ಇದೆಂತ ದೇವರ ಆಟ ರಾಜಕುಮಾರ್ ಹಾಗೂ ಅವರ ಮೂರು ಮಕ್ಕಳಿಗೂ ಹೃದಯದ ಸಮಸ್ಯೆ ಯಾಕೆ ಹೀಗೆಲ್ಲ .. ನೋಡಿ ಇದರ ಅಸಲಿ ವಿಚಾರ…

198

ಹೌದು ನಮ್ಮ ಕನ್ನಡದ ಮುತ್ತುರಾಜ್ ನಮ್ಮ ಕನ್ನಡದ ಹೆಮ್ಮೆಯ ನಟ ರಾಜಣ್ಣ ಅವರ ಕಿರಿಯ ಮಗ ಆಗಿರುವ ಪುನೀತ್ ಅವರು ಕೂಡ ನಮ್ಮ ಕನ್ನಡ ಸಿನಿಮಾರಂಗದ ಹೆಮ್ಮೆಯ ನಟ. ಇವರನ್ನು ನಮ್ಮ ಕನ್ನಡದ ಕಣ್ಮಣಿ ಮುತ್ತುರಾಜ ಅಂತೆಲ್ಲಾ ಕರೆಯುತ್ತಾರೆ ಉತ್ತರ ಹೌದು ಕನ್ನಡದ ಪ್ರಭಾವಶಾಲಿ ನಟರುಗಳಲ್ಲಿ ಒಬ್ಬರು ನಮ್ಮ ಪುನೀತ್ ಸರ್ ಹೌದು ಅಪ್ಪು ಅವರು ಬಾಲನಟನಾಗಿ ಸಿನಿಮಾರಂಗಕ್ಕೆ ಬಂದರು ಆನಂತರ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡು ನಟನಾಗಿ ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆದವು ಆದರೆ ಇದೀಗ ನಮ್ಮ ಜೊತೆ ಅಪ್ಪು ಅವರು ಇಲ್ಲ ಇವರನ್ನು ಕಳೆದುಕೊಂಡ ಸಿನಿಮಾರಂಗ ಅನಾಥವಾಗಿ ಬಿಟ್ಟಿದೆ.

ಹೌದು ಅಪ್ಪು ಅವರ ಅಗಲಿಕೆಯ ನಂತರ ಒಂದಂತೂ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು ಫ್ರೆಂಡ್ಸ್ ಅದೇನೆಂದರೆ ಈ ಹೃದಯ ಸಮಸ್ಯೆ ಎಂಬುದು ಅಂದಿನಿಂದ ಸಹ ಅಣ್ಣಾವ್ರ ಕುಟುಂಬವನ್ನು ಬೆಂಬಿಡದೆ ಕಾಡುತ್ತಾ ಇದೆ ಎಂದು ಹೇಳಲಾಗಿದೆ. ಹೌದು ಗೆಳೆಯರೆ ಅಣ್ಣಾವ್ರ ಕಾಲದಿಂದಲೂ ಕೂಡ ಇದು ಅಣ್ಣಾವ್ರ ಕುಟುಂಬವನ್ನು ಕಾಡಿಕೊಂಡು ಬಂದಂತಹ ದೊಡ್ಡ ಅನಾರೋಗ್ಯ ಸಮಸ್ಯೆ ಆಗಿದೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಯೋಗಾಭ್ಯಾಸ ಹಾಗೂ ದೈಹಿಕ ಕಸರತ್ತನ್ನು ಈ ವಿಚಾರವನ್ನು ಮೊದಲಿಗೆ ಪರಿಚಯಿಸಿದವರೇ ನಮ್ಮ ವರನಟ ನಮ್ಮ ಹೆಮ್ಮೆಯ ನಟ ರಾಜಣ್ಣ ಅವರು.

ಇನ್ನು ಅಣ್ಣಾವ್ರನ್ನು 2000 ಇಸವಿ ಅಲ್ಲಿ ಕಾಡುಗಳ್ಳ ವೀರಪ್ಪನ್ ಅಪಹರಿಸಿಕೊಂಡು ಹೋಗಿದ್ದರು ಈ ವಿಚಾರ ಕರ್ನಾಟಕ ಜನತೆಗೆ ಗೊತ್ತೇ ಇದೆ. 108 ದಿನಗಳ ಕಾಲ ಕಾಡಿನಲ್ಲಿ ಇದ್ದರೂ ಕೂಡ ಮರಣವನ್ನು ಗೆದ್ದು ಬಂದಿದ್ದರು ನಮ್ಮ ಮುತ್ತುರಾಜ್. ಆದರೆ 2006 ರಲ್ಲಿ ಇದೇ ಹೃದಯಾಘಾತದಿಂದಾಗಿ ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ನಮ್ಮನ್ನೆಲ್ಲಾ ಅಗಲಿ ಶಾಶ್ವತವಾಗಿ ದೂರವಾಗಿದ್ದರು. ಇನ್ನು ಇದು ಇಷ್ಟಕ್ಕೇ ನಿಲ್ಲಲಿಲ್ಲ ರಾಘವೇಂದ್ರರಾಜಕುಮಾರ ರವರು 27ನೇ ವಯಸ್ಸಿನಲ್ಲಿಯೇ ಹೃದಯದ ಸಮಸ್ಯೆಯಿಂದಾಗಿ ಹಲವಾರು ಸರ್ಜರಿ ಗಳನ್ನು ಕೂಡ ಮಾಡಿಸಿಕೊಂಡಿದ್ದರು.

