ನಿಂಬೆ ಹಣ್ಣನ್ನು ಕೇವಲ ಅಡುಗೆಯಲ್ಲಿ ಮಾತ್ರ ಬಳಸುವುದಲ್ಲ ನಮ್ಮ ಮನೆಯ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿಯೇ ಕೂಡ ನಿಂಬೆ ಹಣ್ಣನ್ನು ಬಳಸಬಹುದಾಗಿದೆ ಹಾಗಾದರೆ ನಿಂಬೆ ಹಣ್ಣನ್ನು ಹೇಗೆ ಪೂಜಿಸಬೇಕು ಮತ್ತು ನಿಮ್ಮ ಹಣ್ಣನ್ನು ಬಳಸಿ ಮನೆಯಲ್ಲಿರುವಂತಹ ಕಷ್ಟಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು .
ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಒಂದು ನಿಂಬೆಹಣ್ಣಿನ ಪರಿಹಾರವೂ ನಿಮಗೂ ಕೂಡ ಉಪಯುಕ್ತ ವಾಗಿದ್ದರೆ ಬೇರೆಯವರಿಗೂ ಕೂಡ ಇದನ್ನು ಶೇರ್ ಮಾಡಿ ಹಾಗೆ ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟ ನಷ್ಟಗಳನ್ನು ಯೋಚಿಸಿ ಕುಳಿತು, ನಿಮ್ಮ ಜೀವನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳದಿರಿ. ಆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಉತ್ತಮ ಪರಿಹಾರವನ್ನು ಹುಡುಕಿ, ಜೀವನದಲ್ಲಿ ನೆಮ್ಮದಿಯಿಂದ ಇರಿ.
ಜೀವನ ಎಂಬ ಸಾಗರದಲ್ಲಿ ಯಾರಿಗೆ ತಾನೇ ಕಷ್ಟಗಳು ಇಲ್ಲ ಹೇಳಿ ಸಮುದ್ರದಲ್ಲಿ ಹೇಗೆ ಅಲೆಗಳು ಬರುತ್ತವೆಯೋ ಹಾಗೆಯೇ ಮನುಷ್ಯನ ಜೀವನದಲ್ಲಿಯೂ ಕೂಡ ಕಷ್ಟ ಎಂಬ ಅಲೆಗಳು ಹುಕ್ಕಿ ಬರುತ್ತಲೇ ಇರುತ್ತದೆ ಅಂತಹ ಕಷ್ಟಗಳು ಎದುರಾಗಿಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದರ ಬದಲು, ಅದಕ್ಕೆ ತಕ್ಕ ಪರಿಹಾರವನ್ನು ಮೊದಲು ಹುಡುಕಿ, ಆ ನಂತರ ಅದನ್ನು ಸರಿಯಾಗಿ ಪಾಲಿಸಿಕೊಂಡು ಬನ್ನಿ, ನಿಮ್ಮ ಜೀವನದ ಕಷ್ಟಗಳು ನಿಮಗೆ ಹೆದರಿ ಓಡಿ ಹೋಗಬೇಕು, ಆ ರೀತಿ ಧೈರ್ಯಶಾಲಿಯಾಗಿರಿ, ನಿಮಗೆ ಯಾವ ಕಷ್ಟಗಳು ಎದುರಾಗುವುದಿಲ್ಲ ನಿಮ್ಮನ್ನು ಸೋಲಿಸುವುದಿಲ್ಲ.
ಜೀವನದಲ್ಲಿ ಎದುರಾಗುವಂತಹ ಕಷ್ಟ ನಷ್ಟಗಳಿಗೆ ಪರಿಹಾರವಾಗಿ ನಿಂಬೆ ಹಣ್ಣನ್ನು ಬಳಸಿ ಹೌದು ಈ ನಿಂಬೆಹಣ್ಣನ್ನು ತಾಯಿ ಮಹಾಶಕ್ತಿಯ ಸ್ವರೂಪ ಎಂದು ಕರೆಯುತ್ತಾರೆ, ಈ ನಿಂಬೆ ಹಣ್ಣನ್ನು ಬಳಸಿ ತಾಯಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರ ದಿವಸದಂದು ಆದಿಶಕ್ತಿಯ ಆಲಯಕ್ಕೆ ಹೋಗಿ ದೀಪವನ್ನು ಹಚ್ಚಿ ಬರಬೇಕು.
