ಆರೋಗ್ಯ ವೃದ್ಧಿಗಾಗಿ ವಯಸ್ಸಾಗುವುದನ್ನು ತಡೆಯುವುದಕ್ಕಾಗಿ ಅಷ್ಟೇ ಅಲ್ಲ ನಿಶ್ಶಕ್ತಿ ದೂರವಾಗಿ ಸದಾ ಸಶಕ್ತರಾಗಿರಲು ಶಕ್ತಿವಂತರಾಗಿರಲು ಆರೋಗ್ಯವಂತರಾಗಿರಲು ಈ ಡ್ರಿಂಕ್ ಕುಡಿಯುತ್ತಾ ಬನ್ನಿ.ಹೌದು ಯಾವುದೋ ಯಾವುದೋ ಡ್ರಿಂಕ್ ನ ಕುಡಿಯೋಕೆ ಆಗಲ್ಲ ಕಣ್ರೀ ಅದು ಆರೋಗ್ಯವನ್ನು ಕೆಡಿಸಬಹುದು ಅಥವಾ ಏನು ಪ್ರಯೋಜನ ಆಗದಿರಬಹುದು ಅಂತಾ ನೀವು ಅಂದುಕೊಳ್ಳಬಹುದು.
ಆದರೆ ಈ ಡ್ರಿಂಕ್ ತಯಾರಿಸೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ ಬಳಿಕ ಅದು ನಿಮ್ಮ ಆರೋಗ್ಯಕ್ಕೆ ಉಪಯುಕ್ತವಾದ ಇಲ್ಲವೋ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಅಥವಾ ಅಭಿವೃದ್ಧಿ ಮಾಡುತ್ತೋ ಅಂತ ಕೂಡ ನಿಮಗೆ ಕೊನೆಯಲ್ಲಿ ತಿಳಿಯುತ್ತದೆ ಹಾಗಾಗಿ ನಾವು ಮೊದಲು ಈ ಪರಿಹಾರವನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಆನಂತರ ಅದರ ಪ್ರಯೋಜನವನ್ನು ಕೂಡ ತಿಳಿಯೋಣ ಬನ್ನಿ. ಈ ಪುಟವನ್ನು ಸಂಪೂರ್ಣವಾಗಿ ತಿಳಿದು ಯಾರೆಲ್ಲರಿಗೂ ಈ ಆರೋಗ್ಯಕರ ಪ್ರಯೋಜನಗಳು ಬೇಕು ಅಂಥವರು ತಪ್ಪದೇ ಇದನ್ನು ಪಾಲಿಸುತ್ತ ಬನ್ನಿ.
ಹೌದು ಪ್ರತಿಯೊಂದು ಮಾಹಿತಿ ತಿಳಿಯುವಾಗಲೂ ನಿಮಗೆ ಅನಿಸಬಹುದು ಏನಿದು ಇಷ್ಟೊಂದು ವಿಧಾನಗಳನ್ನ ಹೇಳ್ತಾರೆ, ಇಷ್ಟೊಂದು ಮನೆಮದ್ದುಗಳನ್ನು ತಿಳಿಸಿದರೆ, ಅದರಲ್ಲಿ ಯಾವುದನ್ನ ಪಾಲಿಸುವುದು ಯಾವುದನ್ನು ಬಿಡೋದು ಅಂತ ನೀವು ಅಂದುಕೊಳ್ಳಬಹುದು.
