ಕೇವಲ ಲಾಭ ನಷ್ಟದ ಬಗ್ಗೆ ಆಲೋಚನೆ ಮಾಡದೆ ಸೇವೆ ಮಾಡಿದರೆ ಜೀವನದಲ್ಲಿ ಲಾಭ ಸಿಕ್ಕಾಪಟ್ಟೆ ಸಿಗುತ್ತೆ ಅನ್ನೋದಕ್ಕೆ ಈ ಕಥೆ ಒಳ್ಳೆ ಉಧಾಹರಣೆ..

ನಮಸ್ತೆ ಪ್ರಿಯ ಸ್ನೇಹಿತರೇ ನಾವು ಜೀವನದಲ್ಲಿ ಪ್ರತಿನಿತ್ಯ ಏನಾದರೂ ಕಲಿಯುತ್ತಲೇ ಇರುತ್ತೇವೆ ಅಲ್ವಾ ಅದೇ ರೀತಿ ನಾವು ಕೆಲವೊಂದು ಬಾರಿ ಬೇರೆಯವರಿಗೆ ಸಹಾಯ ಮಾಡುವಂತಹ ಸಮಯ ಬರುತ್ತದೆ ಅಥವಾ ಬೇರೆಯವರಿಂದ ಸಹಾಯ ತೆಗೆದುಕೊಳ್ಳುವಂತಹ ಸಮಯ ಕೂಡ ಬರಬಹುದು ಆದರೆ ನೀವು ಯಾರಿಗಾದರೂ ಸಹಾಯ ಮಾಡಿದಲ್ಲಿ ಅದನ್ನು ನಿಷ್ಕಲ್ಮಶ ಹೃದಯದಿಂದ ಮಾಡಿ ಹೌದು ನೀವು ಸೇವೆ ಮಾಡುವ ಮನೋಭಾವವನ್ನು ಹೊಂದಿದ್ದರೆ ಅದನ್ನು ಯಾವತ್ತಿಗೂ ನಿಷ್ಕಲ್ಮಶದಿಂದ ಮಾಡಬೇಕು ಅದರಿಂದ ಪ್ರಯೋಜನ ಇದೆಯೋ ಇಲ್ಲವೋ ಎಂಬ ಆಲೋಚನೆ ಬೇಡ. ಏನು ನೀವು ಯಾವುದೇ ನಿರೀಕ್ಷೆಯಿಲ್ಲದೆ ಸಹಾಯ ಅಥವಾ ಸೇವೆ ಮಾಡಿದಾಗ ಮಾತ್ರ, ಸೇವೆಮಾಡಿದ ತೃಪ್ತಿಯಿಂದ ನಿಮ್ಮ ಮನಸ್ಸು ಶಾಂತಿಯನ್ನು ಪಡೆಯುತ್ತದೆ. ನಾವು ಸೇವೆಯ ಬದಲು ಪ್ರತಿಫಲವನ್ನು ಯೋಚಿಸಿದರೆ ಮನಸ್ಸು ಶಾಂತಿಯುತವಾಗಿ ಇರುವುದಿಲ್ಲಾ ಎಂದು ಹಿರಿಯರು ಹೇಳಿದ್ದಾರೆ ಮತ್ತು ಇದನ್ನು ಪುರಾಣಗಳಲ್ಲಿ ಹೇಳಲಾಗಿದೆ ಸಹ. ಇಂದು ಅದೇ ರೀತಿಯ ಒಂದು ಜನಪದ ಕಥೆಯ ಕುರಿತು ನಿಮಗೆ ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಹೌದು ಒಬ್ಬ ಸಂತ ಬಹಳ ವರುಷಗಳ ಹಿಂದೆ ನದಿಯ ದಡದಲ್ಲಿ ಗುಡಿಸಲು ಹಾಕಿಕೊಂಡು ಊರಿನಿಂದ ದೂರದಲ್ಲಿ ವಾಸ ಮಾಡುತ್ತಾ ಇರುತ್ತಾನೆ.

