ಇಡೀ ಪ್ರಪಂಚವನ್ನೇ ಭಾರತದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ ರತನ್ ಟಾಟಾ , ಪಾಪ ಅವರು ಮಾಡಿದ ಪ್ರೀತಿ ಅವರ ಕೈ ಹಿಡಿಯಲಿಲ್ಲ.. ಯಾಕೆ ಗೊತ್ತ ..

ನಮ್ಮ ಭಾರತ ದೇಶದಲ್ಲಿ ಒಂದು ಪ್ರಸಿದ್ಧ ಸಂಸ್ಥೆಯೆಂದರೆ ಅದು ಟಾಟಾ ಸಂಸ್ಥೆ.ಯಾತಕ್ಕೆ ಟಾಟಾ ಸಂಸ್ಥೆಯನ್ನು ಒಳ್ಳೆಯ ಸಂಸ್ಥೆಯಂತಹ ಪ್ರತಿಯೊಬ್ಬರು ಕರೆಯುತ್ತಾರೆ ಎಂದರೆ ಅದಕ್ಕೆ ಒಂದು ಹಿನ್ನೆಲೆ ಇದೆ. ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗೆ ಗೌರ್ನಮೆಂಟ್ ಕೆಲಸದಲ್ಲಿ ಇದ್ದಂತಹ ವ್ಯಕ್ತಿಗಿಂತಲೂ ಹೆಚ್ಚಾಗಿ ಗೌರವ ನೀಡುತ್ತಾರೆ ಅದಕ್ಕೆ ಕಾರಣ ಸಂಸ್ಥೆಯಲ್ಲಿ ನಡೆದುಕೊಂಡು ಬರುವಂತಹ ಕೆಲವೊಂದು ಆಚಾರ-ವಿಚಾರಗಳು.ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಆಗಿರುವಂತಹ ಟಾಟಾ ಕಂಪನಿ ಇವತ್ತು ನಿನ್ನೆಯ ಕಂಪನಿಯಲ್ಲಿ ತಲೆತಲೆಮಾರುಗಳಿಂದ ದೇಶಕ್ಕೆಹಾಗೂ ದೇಶದ ಅಭಿವೃದ್ಧಿಗೆ ತನ್ನದೇ ಆದಂತಹ ಕೊಡುಗೆಯನ್ನು ನೀಡುತ್ತಾ ಬರುತ್ತಾರೆ ಅಂತಹ ಒಂದು ವಿಶೇಷವಾದ ಸಂಸ್ಥೆಯ ಅಂತ ನಾವು ಹೇಳಬಹುದು.

ಭಾರತದ ದೊಡ್ಡ ಹೋಟೆಲ್ ಎನ್ನುವಂತಹ ಹೆಸರಿನಲ್ಲಿ ಕರೆಸಿಕೊಳ್ಳುವ ಅಂತಹ ತಾಜ್ ಹೋಟೆಲ್ ಕಟ್ಟಿಸಿ ದಂತಹ ಕನಸುಗಾರ ರತನ್ ಟಾಟಾ. ನಮ್ಮ ಭಾರತ ದೇಶದಲ್ಲಿ ಸಾಮಾನ್ಯ ವ್ಯಕ್ತಿಗಳು ಕೂಡ ಕಾರುಗಳಲ್ಲಿ ಓಡಾಡಬೇಕು ಹಾಗೂ ಅವರ ಕನಸುಗಳು ಈಡೇರಬೇಕು ಪ್ರತಿಯೊಬ್ಬರೂ ಒಂದೇ ರೀತಿಯಾಗಿರಬೇಕು ಎನ್ನುವಂತಹ ಒಂದು ದೊಡ್ಡ ಮಹತ್ವಕಾಂಕ್ಷೆ ಯಿಂದಾಗಿ ನ್ಯಾನೋ ಕಾರುಗಳನ್ನು ನಮ್ಮ ದೇಶದಲ್ಲಿ ಪರಿಚಯ ಮಾಡಿದಂತಹ ದೊಡ್ಡ ಮನಸ್ಸಿನ ಉದ್ಯಮಿ ಅಂತ ನಾವು ಹೇಳಬಹುದು. ಟಾಟಾ ಕಂಪನಿ ಚಿಕ್ಕಪುಟ್ಟ ಕಂಪನಿಯಲ್ಲಿ ಇವರ ಬೊಕ್ಕಸದಲ್ಲಿ ಹಲವಾರು ಕಂಪನಿಗಳು ಇವೆ ಅದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಕಂಪನಿಗಳು ಎಂದರೆ ಅದು ಟಾಟಾ ಮೋಟಾರ್ಸ್ ಟಾಟಾ ಸ್ಟೀಲ್ ಟಾಟಾ ಇನ್ಸೂರೆನ್ಸ್ ಹೀಗೆ ಟಾಟಾ ಎನ್ನುವಂತಹ ಹೆಸರು ಪ್ರತಿಯೊಬ್ಬರ ಜನರ ಸಾಮಾಜಿಕ ಬದುಕಿನಲ್ಲಿ ಬೆರೆತು ಹೋಗಿವೆ.

