ಸ್ನೇಹಿತರೆ ನೀವು ನೋಡಿರಬಹುದು ಎಷ್ಟೋ ಜನ ದೊಡ್ಡ ದೊಡ್ಡ ಶ್ರೀಮಂತರು ತಮ್ಮ ಮನೆಯಲ್ಲಿ ಇದ್ದಂತಹ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ ಹಾಗೆ ತಾವು ತಿನ್ನುವಂತಹ ಊಟದಲ್ಲಿ ಅರ್ಧಂಬರ್ಧ ತಿಂದು ಅದನ್ನ ರೋಡಿಗೆ ಬಿಸಾಕುತ್ತಾರೆ. ಅದರಲ್ಲೂ ನಿಮಗೆ ಗೊತ್ತಿಲ್ಲದೇ ಇರುವಂತಹ ವಿಚಾರ ಏನಪ್ಪಾ ಅಂದರೆ ನಮ್ಮ ದೇಶದಲ್ಲಿ ಕನಿಷ್ಠ 10 ರಷ್ಟು ಜನ ಹೊಟ್ಟೆಗೆ ಅನ್ನ ಇಲ್ಲದೆ ಎಷ್ಟೋ ಜನ ಇವತ್ತು ಬೀದಿಯಲ್ಲಿ ಬಂದಿದ್ದಾರೆ.ಹಾಗೆ ನಮ್ಮ ದೇಶದಲ್ಲಿಯೇ ಹಣ ಎನ್ನುವುದು ಕೆಲವರ ಹತ್ತಿರ ಕೇಂದ್ರೀಕೃತ ಗೊಂಡಿದೆ ಹಾಗೆ ಈ ರೀತಿಯಾದಂತಹ ದೊಡ್ಡಮಟ್ಟದ ಹಣವನ್ನು ಇಟ್ಟಿಕೊಂಡು ಅಂತಹ ಜನರಿಗೆ ಸಣ್ಣಮಟ್ಟದ ಮನಸ್ಸಿರುತ್ತದೆ ಬೇರೆಯವರಿಗೆ ಸಹಾಯ ಮಾಡಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದುವುದಿಲ್ಲ.
ಹೀಗೆ ಇವರೆಲ್ಲ ಜನರ ಮಧ್ಯೆ ಹಲವಾರು ಜನರು ಒಳ್ಳೆಯ ಮನಸ್ಸು ಇರುವಂತಹ ವ್ಯಕ್ತಿಗಳು ಕೂಡ ಇರುತ್ತಾರೆ ಅವರ ಹತ್ತಿರ ಹಣ ಅಷ್ಟೊಂದು ಇಲ್ಲದೆ ಇದ್ದರೂ ಕೂಡ ತಮಗೆ ಬರುವಂತಹ ಒಂದಿಷ್ಟು ಹಣದಲ್ಲಿ ಸ್ವಲ್ಪ ಬಡವರಿಗೆ ಸಹಾಯ ಮಾಡಬೇಕು ಹಾಗೂ ಬೇರೆಯವರಿಗೆ ಒಂದು ಹೊತ್ತು ಊಟ ಹಾಕಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಾಗೆಯೇ ಈ ರೀತಿಯಾದಂತಹ ಒಂದು ಒಳ್ಳೆಯ ಮನಸ್ಸನ್ನು ಹೊಂದಿರುವಂತಹ ಒಬ್ಬ ಪೊಲೀಸ್ ಅಧಿಕಾರಿಯ ಬಗ್ಗೆ ಇವತ್ತು ನಾವು ಹೇಳಲು ಹೊರಟಿದ್ದೇವೆ. ಇವರು ಮಾಡುತ್ತಿರುವಂತಹ ಇವರ ನಿಸ್ವಾರ್ಥ ನಿಜವಾಗ್ಲೂ ನಾವು ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.
