ನಮ್ಮ ಜಗತ್ತಿನಲ್ಲಿ ಯಾವುದೇ ರೀತಿಯಾದಂತಹ ಸ್ವಾರ್ಥ ಇಲ್ಲದೆ ಜೀವನವನ್ನು ಸಾಗಿಸುತ್ತಿರುವ ಅಂತಹ ಜನರು ತುಂಬಾ ಕೆಲವೇ ಕೆಲವರು.ಇವತ್ತಿನ ಸಂದರ್ಭದಲ್ಲಿ ಒಂದು ರೂಪಾಯಿಯನ್ನು ಕೂಡ ರೋಡಿನಲ್ಲಿ ಸಿಕ್ಕರೆ ಸಾಕು ಅದನ್ನು ಬಳಸಿಕೊಂಡು ಜೇಬಿನಲ್ಲಿ ಹಾಕುವಂತಹ ಅದೆಷ್ಟು ಜನರನ್ನು ನಾವು ನೋಡಿರುತ್ತೇವೆ.ಆದರೆ ತಾವು ದುಡಿದ ಹಣ ಕೂಡಿಟ್ಟು ಅದರಿಂದ,
ಬೇರೆಯವರಿಗೂ ಕೂಡ ಹಂಚಿ ಅದರಿಂದ ಸಂತೋಷವನ್ನು ಪಡೆಯುವಂತಹ ಜನರು ಕೆಲವೇ ಕೆಲವು ನಮ್ಮ ಸಮಾಜದಲ್ಲಿ ಇರುತ್ತಾರೆ.ಹೀಗೆ ಈ ರೀತಿ ಅಂತಹ ಸಮಾಜದಲ್ಲಿ ಒಳ್ಳೆಯವರು ಕೂಡ ಇರುತ್ತಾರೆ ಸಮಾಜದಲ್ಲಿ ಇರುವಂತಹ ಬಡವರು ಹಾಗೂ ನಿರ್ಗತಿಕರನ್ನು ತಮ್ಮ ಮನೆಯ ನೆಂಟರ ಹಾಗೆ ನೋಡಿಕೊಳ್ಳುವಂತಹ ಸ್ವಾರ್ಥವಿಲ್ಲದೆಬೇರೆ ಜನರನ್ನು ಕೂಡ ಅವರ ಮನೆಯ ಜನರ ಹಾಗೆ ನೋಡಿಕೊಳ್ಳುವ ಹಾಗೆ ಇರುವಂತಹ ವ್ಯಕ್ತಿಗಳು ಕೂಡ ಇರುತ್ತಾರೆ.
ಇವತ್ತು ನಾವು ಹೇಳಲು ಹೊರಟಿರುವ ಅಂತಹ ವ್ಯಕ್ತಿಯ ಬಗ್ಗೆ ಕೇಳಿದರೆ ನೀವು ಒಂದು ಸಾರಿ ಚಕಿತರಾಗುತ್ತಾರೆ. ಸ್ನೇಹಿತರೆ ಇವರು ತಮ್ಮ ಮನೆಯಲ್ಲಿ ಇರುವಂತಹ ಹಾಗೂ ತಮ್ಮ ಅಚ್ಚುಮೆಚ್ಚಿನ ಕಾರನ್ನೇ ಬಡ ರೋಗಿಗಳ ಸೇವೆಗೆ ಬಳಸುತ್ತಿದ್ದಾರೆ. ಯಾರು ತಾನೇ ತಮ್ಮಗೆ ಇಷ್ಟಪಡುವಂತಹ ಕಾರನ್ನು ಬಡರೋಗಿಗಳ ಅಥವಾ ಬೇರೆಯವರ ಸೇವೆಗೆ ಮುಡಿಪಾಗಿರುವ ಹೇಳಿ.ನೀವೇನಾದರೂ ರೋಡಿನಲ್ಲಿ ಬೇರೆಯವರ ಕಾರಿನ ಮೇಲೆ ನಿಮ್ಮ ಕೈಯಲ್ಲಿ ತಪ್ಪಾಗಿ ಇದ್ದರೂ ಕೂಡ ಸಾಕು ಹಲವಾರು ಜನರು ನಿಮ್ಮ ಹತ್ತಿರ ಜಗಳಕ್ಕೆ ಬಂದು ಬಿಡುತ್ತಾರೆ ಆದರೆ ಇಲ್ಲೊಬ್ಬ ಪುಣ್ಯಾತ್ಮ ತಮ್ಮ ಮನೆಯಲ್ಲಿ ಇರುವಂತಹ ಹಾಗೂ ಎಲ್ಲರ ಅಚ್ಚುಮೆಚ್ಚಿನ ರಾಯಲ್ ಕಾರು ಬಡ ರೋಗಿಗಳ ಸೇವೆಗೆ ಮುಡಿಪಾಗಿಟ್ಟಿದ್ದಾರೆ.
