ಇದರ ಕಷಾಯ ಮಾಡಿ ಕುಡಿಯುವುದರಿಂದ ಆಗುವ ಲಾಭಗಳು ಅಪಾರ, ಹೌದು ಬಿಳಿಮುಟ್ಟು ಸಮಸ್ಯೆ ಋತುಚಕ್ರದ ಸಮಯದಲ್ಲಿ ಎದುರಾಗುವ ಸಮಸ್ಯೆಗಳು ಅಷ್ಟೇ ಅಲ್ಲ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಮೂತ್ರ ಸಂಬಂಧಿ ಸಮಸ್ಯೆಗಳು ಇಂತಹ ಸಮಸ್ಯೆಗಳಿಗೆ ಪರಿಹಾರ ಕೊಡುವ ಇದೊಂದು ಬೇರು, ಇದನ್ನು ‘ಅನಂತ ಮೂಲಬೇರು’ ಅಂತಾ ಕರೆಯುತ್ತಾರೆ. ಇದರ ಲಾಭಗಳು ಅಪಾರ ಇದನ್ನು ನೀವು ಕೂಡ ಬಳಸಿ ಇದರ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಂಡು ನಿಮ್ಮ ಹಲವು ಅನಾರೋಗ್ಯ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅದು ಯಾವ ರೀತಿ ಅಂತ ತಿಳಿಯುವುದಕ್ಕೇ ಈ ಕೆಳಗಿನ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.
ಹೌದು ಮನುಷ್ಯನಿಗೆ ಒಂದಲ್ಲ ಒಂದು ಸಮಸ್ಯೆಗಳು ಬರುತ್ತಲೇ ಇರುತ್ತದೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೂ ಕೂಡ ಬಹಳಷ್ಟು ಪರಿಹಾರಗಳನ್ನು ಮನೆಮದ್ದುಗಳನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು.ಆದರೆ ಇಂದಿನ ದಿನಗಳಲ್ಲಿ ಮನೆ ಮದ್ದು ಎಂಬ ಮಾತೇ ಇಲ್ಲ ಏನೇ ಸಮಸ್ಯೆಗಳು ಬಂದರೂ ಮೆಡಿಕಲ್ ಶಾಪ್ ಗಳಿಗೆ ಓಡುವುದು ಅಥವಾ ದವಾಖಾನೆಗಳ ಧಾವಿಸುವುದು ಇದಿಷ್ಟೇ ಇಂದಿನ ಜನತೆಗೆ ಗೊತ್ತಿರುವುದು ಆದರೆ ಇಂತಹ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತ ಪಡೆದುಕೊಳ್ಳುತ್ತಾ ಆರೋಗ್ಯದ ಸ್ಥಿತಿ ಯಾವ ಕತೆಗೆ ಬಂದಿದೆ ಅಂತ ನಾವು ಇಂದೂ ನೋಡಬಹುದು.
ಆದರೆ ಕೆಲವೊಂದು ಮನೆಮದ್ದುಗಳು ಎಷ್ಟೋ ಪ್ರಭಾವಿತವಾಗಿರುತ್ತದೆ ಅಂದರೆ ನಮಗೆ ಬಂದಿರುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ನಾವು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬಹುದು.ಇಂದು ಈ ಪುಟದಲ್ಲಿ ಚರ್ಮಸಂಬಂಧಿ ಸಮಸ್ಯೆಗಳು ಜೊತೆಗೆ ರಕ್ತಸ್ರಾವವಾಗುವುದು ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವ ಆಗುವುದು ಹಾಗೂ ಹೆಣ್ಣುಮಕ್ಕಳಿಗೆ ಬಾಣಂತನದ ಸಮಯದಲ್ಲಿ ಕಡಿಮೆ ಹಾಲು ಬರುವುದು ಇದೆಲ್ಲಾ ಸಮಸ್ಯೆಗಳಿಗೆ ಮಾಡಬಹುದಾದ ಸರಳ ಪರಿಹಾರ ವೊಂದರ ಬಗ್ಗೆ ಸರಳ ಮನೆಮದ್ದಿನ ಬಗ್ಗೆ ಪರಿಚಯಿಸಿಕೊಡುತ್ತದೆ ಹಾಗೂ ಇದನ್ನು ಯಾವ ಪದಾರ್ಥದಿಂದ ಮಾಡಬೇಕು ಎಂಬುದನ್ನು ಸಹ ತಿಳಿಯೋಣ ಬನ್ನಿ ಈ ಉತ್ತಮ ಮಾಹಿತಿಯನ್ನು ತಿಳಿದು ಆರೋಗ್ಯವೃದ್ಧಿಗಾಗಿ ಈ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ.
