ನೆನೆಸಿದ ಕಡಲೆ ಬೀಜ ದೇಹಕ್ಕೆ ಕೊಡುತ್ತೆ ಅಧಿಕವಾದ ಪ್ರೋಟಿನಾಂಶ ಇದು ಪ್ರೋಟೀನ್ ಗಣಿ ಇದನ್ನು ತಿನ್ನುವುದರಿಂದ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳು ಮತ್ತು ಹಲವು ಪೋಷಕಾಂಶಗಳ ಕೊರತೆ ನಿವಾರಣೆ ಆಗುತ್ತೆ.ಹೌದು ನೆನೆಸಿದ ಕಡಲೆ ಬೀಜ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಅಷ್ಟೇ ಅಲ್ಲ ಇದನ್ನು ಹಿರಿಯರು ಬಡವರ ಬಾದಾಮಿ ಅಂತ ಕೂಡ ಕರೆದಿದ್ದಾರೆ ಅಲ್ವಾ.
ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ಕಡಲೆಬೀಜ ಇದನ್ನು ಸುಮ್ಮನೆ ಹಾಗೆಲ್ಲ ಕರೆದು ಬಿಡ್ತಾರಾ ಯಾಕೆ ಹೀಗೆಲ್ಲಾ ಕರಿತಾರೆ ಅಂತ ಹೇಳೋದಾದರೆ ಈ ಕಡಲೆಬೀಜ ನಮ್ಮ ದೇಹಕ್ಕೆ ಬೇಕಾಗಿರುವಂತಹ ಕ್ಯಾಲ್ಸಿಯಂ ಮೆಗ್ನೀಷಿಯಂ ಫೋಲೇಟ್ ಬಯೋಟಿನ್ ನಿಯಾಸಿನ್ ಇಂತಹ ಬಹಳ ಅಪರೂಪವಾಗಿ ಇರುವಂತಹ ಪೋಷಕಾಂಶಗಳು ಇದೊಂದು ಆಹಾರ ಪದಾರ್ಥದಲ್ಲಿ ಅಡಗಿರುವ ಕಾರಣ ಇದನ್ನು ಹಿರಿಯರು ಬಾದಾಮಿಗೆ ಹೋಲಿಕೆ ಮಾಡಿದ್ದಾರೆ.
ಹೌದು ಬಾದಾಮಿ ಅಂದ್ರೆ ಸುಮ್ನೆನಾ ಈ ಬಾದಾಮಿ ಅತ್ಯಾದ್ಬುತವಾದ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿದೆ ಆದರೆ ಈ ಪದಾರ್ಥದ ಬೆಲೆ ಮಾತ್ರ ಅಧಿಕ ಯಾಕೆ ಅಂದರೆ ಸಾಮಾನ್ಯವಾಗಿ ಅದರಲ್ಲಿರುವಂತಹ ಆರೋಗ್ಯಕರ ಲಾಭಗಳು ಹಾಗೂ ಇದನ್ನೂ ಬಳ ಹೇರಳವಾಗಿ ಬೆಳೆಯುವ ಕಾರಣದಿಂದ ಇದರ ಬೆಲೆ ಹೆಚ್ಚಿರಬಹುದು ಅಂತ ಹೇಳಬಹುದು.
ಅಂತಹ ಬಾದಾಮಿಗೆ ಪರ್ಯಾಯ ಈ ಕಡಲೆಬೀಜ ಇದನ್ನು ನೆನೆಸಿ ತಿನ್ನುವುದರಿಂದ ಇದರ ಸಂಪೂರ್ಣ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಹಾಗೂ ನೆನೆಸಿದ ಕಡಲೆ ಬೀಜ ತಿಂದಾಗ ಪಿತ್ತ ದೋಷ ಉಂಟಾಗುವ ಸಾಧ್ಯತೆ ಇರುತ್ತದೆ.ಹೌದು ನಮ್ಮ ದೇಹ ರಚನೆಯಾಗಿರುವುದು ಈ ವಾತ ಪಿತ್ತ ಕಫ ಯಿಂದಾಗಿ ಆದರೆ ಇದ್ಯಾವುದರ ಪ್ರಮಾಣವು ಹೆಚ್ಚಾಗಬಾರದು ಕಡಲೆಬೀಜ ನಮ್ಮ ದೇಹದಲ್ಲಿ ಪಿತ್ತವನ್ನು ಹೆಚ್ಚು ಮಾಡುವ ಕಾರಣ.