ಆದರೆ ಹೀಗೆ ಸಂಶಯಪಡುವವರು ನೀವು ಪ್ರತಿದಿನ ಒಂದೇ ಆಹಾರವನ್ನು ಮಾಡಿ ತಿನ್ನೋದಿಲ್ಲ ಅಥವಾ ನೀವು ಧರಿಸಿದ ಬಟ್ಟೆಯನ್ನು ಧರಿಸುವುದು ಇಲ್ಲ ವಾರಕ್ಕೊಮ್ಮೆಯಾದರೂ ಬದಲಾಯಿಸುತ್ತಿದ್ದ ತಿಂಗಳಿಗೊಮ್ಮೆಯಾದರೂ ಬದಲಾಯಿಸುತ್ತೀರಾ ಹಾಗೆ ನಿಮ್ಮ ಆರೋಗ್ಯ ವೃದ್ಧಿ ಗಾಗಿ ಸಾಕಷ್ಟು ಮನೆಮದ್ದುಗಳ ವಿಧಾನಗಳಿವೆ ಅದರಲ್ಲಿಯು, ನಿಮ್ಮ ಆರೋಗ್ಯ ವೃದ್ಧಿಗಾಗಿ ಯಾವುದೇ ಮನೆಮದ್ದನ್ನು ಮಾಡಿದರೂ ಅದು ಬೇಸರವಾದ ಬಳಿಕ ಬೇರೆ ಪುಡಿ ಮಾಡಿ ಸೇವಿಸಬಹುದು. ಆದರೆ ಒಂದಂತೂ ಸತ್ಯ ನೀವು ಮನೆಮದ್ದುಗಳನ್ನು ಪಾಲಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಕಾರಣ ಏನು ಅಂದರೆ ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ಪದಾರ್ಥಗಳನ್ನೇ ಬಳಸಿಕೊಂಡು ಮನೆಮದ್ದುಗಳನ್ನು ಮಾಡ್ತೇವೆ. ಹಾಗಾಗಿ ಮನೆಮದ್ದುಗಳನ್ನು ಮಾಡೋದ್ರಿಂದ ಯಾವುದೇ ಕಾರಣಕ್ಕೂ ಅದು ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವುದಿಲ್ಲ.ಇಂದಿನ ಮನೆಮದ್ದನ್ನೂ ಮಾಡುವುದಕ್ಕೆ ಬೇಕಾಗಿರುವುದು ಏನಪ್ಪಾ ಅಂದರೆ ಅಗಸೆ ಬೀಜ ಕರ್ಬೂಜದ ಬೀಜಗಳು ಮತ್ತು ಚಕ್ಕೆ ಮೆಣಸು ಬಿರಿಯಾನಿ ಎಲೆ ಕಲ್ಲುಸಕ್ಕರೆ ವಾಲ್ ನಟ್.
ಈ ಪದಾರ್ಥವನ್ನು ತೆಗೆದುಕೊಳ್ಳಿ ಈ ಮನೆಮದ್ದನ್ನು ನೀವು ಯಾವಾಗ ಮಾಡಿಕೊಳ್ಳಬಹುದು ಅಂದರೆ ಕರ್ಬೂಜ ಅತಿ ಕಡಿಮೆ ಬೆಲೆಯಲ್ಲಿ ಸಿಗುವ ಖರ್ಬೂಜದ ಹಣ್ಣನ್ನು ಮನೆಗೆ ತಂದು ಹಣ್ಣನ್ನು ಸೇವಿಸಿ, ಏಕೆಂದರೆ ಹಣ್ಣು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಅದರಲ್ಲಿಯೂ ಸೀಝನಲ್ ಹಣ್ಣುಗಳನ್ನು ಆ ಸೀಸನ್ ಗೆ ತಕ್ಕಂತೆ ತಿನ್ನೋದು ಇನ್ನಷ್ಟು ಆರೋಗ್ಯಕ್ಕೆ ಒಳ್ಳೆಯದು.
ಹಾಗಾಗಿ ಆರೋಗ್ಯ ವೃದ್ಧಿಯ ಜತೆಗೆ ಕಡಿಮೆ ಬೆಲೆಯಲ್ಲಿ ಸೀಸನಲ್ ಹಣ್ಣುಗಳನ್ನು ದೊರೆಯುವ ಕಾರಣ ಹಣ್ಣಿನ ರುಚಿ ಸವಿಯುವುದರ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈಗ ಕರ್ಬೂಜ ಹಣ್ಣಿನ ಬೀಜಗಳನ್ನು ತೆಗೆದುಕೊಂಡು, ಇದಕ್ಕೆ ಈ ಮೇಲೆ ತಿಳಿಸಿದಂತಹ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಹುರಿದು ತಣ್ಣಗಾದ ಮೇಲೆ ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಿ.
ಈ ಪದಾರ್ಥಗಳ ಮಿಶ್ರಣದ ಪುಡಿಯನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು, ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಕರುಳು ಶುದ್ಧವಾಗುತ್ತೆ ಹಾಗೆ ಸರಿಯಾದ ಸಮಯಕ್ಕೆ ಹಸಿವಾಗಲು ಕಾರಣವಾಗುತ್ತೆ ಈ ವಿಧಾನ.ಅಷ್ಟೇ ಅಲ್ಲ ಈ ಪುಡಿಯನ್ನು ಹೊಡೆಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಆಗಲಿ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ಯಾವುದೂ ಎದುರಾಗುವುದಿಲ್ಲ. ಈ ಸರಳ ಪರಿಹಾರವನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಯಾರು ಬೇಕಾದರೂ ಪಾಲಿಸಬಹುದು ಆಂದರೆ ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಂದ ಈ ಮನೆಮದ್ದನ್ನು ಮಾಡಿದರೆ ಒಳ್ಳೆಯದು…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.