ಹೌದು ಎಲ್ಲ ಉಪಯೋಗಗಳು ಯಾವ ಪದಾರ್ಥದಿಂದ ನಿಮಗೆ ದೊರೆಯುತ್ತದೆ ಅಂದರೆ ಅದು ಸುಗಂಧಿಬೇರು ಇದನ್ನು ಸೊಗದೆ ಗಿಡ ಅಂತ ಕೂಡ ಕರೆಯುತ್ತಾರೆ ಸಂಸ್ಕೃತದಲ್ಲಿ ಇದನ್ನು ಅನಂತ ಮೂಲ ಅಂತ ಕೂಡ ಕರೆಯಲಾಗುತ್ತದೆ ಯಾಕೆಂದರೆ ಭೂಮಿಯೊಳಗೆ ಆಳವಾಗಿ ಬೆಳೆಯುವ ಈ ಬಳ್ಳಿಯ ಬುಡ ಅಪಾರ ಶಕ್ತಿಯನ್ನು ಹೊಂದಿದೆ ಹಾಗೂ ಮರ ಗಿಡಗಳ ಮೇಲೆ ಬಳ್ಳಿಯಾಗಿ ಬೆಳೆಯುವ ಇದರ ಬೇರು ಮತ್ತು ಎಲೆಗಳು ಅತಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ.
ಇದರ ಬಳಕೆಯಿಂದ ಮಾಡುವುದು ಹೇಗೆ ಅಂದರೆ, ಈ ಬಳ್ಳಿಯ ವೀರನ ತೆಗೆದುಕೊಂಡು ಇದರಿಂದ ತಂಡವನ್ನು ಸಂಗ್ರಹ ಮಾಡಬೇಕು ಅದನ್ನು ಚರ್ಮಸಂಬಂಧಿ ಸಮಸ್ಯೆಗಳು ಇರುವ ಮೇಲೆ ಹಚ್ಚಬೇಕು ಬಳಿಕ ಒಣಗಿದ ಮೇಲೆ ತೊಳೆಯುವುದರಿಂದ ಮೊಡವೆ ಇರಲಿ ಹಾಗೂ ಇನ್ಯಾವುದೇ ಚರ್ಮ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ.
ಎದೆಹಾಲು ಕೊರತೆ ಇರುವ ಹೆಣ್ಣು ಮಕ್ಕಳು ಈ ಬೇರಿನ ಪ್ರಯೋಜನ ಪಡೆದುಕೊಂಡು ಇದರಿಂದ ಕಷಾಯ ಮಾಡಿ ಕುಡಿಯುವುದರಿಂದ ಎದೆಹಾಲು ವೃದ್ಧಿಸುತ್ತದೆ.ಋತುಮತಿಯಾದಾಗ ಅಥವಾ ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಅಧಿಕ ರಕ್ತಸ್ರಾವ ಆಗುತ್ತಿದೆ ಅಂದರೆ ಅಥವಾ ಮೂತ್ರ ಸಂಬಂಧಿ ಸಮಸ್ಯೆ ಇದೆ ಮೂತ್ರದಲ್ಲಿ ರಕ್ತ ಹೋಗುವುದು ಅಧಿಕ ರಕ್ತಸ್ರಾವ ಆಗುತ್ತಿದೆ ಅಂದಾಗ ಈ ಬೇರಿನ ಪ್ರಯೋಜನ ಪಡೆದುಕೊಳ್ಳಿ, ಇದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತೆ.
ಈ ಬಳ್ಳಿಯ ಪ್ರಯೋಜನ ಅಪಾರ ಇದನ್ನು ನಿಮ್ಮ ಮನೆಯ ಪಾಟ್ ನಲ್ಲಿಯೂ ಕೂಡ ಬಳಸಬಹುದು ಇದನ್ನು ಬೇಸಿಗೆಯಲ್ಲಿ ಬಳಸುವುದರಿಂದ ಅಂದರೆ ಬೇಸಿಗೆ ಸಮಯದಲ್ಲಿ ಇದರಿಂದ ಕಷಾಯ ಮಾಡಿ ಕುಡಿಯುವುದರಿಂದ ಬೇಗ ಉಷ್ಣಾಂಶ ಕಡಿಮೆಯಾಗುತ್ತದೆ ಹಾಗೂ ದೇಹದ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.