ಇದಾದ ನಂತರ 2013 ರಲ್ಲಿ ಕೂಡ ವ್ಯಾಯಾಮ ಮಾಡುತ್ತ ಇರಬೇಕಾದರೆ ಕುಸಿದು ಬಿದ್ದು ಅವರ ಮೆದುಳಿನಲ್ಲಿ ರಕ್ತ ಸಂಚಾರವು ಹೆಪ್ಪುಗಟ್ಟಿ ಕೆಲವು ಸಮಸ್ಯೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಇದೇ ಅಣ್ಣನನ್ನು ಪುನೀತ್ ರಾಜಕುಮಾರ್ ರವರು ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಉಳಿಸಿಕೊಂಡಿದ್ದರು. ಇನ್ನು 2015 ರಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಟ್ರೆಡ್ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಲಘು ಹೃದಯಾಘಾತ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಶಿವಣ್ಣನವರಿಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲಾಗಿತ್ತು.

ಅಣ್ಣಾವ್ರ ಕುಟುಂಬದಲ್ಲಿ ಈ ಎರಡು ಸಂದರ್ಭದಲ್ಲಿ ಕೂಡ ಹೃದಯಾಘಾತ ಸಂಭವಿಸಿದ್ದರೂ ಕೂಡ ಇಬ್ಬರು ಅಣ್ಣತಮ್ಮಂದಿರು ಉಳಿದುಕೊಂಡು ಬಂದಿದ್ದರು. ಆದರೆ ಈ ಬಾರಿ ಕಿರಿಯಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ವ್ಯಾಯಾಮ ಮಾಡುತ್ತಿರಬೇಕಾದರೆ ಹೃದಯಾಘಾತದಿಂದ ಕುಸಿದುಬಿದ್ದು ಮತ್ತೆ ಮೇಲೇಳಲೇ ಇಲ್ಲ. ಅಣ್ಣಾವ್ರ ಕುಟುಂಬಕ್ಕೆ ಹೃದಯಾಘಾತ ಎನ್ನುವುದು ಬೆಂಬಿಡದ ಶಾಪವಾಗಿ ಬಂದು ಈಗ ದೊಡ್ಡಮನೆಯ ಕುಡಿಯನ್ನೇ ವಿಧಿಯ ಕೈಗೆ ಸೇರಿಸಿಬಿಟ್ಟಿದೆ. ಕೇವಲ ತಮ್ಮ ಅಭಿಮಾನಿಗಳನ್ನು ಮಾತ್ರವಲ್ಲದೆ ಅವರನ್ನೇ ನಂಬಿಕೊಂಡಿದ್ದ ಅಂತಹ ಅದೆಷ್ಟೋ ಜೀವಗಳನ್ನು ಬಿಟ್ಟು ಪಂಚಭೂತಗಳಲ್ಲಿ ಲೀನ ಆಗಲು ತನ್ನ ಪ್ರಯಾಣವನ್ನು ಬೆಳೆಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಹೌದು ಅಪ್ಪು ಸರ್ ಕನ್ನಡ ಚಿತ್ರರಂಗದಲ್ಲಿ ಯಾವತ್ತಿಗೂ ಟಾಪ್ ನಟ ಆಗಿಯೇ ಇರುತ್ತಾರೆ ಇವರ ಸ್ಥಾನವನ್ನು ಯಾರೂ ಕೂಡ ಎಂದೆಂದಿಗೂ ತುಂಬಲು ಸಾಧ್ಯವಾಗುವುದಿಲ್ಲಾ. ಇನ್ನೂ ಮೂವರು ಜನ ಅಣ್ಣತಮ್ಮಂದಿರು ವ್ಯಾಯಾಮ ಮಾಡುತ್ತ ಇರಬೇಕಾದರೆ ಹೃದಯಾಘಾತ ಸಂಭವಿಸಿದ್ದು, ಮತ್ತೊಂದು ಗಮನಿಸಿಕೊಳ್ಳಬೇಕಾದ ವಿಚಾರವಾಗಿದೆ. ಎಲ್ಲರೂ ಸಹ ತಮ್ಮ ತಮ್ಮ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುತ್ತಾರೆ ಆದರೆ ಆರೋಗ್ಯವನ್ನು ಸಂಪೂರ್ಣವಾಗಿ ಮುಗಿಸಿಬಿಡುವ ವ್ಯಾಯಾಮ ಯಾಕೆ ಬೇಕು ಎಂಬುದು ಎಲ್ಲರ ಪ್ರಶ್ನೆ ಆಗಿದೆ. ನಟ ಪುನೀತ್ ರಾಜಕುಮಾರ್ ಅವರಂತಹ ಬಂಗಾರದ ವ್ಯಕ್ತಿತ್ವ ನಮ್ಮ ಅಪ್ಪು ಸರ್ ಅವರದ್ದು ಇವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಮಾತ್ರವಲ್ಲ ಕನ್ನಡ ಜನತೆ ಸಂಪೂರ್ಣವಾಗಿ ಮುಳುಗಿದ್ದಾರೆ.

WhatsApp Channel Join Now
Telegram Channel Join Now