ಅಭಿಮಾನಿಗಳಿಗೆ ಬರಿ ಸಿಹಿ ಸುದ್ದಿಯನ್ನ ಹಂಚಿಕೊಂಡ ಮಂಜು ಪಾವಗಡ … ಸಿಕ್ಕಾಪಟ್ಟೆ ವಿಶ್ ಮಾಡಿದ ಅಭಿಮಾನಿಗಳು ..

ಬಿಗ್ ಬಾಸ್ ಎಂಟನೇ ಸೀಸನ್ ನಲ್ಲಿ ತನ್ನ ಅದ್ಭುತವಾದ ಪ್ರತಿಭೆಯನ್ನು ಇಡೀ ಕರ್ನಾಟಕ ಜನತೆಗೆ ತೋರಿಸುತ್ತಾ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದಂತಹ ಮಂಜು ಅವರು ಯಾವಾಗಲೂ ಕೂಡ ಸುದ್ದಿಯಲ್ಲಿದ್ದಾರೆ.ಹಾಗಾದ್ರೆ ಇವಾಗ ಯಾವ ರೀತಿಯಾದ ಸುದ್ದಿಯಿಂದ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗಿದೆ ಗೊತ್ತಾ. ಹೌದು ಸ್ನೇಹಿತರೆ ಬಿಗ್ ಬಾಸ್ ಮನೆಯಿಂದಲೂ ಕೂಡ ಇವರ ಮದುವೆಯ ವಿಚಾರಕ್ಕೆ ಹಲವಾರು ಜನರು ಹಲವಾರು ಚರ್ಚೆಯನ್ನು ಮಾಡುತ್ತಲೇ ಇದ್ದಾರೆ.ಹಾಗೆಯೇ ಮಂಜು ಅವರು ಬಿಗ್ ಬಾಸ್ ಮನೆಯ ಒಳಗಡೆ ಇರುವಂತಹ ಸಂದರ್ಭದಲ್ಲಿ ನಾನು ಹೊರಗಡೆ ಬಂದಾಗ ಒಂದು ಸಿಹಿಸುದ್ದಿಯನ್ನು ನೀಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ ಆದರೆ ಇವಾಗ ಯಾಕೋ ಗೊತ್ತಿಲ್ಲ ಇವರು ತುಂಬಾ ಸೈಲೆಂಟ್ ಆಗಿದ್ದರೆ.ಆದರೆ ಮಂಜು ಅವರು ಇತ್ತೀಚೆಗೆ ತನ್ನ ಆಪ್ತ ಸ್ನೇಹಿತರ ಪಾರ್ಟಿಗೆ ಹೋಗಿರುವಂತಹ ಸಂದರ್ಭದಲ್ಲಿ ತೆಗೆದುಕೊಂಡಂತಹ ಫೋಟೋಗಳು ಇವತ್ತು ಹಲವಾರು ಅಭಿಮಾನಿಗಳಿಗೆ ಸಿಹಿಯನ್ನು ಕೊಡುವ ಹಾಗೆ ಕಾಣಿಸುತ್ತವೆ.