ಸ್ನೇಹಿತರೆ ನೀವು ನಮ್ಮ ಸಮಾಜದಲ್ಲಿ ರೋಡಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ನೋಡಿ ಅದೆಷ್ಟು ಜನ ಮಕ್ಕಳು ತಮ್ಮ ಹೊಟ್ಟೆಪಾಡಿಗೆ ಓಸ್ಕರ ಹಾಗೂ ಒಂದು ಹೊತ್ತು ಊಟ ಮಾಡುವುದಕ್ಕೆ ರೋಡಿನಲ್ಲಿ ಜನರ ಮುಂದೆ ಕೈಕಟ್ಟಿ ಹಣವನ್ನು ಇಸಿದುಕೊಂಡು ಹೋಗುತ್ತಾರೆ ಹೀಗೆ ತಮ್ಮ ಹೊಟ್ಟೆಪಾಡಿಗಾಗಿ ರೀತಿಯಾಗಿಬದುಕುತ್ತಿರುತ್ತಾರೆ ಆದರೆ ಈ ರೀತಿಯಾದಂತಹ ಬಡ ಮಕ್ಕಳನ್ನು ಸಮಾಜದಲ್ಲಿ ಈ ರೀತಿಯಾಗಿ ನೋಡಬಾರದು ಕಸ ಆರಿಸುತ್ತಾ ರೋಡಿನಲ್ಲಿ ಇದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎನ್ನುವಂತಹ ದೃಷ್ಟಿಯಲ್ಲಿ ಈ ಸಂಚಾರಿ ಪೊಲೀಸ್ ಒಬ್ಬರುರೋಡಿನಲ್ಲಿ ತಿರುಗುತ್ತಿದ್ದಂತೆ ಮಕ್ಕಳಿಗೆ ಅದರಲ್ಲೂ 200 ಮಕ್ಕಳನ್ನು ತಮ್ಮ ಕೈಲಾದಷ್ಟು ಉಚಿತ ಶಿಕ್ಷಣವನ್ನು ನೀಡಲು ಮುಂದೆ ಬಂದಿದ್ದಾರೆ ಹಾಗಾದರೆ ಅವರು ಯಾರು ಎಲ್ಲಿ ನಡೆದಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ.
ಇವರ ಹೆಸರು ಡಿಸಿಪಿ ಅಂಕಿತ್ ಪಟೇಲ್ ಅಂತಅಹ್ಮದಾಬಾದಿನಲ್ಲಿ ಇವರು ಹೀಗೆ ರೋಡಿನಲ್ಲಿ ಮಕ್ಕಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಅದರ ಬದಲಾಗಿ ಅವರಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರೆ ಜೀವನದಲ್ಲಿ ತುಂಬಾ ಮುಂದೆ ಬರುತ್ತಾರೆ ಹಾಗೂ ನಮ್ಮ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲಿ ಬದುಕಬಹುದು ಇದಕ್ಕಾಗಿ ನಾನು ಮಾಡುವಂತಹದು ಸೇವೆ ಅವರ ಜೀವನದಲ್ಲಿ ಏನಾದರೂ ಒಂದು ತಿರುವನ್ನು ನೀಡ ಬಹುದು ಎನ್ನುವಂತಹ ಮಾತನ್ನು ಹೇಳಿದ್ದಾರೆ.
