸೌಂದರ್ಯ ಅವರು ಚಿತ್ರರಂಗದಲ್ಲಿ ಮಿಂಚುತ್ತಾ ತುಂಬಾ ಖುಷಿಯಾಗಿರುವ ಸಮಯದಲ್ಲಿ ಹಠತ್ತಾನೆ ಸೌಂದರ್ಯ ಅವರಿಗೆ ಸಿಡಿಲು ಬಡಿದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ,

ಸೌಂದರ್ಯ ಅವರ ತಂದೆ ಸತ್ಯನಾರಾಯಣ ಅವರು ಮರಣ ತಂದೆಯವರ ಸಾವನ್ನು ಅರಗಿಸಿಕೊಳ್ಳಲು ಸೌಂದರ್ಯ ಅವರಿಗೆ ತಕ್ಷಣಕ್ಕೆ ಆಗುವುದಿಲ್ಲ ನಂತರ ಚೇತರಿಸಿಕೊಂಡ ಸೌಂದರ್ಯ ಅವರು ತೆಲುಗು ಹಾಗೂ ತಮಿಳಿನಲ್ಲಿ ಬಾರಿ ಬೇಡಿಕೆಯ ನಟಿಯಾಗುತ್ತಾರೆ ವಿಕ್ಟೋರಿಯಾ ವೆಂಕಟೇಶ್ ಮೋಹನ್ ಬಾಬು ಸೇರಿದಂತೆ ತೆಲುಗಿನ ಬಹುತೇಕ star ನಟರ ಜೊತೆ ನಟಿಸುತ್ತಾರೆ ತಮಿಳಿನಲ್ಲಿಯೂ ಕೂಡ ರಜನೀಕಾಂತ್ ಅವರಂತಹ ಅಗ್ರಗಣ್ಯ star ನಟರ ಜೊತೆ ನಟಿಸಿ ದಕ್ಷಿಣ ಭಾರತ ಸಿನಿಮಾ ರಂಗದ ದೊಡ್ಡ star ನಟಿಯಾಗಿ ಗುರುತಿಸಿಕೊಳ್ಳುತ್ತಾರೆ family ಹಾಗೂ ಸೆಂಟಿಮೆಂಟ್ ಚಿತ್ರದ ಕಥೆಗಳಿಗೆ ಸೌಂದರ್ಯ ಅವರೇ ಮೊದಲ ಆಯ್ಕೆ ಎನಿಸುವಂತೆ ಅಂದಿನ ಸಿನಿಮಾದ ನಿರ್ಮಾಪಕ ಹಾಗು ನಿರ್ದೇಶಕರಿಗೆ ಇನ್ನು ತಮ್ಮ ತಂದೆಯವರ ಆತ್ಮ ಸಂತೋಷ ಪಡಿಸಬೇಕೆಂದು ನಿರ್ಧರಿಸಿದ ಸೌಂದರ್ಯ ಕನ್ನಡದಲ್ಲಿ ತಾವೇ ಒಂದು ಸಿನಿಮಾ ನಿರ್ಮಾಣ ಮಾಡುತ್ತಾರೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ದ್ವೀಪ ಸಿನಿಮಾವನ್ನು ನಿರ್ಮಿಸಿ,

