ಅಂಜದ ಗಂಡು ದಿಟ್ಟ ಪತ್ರಿಕೋದ್ಯಮದ ರಾಜಾಧಿರಾಜ ಅಜಿತ್ ಅನುಮಕ್ಕವರ್ ಹೆಂಡತಿ ನೋಡಿ ಇವರೇ … ನೋಡಿ ಎಷ್ಟು ಸುಂದರ ಕುಟುಂಬ

403

ಕನ್ನಡ ಸುದ್ದಿ ವಾಹಿನಿಯಲ್ಲಿ ಹಲವು ನಿರೂಪಕರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಹೌದು ನಿರೂಪಣೆ ಮಾಡುವುದು ಅಷ್ಟೇನೂ ಸುಲಭವಲ್ಲ ಹಾಗೂ ಗಂಟೆಗಟ್ಟಲೆ ಕ್ಯಾಮೆರಾ ಮುಂದೆ ಕುಳಿತು ಜನರಿಗೆ ಸುದ್ದಿ ತಿಳಿಸುವ ಪ್ರಯತ್ನ ಮಾಡುವ ನೀತಿ ನಿರೂಪಕರು ಸಹ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದವು ಹಾಗೂ ಹಲವರಿಗೆ ರೋಲ್ ಮೋಡೆಲ್ ಸಹ ಆಗಿದ್ದಾರೆ. ಇದೀಗ ಅವಳಿ ಜವಳಿ ಮಕ್ಕಳಿಗೆ ತಂದೆಯಾದ ಕನ್ನಡ ಜನಪ್ರಿಯ ಸುದ್ದಿ ವಾಹಿನಿಯ ನಿರೂಪಕ ಇವರ ಬಗ್ಗೆ ಹಾಗೂ ಇವರ ಕುಟುಂಬದ ಬಗ್ಗೆ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಕನ್ನಡ ಸುದ್ದಿ ವಾಹಿನಿಗಳಲ್ಲಿ ಅನೇಕ ನಿರೂಪಕರು ತಮ್ಮದೇಯಾದ ವಿಶಿಷ್ಟ ಶೈಲಿಯಲ್ಲಿ ಸುದ್ದಿಗಳನ್ನು ನಿರೂಪಣೆ ಮಾಡುವ ಮೂಲಕ ನಾಡಿನಾದ್ಯಂತ ತಮ್ಮದೇಯಾದಂತಹ ಒಂದು ಛಾಯೆಯನ್ನು ಬಿಂಬಿಸಿಕೊಂಡಿದ್ದಾರೆ.

ಕೆಲವು ಸುದ್ದಿ ನಿರೂಪಕರು ತಮ್ಮ ದಿಟ್ಟತನ ಹಗೂ ಪ್ರಾಮಾಣಿಕತೆ ನೇರ ನುಡಿ ಇಂದ ಉತ್ತಮವಾದ ವ್ಯಕ್ತಿತ್ವವನ್ನ ಅಳವಡಿಸಿಕೊಂಡು ತಮ್ಮ ಎದುರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಇದ್ದರೂ ಸಂವಾದದಲ್ಲಿ ಕುಳಿತಾಗ ಸಮರ್ಪಕವಾಗಿ ಅವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಾರೆ. ಅಂತ ಪ್ರಸಿದ್ಧ ಪತ್ರಕರ್ತ ರಲ್ಲಿ ಖ್ಯಾತ ಸುದ್ದಿ ವಾಹಿನಿಯ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತ ಇರುವ ಅಜಿತ್ ಹನುಮಕ್ಕನವರ್ ಸಹ ಪ್ರಮುಖರಾಗಿದ್ದಾರೆ. ಅನೇಕರು ಅಜಿತ್ ಬಗ್ಗೆ ಕೆಲವೊಂದು ವಿಚಾರಗಳ ಬಗ್ಗೆ ಹೆಚ್ಚು ಮಾತನಾಡಿರುತ್ತಾರೆ ಹೌದು ಇವರು ಕೇವಲ ಬಿಜೆಪಿ ಪಕ್ಷ ಪ್ರಚಾರಕ ಎಂದು ಆರೋಪಿಸುವುದುಂಟು. ಆದರೆ ಅವರು ಅದನ್ನು ಹೊರತು ಪಡಿಸಿ ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳಿಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿರುವುದನ್ನ ಕೂಡ ನಾವು ಗಮನಿಸಬಹುದು.