ಹೌದು ನಿಂಬೆ ಹಣ್ಣನ್ನು ಹೋಳು ಮಾಡಿ ಇದಕ್ಕೆ ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಿ ನಮ್ಮ ಕಷ್ಟಗಳನ್ನು ಇದರ ಮುಂದೆ ಹೇಳಿಕೊಂಡು ಮನೆಗೆ ಹಿಂದಿರುಗುವುದರಿಂದ, ನಮ್ಮ ಜೀವನದಲ್ಲಿ ಎದುರಾಗುತ್ತ ಇರುವ ಕಷ್ಟಗಳು ಪರಿಹಾರ ಆಗುತ್ತದೆ.ಈ ನಿಂಬೆಹಣ್ಣಿನ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿವಸದಂದು ದೇವಿಯ ದೇವಾಲಯದಲ್ಲಿ ಹಚ್ಚಬೇಕು,
ಮಂಗಳವಾರದ ದಿವಸದಂದು ಸಂಜೆ ಮೂರೂವರೆ ಗಂಟೆಯಿಂದ ಐದು ಗಂಟೆಯವರೆಗೂ ಈ ನಿಂಬೆಹಣ್ಣಿನ ದೀಪವನ್ನು ಹಚ್ಚುವುದಕ್ಕೆ ಶ್ರೇಷ್ಠ ಸಮಯವಾಗಿದ್ದು, ಶುಕ್ರವಾರದ ದಿವಸದಂದು ನಿಂಬೆಹಣ್ಣಿನ ದೀಪವನ್ನು ಹಚ್ಚುವುದಕ್ಕೆ ಹತ್ತುವರೆ ಗಂಟೆಯಿಂದ ಹನ್ನೆರಡು ಗಂಟೆಯವರೆಗು ದೀಪವನ್ನು ಹಚ್ಚುವುದಕ್ಕೆ ಪ್ರಶಸ್ತವಾದ ಸಮಯ ಎಂದು ಹೇಳಲಾಗಿದೆ.
ಮನೆಯಲ್ಲಿ ಸಮಸ್ಯೆ ಬಂದವರೇ ಈ ನಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು ಅಂತ ಏನೂ ಇಲ್ಲ, ಈ ನಿಂಬೆಹಣ್ಣಿನ ದೀಪವನ್ನು ಮನೆಯ ಸದಸ್ಯರಲ್ಲಿ ಯಾರು ಬೇಕಾದರೂ ಹಚ್ಚಬಹುದು, ಹಾಗೆ ಒಂದೆ ಮನೆಯಲ್ಲಿ ಇಬ್ಬರು ಹೆಂಗಸರು ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು ಅಥವಾ ಮನೆಯಲ್ಲಿ ಮನೆಯ ಸದಸ್ಯರ ಹುಟ್ಟಿದ ದಿನ ಅಥವಾ ಮದುವೆಯಾದ ದಿವಸ ಆಗಿದ್ದರೆ, ಆ ದಿನವೂ ಕೂಡ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು ಎಂದು ಶಾಸ್ತ್ರಗಳು ತಿಳಿಸುತ್ತಿವೆ.
ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳು ನರ ದೃಷ್ಟಿ ಸಮಸ್ಯೆಯಿಂದ ಎದುರಾಗುತ್ತಿದ್ದರೆ, ತಾಯಿಯ ದೇವಾಲಯದಲ್ಲಿ ಒಂದು ನಿಂಬೆಹಣ್ಣನ್ನು ಪೂಜಿಸಿ ಇದನ್ನು ತಂದು, ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು, ಈ ರೀತಿ ಮಾಡುವುದರಿಂದ ಮನೆಯ ಆಗುವಂತಹ ನೇರ ದೃಷ್ಟಿ ಸಮಸ್ಯೆ ಅಥವಾ ಕೆಟ್ಟ ಶಕ್ತಿಯ ಪ್ರಭಾವ ಪರಿಹಾರವಾಗುತ್ತದೆ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.