ತಾವೇ ನಾಯಕಿಯಾಗಿ ಆ ಸಿನಿಮಾದಲ್ಲಿ ನಟಿಸುತ್ತಾರೆ ದೀಪ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಫಿಲ್ಮ fare ಪ್ರಶಸ್ತಿಗಳು ಲಭಿಸುತ್ತವೆ ಸೌಂದರ್ಯ ಕನ್ನಡದಲ್ಲಿ ಹದಿನೆಂಟು ಚಿತ್ರಗಳಲ್ಲಿ ನಟಿಸಿದ್ದಾರೆ ಶಶಿಕುಮಾರ್ ರವಿಚಂದ್ರನ್ ರಮೇಶ್ ಅರವಿಂದ್ ದೇವರಾಜ್ ಅನಂತನಾಗ್ ಸಾಯಿಕುಮಾರ್ ಅರ್ಜುನ್ ಸರ್ ಹೀಗೆ ಕನ್ನಡದ ಹಲವಾರು ಟಾಪ್ ನಾಯಕ ನಟರ ಜೊತೆ ಸೌಂದರ್ಯ screen share ಮಾಡಿಕೊಂಡಿದ್ದಾರೆ ಗಂಧರ್ವ ನನ್ನ ತಂಗಿ ಭಾನನ್ನ ಪ್ರೀತಿಸೋ ಸಿಪಾಯಿ ದೋಣಿ ಸಾಗಲಿ ನಾನು ನನ್ನ ಹೆಂಡತಿಯರು ಆರ್ಯಭಟ ಶ್ರೀ ಮಂಜುನಾಥ್ ದ್ವೀಪ ಹಾಗು ಆಪ್ತಮಿತ್ರ ಸೌಂದರ್ಯ ಅವರು ನಟಿಸಿರುವ ಪ್ರಮುಖ ಚಿತ್ರಗಳು ಸೌಂದರ್ಯ ಅವರಿಗೆ ಹಲವಾರು ರಾಷ್ಟ್ರ ಹಾಗು ರಾಜ್ಯ ಪ್ರಶಸ್ತಿಗಳು ದೊರೆತಿವೆ ಹೀಗೆ ಸೌಂದರ್ಯ ಅವರು ಇಷ್ಟೊಂದು ಹೆಸರು ಹಣ ಮಾಡಿದ ಮೇಲೆ ಸಮಾಜಕ್ಕೆ ಏನನ್ನಾದರೂ ನೀಡಬೇಕು ಎಂದು ಭಾರತೀಯ ಸಂಸ್ಕೃತಿ ಕಣ್ಮರೆಯಾಗ ಎಂದು ಎಲ್ಲರಿಗೂ ಭಾರತೀಯ ಸಂಸ್ಕೃತಿ ಮಹತ್ವ ತಿಳಿಸಬೇಕೆಂದು ಅವರ ಅತ್ತಿಗೆಯ ಜೊತೆ ಸೇರಿ ಸಂಸ್ಕೃತಿ ಭಾರತ್ ಎನ್ನುವ ಕಾರ್ಯಕ್ರಮ ಪ್ರಾರಂಭಿಸಿ ಅವರ ಸ್ವಗ್ರಾಮದಲ್ಲಿ ಎಲ್ಲಾ ಹಬ್ಬಗಳಲ್ಲಿಯೂ ಹಸು ಸಗಣಿಯಲ್ಲಿ ಸಾರಿಸಿ ರಂಗೋಲಿ ಸ್ಪರ್ಧೆ ಏರ್ಪಡಿಸುತ್ತಿದ್ದರು ಹೆಣ್ಣು ಮಕ್ಕಳು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಇನ್ನು ಅವರ ಅಣ್ಣ ಅಮರನಾಥ ಅವರ ಸಹಾಯದಿಂದ ಅವರ ತಂದೆಯವರ ಹೆಸರಿನಲ್ಲಿ ಸತ್ಯನಾರಾಯಣ ವಿಶ್ವವಿದ್ಯಾಲಯ ಎನ್ನುವ ಮೂರು ಪಾಠ ಶಾಲೆಗಳನ್ನು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೆ ಎಲ್ಲಾ ವಸತಿ ಇರುವ ವಿದ್ಯೆ ತಲುಪಿಸಿದರು ಹಾಗೂ ಒಂದು ಅನಾಥಾಶ್ರಮ ಕೂಡ ಸ್ಥಾಪಿಸಿದರು .

