ಆರೋಗ್ಯ ಎಂಬುದು ಭಾಗ್ಯ ಎಂಬುದನ್ನ ನಾವು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ತುಂಬಾ ಚಿಕ್ಕವಯಸ್ಸಿನಲ್ಲಿಯೇ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಕಾಣಿಸುತ್ತವೆ.
ಅದರಲ್ಲೂ ಕೂಡ ಮುಖ್ಯವಾಗಿ ಸೊಂಟನೋವು ಬೆನ್ನುನೋವು ಕಿಡ್ನಿ ಸಮಸ್ಯೆ ಕಾಲು ನೋವು ಈ ರೀತಿ ಸಣ್ಣಪುಟ್ಟ ಸಮಸ್ಯೆಗಳು ಹೆಚ್ಚು ತೊಂದರೆ ಕೊಡುವುದನ್ನು ನಾವು ಗಮನಿಸಬಹುದಾಗಿದೆ ಆದರೆ ಈ ಸಮಸ್ಯೆಗಳಿಂದ ನಾವು ಪರಿಹಾರ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಏಕೆಂದರೆ ಸೊಂಟ ನೋವು ಇದ್ದಾಗ ಅದಕ್ಕೆ ಸಂಬಂಧಪಟ್ಟ ಹಾಗೆ ಚಿಕಿತ್ಸೆ ಪಡೆದುಕೊಂಡರೆ ನಂತರದ ದಿನಗಳಲ್ಲಿ ಮಂಡಿನೋವು ಆರಂಭವಾಗಿರುತ್ತದೆ.
ಇನ್ನೂ ಸ್ವಲ್ಪ ದಿನ ಹೋದರೆ ಕಿಡ್ನಿಯ ಸಮಸ್ಯೆ ಈ ರೀತಿ ಒಂದಲ್ಲ 1 ಸಮಸ್ಯೆ ಗಳಿಂದ ನಾವು ಪ್ರತಿನಿತ್ಯ ಬಳಲುತ್ತಿರುತ್ತೇವೆ ಈ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವುದು ಅಷ್ಟು ಸುಲಭವಲ್ಲ ಏಕೆಂದರೆ ತುಂಬಾ ವಿಧದ ಚಿಕಿತ್ಸೆಗಳನ್ನು ಪಡೆಯಬೇಕು ಆದರೆ ನಮ್ಮ ಪೂರ್ವಿಕರು ಹೇಗೆ ಅಷ್ಟೊಂದು ಆರೋಗ್ಯವಾಗಿದ್ದರೂ ಅವರು ಯಾವ ರೀತಿಯಾದ ಆಹಾರವನ್ನ ಸೇವಿಸುತ್ತಿದ್ದರು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.
ಆರೋಗ್ಯದ ವಿಷಯಕ್ಕೆ ಬಂದಾಗ ಆಹಾರ ಅದರಲ್ಲಿ ತುಂಬ ಒಳ್ಳೆಯ ಪಾತ್ರವನ್ನು ನಿರ್ವಹಿಸುತ್ತದೆ ನಮ್ಮ ಪೂರ್ವಜರು ಅಥವಾ ಹಿರಿಯರು ತುಂಬಾ ವರ್ಷಗಳ ಕಾಲ ಆರೋಗ್ಯವಾಗಿ ಬದುಕುತ್ತಿದ್ದರು ಆದರೆ ಈಗ ಅದು ನಮಗೆ ಯಾಕೆ ಆಗುವುದಿಲ್ಲ ಎಂದರೆ ನಮ್ಮ ಆಹಾರ ಪದ್ಧತಿ ಈ ನಮ್ಮ ಆಹಾರ ಪದ್ಧತಿ ತುಂಬಾ ಹಾಳಾಗಿರುವುದನ್ನು ನಾವು ಗಮನಿಸಬಹುದಾಗಿದೆ ಈ ಆಹಾರ ಪದ್ದತಿಯಿಂದ ನಾವು ನಮ್ಮ ಆರೋಗ್ಯವನ್ನು ಕೂಡ ಕಡೆಗಣಿಸುತ್ತಿದ್ದೇವೆ ಮತ್ತು ನಾವು ಯಾವ ರೀತಿಯಾಗಿ ಫಾಸ್ಟ್ ಫುಡ್ ಗಳನ್ನು ತಿನ್ನುತ್ತಿದ್ದೆವು ಅವು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದನ್ನು ಗಮನಿಸಬಹುದಾಗಿದೆ.
