ತನ್ನ ಪ್ರೀತಿಯ ಅತ್ತಿಗೆ ಮೇಘನಾ ರಾಜ್ ಬಗ್ಗೆ ಅರ್ಥ ಪೂರ್ಣವಾದ ಮಹತ್ತರ ನಿರ್ಧಾರಕ್ಕೆ ಕೈ ಹಾಕಿದ ನಟ ಧ್ರುವ ಸರ್ಜಾ…ನೋಡಿ ಅದು ಏನು…

242

ಅಣ್ಣನಿಲ್ಲದ ನೋವನ್ನು ಮರೆಯಲು ಸಾಧ್ಯವಾಗದಿರುವ ಧ್ರುವ ಸರ್ಜಾ ತಮ್ಮ ಅತ್ತಿಗೆಗೆ ಮಾಡಿರುವ ಕೆಲಸ ನೋಡಿ ಖಂಡಿತ ನೀವು ಕೂಡ ಭೇಷ್ ಅಂತೀರಾ… ಏನದು ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ.ಸಿನೆಮಾ ಜಗತ್ತಿನಲ್ಲಿ ತೊಡಗಿಸಿಕೊಂಡಿರುವವರಿಗೂ ಕೂಡ ಕುಟುಂಬವಿರುತ್ತದೆ ಅವರಿಗೂ ಕೂಡ ನೋವು ನಲಿವು ಎಲ್ಲದರ ಅನುಭವ ಆಗಿರುತ್ತದೆ ಹಾಗೆ ತಮ್ಮ ಕುಟುಂಬ ಅಂದರೆ ಸಾಮಾನ್ಯ ಜನರಿಗೆ ಹೇಗೆ ಪ್ರೀತಿ ಇರುತ್ತದೆ ಉತ್ತಮ ಬಾಂಧವ್ಯವಿರುತ್ತದೆ ಹಾಗೆ ನಟನೆ ಮಾಡುವವರಿಗೂ ಕೂಡ ತಮ್ಮ ಕುಟುಂಬವೆಂದರೆ ಅಷ್ಟೇ ಪ್ರೀತಿ ಪ್ರೇಮ ಬಾಂಧವ್ಯವಿರುತ್ತದೆ.

ಅಂತಹ ಬಾಂಧವ್ಯಕ್ಕೆ ನಮ್ಮ ಚಂದನವನದಲ್ಲಿ ಹೆಸರಾಗಿರುವವರು ಅಂದರೆ ಧ್ರುವ ಸರ್ಜಾ ಮತ್ತು ಚಿರು ಸರ್ಜಾ. ಹೌದು ಈ ಅಣ್ಣಾ ತಮ್ಮಾ ಎಷ್ಟು ಬಾಂಧವ್ಯದಿಂದ ಇದ್ದರೂ ದೃಷ್ಟಿ ತಗುಲುವಷ್ಟು ಅನ್ಯೋನ್ಯವಾಗಿದ್ದರು ಇವರು. ಹೌದು ಚಿರು ಸರ್ಜಾ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ನೇರವಾಗಿ ನಟನಾಗಿ ಅಲ್ಲ ತಮ್ಮ ಮಾವನ ಜೊತೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಂದನವನದಲ್ಲಿ ತಮ್ಮ ವೃತ್ತಿ ಜೀವನವನ್ನು ಶುರುಮಾಡಿದರು ಬಳಿಕ ವಾಯುಪುತ್ರ ಎಂಬ ಸಿನಿಮಾ ಮೂಲಕ ಪೂರ್ಣ ನಾಯಕನಟನಾಗಿ ಚಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ನಟ ಚಿರು ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾದರು ಈ ದಂಪತಿಗಳು 8ವರುಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ವಿಚಾರ ಗೊತ್ತೇ ಇದೆ ಹಾಗೆಯೇ ಇವರು ಕೆಲವೊಂದು ಸಿನಿಮಾಗಳಲ್ಲಿ ಜೋಡಿಯಾಗಿ ಸಹ ಅಭಿನಯ ಮಾಡಿದ್ದು ಈ ದಂಪತಿಗಳು ಕೂಡ ಚಂದನವನದಲ್ಲಿ ಕ್ಯೂಟ್ ಕಪಲ್ ಎಂಬ ಹೆಸರು ಕೂಡಾ ಪಡೆದುಕೊಂಡಿದ್ದರು ಇವರ ಜೋಡಿಗೆ ಅದ್ಯಾರ ಕಣ್ಣು ಬಿತ್ತೋ ಇಂಥ ಅನ್ಯೋನ್ಯ ಪ್ರೀತಿಯನ್ನು ಇಂತಹ ಬಾಂಧವ್ಯವನ್ನು ಅದೆಷ್ಟು ಬೇಗ ಆ ಭಗವಂತ ಕಡಿದುಬಿಟ್ಟ ಹಲ್ವ ಚಿರು ಅವರು ನಮ್ಮ ಜೊತೆ ಇಲ್ಲದೆ ಈಗಾಗಲೇ ವರುಷಗಳೇ ಕಳೆದಿದೆ.