ಹಾಗಾದ್ರೆ ಇವರ ಹೆಸರು ಏನು ಗೊತ್ತಾ ಹಾಗೂ ಇವರು ಮೂಲತಹ ಎಲ್ಲಿಯವರು ಹಾಗೂ ಯಾವ ಪ್ರದೇಶದಲ್ಲಿ ಇರುತ್ತಾರೆ ಎನ್ನುವುದರ ಬಗ್ಗೆ ಈಗಿನ ಮಾಹಿತಿ ಇದೆ. ಸ್ನೇಹಿತರೆ ಇವರ ಹೆಸರು ಚಿಕ್ಕಲಿಂಗಯ್ಯ ಅಂತ ಇವರು ಮೂಲತಹ ನಮ್ಮ ಮಂಡ್ಯ ಜಿಲ್ಲೆಯವರು. ಮಂಡ್ಯದಲ್ಲಿ ಬರುವಂತಹ ಮಾರೇನ ಗೌಡನ ಹಳ್ಳಿಯ ನಿವಾಸಿ ಇವರು. ಇವರು ಒಂದು ಸಾರಿ ತಮಗೆ ತುಂಬಾ ಇಷ್ಟಪಟ್ಟು ಕಂಡುಕೊಂಡಂತಹ ಅಂಬಾಸೆಡರ್ ಕಾರನ್ನು ತುಂಬಾ ವರ್ಷಗಳ ಕಾಲ ಬಳಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ ಅವರ ಹಳ್ಳಿಯಲ್ಲಿ ಯಾವುದೇ ರೀತಿಯಾದಂತಹ ಅಂಬುಲೆನ್ಸ್ ಸರ್ವಿಸ್ ಇಲ್ಲ. ಹಳ್ಳಿಯಿಂದ ಯಾವುದಾದರೂ ಒಂದು ಆಸ್ಪತ್ರೆಗೆ ಹೋಗಬೇಕು ಅಥವಾ ಯಾರಿಗಾದರೂ ನೋವು ಬಂದಿದ್ದೇ ಆದಲ್ಲಿ ಅವರು ಆಸ್ಪತ್ರೆಗೆ ಹೋಗಲು ಅಷ್ಟು ಸುಲಭದ ವಿಚಾರವಲ್ಲ.
ಇದಕ್ಕಾಗಿ ಇವರು ತಮ್ಮ ಮನೆಯಲ್ಲಿ ಇರುವಂತಹ ಅಂಬಾಸೆಡರ್ ಕಾರನ್ನು ಸುಮಾರು 30 ವರ್ಷಗಳ ಕಾಲ ಸಿಟ್ಟಿಗೆ ಯಾವುದೇ ಒಬ್ಬ ರೋಗಿ ಕಷ್ಟದಲ್ಲಿ ಇದ್ದಾಗ ಅವರ ಕಾರಣ ಬಳಸಲಾಗುತ್ತದೆ. ಇಲ್ಲಿವರೆಗೂ ಕೂಡ ಅವರ ಕಾರನ್ನ ಬಡ ವ್ಯಕ್ತಿಗಳಿಗೆ ಬಳಸುತ್ತಿದ್ದಾರೆ. ಚಿಕ್ಕಲಿಂಗಯ್ಯ ಮೊದಲು ಕಾರು ತೆಗೆದುಕೊಂಡಿದ್ದು ತಮ್ಮ ಮನೆಯವರ ಸಂತೋಷಕ್ಕಾಗಿ ಹಾಗೂ ಅವರ ಸುಖಕ್ಕಾಗಿ.