ನೀವು ಗಮನಿಸಬಹುದು ಟಾಟಾ ಎನ್ನುವಂತಹ ವ್ಯಕ್ತಿ ಯಾವುದೇ ಒಂದು ಬಿಸಿನೆಸ್ ಮಾಡಿದರು ಕೂಡ ಅದರಲ್ಲಿ ಲಾಭವನ್ನು ಗಳಿಸುತ್ತಾರೆ ಹಾಗೂ ಅದರಲ್ಲಿ ತುಂಬಾ ಯಶಸ್ಸನ್ನು ಪಡೆಯುತ್ತಾರೆ. ಇದಕ್ಕೆಲ್ಲ ಕಾರಣ ಅವರು ಪ್ರೀತಿ ಮಾಡುವಂತಹ ಕೆಲಸಗಾರರು. ಹಾಗೂ ಕೆಲಸಗಾರರನ್ನು ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳುವಂತಹ ಒಂದು ಉತ್ತಮ ಮನಸ್ಥಿತಿ ಅಂತಹ ವ್ಯಕ್ತಿಯಾಗಿದ್ದಾರೆ.ಹೀಗೆ ಪ್ರತಿಯೊಬ್ಬರನ್ನು ಇಷ್ಟೊಂದು ಇಷ್ಟಪಟ್ಟು ನೋಡಿಕೊಳ್ಳುವಂತಹ ರತನ್ ಟಾಟಾ ಅವರ ಜೀವನದಲ್ಲಿ ಮಾತ್ರವೇ ಇವರು ವೈಫಲ್ಯ ಕಂಡಿದ್ದಾರೆ ಹಾಗೂ ತಮ್ಮ ಪ್ರೀತಿಯಲ್ಲಿ ಸೋಲನ್ನು ಅನುಭವಿಸಿದ್ದಾರೆ ಹಾಗಾದ್ರೆ ಅವರ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಸೋಶಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣದಲ್ಲಿ ರತನ್ ಟಾಟಾ ಅವರ ಪ್ರೀತಿಯ ವಿಚಾರವಾಗಿ ತುಂಬಾ ಚರ್ಚೆ ಉಂಟು ಮಾಡುತ್ತಿದೆ.82 ವರ್ಷ ಆಗಿರುವಂತಹ ರತನ್ ಟಾಟಾ ಅವರು 25 ವರ್ಷದ ಯುವಕ ನಿಂತಾಗ ತೆಗೆಸಿಕೊಂಡಿರುವ ಅಂತಹ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ ಹೀಗೆ ಹಾಕಿದ ನಂತರ ದೇಶದಲ್ಲೆಡೆ ಹಾಗೂ ಪ್ರಪಂಚದಾದ್ಯಂತ ಈ ಫೋಟೋದ ಚರ್ಚೆ ಉಂಟಾಗುತ್ತದೆ.ರತನ್ ಟಾಟಾ ಗುರು ಯಾವಾಗ ಪ್ರೀತಿಯನ್ನು ಮಾಡಿದ್ದರು ಯಾರನ್ನ ಪ್ರೀತಿಯನ್ನು ಮಾಡಿದ್ದರೂ ಹಾಗೆಯೇ ಪ್ರೀತಿ ಮಾಡಿದರೂ ಕೂಡ ಯಾಕೆ ಮದುವೆಯಾಗಲಿಲ್ಲ ಯಾಕೆ ಪ್ರೀತಿಯಲ್ಲಿ ಇವರು ಸೋತಿದ್ದಾರೆ ಎನ್ನುವಂತಹ ಹಲವು ರೀತಿಯಾದಂತಹ ಪ್ರಶ್ನೆಗಳು ಜನರಲ್ಲಿ ಮೂಡಿದೆ.