ನಮ್ಮ ಪೂರ್ವಜರ ಆಹಾರ ಹೇಗಿತ್ತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ ಅವರು ಸೇವಿಸುತ್ತಿದ್ದ ಗೆಡ್ಡೆಗೆಣಸು ಆಹಾರ ಪದಾರ್ಥಗಳು ಎಲ್ಲವೂ ಕೂಡ ಉತ್ತಮವಾಗಿರುತ್ತಿತ್ತು ಆದರೆ ಈಗಿನ ದಿನಗಳಲ್ಲಿ ಅವೆಲ್ಲವೂ ಕೂಡ ಕಲಬೆರಕೆ ಆಗಿದೆ ಆದ್ದರಿಂದ ಈಗ ನಾವು ಹೇಳಿದಂತೆ 1 ಮನೆ ಮದ್ದನ್ನು ಮಾಡಿ ಖಂಡಿತವಾಗಿಯೂ ನೀವು ಸ್ವಲ್ಪ ಮಟ್ಟಿಗಾದರೂ ಆರೋಗ್ಯದ ವಿಷಯದಲ್ಲಿ ಚೇತರಿಕೆಯನ್ನು ಕಂಡುಕೊಳ್ಳುತ್ತೀರಿ.
ಆ ಮನೆ ಮದ್ದು ಯಾವುದೆಂದರೆ ಮರಗೆಣಸು ಸರ್ವೇಸಾಮಾನ್ಯವಾಗಿ ಈ ಮರಗೆಣಸನ್ನು ನಾವೆಲ್ಲರೂ ನೋಡಿರುತ್ತೇವೆ ಮತ್ತು ತಿಂದು ಇರುತ್ತೇವೆ ಆದರೆ ಈ ಮನೆಮದ್ದನ್ನು ನಾವು ಮನೆಗೆ ತಂದ ಮೇಲೆ ಅದರ ಮೇಲಿನ ಸಿಪ್ಪೆಯನ್ನು ತೆಗೆದು ಅದರ ಒಳಗಿನ ಭಾಗವನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಅದಾದ ನಂತರ ಆ ನೀರನ್ನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನಿಯಮಿತವಾಗಿ ಕುಡಿಯುತ್ತಾ ಬರಬೇಕು ಅಂದರೆ ಪ್ರತಿನಿತ್ಯವೂ ಕೂಡ ಬೆಳಗಿನ ಸಮಯದಲ್ಲಿ ಈ ನೀರನ್ನು ಕುಡಿಯುತ್ತಾ ಬರುವುದರಿಂದ, ಖಂಡಿತವಾಗಿಯೂ ನಿಮಗೆ ಇರುವಂಥ ಸೊಂಟ ನೋವು ಬೆನ್ನು ನೋವು ಮಂಡಿನೋವು ಕಾಲುನೋವು ಮತ್ತೆ ಕಿಡ್ನಿಗೆ ಸಂಬಂಧಪಟ್ಟ ಹಾಗೆ ಯಾವುದೇ ಸಮಸ್ಯೆಗಳಿದ್ದರೂ ನೀವು ನಿವಾರಣೆಯನ್ನ ಪಡೆಯಬಹುದು.
ಇದು ಸುಲಭವಾದ ಧಾಮನೆ ಮತ್ತು ಏಕೆಂದರೆ ಮರಗೆಣಸನ್ನು ನಾವು ಸರ್ವೇಸಾಮಾನ್ಯವಾಗಿ ಮನೆಯಲ್ಲಿ ಆಹಾರದೊಂದಿಗೆ ಬಳಸುತ್ತೇವೆ.ಅದನ್ನ ಸ್ವಲ್ಪ ವ್ಯತ್ಯಾಸದೊಂದಿಗೆ ಈ ರೀತಿಯಲ್ಲಿ ಬಳಸುವುದರಿಂದಾಗಿ ಹೆಚ್ಚು ಖರ್ಚು ಬರುವುದಿಲ್ಲ ಮತ್ತು ಹೆಚ್ಚು ಶ್ರಮವು ಆಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಇದು ತುಂಬಾ ಸುಲಭವಾದ ಮನೆಮದ್ದು ಮತ್ತು ಯಾವುದೇ ರೀತಿಯಾದಂತಹ ಅಡ್ಡಪರಿಣಾಮ ಇಲ್ಲದೆ ಇರುವುದರಿಂದ ಒಮ್ಮೆ ಪ್ರಯತ್ನಿಸಿ ನೋಡಿ ನಿಮಗೆ ಪರಿಹಾರ ಸಿಕ್ಕರೆ ಖಂಡಿತವಾಗಿಯೂ ಇದರ ಉಪಯೋಗ ಇರುವವರಿಗೆ ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು .
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.