ಕೇವಲ ಒಂದು ರೂಪಾಯಿ ನಾಣ್ಯವನ್ನ ನಿಮ್ಮ ಮನೆಯ ಈ ಜಗದಲ್ಲಿ ಇಟ್ಟು ಹೀಗೆ ಮಾಡಿ ನೋಡಿ ಸಾಕು… ಶ್ರೀಮಂತಿಕೆ ನಿಮ್ಮನ್ನ ಬೇಡ ಬೇಡ ಅಂದ್ರು ಸಹ ಹಿಂಬಾಲಿಸಿಕೊಂಡು ಬರುತ್ತೆ…ಅಷ್ಟಕ್ಕೂ ಹೇಗೆ ಮಾಡೋದು ಗೊತ್ತ ..

1213

ಏಕಾದಶಿಯ ದಿನ ಈ ಒಂದು ರೂಪಾಯಿಯ ನಾಣ್ಯದಿಂದ ನೀವೇನಾದರೂ ಈ ಒಂದು ಪರಿಹಾರವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಷ್ಟಗಳು ನಿವಾರಣೆಯಾಗಿ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ ಮತ್ತು ಮನೆಯಲ್ಲಿ ಎದುರಾಗುತ್ತಿರುವ ತೊಂದರೆಗಳು ಕಷ್ಟ ನಷ್ಟಗಳು ಕೂಡ ಪರಿಹಾರ ಆಗುವುದಲ್ಲದೆ,ನಿಮ್ಮ ಜೀವನದಲ್ಲಿ ಲಕ್ಷ್ಮಿ ದೇವಿಯ ಕೃಪೆಯಿಂದ ನೀವು ಉನ್ನತ ಸ್ಥಾನಕ್ಕೆ ಏರುವ ಒಂದು ಅವಕಾಶಗಳು ನಿಮಗೆ ಒಲಿದು ಬರುತ್ತದೆ. ತಪ್ಪದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಇವನು ಸುಲಭ ಪರಿಹಾರಗಳನ್ನು ನೀವು ಪ್ರತಿ ತಿಂಗಳು ಬರುವ ಏಕಾದಶಿಯ ದಿವಸದಂದು ಮಾಡುತ್ತಾ ಬಂದರೆ ಸಾಕು, ನಿಮ್ಮ ಜೀವನದಲ್ಲಿ ಬರುವ ಕಷ್ಟಗಳು ಪರಿಹಾರಗೊಳ್ಳುತ್ತದೆ.

ಈ ಏಕಾದಶಿ ಪ್ರತಿ ತಿಂಗಳು ಕೂಡ ಬರುತ್ತದೆ ನೀವು ಕ್ಯಾಲೆಂಡರ್ ನ ಸಹಾಯದಿಂದ ಈ ದಿವಸವನ್ನು ನೋಡಿಕೊಳ್ಳಿ ತಪ್ಪದೇ ಈ ಏಕಾದಶಿಯ ದಿನದಂದು ಈ ಒಂದು ಪರಿಹಾರವನ್ನು ಮಾಡಿ ಹಾಗೆ ಈ ಏಕಾದಶಿಯ ದಿನ ಒಂದು ವೈಶಿಷ್ಟ್ಯತೆಯ ಕಾಲವಿರುತ್ತದೆ ವೈಶಿಷ್ಟ್ಯತೆಯ ಸಮಯವಿರುತ್ತದೆ,ಈ ದಿವಸದಂದು ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ವಿಷ್ಣು ದೇವನ ಪೂಜೆಯನ್ನು ಮಾಡಬೇಕು, ಅದರಲ್ಲಿಯೂ ಕನ್ಯೆಯರು ಮದುವೆ ಆಗಬೇಕು ಅನ್ನುವವರು ಅಥವಾ ಮದುವೆ ತಡವಾಗುತ್ತಿದ್ದರೆ ಈ ಒಂದು ದಿವಸದಂದು ವಿಷ್ಣು ದೇವರ ಪೂಜೆಯನ್ನು ಮಾಡಬೇಕು.