ಇದೇ ವೇಳೆ ಸರ್ಜಾ ಕುಟುಂಬಕ್ಕೆ ಮಾತ್ರವಲ್ಲ ಮೇಘನ ರಾಜ್ ಅವರಿಗೂ ಕೂಡ ನೋವಿನ ದಿನಗಳಾಗಿತ್ತು ಮತ್ತೆ ಚಿರು ಬಂದಂತೆ ಜೂನಿಯರ್ ಚಿರುವಿನ ಎಂಟ್ರಿಯಾದ ಮೇಲೆ ಸರ್ಜ ಕುಟುಂಬಕ್ಕೆ ಸ್ವಲ್ಪ ಧೈರ್ಯ ಉತ್ಸಾಹ ಬಂದಿತು ನೆಮ್ಮದಿ ಕೂಡ ಜೊತೆಗೆ ಸಂತಸದ ದಿನಗಳು ಕೂಡ ಎದುರಾಗಿತ್ತು ಈಗ ಅತ್ತಿಗೆಯ ಬೆನ್ನಿಗೆ ನಿಂತಿರುವ ನಟ ಧ್ರುವ ಸರ್ಜಾ ಅವರು ನನ್ನ ಅಣ್ಣನಿದ್ದಾಗ ಅತ್ತಿಗೆ ಹೇಗೆ ಖುಷಿಯಾಗಿದ್ದರು ಅದೇ ರೀತಿ ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಹೇಳಿಕೊಂಡಿರುವ ಧ್ರುವ ಸರ್ಜಾ ಮುಂದಿನ ದಿನಗಳಲ್ಲಿಯೂ ಮೇಘನಾ ಸರ್ಜಾ ಅವರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಾರೆ ತಮ್ಮ ಅಭಿಮಾನಿಗಳಿಗೆ ಒಳ್ಳೆಯ ಸಿನಿಮಾವನ್ನು ಕೊಡುತ್ತಾರೆ ಅದಕ್ಕೆ ಬೆನ್ನೆಲುಬಾಗಿ ನಾನು ನನ್ನ ಅತ್ತಿಗೆಯ ಜೊತೆ ನಿಲ್ಲುತ್ತೇನೆ ಎಂದು ಧ್ರುವ ಸರ್ಜಾ ಅವರು ಮೇಘನಾ ರಾಜ್ ಅವರಿಗೆ ಧೈರ್ಯ ಕೊಟ್ಟಿತು ನಿಜಕ್ಕೂ ಮೈದುನ ಅಂದರೆ ಹೀಗಿರಬೇಕು ಸ್ನೇಹಿತರ ಅಣ್ಣಾ ತಮ್ಮ ಅಂದರೆ ಹೀಗಿರಬೇಕು ಅನ್ನುವ ಹಾಗಿದ್ದ ಈ ಬಾಂಧವ್ಯ ಹಾಗೇ ತನ್ನ ಅಣ್ಣನನ್ನು ಕಳೆದುಕೊಂಡ ಮೇಲೆ ಧ್ರುವ ಸರ್ಜಾ ಬಹಳ ಕುಗ್ಗಿ ಹೋಗಿದ್ದರು.

ಅಷ್ಟೇ ಅಲ್ಲ ಚಿರು ಅವರ ಮೊದಲ ಪುಣ್ಯ ಸ್ಮರಣೆಯಲ್ಲಿ ಚಿರು ಅವರಿಗಾಗಿ ಪತ್ರವೊಂದನ್ನು ಸಹ ಬರೆದಿದ್ದರು ನೀನು ಎಲ್ಲೇ ಇರು ನೀನು ಇರುವ ಕಡೆ ನಗು ಇದ್ದೇ ಇರುತ್ತದೆ ಚಿರು ಅಂತ ಹೇಳಿಕೊಂಡಿರುವ ಧ್ರುವ ಸರ್ಜಾ ಅವರು ತಮ್ಮ ಅತ್ತಿಗೆ ಗೆ ಯಾವುದೇ ಕಷ್ಟ ಬರದಂತೆ ನಾವು ನೋಡಿಕೊಳ್ಳುತ್ತೇವೆ ಸರ್ಜಾ ಕುಟುಂಬ ಅವರ ಜತೆ ಇರುತ್ತದೆ ಎಂದು ಧ್ರುವ ಸರ್ಜಾ ಅವರು ಹೇಳಿಕೊಂಡಿದ್ದಾರೆ. ಈಗಾಗಲೆ ಮೇಘನಾ ರಾಜ್ ಸಿನೆಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಕೂಡ ಹೆಚ್ಚು ಸಮಯ ಕಳೆಯುತ್ತಿದ್ದಾರೆ, ಈ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯದೇ ಆಗಲಿ ಎಂದು ಆಶಿಸೋಣ.