ಇದೊಂದು ಎಲೆ ದಿನಾ ತಿನ್ನುತ್ತಾ ಬಂದರೆ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸುತ್ತದೆ ಜತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ, ಅದರಲ್ಲಿ ಮುಖ್ಯವಾಗಿ ಅಸ್ತಮಾ ಇರೋರು ಈ ಮನೆಮದ್ದನ್ನು ಪಾಲಿಸಿ ನಿಮ್ಮ ಸಮಸ್ಯೆಗೆ ಡಾಕ್ಟರ್ ಇಲ್ಲದೆ ಪರಿಹಾರ ಕಂಡುಕೊಳ್ಳಬಹುದು.ನಮಸ್ಕಾರಗಳು ಪ್ರಿಯ ಓದುಗರೇ ಮನುಷ್ಯನ ದೇಹ ಹೇಗೆ ಅಂದರೆ ನೈಸರ್ಗಿಕವಾಗಿ ಕೆಲವೊಂದು ಶಕ್ತಿಯನ್ನು ಆ ಪ್ರಕೃತಿಮಾತೆ ನಮಗೆ ನೀಡಿದ್ದಾಳೆ.
ಆದರೆ ಬರುವ ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲೆ ಆ ಸಮಸ್ಯೆ ಯಾವಾಗ ಹೋಗುತ್ತೆ ನಾವು ಯಾವಾಗ ಈ ಅನಾರೋಗ್ಯ ತೊಂದರೆಯಿಂದ ಮುಕ್ತಿ ಪಡೆದುಕೊಳ್ಳುತ್ತವೆ ಎಂದು ಯೋಚಿಸುತ್ತಾ ಇನ್ನಷ್ಟು ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಅದರಲ್ಲಿಯೂ ಇವತ್ತಿನ ದಿನಗಳಲ್ಲಿ ಸ್ವಲ್ಪ ಅನಾರೋಗ್ಯ ತೊಂದರೆ ಬಂದರೂ ದವಾಖಾನೆಯತ್ತ ಧಾವಿಸುವ ಮಂದಿಯೇ ಅತಿಹೆಚ್ಚು.
ಹೌದು ಈ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಎಂಬುದು ಯಾಕೆ ಇರೋದು ಈ ಶಕ್ತಿ ಇರೋದೇ ಬರುವ ಸಣ್ಣಪುಟ್ಟ ತೊಂದರೆಗಳನ್ನು ಅದಷ್ಟು ಬೇಗ ನಿವಾರಣೆ ಮಾಡುವುದಕ್ಕಾಗಿ.ಹಾಗಾಗಿ ಈ ರೋಗ ನಿರೋಧಕ ಶಕ್ತಿ ವೃದ್ದಿ ಮಾಡಿಕೊಂಡರೆ ಸಾಕು ನಾವು ಬರುವ ಸಣ್ಣಪುಟ್ಟ ಅನಾರೋಗ್ಯ ತೊಂದರೆಗಳಿಂದ ಬಹಳ ಬೇಗ ಮುಕ್ತಿ ಪಡೆದುಕೊಂಡು ಆರೋಗ್ಯಕರ ವಾಗಿರಬಹುದು.
ಈಗ ನಾವು ಈ ಕಿಡ್ನಿಯಲ್ಲಿ ಆಗಿರುವ ಕಲ್ಲನ ಕರಗಿಸುವುದಕ್ಕೆ ಜೊತೆಗೆ ಅಸ್ತಮಾ ಸಮಸ್ಯೆಗೆ ಮತ್ತು ಬಾಯಿಯಲ್ಲಿ ಆಗಿರುವ ಹುಣ್ಣಿನ ತೊಂದರೆಗೆ ಇದೆಲ್ಲಾ ಸಮಸ್ಯೆಗೂ ಕೇವಲ ಮಾಡಬಹುದಾದ ಒಂದೇ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ.ಈ ತೊಂದರೆಯಿಂದ ಮುಕ್ತಿ ಪಡೆಯುವುದಕ್ಕೆ ಮಾಡಬೇಕಿರುವ ಪರಿಹಾರಕ್ಕೆ ಬೇಕಾಗಿರುವುದು ಒಂದೇ ಸಾಮಗ್ರಿ ಅದೇ ಕಾಡು ಬಸಳೆ ಸೊಪ್ಪು.