ಸ್ನೇಹಿತರೆ ಮಂಜು ಪಾವಗಡ ಅವರು ಕಲಾವಿದನಾಗಿ ಕರ್ನಾಟಕದಲ್ಲಿ ಕನ್ನಡಿಗರ ಮನಸನ್ನು ಕದಿಯಬೇಕು ಹಾಗೂ ಒಳ್ಳೆಯ ಕಲಾವಿದನಾಗಬೇಕು ಎನ್ನುವಂತಹ ನಿಟ್ಟಿನಲ್ಲಿ ಬೆಂಗಳೂರಿಗೆ ಕನಸಿನ ಗಂಟು ಮೂಟೆ ಕಟ್ಟಿಕೊಂಡು ಬಂದಂತಹ ಒಬ್ಬ ಹುಡುಗ. ಮೊದಲನೇ ಬಾರಿಗೆ ಇವರು ಬೆಂಗಳೂರಿಗೆ ಬಂದಂತಹ ಸಂದರ್ಭದಲ್ಲಿ ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸವನ್ನು ಮಾಡುತ್ತಿದ್ದರು. ಹೀಗೆ ತನಗೆ ಸಿಕ್ಕಂತಹ ಕೆಲವೊಂದು ಸಮಯದಲ್ಲಿ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಜೀವನದಲ್ಲಿ ಸೆಟಲ್ ಆಗಬೇಕು ಎನ್ನುವಂತಹ ಆಲೋಚನೆಯನ್ನು ಕೂಡ ಮಾಡುತ್ತಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇವರು ಕಾಮಿಡಿ ಶೋ ಮುಖಾಂತರ ಹಲವಾರು ಜನರ ಮನೆ ಮಾತಾಡುತ್ತಾರೆ ಹೀಗೆ ಇವರಿಗೆ. ಅದ್ರುಷ್ಟ ಮುಂದೆ ಹೋಗಿ ಬಿಗ್ ಬಾಸ್ ನಲ್ಲಿ ಕೂಡ ಹೋಗುವಂತಹ ಅವಕಾಶ ಕೂಡ ಇವರಿಗೆ ಸಿಗುತ್ತವೆ.

ಆ ಸಂದರ್ಭದಲ್ಲಿ ನಾನು ಬಿಗ್ ಬಾಸ್ ಹೋಗುವುದೆ ಎನ್ನುವಂತಹ ದೊಡ್ಡ ಕನ್ಫ್ಯೂಸ್ ನಲ್ಲಿ ಇದ್ದಂತಹ ಮಂಜು ಪಾವಗಡ ಅವರು ಬಿಗ್ ಬಾಸ್ ಒಳಗಡೆ ಹೋಗಿ ಬಿಡುತ್ತಾರೆ.ಅಲ್ಲಿ ಅವರು ಅವರಿಗೆ ಸಿಕ್ಕಂತಹ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಕರ್ನಾಟಕದ ಜನತೆಗೆ ಒಳ್ಳೆಯ ಮನರಂಜನೆಯನ್ನು ಮೊದಲಿಂದಲೂ ನೀಡುತ್ತಾ ಬಂದಿದ್ದಾರೆ. ಹಾಗೆಯೇ ಬಿಗ್ ಬಾಸ್ ನೋಡುವವರಿಗೆ ಮಂಜು ಪಾವುಗಡ ಹಾಗೂ ದಿವ್ಯ ಸುರೇಶ್ ಅವರ ಜೊತೆಗಿನ ಆತ್ಮೀಯ ವಾದಂತಹ ಸಂಬಂಧದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ. ಆದರೆ ಅವರಿಬ್ಬರ ಗೆಳೆತನ ಬಿಗ್ ಬಾಸ್ ನಲ್ಲಿ ಹಲವಾರು ಊಹಾಪೋಹಗಳಿಗೆ ಸೃಷ್ಟಿಯಾಗುತ್ತದೆ. ಆ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ಕೊರೋನಾದ ವಿಚಾರದಿಂದಾಗಿ ಬಿಗ್ ಬಾಸ್ ಪರದೆಯು ಕೂಡ ಅರ್ಧದಲ್ಲೇ ನಿಂತು ಹೋಗುತ್ತದೆ ಇದರಿಂದಾಗಿ ಮಂಜು ಪಾವಗಡ ಅವರಿಗೆ ತುಂಬಾ ನಿರಾಸೆ ಹಾಗೂ ಬೇಸರವನ್ನು ಪಟ್ಟಿದ್ದರು.