ಈ ಕಡಲೆ ಬೀಜವನ್ನು ಅದೆಷ್ಟು ನೆನೆಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದನ್ನು ನೆನೆಸಿಟ್ಟು ತಿಂದಾಗ ಮಾತ್ರ ಸಂಪೂರ್ಣವಾಗಿ ನಮ್ಮ ದೇಹದಲ್ಲಿ ಈ ಕಡಲೆಬೀಜ ಜೀರ್ಣಗೊಂಡು ಪಿತ್ತ ದೋಷ ಉಂಟಾಗಿದೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.
ಈ ಕಡಲೆಬೀಜದ ಅಲ್ಲಿ ಅತ್ಯದ್ಭುತ ಆರೋಗ್ಯಕರ ಲಾಭಗಳಿವೆ ಅದರಲ್ಲಿಯೂ ಕಡಲೆಬೀಜ ದಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಜೀರ್ಣಶಕ್ತಿಯನ್ನ ವೃದ್ಧಿ ಮಾಡುತ್ತದೆ ಮತ್ತು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ ತೆಗೆದುಹಾಕಿ ದೇಹಕ್ಕೆ ಒಳ್ಳೆಯ ಕೊಬ್ಬಿನ ಅಂಶವನ್ನು ನೀಡುವಲ್ಲಿ ಕಡಲೆಬೀಜ ಎತ್ತಿದ ಕೈ.
ಹಾಗಾಗಿ ನೀವ್ಯಾಕೆ ತಡ ಮಾಡುತ್ತಿದ್ದೀರಾ ನೀವೇನಾದರೂ ಬಾಡಿಬಿಲ್ಡ್ ಮಾಡ್ತಿದ್ದೀರಾ ಅಥವಾ ನಿಮ್ಮ ದೇಹವನ್ನ ಸದೃಢವಾಗಿಸಿಕೊಳ್ಳಬೇಕು ಅಂತಿದ್ದೀರಾ ಯಾವುದೇ ರೋಗ ರುಜಿನಗಳು ಬರದೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂತ ಇದ್ದೀರಾ. ಹಾಗಾದರೆ ಇನ್ಯಾಕೆ ತಡ ಪ್ರತಿದಿನ ಕನಿಷ್ಠ ಪಕ್ಷ 8ಗಂಟೆಗಳಾದರೂ ಈ ಕಡಲೆ ಬೀಜವನ್ನು ನೆನೆಸಿಟ್ಟು ಇದನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಸೇವಿಸುತ್ತಾ ಬನ್ನಿ ಹೊಟ್ಟೆಯೂ ತುಂಬುತ್ತದೆ ಹಸಿವಾಗುವುದಿಲ್ಲ ನಿಮ್ಮ ಆರೋಗ್ಯಕ್ಕೂ ಒಳ್ಳೆಯ ಲಾಭಗಳನ್ನು ಕೊಡುತ್ತೆ ಪಕ್ಕಾ.
ಈ ಕಡಲೆ ಬೀಜ ಅಥವಾ ಈ ಕಡಲೆಕಾಯಿ ಇದನ್ನು ಹಸಿಯಾಗಿ ತಿನ್ನುವುದರಿಂದ ಆಗುವ ಲಾಭಕ್ಕಿಂತ ನೆನೆಸಿಟ್ಟು ತಿನ್ನುವುದು ಒಳ್ಳೆಯದು ಹಾಗೆ ಇದನ್ನು ಗರ್ಭಿಣಿ ಸ್ತ್ರೀ ಹೆಣ್ಣುಮಕ್ಕಳು ಹಾಗೂ ಎದೆಹಾಲು ನೀಡುವ ಹೆಣ್ಣುಮಕ್ಕಳು ತಿನ್ನುವುದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಅದರಲ್ಲೂ ಹೆಣ್ಣುಮಕ್ಕಳಿಗೆ ರಕ್ತಹೀನತೆ ಸಮಸ್ಯೆ ಯಿಂದಾಗಿ ಸುಸ್ತು ಆಗುತ್ತದೆ ದೇಹ ಬಳಲುತ್ತದೆ.
ಅದರಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶ ಕೊಡಲು ಈ ಕಡಲೆಬೀಜ ಉತ್ತಮವಾಗಿದ್ದು ಮುಖ್ಯವಾಗಿ ಇದು ದೇಹವನ್ನು ಸದೃಡ ಮಾಡುತ್ತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ, ಹಾಗೆ ಬಹಳಷ್ಟು ಉತ್ತಮ ಪೋಷಕಾಂಶಗಳು ನಮ್ಮ ದೇಹಕ್ಕೆ ಬೇಕಾಗಿರುವಂತಹ ಅಂಶಗಳನ್ನು ನೀಡಿ ಆರೋಗ್ಯವನ್ನು ವೃದ್ಧಿಸುತ್ತದೆ ಧನ್ಯವಾದ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.