ಅಜಿತ್ ಹನುಮಕ್ಕನವರ್ ಒಬ್ಬರು ಜನಪ್ರಿಯ ಪತ್ರಕರ್ತರಾಗಿದ್ದಾರೆ ಹಾಗೂ ಹಲವು ವಿಚಾರಗಳಿಗೆ ವಿರೋಧವನ್ನು ಎದುರಿಸಿ, ಅನೇಕ ವಿಚಾರಗಳಿಗೆ ವಿರೋಧ ಎದುರಿಸುವುದರ ನಡುವೆಯೇ ಉತ್ತಮ ರಾಜಕೀಯ ಕ್ಷೇತ್ರದ ನಿರೂಪಕ ಎಂಬ ಹತ್ತು ಹಲವು ಪ್ರಶಸ್ತಿಗಳನ್ನು ಸಹ ಅಜಿತ್ ಅವರು ಪಡೆದುಕೊಂಡಿದ್ದಾರೆ. ಇನ್ನು ಅಜಿತ್ ಹನುಮಕ್ಕನವರ್ ನಡೆದು ಬಂದ ಹಾದಿ ಮತ್ತು ಅವರ ಕೌಟುಂಬಿಕ ಜೀವನವದ ಕುರಿತು ಹೇಳಬೇಕು ಅಂದರೆ ಇವರು ಹುಬ್ಬಳಿಯಲ್ಲಿ 1976 ರಲ್ಲಿ ಜನಿಸಿದರು. ಅಜಿತ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರಾವಾಡದಲ್ಲಿ ಪೂರೈಸಿಕೊಳ್ಳುತ್ತಾರೆ. ಬಿ.ಎ ಪದವಿಯಲ್ಲಿ ಸೈಕಾಲಾಜಿ ವಿಷಯ ಅಧ್ಯಾಯನ ಮಾಡಿದ ಅಜಿತ್, ನಂತರ ಸುವರ್ಣ ವಾಹಿನಿಯಲ್ಲಿ ತಮ್ಮ ಜರ್ನಲಿಸಂ ವೃತ್ತಿಯನ್ನು ಆರಂಭಿಸುತ್ತಾರೆ. ಪತ್ರಕರ್ತ ಅಜಿತ್ ಹನುಮಕ್ಕನವರ್ ಲೈಮ್ ಲೈಟ್ ಬಂದಿದ್ದು ಬಿಡದಿ ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಬಯಲಿಗೆಳೆಯುವ ಮೂಲಕ.

ಈ ಪ್ರಕರಣದಲ್ಲಿ ಅಜಿತ್ ಅವರು ತಮ್ಮ ದಿಟ್ಟತನವನ್ನು ಪ್ರದರ್ಶಿಸಿದ್ದರು, ಹಾಗೆ ಈ ಮೂಲಕ ರಾಜ್ಯದ ಜನರ ಗಮನ ಸೆಳೆದರು. ಈ ನಿತ್ಯಾನಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಿತ್ ಅವರು ಮಾಡಿದ ಕೆಲಸ ಮೆಚ್ಚಿ ಸುವರ್ಣ ವಾಹಿನಿ ಇವರಿಗೆ ಉನ್ನತ ಸ್ದಾನ ಮಾನ ನೀಡುತ್ತದೆ. ಇನ್ನು ಅಜಿತ್ ಅವರು ತಮ್ಮ ಸಹೋದ್ಯೋಗಿ ಸಹನಾ ಎಂಬುವವರ ಜೊತೆಗೆ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಆನಂತರ ಈ ದಂಪತಿಗಳಿಗೆ ಸುಮಾರು 10 ವರುಷಗಳಾದರು ಮಕ್ಕಳಾಗಿರಲಿಲ್ಲಾ. ಕೆಲವು ತಿಂಗಳ ಹಿಂದೆ ಅವಳಿ-ಜವಳಿ ಮಕ್ಕಳಿಗೆ ತಂದೆಯಾಗಿದ್ದಾರೆ ಖ್ಯಾತ ಪತ್ರಕರ್ತರಾಗಿರುವ ಅಜೀತ್ ಇನ್ನೂ ಈ ವಿಚಾರದ ಬಗ್ಗೆ ಅಜಿತ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರ ಕುರಿತು ಹಂಚಿಕೊಂಡಿದ್ದರು.

ಹೌದು ನಿರೂಪಕರಾಗಿರುವ ಹಾಗೂ ಖ್ಯಾತ ಪತ್ರಕರ್ತರಾಗಿರುವ ಅಜಿತ್ ಅವರು ತಮ್ಮ ಜೀವನದಲ್ಲಿ ಈಗಾಗಲೇ ಹಲವು ವಿಚಾರಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಜನರ ಪ್ರೀತಿ ಅನ್ನೋ ಕೂಡ ಗಳಿಸಿಕೊಂಡಿದ್ದಾರೆ ಹಾಗೂ ಜನಪ್ರಿಯ ಪತ್ರಕರ್ತರಾಗಿರುವ ಅಜಿತ್ ಅವರ ನಿರೂಪಣೆ ಅನ್ನು ನೀವು ಸಹ ನೋಡಿರುತ್ತಿರ ಹಾಗಾದರೆ ನಿರೂಪಕರಾಗಿರುವ ಹಾಗೂ ಪತ್ರಕರ್ತರಾಗಿರುವ ಅಜಿತ್ ಅವರ ನಿರೂಪಣೆ ಅನ್ನು ನೀವು ಸಹ ನೋಡಿದಲ್ಲಿ ಇವರ ಕುರಿತು ನಿಮ್ಮ ಅನಿಸಿಕೆ ಅನ್ನ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಸುದ್ದಿವಾಹಿನಿಯಲ್ಲಿ ನಿಮ್ಮ ನೆಚ್ಚಿನ ನಿರ್ವಪಕರ್ಯಾರು ಎಂದು ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now