ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಅದೃಷ್ಟ ಬದಲಾಗುವಂತಹ ಪರಿಹಾರವೊಂದರ ಬಗ್ಗೆ ತಿಳಿಸಿಕೊಡುತ್ತಾ ಇದ್ದೇವೆ ಹೌದು ತೊಗರಿಬೇಳೆಯಿಂದ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ ರಾಜಯೋಗವನ್ನು ನೀವು ಪಡೆಯಬಹುದು ಈ ಪರಿಹಾರವನ್ನು ಪಾಲಿಸುವುದರಿಂದ. ಹಾಗಾದರೆ ಬನ್ನಿ ಮನೆಯಲ್ಲಿ ಇರುವ ತೊಗರಿಬೇಳೆಯಿಂದ ನಿಮ್ಮ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ. ಎಲ್ಲರ ಜೀವನದಲ್ಲಿಯೂ ಒಂದೊಂದು ಸಮಸ್ಯೆ ಇರುತ್ತದೆ. ಹೌದು ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆಗಳು ಹಾಗೆ ಸಮಸ್ಯೆಗಳಿಗೆ ಬಂದದ್ದು ಪರಿಹಾರವಿರುತ್ತದೆ ಹಾಗಾಗಿ ನಿಮ್ಮ ಸಮಸ್ಯೆಗಳಿಗೆ ತೊಗರಿಬೇಳೆಯ ಈ ಪರಿಹಾರವನ್ನು ಮಾಡೋದ್ರಿಂದ ಹಲವು ಗಂಡಾಂತರಗಳು ದೂರವಾಗಿ ಜಾತಕದಲ್ಲಿರುವ ಸೂರ್ಯ ಮತ್ತು ಕುಜನ ಸ್ಥಾನವೂ ಕೂಡ ಬಲಗೊಳ್ಳುತ್ತದೆ ತೊಗರಿಬೇಳೆಯ ಈ ಪರಿಹಾರ.
ಕೆಲವೊಂದು ಶ್ರೇಷ್ಠ ಮತ್ತು ವಿಶೇಷ ದಿನಗಳಂದು ಕೆಲವೊಂದು ವಸ್ತುಗಳನ್ನು ಕೆಲವೊಂದು ಧಾನ್ಯಗಳನ್ನು ದೇವಸ್ಥಾನ ಗಳಿಗೆ ದಾನವಾಗಿ ನೀಡುವುದರಿಂದ ಎಂತಹ ಪುಣ್ಯ ನಮಗೆ ಲಭಿಸುತ್ತದೆ ಗೊತ್ತಾ ಹೌದು ಅದರಲ್ಲಿಯೂ ಅಮವಾಸ್ಯೆ ಹುಣ್ಣಿಮೆಯ ದಿನದಂದು ಅಥವಾ ಗ್ರಹಣ ಸಂಭವಿ ಸಿದ ದಿನದಂದು ನಿಮ್ಮ ಪಾಪ ಕರ್ಮಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನವಧಾನ್ಯಗಳನ್ನು ದಾನವಾಗಿ ನೀಡುವುದು ಅಥವಾ ಶನಿವಾರದ ದಿನದಂದು ಶನಿದೇವನ ದೇವಾಲಯಕ್ಕೆ ಹೋಗಿ ಕಪ್ಪು ಎಳ್ಳನ್ನು ದಾನವಾಗಿ ನೀಡುವುದು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ತೊಗರಿ ಬೇಳೆಯಿಂದ ಮಾಡುವ ಪರಿಹಾರ ಇದು :ನಿಮ್ಮ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಹಾಗೂ ನಿಮ್ಮ ಅದೃಷ್ಟ ಬದಲಾಗುವುದಕ್ಕೆ ಹೀಗೆ ಮಾಡಿ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಮನೆಯ ಹಿರಿಯರ ಕೈನಿಂದ 1ಹಿಡಿ ತೊಗರಿಬೇಳೆ ಮತ್ತು ಕೆಂಪು ವಸ್ತ್ರ. ಹೌದು ಬೆಳಗಿನ ಸಮಯದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ ಈ ತೊಗರಿ ಬೇಳೆಯನ್ನು ಕೆಂಪು ವಸ್ತ್ರಕ್ಕೆ ಹಾಕಿ ಗಂಟನ್ನು ಕಟ್ಟಬೇಕು ಅದನ್ನು ದೇವರ ಬಳಿ ಇರಿಸಿ ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪ್ರದಕ್ಷಿಣೆ ಮಾಡುತ್ತಾ ಸೂರ್ಯದೇವನಿಗೆ ಮತ್ತು ಮನೆಯ ದೇವರಿಗೆ ಪೂಜೆಯನ್ನು ಸಮರ್ಪಣೆ ಮಾಡಬೇಕು.