ಇವರು ಮೂರು ಕೇಂದ್ರಗಳನ್ನು ತೆರೆಯುವ ಅಂತಹ ಆಲೋಚನೆಯನ್ನು ಇಟ್ಟು ಕೊಂಡಿದ್ದಾರೆ ಹೀಗೆ ಈ ಕೇಂದ್ರಗಳ ಮುಖಾಂತರ ಹಲವಾರು ಮಕ್ಕಳಿಗೆ ಉಚಿತ ವಾದಂತಹ ಶಿಕ್ಷಣದ ಜೊತೆಗೆ ಸಣ್ಣ ಮಕ್ಕಳು ವಾಹನದಲ್ಲಿ ಹೋರಾಡುವಂತಹ ಒಂದು ವ್ಯವಸ್ಥೆಯನ್ನು ಕಳುಹಿಸುವಂತಹ ಒಂದು ಯೋಜನೆಯನ್ನು ಮಾಡಿಕೊಂಡಿದ್ದಾರೆ. ಹಾಗೆಹಲವಾರು ಜನರನ್ನು ಕಾಂಟಾಕ್ಟ್ ಮಾಡಿ ತಮ್ಮ ಕೇಂದ್ರಗಳಲ್ಲಿ ಆಟೋರಿಕ್ಷಾವನ್ನು ಅದು ಕೂಡ ನೀಡಲು ಆಲೋಚನೆಯನ್ನು ಮಾಡಿದ್ದಾರೆ. ಇವರ ಕೇಂದ್ರದಲ್ಲಿ ಇರುವಂತಹ ಎಲ್ಲ ಮಕ್ಕಳಿಗೂ ಉಚಿತವಾಗಿ ಊಟವನ್ನು ಕೂಡ ಇವರು ಮಾಡುತ್ತಾರೆ.
ಹೀಗೆ ಬೀದಿಯಲ್ಲಿ ಬಿದ್ದಂತಹ ಮಕ್ಕಳ ಬಗ್ಗೆ ಇಷ್ಟೊಂದು ಕಾಳಜಿಯಿಂದ ಆಲೋಚನೆ ಮಾಡಿಕೊಳ್ಳುತ್ತಿರುವ ಅಂತಹ ಈ ಪೊಲೀಸ್ ಅವರ ವರ್ತನೆ ನಿಜವಾಗ್ಲೂ ತುಂಬಾ ಚೆನ್ನಾಗಿದೆ ಇದೇ ರೀತಿಯಾಗಿ ಇವರನ್ನು ಪೂರ್ತಿಯಾಗಿ ಪಡೆದಿದ್ದು ಇನ್ನುಹಲವಾರು ಜನರು ಇದೇ ರೀತಿಯಾಗಿ ಮುಂದೆ ಬಂದು ಬೀದಿಯಲ್ಲಿ ಇದ್ದಂತಹ ಮಕ್ಕಳನ್ನು ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ಮುಂದೊಂದು ದಿನ ಮಕ್ಕಳು ದೊಡ್ಡ ಅಧಿಕಾರಿಯಾಗಿರುತ್ತಾರೆ .
ಅಂತಹ ನಮ್ಮ ದೇಶದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುವಂತಹ ಮಕ್ಕಳನ್ನು ನಾವು ಸಮಾಜಕ್ಕೆ ನೀಡಬಹುದು.ಅಂತಹ ವ್ಯಕ್ತಿಗಳು ನಿಜವಾಗಲೂ ನಮಗೆ ಸ್ಫೂರ್ತಿ ಆಗುತ್ತಾರೆ ಹಾಗೂ ಸಮಾಜದಲ್ಲಿ ಒಳ್ಳೆಯ ಸ್ಪೂರ್ತಿ ಹೊಂದಿರುವಂತಹ ವ್ಯಕ್ತಿಗಳು ಆಗುತ್ತಾರೆ.ಒಟ್ಟು ಹಣ ಸಂಪಾದನೆ ಮಾಡಬಹುದು ಆದರೆ ಬೇರೆಯವರಿಗೆ ಕೊಟ್ಟು ಅವರ ಮುಖದಲ್ಲಿ ಒಂದು ಸಂತೋಷವನ್ನು ನೋಡಿದ್ದೇ ಆದಲ್ಲಿ ನೀವು ಆಡಿ ಬೆಂಜ್ ಕಾರುಗಳು ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಸಂತೋಷ ಇದರಲ್ಲಿ ಸಿಗುತ್ತದೆ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.