ಯಾವುದೇ ಒಂದು ಕೆಲಸವನ್ನು ನಾವು ಮಾಡಬೇಕು ಹಾಗೂ ಅದರಲ್ಲಿ ದೊಡ್ಡ ದಂತಹ ಯಶಸ್ಸನ್ನು ಕಾಣಬೇಕು ಎಂದರೆ ಅದರಲ್ಲಿ ನಿಷ್ಠೆಯನ್ನು ವುದು ತುಂಬಾ ಮುಖ್ಯ ಅದಕ್ಕಾಗಿ ರತನ್ ಟಾಟಾ ಅವರು ಕಂಪನಿಯನ್ನು ಬೆಳೆಸುವುದಕ್ಕಾಗಿ ಹಾಗೂ ಕಂಪನಿಯನ್ನು ನಂಬಿಕೊಂಡಿರುವ ಅಂತಹ ಹಲವಾರು ಕಾರ್ಮಿಕರನ್ನು ನಡೆಸಿಕೊಂಡು ಹೋಗುವುದಕ್ಕೆ ತಮ್ಮ ಪ್ರೀತಿಯನ್ನು ಮುಡಿಪಾಗಿ ಹೇಳುತ್ತಾರೆ ಹಾಗೂ ತಮ್ಮ ಪ್ರೀತಿಯನ್ನು ಮರೆಯುತ್ತಾರೆ.ರತನ್ ಟಾಟಾ ಅವರು ತಮ್ಮ 25ನೇ ವರ್ಷ ಇರುವಂತಹ ಸಂದರ್ಭದಲ್ಲಿ ಒಂದು ಸುಂದರವಾದ ಅಂತಹ ಹುಡುಗಿಯನ್ನು ಮನಸಾರೆ ಪ್ರೀತಿ ಮಾಡುತ್ತಾರೆ. ಹೀಗೆ ತುಂಬಾ ಇಷ್ಟ ಪಟ್ಟಂತ ಹುಡುಗಿಯನ್ನು ಕೊನೆಗೆ ಊರಿಗೆ ಮದುವೆಯಾಗುವುದಕ್ಕೆ ಆಗುವುದಿಲ್ಲ.ಹೀಗೆ ಅಮೆರಿಕದಲ್ಲಿ ಇದ್ದಂತಹ ಸಂದರ್ಭದಲ್ಲಿ ಒಂದು ಹುಡುಗಿಯನ್ನು ತುಂಬಾ ಇಷ್ಟಪಟ್ಟಿರುತ್ತಾರೆ ಅವಳು ಕೂಡ ರತನ್ ಟಾಟಾ ಅವರನ್ನು ಇಷ್ಟಪಟ್ಟಿರುತ್ತಾರೆ ಇನ್ನೇನು ಇವರುಮದುವೆ ಆಗಬೇಕು ಎನ್ನುವಂತಹ ಸಂದರ್ಭದಲ್ಲಿ ನಮ್ಮ ಭಾರತ ದೇಶದಲ್ಲಿ ಚೀನಾ ಮತ್ತು ಭಾರತದ ನಡುವೆ ಯುದ್ಧ ಉಂಟಾಗುತ್ತದೆ .

ಹೀಗೆ ಇರುವಂತಹ ಸಂದರ್ಭದಲ್ಲಿರತನ್ ಟಾಟಾ ಅವರು ಭಾರತಕ್ಕೆ ಬರುವಂತಹ ಪ್ರಸ್ತಾವನೆಯನ್ನು ತನ್ನ ಪ್ರೇಯಸಿಯ ಜೊತೆಗೆ ಮಾಡುತ್ತಾರೆ ಆದರೆ ರತನ್ ಟಾಟಾ ಅವರ ಜೊತೆಗೆ ಭಾರತಕ್ಕೆ ಬರುವುದಿಲ್ಲ ಭಾರತದಲ್ಲಿ ಚೀನಾ ಹಾಗೂ ಭಾರತದ ನಡುವೆ ಯುದ್ಧ ಆಗುತ್ತಿದೆ. ನನಗೆ ಭಯ ಆಗುತ್ತಾ ಇದೆ ನಾನು ಯಾವುದೇ ಕಾರಣಕ್ಕೂ ಭಾರತಕ್ಕೆ ಬರುವುದಿಲ್ಲ ಎನ್ನುವಂತಹ ಮಾತನ್ನ ರತನ್ ಟಾಟಾ ಅವರಿಗೆ ಹೇಳುತ್ತಾರೆ.