ಯಾವ ದಿನದಂದು ಪರಿಹಾರ ಮಾಡಿದರೆ ಶ್ರೇಷ್ಠ :ಅದೃಷ್ಟ ಪಡೆದುಕೊಳ್ಳುವುದಕ್ಕೆ ರಾಜಯೋಗ ಪಡೆಯುವುದಕ್ಕೆ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಪರಿಹಾರವನ್ನು ನೀವು ಭಾನುವಾರದ ದಿನದಂದು ಮಾಡಬೇಕು ಈ ಭಾನುವಾರದ ದಿನ ಸೂರ್ಯನ ಅಧಿಪತ್ಯ ಇರುತ್ತದೆ ಈ ದಿನ ಸೂರ್ಯನ ಆರಾಧನೆ ಮಾಡೋದ್ರಿಂದ ನಿಮ್ಮ ಸಮಸ್ಯೆಗಳನ್ನು ಸೂರ್ಯದೇವನ ಬಳಿ ಸಂಕಲ್ಪ ಮಾಡಿಕೊಂಡು ನಾವು ತಿಳಿಸಿದ ಈ ತೊಗರಿಬೇಳೆಯ ಪರಿಹಾರವನ್ನ ಮಾಡೋದ್ರಿಂದ ಬಂದಿರುವ ಹಲವು ಸಮಸ್ಯೆಗಳು ದೂರವಾಗುತ್ತವೆ ಹಾಗೂ ಜಾತಕದಲ್ಲಿ ಸೂರ್ಯನ ಮತ್ತು ಕುಜನ ಸ್ಥಾನ ಬಲಗೊಳ್ಳುತ್ತದೆ ರಾಜಯೋಗ ಎಂಬುದು ನಿಮಗೆ ಪ್ರಾಪ್ತಿಯಾಗುತ್ತದೆ.
ಕೆಲವರಿಗಂತೂ ಎಷ್ಟು ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಅಂದರೆ ಯಾವುದಾದರೂ ಚಿಕ್ಕ ವಸ್ತುವನ್ನ ಕೊಂಡುಕೊಳ್ಳಬೇಕು ಅಂದರೂ ಕೂಡ ಬಹಳಾನೇ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಆದ್ದರಿಂದ ತೊಗರಿಬೇಳೆಯ ಈ ಪರಿಹಾರವನ್ನು ಭಾನುವಾರದ ದಿನದಂದು ಪಾಲಿಸಿ ಆ ತೊಗರಿಬೇಳೆಯ ಗಂಟನ್ನು ಆ ದಿನ ಮನೆಯಲ್ಲಿ ಇರಿಸಿ ಮಾರನೆ ದಿನ ಅರಳಿ ಮರದ ಬುಡಕ್ಕೆ ಹೋಗಿ ಆ ಕೆಂಪು ವಸ್ತ್ರದ ಸಮೇತ ತೊಗರಿ ಬೆಳೆಯ ಗಂಟನ್ನು ಅಲ್ಲಿಯೇ ಹಾಕಿ ಬರಬೇಕು.
ಈ ಸಣ್ಣ ಪರಿಹಾರವನ್ನ ನಂಬಿಕೆ ಇಟ್ಟು ನಂಬಿಕೆ ಎಂದು ಪಾಲಿಸುತ್ತಾ ಬನ್ನಿ ಸೂರ್ಯದೇವನ ಅನುಗ್ರಹದಿಂದಾಗಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಹಾಗೆ ಏನನ್ನೇ ಸಂಕಲ್ಪ ಮಾಡಿಕೊಳ್ಳುವುದಾದರೂ ಈ ಪರಿಹಾರವನ್ನು ಪಾಲಿಸುವ ಮೂಲಕ ಸೂರ್ಯದೇವನಲ್ಲಿ ನಿಮ್ಮ ಬೇಡಿಕೆಗಳನ್ನು ಇಟ್ಟು ದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ಸೂರ್ಯ ದೇವನ ಅನುಗ್ರಹದಿಂದ ಎಲ್ಲ ಸಮಸ್ಯೆಗಳು ದೂರವಾಗಿ ಉತ್ತಮ ಜೀವನ ನಿಮ್ಮದಾಗುತ್ತದೆ ಈ ಸಣ್ಣ ಪರಿಹಾರ ಪಾಲಿಸಿ ಸೂರ್ಯ ದೇವನ ಅನುಗ್ರಹ ಪಡೆಯಿರಿ ಶುಭದಿನ ಧನ್ಯವಾದಗಳು.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.