ಗುಡಿಸಲನ್ನು ಆಶ್ರಮ ಮಾಡಿಕೊಂಡು ಒಬ್ಬನೇ ಇದ್ದನು ಅವನ ಆಶ್ರಮದ ಆವರಣದಲ್ಲಿ ಉದ್ದನೆಯ ಹುಲ್ಲು ದಟ್ಟವಾಗಿ ಬೆಳೆದಿತ್ತು. ಈ ರೀತಿಯ ಹುಲ್ಲುಗಳನ್ನು ಬಳಸಿಕೊಂಡು ಬುಟ್ಟಿ ಮಾಡುವುದು ತಿಳಿದಿದ್ದು ಆ ಸಂತನಿಗೆ ಆ ದಿನ ತನ್ನ ದಿನನಿತ್ಯದ ಧ್ಯಾನ ಮಾಡಿ ಆಶ್ರಮವನ್ನು ಸ್ವಚ್ಚಗೊಳಿಸಿದ ಮೇಲೆ ಸುಮ್ಮನೆ ಕೂರುವುದು ಯಾಕೆ ಎಂದು ಹುಲ್ಲಿನಿಂದ ಬುಟ್ಟಿಯನ್ನು ಮಾಡಿದನು ಬಹಳ ವರುಷಗಳಾದ ಮೇಲೆ ಮಾಡಿದ ಕೆಲಸ ಸಂತನಿಗೆ ಬಹಳ ಇಷ್ಟವಾಗಿತ್ತು. ಬುಟ್ಟಿ ಮಾಡಿದ ನಂತರ ಇದರಿಂದ ನನಗೆ ಏನು ಪ್ರಯೋಜನವಿಲ್ಲಾ, ನಾನು ಇಟ್ಟುಕೊಂಡು ಏನು ಮಾಡುವುದು ಎಂದು ನದಿಯಲ್ಲಿ ತೇಲಿ ಬಿಟ್ಟನು ಮರುದಿನ ಸಂತ ಮತ್ತೆ ಬುಟ್ಟಿಯನ್ನು ಮಾಡಿ ನದಿಗೆ ಎಸೆದನು ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಲಿಲ್ಲ. ಇದರಿಂದ ಸಂತನಿಗೆ ಮತ್ತಷ್ಟು ಖುಷಿಯಾಯಿತು ಇನ್ನೂ ವೇಗವಾಗಿ ಮಾಡಬಹುದು ಎಂದು ಪ್ರತಿದಿನ ಬುಟ್ಟಿಯನ್ನು ತಯಾರಿಸುವುದು ನದಿಯಲ್ಲಿ ತೇಲಿ ಬಿಡುವುದು ಇದನ್ನೇ ಅಭ್ಯಾಸ ಮಾಡಿಕೊಂಡು ಇದರಿಂದ ಸಂತನ ಮನಸ್ಸಿಗೆ ಖುಷಿಯಾಗುತ್ತಿತ್ತು.

ಒಂದು ದಿನ ಸಂತ ನಾನು ಈ ಕೆಲಸವನ್ನು ವ್ಯರ್ಥವಾಗಿ ಮಾಡುತ್ತಿದ್ದೇನೆ ಎಂದು ಭಾವಿಸಿದನು ಮುಳ್ಳುಗಳಿಂದ ಬುಟ್ಟಿಗಳನ್ನು ತಯಾರಿಸುತ್ತೇನೆ ಮತ್ತು ಅದನ್ನು ನದಿಗೆ ಹರಿಸುತ್ತೇನೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ ಅದರ ಬದಲು ನಾನೇ ಬುಟ್ಟಿಯನ್ನು ಯಾರಿಗಾದರೂ ನೀಡಿದರೆ ಉಪಯೋಗವಾಗಬಹುದು ಎಂದುಕೊಂಡನು. ಇದರಿಂದ ಸಂತ ಮರುದಿನದಿಂದ ಹುಲ್ಲಿನ ಬುಟ್ಟಿಗಳನ್ನು ತಯಾರಿಸುವುದು ನಿಲ್ಲಿಸಿದನು ಅದ್ಯಾಕೋ ಸಂತೆಗೆ ಮನಸಿಗೆ ಬುಟ್ಟಿಗಳನ್ನು ಮಾಡುವುದು ಬೇಡ ಅನಿಸಿತು. ತದನಂತರ ಮನಸ್ಸಿಗೆ ಶಾಂತಿ ಸಿಗದೇ ಏನೋ ಕಳವಳ ಉಂಟಾದ ಕಾರಣಕ್ಕೆ ಸಂತನ ನದಿಯ ದಡದಲ್ಲಿ ನಡೆದುಕೊಂಡು ಮುಂದೆ ಹೋದಾಗ ನದಿಯ ದಂಡೆಯಲ್ಲಿ ವಯಸ್ಸಾದ ಮಹಿಳೆ ಕುಳಿತಿದ್ದನ್ನು ಅವನು ನೋಡಿದನು ಅವಳು ದುಃಖದಿಂದ ಚಂದ ನನ್ನ ನೋಡಿದಳು.