ಇದರ ಜೊತೆಯಲ್ಲಿ ಸಿನಿಮಾಗಳಲ್ಲಿಯೂ ಸೌಂದರ್ಯ ನಟಿಸುತ್ತಿದ್ದರು ಆದರೆ ಕಾಲಾಂತರದಲ್ಲಿ ಸೌಂದರ್ಯ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆಗುತ್ತಾ ಬಂದವು ಎರಡು ಸಾವಿರದ ಮೂರರಲ್ಲಿ ಸೌಂದರ್ಯ ರಘು ಅವರನ್ನು ಮದುವೆಯಾದರು ಈತ ತನ್ನ ಸಂಬಂಧಿಯಾಗಿದ್ದರಿಂದ ಚಿಕ್ಕಂದಿನಿಂದಲೂ ಸೌಂದರ್ಯ ಅವರ ಮನೆಗೆ ಹೆಚ್ಚಾಗಿ ಬರುತ್ತಿದ್ದರಂತೆ ನಂತರ ಸೌಂದರ್ಯ ಸಿನಿಮಾ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮೇಲೂ ಕೂಡ ರಘು ಅವರು ಸೌಂದರ್ಯ ಅವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು ಹೀಗಾಗಿ ಇಬ್ಬರ ಆಲೋಚನೆ ಕೂಡ ಒಂದೇ ಆಗಿತ್ತು ಹೀಗಾಗಿ ದೊಡ್ಡವರ ಒಪ್ಪಿಗೆ ಮೇರೆಗೆ ವಿವಾಹವಾದರೂ ರಘು ಅವರದ್ದು ಬೆಂಗಳೂರಿನಲ್ಲಿ software ಕಂಪನಿ ಕೂಡ ಇತ್ತು ಹೀಗೆ ಸೌಂದರ್ಯ ತಮ್ಮ ಬದುಕನ್ನು ಸುಂದರಗೊಳಿಸಿಕೊಂಡದ್ದು ಮಾತ್ರವಲ್ಲದೆ ಸಾರ್ಥಕತೆ ಕೂಡ ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದರೂ ನಂತರ ಸೌಂದರ್ಯ ಅವರು ಸಮಾಜಕ್ಕೆ ಏನನ್ನಾದರೂ ಬಹಳ್ ದೊಡ್ಡದಾಗಿ ಕೊಡುಗೆ ನೀಡಬೇಕು ಅದಕ್ಕಾಗಿ ಒಂದು ಉತ್ತಮ ಪ್ಲಾಟ್ಫಾರ್ಮ್ ಬೇಕು ಎಂದು ನಿರ್ಧರಿಸಿ ರಾಜಕೀಯಕ್ಕೆ ದುಮುಕಿದರು BJP ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿಕೊಂಡಿದ್ದ ಸೌಂದರ್ಯ ಅವರು ಎರಡು ಸಾವಿರದ ನಾಲ್ಕರಲ್ಲಿ BJP ಪಕ್ಷ ಸೇರುತ್ತಾರೆ ರಾಜಕೀಯ ಪ್ರವೇಶ ಮಾಡಿ ಅಪಾರ ಜನ ಸೇವೆ ಮಾಡಬೇಕು ಎಂದುಕೊಂಡಿದ್ದ ಸೌಂದರ್ಯ ಅವರ ಆಸೆ ಕೈಗೂಡಲಿಲ್ಲ.

ಆಂಧ್ರ ಪ್ರದೇಶದ ಕರೀಮ್ ನಗರಕ್ಕೆ BJP ಪರ ಚುನಾವಣಾ ಪ್ರಚಾರಕ್ಕಾಗಿ ತಮ್ಮ್ ಅಣ್ಣ ಅಮರ್ನಾಥ್ ಅವರ ಜೊತೆ ಎರಡು ಸಾವಿರದ್ ನಾಲ್ಕು April ಹದಿನೇಳರಂದು ಯಲಹಂಕದ ಜಕ್ಕೂರಿನಿಂದ ವಿಶೇಷ ವಿಮಾನದಲ್ಲಿ ಹೊರಡುವುದಕ್ಕೆ ವಿಮಾನ ಹತ್ತುತ್ತಾರೆ ಆ ಸಮಯದಲ್ಲಿ ಸೌಂದರ್ಯ ಅವರು ಐದು ತಿಂಗಳ ಗರ್ಭವತಿ ಸರಿಯಾಗಿ ಬೆಳಗ್ಗೆ ಹನ್ನೊಂದು ಗಂಟೆ ಐದು ನಿಮಿಷಕ್ಕೆ ಆ ವಿಮಾನ ಆಕಾಶಕ್ಕೆ ಹಾರಿತು ವಿಮಾನ ಆಕಾಶಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣದಿಂದ pilot ವಿಮಾನವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ university ಅಲ್ಲಿ land ಮಾಡುವ ಪ್ರಯತ್ನ ಮಾಡುತ್ತಾರೆ land ಮಾಡುವುದಕ್ಕೆ ನೂರು ಅಡಿ ಅಂತರ ಇದೆ ಎನ್ನುವಾಗ ವಿಮಾನ ಆಯಾ ತಪ್ಪಿ ಮುಂದಿನ್ ಭಾಗ ನೆಲಕ್ಕೆ ಅಪ್ಪಳಿಸಿ ಒಂದು ಪಲ್ಟಿ ಹೊಡೆದು ಬೆಂಕಿ ಹೊತ್ತುಕೊಳ್ಳುತ್ತದೆ ಅದರಲ್ಲಿ ಸೌಂದರ್ಯ ಹಾಗು ಅವರ ಜೊತೆಗಿದ್ದ ಅವರ ಅಣ್ಣ ಅಮರನಾಥ ಹಾಗು ಮಿಕ್ಕ ಎಲ್ಲರೂ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾರೆ.