ಆದರೆ ಬರ್ತಾ ಬರ್ತಾ ಅವರ ಮನೆಯ ಮುಂದೆ ಹಾಗೂ ಅವರ ಹಳ್ಳಿಯಲ್ಲಿ ಜನರು ಕಷ್ಟಪಡುವುದು ನೋಡಿ ತುಂಬಾ ಮರುಗುತ್ತಾರೆ ಹಾಗೂ ತುಂಬಾ ಆಲೋಚನೆ ಒಳಗಾಗುತ್ತಾರೆ.ಆ ಸಂದರ್ಭದಲ್ಲಿ ತನ್ನ ಹತ್ತಿರ ಇರುವಂತಹ ಕಾರಣ ಯಾಕೆ ನಾವು ಆಂಬುಲೆನ್ಸ್ ತರ ಬಳಸಬಾರದು ಎನ್ನುವಂತಹ ವಿಚಾರ ಅವರ ತಲೆಗೆ ಬರುತ್ತದೆ.ಹೀಗೆ ಮಂಡ್ಯದಲ್ಲಿ ನಾಗಮಂಡಲ ಬಸರಾಳು ಮೈಸೂರು ಸೇರಿದಂತೆ ಹಲವಾರು ಹಳ್ಳಿಯಲ್ಲಿ ಇವರ ಕಾರುತ್ತದೆ ಹಾಗೂ ಗ್ರಾಮಸ್ಥರು ಯಾರಾದರೂ ಸಂಕಟದಲ್ಲಿ ಇದ್ದಾಗ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತಹ ಕೆಲಸ ಆಗಿ ಕಾರಿನ ಜೊತೆಗೆ ಆಗುತ್ತದೆ.ಇಷ್ಟೊಂದು ಮಾನವೀಯತೆ ಹಾಗೂ ಇಷ್ಟೊಂದು ಒಳ್ಳೆಯ ಗುಣವನ್ನ ಹೊಂದಿರುವಂತಹ ಈ ವ್ಯಕ್ತಿಗೆ ಮಂಡ್ಯದಲ್ಲಿ ಹಾಗೂ ಮೈಸೂರಿನಲ್ಲಿ ತುಂಬಾ ಜನರು ಶ್ಲಾಗನೀಯ ವ್ಯಕ್ತಪಡಿಸುತ್ತಾರೆ.
ಅದು ಏನೇ ಇರಲಿ ತಮ್ಮ ಹತ್ತಿರ ಒಂದು ಪರ್ಸೆಂಟು ಕೂಡ ಸ್ವಾರ್ಥವನ್ನು ಇಟ್ಟುಕೊಳ್ಳದೆನೈಸರ್ಗಿಕವಾಗಿ ನಾವು ಬದುಕುತ್ತಿದ್ದೇವೆ ನಾವು ಪ್ರಕೃತಿಯಲ್ಲಿ ಕೆಲವೇ ಕೆಲವು ದಿನಗಳ ಕಾಲ ವಾಸಮಾಡುತ್ತವೆ ಆ ಸಂದರ್ಭದಲ್ಲಿ ಯಾಕೆ ನಾವು ಬೇರೆಯವರ ಬಗ್ಗೆ ಅಸಹ್ಯವನ್ನು ಕಟ್ಟಿಕೊಳ್ಳಬೇಕು ಹಾಗೂ ಅವರನ್ನ ಯಾಕೆ ನಾವು ಬೇರೆ ರೀತಿಯಲ್ಲಿ ಕಾಣಬೇಕು ಎನ್ನುವಂತಹ ದೃಷ್ಟಿಯಿಂದ ಬಡವರನ್ನ ತನ್ನ ಕುಟುಂಬದ ಸದಸ್ಯರ ರೀತಿಯಾಗಿ ನೋಡಿಕೊಳ್ಳುವಂತಹ ಒಂದು ವಿಶೇಷವಾದ ಗುಣವನ್ನ ಹೊಂದಿದ್ದಾರೆ ಇವರಿಗೆ ದೇವರು ಇನ್ನಷ್ಟು ಆಯುಷ್ಯವನ್ನು ಕೊಡಬೇಕು ಹಾಗೂ ಉತ್ತಮವಾದಂತಹ ಆರೋಗ್ಯನ ಕೊಡಬೇಕು ಹೀಗೆ ಅವರಿಗೆ ಕೊಟ್ಟು ಇನ್ನಷ್ಟು ಜನರನ್ನು ನೋಡುವಂತಹ ಶಕ್ತಿಯನ್ನು ಕೊಡಲಿ ಎನ್ನುವುದು ನಮ್ಮ ಆಶಯ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.