ಹೀಗೆ ರತನ್ ಟಾಟಾ ಅವರ ಪ್ರೇಯಸಿಗೆ ಅಮೆರಿಕದಲ್ಲಿ ಇರಬೇಕು ಎನ್ನುವಂತಹ ಆಸೆ ಅವರಿಗೆ ಇರುತ್ತದೆ ಆದರೆ ರತನ್ ಟಾಟಾ ಅವರು ಭಾರತವನ್ನು ತುಂಬಾ ಇಷ್ಟಪಟ್ಟಿರುತ್ತಾರೆ ನನ್ನ ಪ್ರೀತಿಗಿಂತ ನನ್ನ ದೇಶವೇ ಮುಖ್ಯ ಎನ್ನುವಂತಹ ನಿಟ್ಟಿನಲ್ಲಿ ಭಾರತ ದೇಶಕ್ಕೆ ವಾಪಸಾಗುತ್ತಾರೆ.ಹೀಗೆ ಭಾರತ ದೇಶಕ್ಕೆ ಬಂದ ನಂತರ ತಮ್ಮ ಸಮಯವನ್ನು ಸಂಪೂರ್ಣವಾಗಿ ತಮ್ಮ ಸಂಸ್ಥೆಯನ್ನು ಕಟ್ಟಲು ಮುಡಿಪಾಗಿ ಇರುತ್ತಾರೆ ಆ ಸಂದರ್ಭದಲ್ಲಿ ತನ್ನ ಪ್ರೇಯಸಿಯನ್ನು ಕೂಡ ಮರೆಯುತ್ತಾರೆ.ತದನಂತರ ತಾನು ಪ್ರೀತಿ ಮಾಡಿದಂತಹ ಪ್ರೇಯಸಿಯು ಬೇರೆಯವರ ಜೊತೆಗೆ ಅಂದಿನ ಸಮಯದಲ್ಲಿ ಅಮೆರಿಕದಲ್ಲಿ ಮದುವೆ ಆಗುತ್ತಾರೆ.

ಅವತ್ತಿನಿಂದ ರತನ್ ಟಾಟಾ ಅವರು ಏನೇ ಮಾಡಿದರೂ ಕೂಡ ಸವಾಲುಗಳನ್ನು ಎದುರಿಸಿ ಅದರಲ್ಲಿ ಗೆಲ್ಲುತ್ತ ಬಂದಿದ್ದಾರೆ.ಆದರೆ ಯಾವುದೇ ಒಬ್ಬ ವ್ಯಕ್ತಿ ಏನನ್ನು ಬೇಕಾದರೂ ಗೆಲ್ಲಬಹುದು ಆದರೆ ಜೀವನದಲ್ಲಿ ಕೆಲವೊಂದು ಬಾರಿ ಹಿಡಿಯುತ್ತಾರೆ ಹಾಗೂ ಜೀವನದಲ್ಲಿ ಒಂದು ಕಡೆ ಹಿನ್ನಡೆ ಉಂಟಾಗುತ್ತದೆ.ಇವತ್ತು ಎಷ್ಟು ಲಕ್ಷ ಲಕ್ಷ ಜನರಿಗೆ ಊಟವನ್ನು ಹಾಕುತ್ತಿರುವ ಅಂತಹ ರತನ್ ಟಾಟಾ ಅವರಿಗೆ ಹೀಗೆ ಆಗಿದ್ದು ನಿಜವಾಗಲೂ ಬೇಸರದ ಸಂಗತಿ ಅವರು ಮದುವೆ ಆಗಬೇಕಿತ್ತು ಎನ್ನುವುದು ಪ್ರತಿಯೊಬ್ಬರ ಒಂದು ಅಭಿಪ್ರಾಯ ಆಗಿದೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

9 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

9 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

11 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

11 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

11 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.