ಇಲ್ಲಿ ಇನ್ನೊಂದು ತುಂಬಾ ದುಃಖ ತರಿಸುವ ವಿಷಯ ಎಂದರೆ ಆಕೆ ಸಾವನ್ನಪ್ಪ ಐದು ತಿಂಗಳ ಗರ್ಭಿಣಿ ಎನ್ನುವುದು ವಿಮಾನ ನೆಲಕ್ಕೆ ಅಪ್ಪಳಿಸಿದ ಮೇಲು ಸೌಂದರ್ಯ ಮೂರು ನಿಮಿಷಗಳ ಕಾಲ ಬದುಕಿದ್ದರು ವಿಮಾನದ ಡೋರ್ ಗಳು ಓಪನ್ ಆಗದ ಕಾರಣ ಸೌಂದರ್ಯ ಹಾಗೂ ಅಲ್ಲಿದ್ದವರು ಹೊರಬರಲಾಗದೆ ಕೂಗಾಡಿ ಚೀರಾಡಿ ತುಂಬಾ ದಾರುಣವಾಗಿ ಸಾವನ್ನಪ್ಪಿದರು ಈ ಮಾಹಿತಿ ತನಿಖಾಧಿಕಾರಿಗಳು ನಡೆಸಿದ ನಂತರ ತಿಳಿದು ಬಂದಿತ್ತು ಆಪ್ತಮಿತ್ರ ಇವರ ಕನ್ನಡದ ಕೊನೆಯ ಚಿತ್ರ ಈ ಚಿತ್ರ ಇಪ್ಪತ್ತೇಳು ಆಗಸ್ಟ್ ಎರಡು ಸಾವಿರದ ನಾಲ್ಕರಲ್ಲಿ ತೆರೆಕಂಡು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದಾಖಲೆಯನ್ನೇ ಮಾಡಿತ್ತು ಹೀಗೆ ಕೇವಲ ಹನ್ನೆರಡ ವರ್ಷಗಳಲ್ಲಿ ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿ ನೂರಾ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮೇರು ನಟಿಯಾಗಿದ್ದರು.

ಸೌಂದರ್ಯ ಅವರಿಗೆ ತೆಲುಗಿನವರು ಮಹಾನಟಿ ಸಾವಿತ್ರಿಯವರೊಂದಿಗೆ ಹೋಲಿಕೆ ಮಾಡುತ್ತಾರೆ ಸಾವಿತ್ರಿ of ಮರ್ಡರ್ ಸಿನಿಮಾಸ್ ಎಂಬ ಬಿರುದು ನೀಡಿದ್ದಾರೆ ಇನ್ನು ಸೌಂದರ್ಯ ಅವರ ಸಾವಿಗಿಂತಲೂ ತುಂಬಾ ಭೀಕರವಾದ ನೋವು ಕೊಡುವ ವಿಷಯ ಎಂದರೆ ಈ ಪ್ರಪಂಚವನ್ನೇ ನೋಡದ ಸೌಂದರ್ಯ ಅವರ ಗರ್ಭದಲ್ಲಿದ್ದ ಐದು ತಿಂಗಳ ಮಗು ಬೆಂಕಿಯಲ್ಲಿ ಬಂದು ಹೋಗಿ ಬೂದಿಯಾಗಿತ್ತು ಸೌಂದರ್ಯ ಅವರ ಜೀವನ ದುರಂತದಲ್ಲಿ ಕೊನೆಗೊಂಡಿದ್ದು ಇಂದಿಗೂ ಎಲ್ಲರಿಗು ನೋವು ಕೊಡುವ ವಿಚಾರ ಸ್ನೇಹಿತರೆ ಇದಾಗಿತ್ತು ಸೌಂದರ್ಯ ಅವರ ಜೀವನದ ಕಿರು ಚಿತ್ರಣ ಈ ವೀಡಿಯೋ ಇಷ್ಟವಾದಲ್ಲಿ ಒಂದು ಲೈಕ್ ಕೊಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ಸ್ ನಲ್ಲಿ ತಿಳಿಸಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು

Exit mobile version