ನಿದ್ರಾಹೀನತೆಗೆ ಈ ಸುಲಭ ಪರಿಹಾರ ನಿಮಗೆ ಖಂಡಿತಾ ನಿಮ್ಮ ಈ ಸಮಸ್ಯೆಯಿಂದ ದೂರ ಮಾಡುತ್ತೆ! ಹೌದು ಯಾವುದೇ ಮಾತ್ರೆಗಳಿಲ್ಲದೆ ಕಣ್ತುಂಬ ನಿದ್ದೆ ಮಾಡಬೇಕೆಂದರೆ ಈ ಪರಿಹಾರ ಪಾಲಿಸಿ.ಹೌದು ಇತ್ತೀಚನ ದಿನಗಳಲ್ಲಿ ನಿದ್ರಾಹೀನತೆ ಸಮಸ್ಯೆ ಎಂಬುದು ವಯಸ್ಸಾದವರಿ ಗಿಂತ ಹೆಚ್ಚಾಗಿ ಯುವಜನತೆಯಲ್ಲಿ ನಾವು ಕಾಣುತ್ತಿದ್ದೇವೆ. ಯುವ ಜನರಲ್ಲಿ ಕಾಣುವ ಈ ನಿದ್ರಾಹೀನತೆ ಸಮಸ್ಯೆ ಕೆಲವೊಂದು ಅನಾರೋಗ್ಯ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಬಹಳ ಇರುತ್ತದೆ,
ಜೊತೆಗೆ ಇದು ಅವರ ಭವಿಷ್ಯದ ಮೇಲೆಯೂ ಕೂಡ ಕೆಟ್ಟ ಪರಿಣಾಮ ಬೀರಿ ಅಡ್ಡದಾರಿ ಹಿಡಿಯುವಂತೆ ಸಹ ಮಾಡಬಹುದು. ಆದರೆ ಹೆಚ್ಚಿನ ಮಂದಿ ನಿದ್ರಾಹೀನತೆಗೆ ಮಾತ್ರೆ ಒಂದೇ ಪರಿಹಾರ ಅಂತ ತಿಳಿದು ಗುಳಿಗೆಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಇಂತಹ ಪ್ರಯತ್ನ ಗಳು ಯಾವುದೇ ಒಳ್ಳೆಯ ಫಲಿತಾಂಶ ಕೊಡದೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತೆ ಹೊರತು ಯಾವ ಒಳ್ಳೆಯ ಪ್ರಭಾವವು ಪರಿಣಾಮವೂ ಉಂಟಾಗುವುದಿಲ್ಲ.ಮಾತ್ರೆ ತೆಗೆದುಕೊಂಡು ಇನ್ನಷ್ಟು ಆರೋಗ್ಯವನ್ನು ಹಾಳು ಮಾಡಿಕೊಳ್ಳದಿರಿ ಉತ್ತಮ ಮನೆ ಮದ್ದನ್ನು ಪಾಲಿಸಿ ನಿಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಯಾವ ಮನೆಮದ್ದು ಪಾಲಿಸಬೇಕು ಹೇಗೆ ಇದರಿಂದ ಶಮನ ಪಡೆದುಕೊಳ್ಳಬೇಕು ಅಂತ ತಿಳಿಯುತ್ತಿಲ್ಲವಾದರೆ ಈ ಪುಟದಲ್ಲಿ ನಾವು ನಿದ್ರಾಹೀನತೆ ಸಮಸ್ಯೆ ಬಗ್ಗೆ ಮಾತನಾಡಲು ಹೊರಟಿದ್ದಾರೆ ಹಾಗಾಗಿ ನಿಮ್ಮ ಈ ಸಮಸ್ಯೆಗೆ ನಾವು ಪರಿಹಾರವನ್ನು ಕೊಡುತ್ತೇವೆ. ನಾವು ಹೇಳಿದ ಹಾಗೆ ನಿಮ್ಮ ಈ ಸಮಸ್ಯೆಗೆ ಈ ಮನೆಮದ್ದನ್ನು ಪಾಲಿಸುತ್ತ ಬಂದರೆ ತಕ್ಷಣವೇ ಅಲ್ಲ ಆದರೆ ನಿಧಾನವಾಗಿ ನಿಮ್ಮ ಈ ನಿದ್ರಾಹೀನತೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಸೋಂಪು ಹಾಲು ಮತ್ತು ಕಲ್ಲು ಸಕ್ಕರೆ ಅಥವಾ ಬೆಲ್ಲವನ್ನು ಕೂಡ ನೀವು ಬಳಸಬಹುದು.
ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಂಡು ನೀರಿಗೆ ಸೋಂಪು ಕಾಳನ್ನು ಹಾಕಿ ಈ ನೀರು ಅರ್ಧದಷ್ಟು ಆಗಬೇಕೋ ಅಷ್ಟು ಪ್ರಮಾಣದಲ್ಲಿ ಈ ನೀರು ಕುದಿಸಬೇಕು, ಇದಕ್ಕೆ ಬೆಲ್ಲ ಅಥವಾ ಕಲ್ಲುಸಕ್ಕರೆ ಹಾಕಿ ಕುದಿಸಿ ಇದಕ್ಕೆ ಅರ್ಧ ಲೋಟದಷ್ಟು ನೀರು ಹಾಕಿ.ಇದೀಗ ಈ ಕಷಾಯವನ್ನು ಶೋಧಿಸಿಕೊಂಡು ಅಥವಾ ಹಾಗೆಯೇ ಶೋಧಿಸದೆ ಈ ಕಷಾಯವನ್ನು ಕುಡಿಯುವುದು ಇದರಿಂದ ಜೀರ್ಣ ಶಕ್ತಿ ಉತ್ತಮವಾಗಿ ಆಗುತ್ತದೆ ಜತೆಗೆ ನಿದ್ರಾಹೀನತೆ ಸಮಸ್ಯೆ ಎಂಬುದು ಪರಿಹಾರ ಆಗುತ್ತದೆ.
ಈ ಸರಳ ಪರಿಹಾರವನ್ನು ಮಾಡಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗಬಹುದೆ ನಮ್ಮ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಮಾತ್ರೆ ಇಲ್ಲದೆ ನೀವು ನಿದ್ರೆಗೆ ಜಾರುತ್ತೀರಿ ಇದನ್ನೊಮ್ಮೆ ನೀವು ಟ್ರೈ ಮಾಡಿ ನೋಡಿ.ನಿದ್ರಾಹೀನತೆ ಸಮಸ್ಯೆಗೆ ಹಿರಿಯರಿಗೆ ವೈದ್ಯರು ಮಾತ್ರೆಗಳನ್ನು ಸೂಚಿಸಿ ಕೊಡುತ್ತಾರೆ ಅದು ಹಿರಿಯರ ಆರೋಗ್ಯದ ದೃಷ್ಟಿಯಿಂದ ಆ ಮಾತ್ರೆಗಳನ್ನು ಕೊಡಲಾಗುತ್ತದೆ. ಆದರೆ ಕಿರಿಯರಿಗೆ ಮಾತ್ರೆಗಳ ಅವಶ್ಯಕತೆ ಇರುವುದಿಲ್ಲ.
ಯಾಕೆಂದರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತ ಹೋದರೆ ನರಗಳು ವೀಕ್ ಆಗುವ ಸಾಧ್ಯತೆ ಇರುತ್ತದೆ. ಹೌದು ನೀವು ನಿದ್ರೆ ಮಾತ್ರೆ ತೆಗೆದುಕೊಂಡಷ್ಟು ನಿಮ್ಮ ನರಮಂಡಲದ ಮೇಲೆ ಇದು ಕೆಟ್ಟ ಪ್ರಭಾವ ಬೀರಿ ನಿಮ್ಮ ಆರೋಗ್ಯವನ್ನು ಕುಂದಿಸುತ್ತದೆ ಮತ್ತು ಮೆಂಟಲ್ ಹೆಲ್ತ್ ಮುಖ್ಯವಾಗಿ ಹೌದು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಿ ನಿಮ್ಮ ಆರೋಗ್ಯವನ್ನು ಕೆಡಿಸುವ ಸಾಧ್ಯತೆ ಇರುವುದರಿಂದ ಮಾತ್ರೆ ತೆಗೆದುಕೊಳ್ಳುವುದರ ಬದಲು ನಿಧಾನವಾಗಿ ಪರಿಹಾರ ಕೊಟ್ಟರೂ ಈ ಮನೆಮದ್ದನ್ನು ಪಾಲಿಸಿ ನಿದ್ರಾಹೀನತೆಗೆ ಫುಲ್ ಸ್ಟಾಪ್ ಹಾಕಿ ಧನ್ಯವಾದ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.