ಅವತ್ತು ಪುನೀತ್ ರಾಜಕುಮಾರ್ ಮಾತಾಡುವಾಗಲೇ ಗುರು ರಾಯರ ವಿಗ್ರಹ ಬಿದ್ದಿದ್ದು ಯಾಕೆ ….ಆ ಸತ್ಯ ಕೊನೆಗೂ ಹೊರ ಹಾಕಿದ ಅರ್ಚಕ

147

ಅಪ್ಪು ಅವರ ಅಗಲಿಕೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಳೆಯ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಹೌದು ಅಪ್ಪು ಅವರ ಅಗಲಿಕೆಯ ಬಳಿಕ ಎಷ್ಟೊಂದು ಮಂದಿ ಅವರಿಗೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಅಷ್ಟೇ ಅಲ್ಲ ಬಹಳಷ್ಟು ಮಂದಿ ಅಪ್ಪು ಅವರ ಅಗಲಿಕೆಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ದೇಶದೆಲ್ಲೆಡೆ ಮಾತ್ರವಲ್ಲ ವಿದೇಶಗಳಲ್ಲಿಯೂ ಕೂಡ ಸಂತಾಪ ಸೂಚಿಸಿದ್ದರು.

ನಟ ಅಪ್ಪು ಅಂದರೆ ಅವರು ದೊಡ್ಮನೆ ಮಗ ಮಾತ್ರ ಆಗಿರಲಿಲ್ಲ ಇಡೀ ಕರುನಾಡಿಗೆ ಮಗನಾಗಿದ್ದರು ಅಪ್ಪು ಅವರ ಅಗಲಿಕೆಯ ಬಳಿಕ ಅವರ ಬಳಿ ಸಹಾಯ ಪಡೆದವರು ಬಹಳಷ್ಟು ಮಂದಿ ಅಪ್ಪು ಅಗಲಿಕೆಯ ನೋವನ್ನು ತಡೆಯಲಾಗದೆ ಅಪ್ಪು ನಮಗೆ ಆಗ ಆ ಸಹಾಯ ಮಾಡಿದ್ದರು ಅಪ್ಪು ನಮಗೆ ಎಷ್ಟೊಂದು ಸೌಕರ್ಯಗಳನ್ನು ಮಾಡಿಕೊಟ್ಟಿದ್ದರು ಎಂದು ಹಲವರು ನೋವು ಪಟ್ಟಿದ್ದರು ನೋವು ತಿಂದಿದ್ದರು ಇವತ್ತಿಗೂ ದೊಡ್ಮನೆಯಲ್ಲಿ ಸೂತಕದ ಛಾಯೆ ಒಬ್ಬ ವ್ಯಕ್ತಿ ಅನ್ನೂ ಕಳೆದುಕೊಂಡಾಗ ಅವರ ಮನೆಯವರಷ್ಟೇ ನೋವು ಪಡುತ್ತಾರೆ.

ಆದರೆ ಅಪ್ಪು ಅವರನ್ನ ಕಳೆದುಕೊಂಡು ಇಡೀ ವಿಶ್ವವೇ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದರು. ಸ್ನೇಹಿತರೆ ಅಪ್ಪು ಅವರದ್ದು ಅಕಾಲಿಕ ಮ..ರಣ ಅಪ್ಪು ಅವರ ಅಗಲಿಕೆಗೆ ಹಲವು ವೈದ್ಯರು ಹಲವು ಕಾರಣಗಳನ್ನು ಸೂಚಿಸಿದರು ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೊವೊಂದು ಅಪ್ಪು ಅವರ ಈ ಅಕಾಲಿಕ ಅಗಲಿಕೆಗೆ ಮುಂಚೆಯೇ ಸೂಚನೆ ಸಿಕ್ಕಿತ್ತಾ ಎಂದು ಈ ವಿಡಿಯೋ ಮೂಲಕ ಹಲವು ಮಂದಿ ಚರ್ಚ್ ಅನ್ನು ಕೂಡ ಮಾಡಿದ್ದರು ಇದೇ ವೇಳೆ ಮಂತ್ರಾಲಯದ ಪುರೋಹಿತರೊಬ್ಬರು ವೀಡಿಯೊ ಕುರಿತು ಸ್ಪಷ್ಟನೆ ಅನ್ನು ಕೂಡ ನೀಡಿತ್ತು. ಆ ವೀಡಿಯೋದಲ್ಲಿ ಏನಿತ್ತು ಎಂದು ನಮಗೆ ಈಗಾಗಲೇ ಗೊತ್ತಿದೆ ಹೌದು ರಾಜ್ ಕುಟುಂಬ ಮಂತ್ರಾಲಯ ರಾಘವೇಂದ್ರ ರ ಅಪ್ಪಟ ಭಕ್ತಾದಿಗಳ ವರುಷಕ್ಕೊಮ್ಮೆ ಸ್ವಾಮಿಯ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