ಸಂತನು ಮಹಿಳೆಯ ದುಃಖದ ಕಾರಣವನ್ನು ಕೇಳಿದಾಗ ಈ ಜಗತ್ತಿನಲ್ಲಿ ನನ್ನವರು ಯಾರು ಇಲ್ಲ ನಾನು ಒಬ್ಬಳೇ. ವಯಸ್ಸಾಗಿದೆ ಕೆಲಸ ಮಾಡಲು ಸಾಧ್ಯವಿಲ್ಲ ಊಟಕ್ಕೆ ಕಷ್ಟ ಪಡುತ್ತ ಇರುವ ಸಂದರ್ಭದಲ್ಲಿ ಹುಲ್ಲಿನಿಂದ ಮಾಡಿದ ಸುಂದರವಾದ ಬುಟ್ಟಿಗಳು ಪ್ರತಿದಿನವು ನದಿಯಲ್ಲಿ ಹರಿಯುತ್ತಿದ್ದವು. ಅದನ್ನು ನಾನು ಮಾರಾಟ ಮಾಡುವ ಮೂಲಕ ಬದುಕು ನಡೆಸುತ್ತಿದ್ದಾರೆ ಆದರೆ ಈಗ ಬುಟ್ಟಿಗಳು ಬರುವುದು ನಿಂತು ಹೋಗಿದೆ ಹಾಗಾಗಿ ತುಂಬಾ ಬೇಸರವಾಗಿದೆ ಎಂದು ಹೇಳಿದರು.

ಇನ್ನು ಸಂತ ಮಾರನೆ ದಿವಸ ಬುಟ್ಟಿಗಳನ್ನು ತಯಾರಿಸಿ ನದಿಯಲ್ಲಿ ತೇಲಿ ಬಿಡುವುದನ್ನು ಆರಂಭಿಸಿದರು. ಇದರಿಂದ ನಾವು ತಿಳಿಯಬಹುದಾದುದು ಏನು ಅಂದರೆ ನಿಸ್ವಾರ್ಥತೆಯಿಂದ ಯಾರಿಗೆ ಏನೇ ಸಹಾಯ ಮಾಡಿದರೂ ಆ ಕೆಲಸದಿಂದ ನಮಗೆ ಲಾಭ ಪ್ರಯೋಜನದ ಬಗ್ಗೆ ಆಲೋಚನೆ ಮಾಡದೇ ಇದ್ದರೆ ಮಾತ್ರ ನಮಗೆ ಪ್ರಸಂಗದ ಪಾಠವೆಂದರೆ ನಿಸ್ವಾರ್ಥತೆಯಿಂದ ಯಾರಿಗಾದರೂ ಸಹಾಯ ಮಾಡಲು ಯಾವುದೇ ಕೆಲಸ ಮಾಡಿದರೆ ಅದರಿಂದ ಲಾಭ, ಪ್ರಯೋಜನದ ಬಗ್ಗೆ ಆಲೋಚನೆ ಮಾಡದೆ ಇದ್ದರೆ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.