ಸ್ನೇಹಿತರೆ ಇವರ ಅದೃಷ್ಟವೋ ಮತ್ತೆ ಹುಡುಕಿ ಬರುತ್ತದೆ ಮತ್ತೆ ಬಿಗ್ ಬಾಸ್ ಸೀಸನ್ 8 ಮತ್ತೆರಡು ಇನಿಂಗ್ಸ್ ಗಳ ಮೂಲಕ ಆರಂಭವಾಗುತ್ತದೆ ಹೀಗೆ 45 ದಿನಗಳ ಬ್ರೇಕ್ನ ನಂತರ ಇನ್ನೊಂದು ಇನಿಂಗ್ಸ್ನಲ್ಲಿ ಬಿಗ್ ಬಾಸ್ ಮನೆಗೆ ಎಲ್ಲರೂ ಬರುತ್ತಾರೆ ಹೀಗೆ ಮಂಜು ಪಾವಗಡ ಅವರು ಹಿಂದೆ ಮಾಡಿದಂತಹ ತಪ್ಪನ್ನು ಮಾಡದೆ ದಿವ್ಯ ಸುರೇಶ್ ಅವರ ಜೊತೆಗಿನ ಸಂಬಂಧವನ್ನು ಸ್ವಲ್ಪ ದೂರ ಇಡುತ್ತಾರೆ.ಕೊನೆಗೂ ತನ್ನ ಎಲ್ಲಾ ತಪ್ಪನ್ನು ತಿದ್ದಿಕೊಂಡು ಆಟವಾಡಿ ದಂತಹ ಮಂಜು ಪಾವಗಡ ಅವರು ಬಿಗ್ ಬಾಸ್ ಶೋನಲ್ಲಿ ವಿನ್ನರ್ ಆಗುವಂತಹ ಒಂದು ಕನಸು ಅವರ ಕನಸು ಈಡೇರುತ್ತದೆ.

ಹೀಗೆ ಜೀವನದಲ್ಲಿ ಅದೆಷ್ಟು ಕಷ್ಟವನ್ನ ಪಟ್ಟು ಪರಿಶ್ರಮದಿಂದ ಒಂದೊಂದೇ ಹೆಜ್ಜೆಯನ್ನು ಇಟ್ಟು ಕಷ್ಟಗಳನ್ನು ಮೆಟ್ಟಿ ನಿಂತು ಮೇಲೆ ಬಂದಂತಹ ಮಂಜು ಪಾವಗಡ ಅವರು ಕೊನೆಗೂ ಬಿಗ್ ಬಾಸ್ ನಲ್ಲಿ ಗೆದ್ದು 50 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆಯುತ್ತಾರೆ. ಹೀಗೆ ಮಂಜು ಬಿಗ್ ಬಾಸ್ ಶೋನಲ್ಲಿ ವಿನ್ನರ್ ಆದ ನಂತರ ಅವರ ಸ್ನೇಹಿತರು ಅವರನ್ನ ಹೊತ್ತುಕೊಂಡು ಕುಣಿಯುತ್ತಾರೆ ಹಲವಾರು ಕಾರ್ಯಕ್ರಮಗಳಲ್ಲಿ ಅವರನ್ನು ಅತಿಥಿಯಾಗಿ ಕರೆದುಕೊಂಡು ಹೋಗುತ್ತಾರೆ.ಹೀಗೆ ಇರುವಂತಹ ಸಂದರ್ಭದಲ್ಲಿ ದಿವ್ಯ ಸುರೇಶ್ ಅವರ ಜೊತೆಗೆ ಇದ್ದಂತಹ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಮಂಜು ಪಾವಗಡ ಅವರು ದಿವ್ಯ ಸುರೇಶ್ ಅವರ ಜೊತೆಗೆ ಇದ್ದಂತಹ ಹಲವಾರು ಫೋಟೋಗಳನ್ನು ನೋಡಿ ಮಂಜು ಪಾವಗಡ ಹಾಕುವುದಿದೆ ಸುರೇಶ್ ಅವರು ಮದುವೆಯಾಗಲಿದ್ದಾರೆ ಎನ್ನುವಂತಹ ಊಹಾಪೋಹಗಳು ಕೂಡ ಜನರಲ್ಲಿ ಉಂಟಾಗುತ್ತವೆ.

