ಕಿಡ್ನಿಯಲ್ಲಿ ಕಲ್ಲು ಆಗೋದಕ್ಕೆ ಕಾರಣವೇನು ಮತ್ತು ಕಿಡ್ನಿಯಲ್ಲಿ ಕಲ್ಲು ಹೇಗೆ ಉಂಟಾಗುತ್ತದೆ ಮತ್ತು ಇದಕ್ಕೆ ಮನೆ ಮದ್ದು ಇದೆಯಾ? ಈ ಎಲ್ಲ ಮಾಹಿತಿ ಕುರಿತು ನೀವು ಕೂಡ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು, ನಿಮಗೂ ಕೂಡ ಈ ಸಮಸ್ಯೆ ಕಾಡುತ್ತಿದ್ದಲ್ಲಿ ನಿಮ್ಮ ಈ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಿ ನಾವು ತಿಳಿಸುವ ಸುಲಭ ಪರಿಹಾರದ ಮೂಲಕ.
ಹೌದು ಸಾಕಷ್ಟು ಪರಿಹಾರಗಳನ್ನ ಈಗಾಗಲೇ ನಿಮಗೆ ನಿಮ್ಮ ಹಲವು ಸಮಸ್ಯೆಗಳಿಗೆ ತಿಳಿಸಿಕೊಟ್ಟಿದ್ದೇವೆ ಇವತ್ತಿನ ಲೇಖನದಲ್ಲಿ ನಾವು ಈ ಕಿಡ್ನಿಯಲ್ಲಿ ಕಲ್ಲಿನ ಕುರಿತು ಮಾತನಾಡುತ್ತಿದ್ದೇವೆ, ಜೊತೆಗೆ ಈ ಕಿಡ್ನಿ ಅಲ್ಲಿ ಆಗಿರುವ ಕಲ್ಲಿನ ಸಮಸ್ಯೆಗೆ ಅದನ್ನ ನಿವಾರಣೆ ಮಾಡಿಕೊಳ್ಳುವುದಕ್ಕೆ ಪರಿಹಾರವನ್ನು ಕೂಡ ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಕಿಡ್ನಿಯಲ್ಲಿ ಕಲ್ಲು ಆಗೋದಕ್ಕೆ ಸಾಮಾನ್ಯ ಕಾರಣಗಳು ಅಂದರೆ ಹೆಚ್ಚು ನೀರು ಕುಡಿಯದೆ ಹೋಗೋದು ಹೌದು ಊಟ ಮಾಡಿದ ಮೇಲೆ ನಾವು ಸರಿಯಾದ ಪ್ರಮಾಣದ ನೀರು ಕುಡಿಯಬೇಕು ಇದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ ಆಗ ದೇಹದಲ್ಲಿ ಕೆಲವೊಂದು ರಿಯಾಕ್ಷನ್ ಗಳು ಆಗ ಆಗೋದಿಲ್ಲನೀರು ಕುಡಿಯದೆ ಹೋದಾಗ ಏನಾಗುತ್ತದೆ ಎಂದರೆ ಪ್ರೈಮರಿ ಸೆನ್ಸ್ ಗಳು ಕಿಡ್ನಿ ಒಳಗೆ ಶೇಖರಣೆ ಆಗಿ ಇದು ಕಲ್ಲಾಗಿ ಪರಿವರ್ತನೆ ಗೊಳ್ಳುತ್ತವೆ.
ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಅದರ ಲಕ್ಷಣಗಳು ಏನು ಅಂದರೆ, ಸೊಂಟದ ಹಿಂಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಮತ್ತು ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುವುದು ಅಥವಾ ಮೂತ್ರ ವಿಸರ್ಜನೆ ಸರಿಯಾಗಿ ಆಗದೇ ಇರುವುದು ಕೆಲವೊಂದು ಬಾರಿ ಕೆಲವರಿಗೆ ಮೂತ್ರವಿಸರ್ಜನೆ ಮಾಡುವಾಗ ರಕ್ತಸ್ರಾವ ಕೂಡ ಉಂಟಾಗುತ್ತದೆ ಇದೆ ಈ ಸಮಸ್ಯೆಯ ಲಕ್ಷಣಗಳು.