ಈ ಕಾಡು ಬಸಳೆ ಸೊಪ್ಪು ಇದೆ ಅಲ್ವಾ ಬಹಳ ಅದ್ಭುತವಾದ ಆರೋಗ್ಯಕರ ಲಾಭಗಳನ್ನು ಹೊಂದಿದೆ ಈ ಹಸಿರೆಲೆ ರುಚಿಯಲ್ಲಿ ಸ್ವಲ್ಪ ಹುಳಿ ಒಗರು ಅಂಶವನ್ನು ಹೊಂದಿದ್ದರೂ ಇದು ಅಪಾರ ಆರೋಗ್ಯಕರ ಲಾಭಗಳನ್ನು ಹೊಂದಿದೆ.ಕಿಡ್ನಿಯಲ್ಲಿ ಕಲ್ಲು ಆಗಿದೆ ಅಂದರೆ ಈ ಸೊಪ್ಪಿನ ಪ್ರಯೋಜನವನ್ನು ಖಾಲಿ ಹೊಟ್ಟೆಗೆ ಪಡೆದುಕೊಳ್ಳುತ್ತ ಬನ್ನಿ, ಇದರಲ್ಲಿರುವ ಅಂಶ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನೂ ಕರಗಿಸಿ ಮೂತ್ರದ ಮೂಲಕ ಹೊರ ಹೋಗಲು ಸಹಕಾರಿ ಆಗಿಸುತ್ತದೆ.
ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಂತೂ ಹವಾಮಾನದಲ್ಲಿ ಸ್ವಲ್ಪವಾದರೂ ವೈಪರೀತ್ಯ ಕಂಡು ಬಂದರೆ ಅರೋಗ್ಯದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ ಹಾಗೂ ಶೀತ ಕೆಮ್ಮು ಕೊನೆಗೆ ಜ್ವರ ಕೂಡ ಬರುತ್ತೆ ಉಸಿರಾಟದ ತೊಂದರೆಗಳು ಉಂಟಾಗುತ್ತದೆ ಅಂಥವರು ಈ ಸೊಪ್ಪಿನ ಪ್ರಯೋಜನ ಪಡೆದುಕೊಳ್ಳಿ.ಇದರಿಂದ ಕಷಾಯ ಮಾಡಿ ಸೇವಿಸಿ ಖಂಡಿತವಾಗಿಯೂ ಇಂತಹದ್ದೊಂದು ಸಮಸ್ಯೆಯಿಂದ ನೀವು ಮುಕ್ತಿಪಡೆಯಬಹುದು ಅದೆಷ್ಟು ಬೇಗ ಹಾಗೆ ಅಸ್ತಮಾ ಸಮಸ್ಯೆ ಇರೋರು ಪ್ರಾಣಾಯಾಮವನ್ನು ತಪ್ಪದೆ ಪಾಲಿಸಿ.
ಈ ಕ್ರಮವನ್ನು ಪಾಲಿಸುತ್ತಾ ಹಾಗೂ ಕಾಡು ಬಸಳೆ ಸೊಪ್ಪಿನಿಂದ ಪರಿಹಾರವನ್ನು ಮಾಡುತ್ತಾ ಬಂದರೆ ಖಂಡಿತವಾಗಿಯೂ ಆಸ್ತಮದಿಂದ ಮುಕ್ತಿ ಪಡೆದು ಕೊಳ್ಳಬಹುದು.ಹೌದು ನಾವು ರಸ್ತೆ ಬದಿಯಲ್ಲಿ ಇಷ್ಟೆಲ್ಲಾ ಗಿಡ ಮರ ಗಳನ್ನು ನೋಡುತ್ತೇವೆ ಕೆಲವೊಂದು ಬಳ್ಳಿಗಳನ್ನು ನೋಡುತ್ತೇವೆ ಆದರೆ ಅವುಗಳ ಪರಿಚಯ ನಮಗೆ ಇರೋದೇ ಇಲ್ಲ ಅಲ್ವಾ ಹಾಗೆ ಅವುಗಳ ಹೆಸರು ಕೂಡ ಗೊತ್ತಿರುವುದಿಲ್ಲ ಈ ಕಾಡು ಬಸಳೆ ಸೊಪ್ಪು ಕೂಡ ಹಾಗೆ ಇದನ್ನ ನೀವು ನೋಡಿರುತ್ತೀರಾ. ಆದರೆ ಈ ಸೊಪ್ಪನ್ನ ಕಂಡುಹಿಡಿಯುವುದು ಸ್ವಲ್ಪ ಕಷ್ಟ ಆದರೆ ಇದರ ಪ್ರಯೋಜನ ಪಡೆದುಕೊಳ್ಳುತ್ತಾ ಬಂದರೆ ಮಾತ್ರ ಖಂಡಿತ ನೀವು ಉತ್ತಮ ಆರೋಗ್ಯಕರ ಲಾಭವನ್ನು ಪಡೆದುಕೊಳ್ಳಬಹುದು.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.