ಇನ್ನು ಮದುವೆಯ ಸುದ್ದಿ ಯಾವಾಗ ಕೊಡುತ್ತಾರೆ ಎನ್ನುವಂತಹ ನಿರೀಕ್ಷೆಯಲ್ಲಿ ಇದ್ದಂತಹ ಜನರಿಗೆ ಮಂಜು ಪಾವಗಡ ಅವರು ಇನ್ನೂ ಬೇರೆ ಸಿಹಿಸುದ್ದಿಯನ್ನು ಹೇಳಿದ್ದಾರೆ ಹೌದು ಮಂಜು ಪಾವಗಡ ಅವರು ಇನ್ನೊಂದು ಸಿಹಿಸುದ್ದಿಯನ್ನು ಹೇಳಿದ್ದಾರೆ. ಅವರ ಜೊತೆಗೆ ಸದಾಕಾಲ ಇರುವಂತಹ ಕನ್ನಡದ ಆಲ್ಬಮ್ ಕ್ರಿಯೇಟರ್ ಆಗಿರುವಂತಹ ಸಂಗೀತ ರಾಜು ಅವರುಅವರ ಜೊತೆಗೆ ಇರುವುದು ಕಂಡುಬರುತ್ತದೆ ಹಾಗಾದರೆ ಅವರು ಯಾಕೆ ಅವರ ಜೊತೆಗಿದ್ದಾರೆ ಎನ್ನುವಂತಹ ಪ್ರಶ್ನೆಗೆ ಉತ್ತರ ಅವರ ಮುಂದೆ ಬರುವಂತಹ ಒಂದು ಸಿನಿಮಾದ ವಿಚಾರದಿಂದಾಗಿ ಈ ಸಂಗೀತ ರಾವ್ ಅವರು ಅವರ ಜೊತೆಗೆ ಇದ್ದಾರಂತೆ.

ಹೀಗೆ ಸಂಗೀತ ರಾಜು ಅವರ ಒಂದು ಹೊಸದಾದ ಸಂಗೀತದ ಆಲ್ಬಮ್ ಎನ್ನುವಂತಹ ಒಂದು ಹಾಡಿನಲ್ಲಿ ಇವರು ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವಂತಹ ವಿಚಾರ ಕೆಲವು ಮೂಲಗಳಿಂದ ಕಂಡುಬಂದಿದೆ.ನಿಮಗೆ ಗೊತ್ತಿರಬಹುದು ಈ ಹಿಂದೆ ಸಂಗೀತ ರಾಜು ಸಿಂಗ್ ಅವರು ಬಿಗ್ ಬಾಸ್ ಸೀಸನ್ ಏಳರ ಸಮಯದಲ್ಲಿ ಗೆದ್ದಂತಹ ಶೈನ್ ಶೆಟ್ಟಿ ಅವರ ಜೊತೆಗೆ ಕೂಡ ಈ ರೀತಿಯಾದಂತಹ ಒಂದು ಹಾಡನ್ನು.ಅವರು ಮಾಡುವಂತಹ ಈ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಖ್ಯಾತಿಯನ್ನು ಹೊಂದುತ್ತವೆ ಅದೇ ರೀತಿಯಾಗಿ ಎಂಟನೇ ಸೀಸನ್ನಲ್ಲಿ ಗೆದ್ದಂತಹ ಮಂಜು ಪಾವಗಡ ಅವರ ಒಂದು ಹಾಡನ್ನು ಮಾಡಲು ಇವರು ತಯಾರಿ ಮಾಡುತ್ತಿದ್ದಾರೆ.ನೋಡಿ ಮಂಜು ಪಾವಗಡ ಅವರು ನನ್ನ ಕನಸು ನನಸಾಗುತ್ತಿದೆ ಎನ್ನುವಂತಹ ಮಾತನ್ನು ಹೇಳುತ್ತಾ ಮಂಜು ಪಾವಗಡ ಅವರು ತುಂಬಾ ಸಂತೋಷವನ್ನು ಜನರ ಮುಂದುಗಡೆ ಹಂಚಿಕೊಂಡಿದ್ದಾರೆ.ಹೀಗೆ ಇನ್ನಷ್ಟು ಅವಕಾಶಗಳು ಇವರ ಬೆನ್ನಹಿಂದೆ ಬರಲಿ ಹಾಗೂ ಇವರು ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶವನ್ನು ಬಳಸಿಕೊಂಡು ಒಳ್ಳೆಯದಾಗಲೆಂದು ಪ್ರತಿಯೊಬ್ಬರ ಆಶಯ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

15 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

16 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

16 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

17 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.