2020ರಲ್ಲಿ ರಾಜ್ ಕುಟುಂಬದ ಪ್ರತೀಕವಾಗಿ ಅಪ್ಪು ಅವರು ಸ್ವಾಮಿಯ ಆರಾಧನೆಯಲ್ಲಿ ಪಾಲ್ಗೊಂಡಿದ್ದರು ಇದೇವೇಳೆ ಅಪ್ಪು ಅವರು ಆರಾಧನೆ ಮಾಡುವಾಗ ಅಲ್ಲಿರುವ ಭಕ್ತಾದಿಗಳು ಸಹಿತ ಪುರೋಹಿತರು ಸಹಿತ ಅಪ್ಪು ಅವರಿಗೆ ಭಕ್ತಿಗೀತೆಯೊಂದನ್ನು ಹಾಡಲು ಕೇಳಿಕೊಂಡಿದ್ದರು ಆದರೆ ಅಪ್ಪು ಅವರು ಅದೇ ವೇಳೆ ನನಗೆ ಭಕ್ತಿಗೀತೆಗಳು ಅಷ್ಟೊಂದು ಬರುವುದಿಲ್ಲ. ಆದರೆ ಬರುವ ವರುಷ ಸ್ವಾಮಿ ಆರಾಧನೆಗೆ ಬರುವಾಗ ಭಕ್ತಿಗೀತೆಯನ್ನ ಕಲಿತು ಬಂದು ಹಾಡುತ್ತೇನೆ ಎಂದು ಕೇಳಿಕೊಂಡಿದ್ದರು. ಇದೇ ವೇಳೆ ಸ್ವಾಮಿಯ ಪೀಠದಲ್ಲಿದ್ದ ವೀಣೆಯು ಅಲುಗಾಡಿದ್ದು ಆ ಘಟನೆ ಅನ್ನೂ ಕಂಡು ಬಹಳಷ್ಟು ಮಂದಿ ಏನಿದು ಈ ರೀತಿ ನಡೆದಿದೆ ಎಂದು ಶಾಕ್ ಆಗಿದ್ದರು. ಆದರೆ ಅದೇ ವೀಡಿಯೋ ಅಪ್ಪು ಅವರ ಅಗಲಿಕೆಯ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ಅಂದು ನಡೆದ ಈ ಘಟನೆ ಅಪ್ಪು ಅವರ ಈ ಅಕಾಲಿಕ ಅಗಲಿಕೆಗೆ ಸೂಚನೆಯಾಗಿದೆ ಎಂದು ವೀಡಿಯೊವನ್ನು ಶೇರ್ ಮಾಡಿಕೊಳ್ಳುವ ಮೂಲಕ ಹಲವು ಮಂದಿ ಚರ್ಚೆಗಳು ಕೂಡ ಮಾಡಿದ್ದರು. ಅಂದು ರಾಘವೇಂದ್ರಸ್ವಾಮಿ ಅವರು ಕೊಟ್ಟ ಸೂಚನೆಯನ್ನೂ ಅಪ್ಪು ಅವರು ತಿಳಿದುಕೊಳ್ಳಬೇಕಿತ್ತು ಎಂದು. ಆದರೆ ಮಂತ್ರಾಲಯದ ಪುರೋಹಿತರೊಬ್ಬರು ವಿಡಿಯೋಗೆ ಸ್ಪಷ್ಟನೆ ನೀಡಿದ್ದು ಇದೆಲ್ಲಾ ಕಾಕತಾಳಿಯವೇ ಹೊರೆತು ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ ಅಂದು ರಾಯರ ಪೀಠದಿಂದ ಈ ರೀತಿ ವೀಣೆ ಅಲುಗಾಡಿದ್ದು ಯಾವುದೇ ಸೂಚನೆ ಅಲ್ಲ, ಅದು ಕೇವಲ ಕಾಕತಾಳೀಯ ಎಂದು ತಿಳಿಸಿದ್ದರು. ಯಾವುದೇ ಕಾರಣಕ್ಕೂ ಇಂತಹ ಕೆಟ್ಟ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮೀಡಿಯಾಗಳ ಮುಂದೆ ಹೇಳಿಕೆ ನೀಡಿದ್ದರು.

WhatsApp Channel Join Now
Telegram Channel Join Now