ಹಿರಿಯರು ಹೇಳುತ್ತಾರೆ ನಮ್ಮ ಮನೆಯ ಅಡುಗೆ ಮನೆಯೇ ಔಷಧಾಲಯ ವಾಗಬೇಕು ಮತ್ತು ನಾವು ಸೇವಿಸುವ ಆಹಾರವೇ ಔಷಧಿ ಆಗಬೇಕು ಅಂತ.ಯಾಕೆ ಅಂದರೆ ನಮ್ಮ ನೆಲದ ಆಹಾರ ದ ಶಕ್ತಿ ಸಾಮರ್ಥ್ಯವೇ ಹಾಕಿದೆ ಇದು ನಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ನಮಗೆ ಬರುವ ಹಲವು ಸಮಸ್ಯೆಗಳಿಗೆ ನೈಸರ್ಗಿಕವಾಗಿ ನಮ್ಮ ದೇಹಕ್ಕೆ ಶಕ್ತಿ ನೀಡಿ ಇರುವ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.
ಅದಕ್ಕಾಗಿಯೇ ಹಿರಿಯರು ಸೇವಿಸುತ್ತಿದ್ದ ಆಹಾರ ಪದಾರ್ಥಗಳು ರುಚಿಯಿಲ್ಲದೆ ಇದ್ದರೂ ಆರೋಗ್ಯಕ್ಕೆ ಪುಷ್ಟಿ ನೀಡುತ್ತಿತ್ತು ಮತ್ತು ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳು ಹತ್ತಿರವೂ ಸುಳಿಯುತ್ತಿರಲಿಲ್ಲಾ, ಆದರೆ ಇವತ್ತಿನ ದಿನದ ಆಹಾರ ಪದ್ದತಿ ಜೀವನ ಶೈಲಿ ಹೇಗಾಗಿದೆ ಎಂಬುದು ಕಣ್ಣೆದುರೇ ಕಾಣುತ್ತಿದ್ದೇವೆ.
ಕಿಡ್ನಿಯಲ್ಲಿ ಉಂಟಾಗಿರುವ ಈ ಕಲ್ಲನ ಕರಗಿಸುವುದಕ್ಕೆ ಪರಿಹಾರದ ಕುರಿತು ಹೇಳುವುದಕ್ಕೂ ಮೊದಲು ಮತ್ತೊಂದು ವಿಚಾರವನ್ನು ಹೇಳಬೇಕು ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನು ತೆಗೆದುಹಾಕಲು ಔಷಧಿಗಳನ್ನು ನೀವು ಎಷ್ಟೇ ಬಳಸಿದರೂ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ ಅದು ಏನೆಂದರೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದು ಉತ್ತಮ.
ಇದರ ಜೊತೆಗೆ ಆಯುರ್ವೇದದ ಮೂಲಕ ನೀವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾದರೆ ಇದಕ್ಕಾಗಿ ಬೇಕಾಗಿರುವುದು ಬಾಳೆದಿಂಡು ಈ ಬಾಳೆದಿಂಡಿನ ಒಳಭಾಗದಲ್ಲಿ ಟ್ಯೂಬ್ ಲೈಟ್ ಆಕಾರದಲ್ಲಿ ಪದಾರ್ಥವೊಂದು ಇರುತ್ತದೆ. ಅದನ್ನು ತೆಗೆದುಕೊಂಡು ಸಣ್ಣಗೆ ಕತ್ತರಿಸಿಕೊಂಡು ಜ್ಯೂಸ್ ಮಾಡಿಕೊಂಡು, ಇದಕ್ಕೆ ಬೇಕಾದಷ್ಟು ಕಲ್ಲುಸಕ್ಕರೆ ಅಥವಾ ಏಲಕ್ಕಿ ಪುಡಿಯನ್ನು ಮಿಶ್ರಮಾಡಿ ಇದನ್ನ ಕುಡಿಯುತ್ತ ಬರಬೇಕು.
ಈ ರೀತಿ ಮಾಡುವುದರಿಂದ ಈ ಜ್ಯೂಸನ್ನು ಪ್ರತಿನಿತ್ಯ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಕಲ್ಲು ಕರಗುತ್ತದೆ ಮೂತ್ರದ ಮೂಲಕ ಶರೀರದಿಂದ ಆಚೆ ಹೋಗುತ್ತದೆ ನೀವು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಈ ರೀತಿಯ ಪರಿಹಾರವನ್ನು ಪಾಲಿಸಿ ಖಂಡಿತ ಫಲಿತಾಂಶ ಕಂಡುಕೊಳ್ಳುತ್ತೀರಿ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.