ಏಕಾದಶಿಯ ದಿವಸದಂದು ವ್ರತ ಮಾಡುವಂತಹ ಹೆಣ್ಣು ಮಕ್ಕಳು ಬೆಳಗ್ಗೆಯೇ ಸೂರ್ಯೋದಯಕ್ಕೂ ಮುನ್ನ ಎದ್ದು ದೇವರ ಮನೆಯನ್ನು ಸ್ವಚ್ಛ ಮಾಡಿ ಪೂಜೆಯನ್ನು ಮಾಡಬೇಕು. ವಿಷ್ಣು ದೇವನ ಪೂಜೆಯಲ್ಲಿ ಏಕಾದಶಿಯ ದಿವಸದಂದು ವಿಷ್ಣುವಿಗೆ ಬಾಳೆಹಣ್ಣನ್ನು ನೈವೇದ್ಯ ಆಗಿ ಸಮರ್ಪಿಸ ಬೇಕಾಗುತ್ತದೆ.ಈ ಏಕಾದಶಿಯ ದಿವಸದಂದು ಉಪವಾಸವನ್ನು ಮಾಡಬೇಕು ನಂತರ ಈ ಪರಿಹಾರವನ್ನು ಮಾಡಬೇಕಾಗುತ್ತದೆ ಈ ಪರಿಹಾರವನ್ನು ಮಾಡುವ ಪೂರ್ಣ ವಿವರ ಅಂದರೆ, ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳುವುದಕ್ಕಾಗಿ ಅಥವಾ ಮದುವೆ ವಿಳಂಬ ಆಗುತ್ತಿದೆ ಅನ್ನುವವರು ಈ ಪರಿಹಾರವನ್ನು ಮಾಡಿ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಮನೆಯನ್ನು ಸ್ವಚ್ಛ ಪಡಿಸಿ ದೇವರ ಪೂಜೆಯನ್ನು ಮಾಡಬೇಕು ಈ ದೇವರ ಪೂಜೆಯಲ್ಲಿ ವಿಷ್ಣುವಿಗೆ ಬಾಳೆಹಣ್ಣಿನ ಸಮರ್ಪಿಸಿದ ನಂತರ ದೀಪಾರಾಧನೆ ಯನ್ನು ಮಾಡಿ ಮತ್ತು ಮನೆಯ ಮುಂದೆ ಹೊಸ್ತಿಲನ್ನು ತೊಳೆದು ಹೊಸ್ತಿಲಿನ ಮುಂದೆ ರಂಗೋಲಿಯನ್ನು ಬಿಡಬೇಕು.

ಪ್ರತಿ ದಿನ ಮನೆಯ ಮುಂದೆ ರಂಗೋಲಿಯನ್ನು ಬಿಡುವುದು ಅವಶ್ಯಕವಾಗಿರುತ್ತದೆ ಯಾಕೆ ಎಂದರೆ ನಮ್ಮ ಸಂಪ್ರದಾಯದಲ್ಲಿ ರಂಗೋಲಿಗೆ ಒಂದು ವಿಶೇಷವಾದ ಸ್ಥಾನಮಾನ ಗೌರವವನ್ನು ನೀಡಲಾಗಿದೆ,ಅದೇ ರೀತಿ ಈ ಏಕಾದಶಿಯ ದಿವಸದಂದು ಕೂಡ ರಂಗೋಲಿಯನ್ನು ಬಿಟ್ಟು ಹೊಸ್ತಿಲಿನ ಕೆಳಭಾಗದಲ್ಲಿ ಒಂದು ಪರಿಹಾರವನ್ನು ಈ ಏಕಾದಶಿಯ ದಿವಸದಂದು ಮಾಡಬೇಕು, ಅದೇನೆಂದರೆ ಒಂದು ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕು, ಇದಕ್ಕೆ ಶುಭ್ರವಾದ ನೀರನ್ನು ಹಾಕಿ ಐದು ರೂಪಾಯಿಯ ಒಂದೊಂದು ರೂಪಾಯಿ ನಾಣ್ಯವನ್ನು ಇದರೊಳಗೆ ಇರಿಸಬೇಕು.

ಈ ರೀತಿ ಮಾಡಿದ ನಂತರ ಈ ಒಂದು ತಾಮ್ರದ ಚೊಂಬನ್ನು ಹೊಸ್ತಿಲಿನ ಒಳಭಾಗದಲ್ಲಿ ಅಂದರೆ ಸಿಂಹ ದ್ವಾರದ ಒಳಮುಖವಾಗಿ ಈ ಸಿಂಹ ದ್ವಾರದ ಹಿಂದೆ ಇಡಬೇಕು, ಇದನ್ನು ನೀವು ಏಕಾದಶಿಯ ದಿವಸ ದಂದು ಮಾಡುವುದರಿಂದ ನಿಮ್ಮ ಮನೆಯಲ್ಲಿ ಎದುರಾಗುತ್ತಿರುವ ಕಷ್ಟಗಳು ಪರಿಹಾರಗೊಂಡು, ಆ ಎಲ್ಲ ಕಷ್ಟಗಳಿಗೂ ಪರಿಹಾರವೂ ಕೂಡ ನಿಮಗೆ ದೊರೆಯುತ್ತದೆ ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವು ಕೂಡ ನಿಮ್ಮ ಮನೆಯ ಮೇಲೆ ಆಗುತ್ತದೆ