ದಿನ ಒಂದೊಂದೇ ಈ ಎಲೆಯ ತಿನ್ನುತ್ತಾ ಬಂದ್ರೆ ದಮ್ಮು , ಅಸ್ತಮಾ , ಕಿಡ್ನಿಯಲ್ಲಿ ಕಲ್ಲು , ಹಾಗು ಹೊಟ್ಟೆ ಉಬ್ಬರ ಕೂಡ ಬರೋದೇ ಇಲ್ಲ…

ಈ ಎಲೆಗಳ ಪ್ರಯೋಜನಗಳು ಮಾತ್ರ ಅತ್ಯದ್ಭುತ ಇದನ್ನು ನಾಯಿ ಪತ್ರೆ ನೀರು ಸೊಪ್ಪು ಅಂಥ ಎಲ್ಲ ನಾನಾ ಹೆಸರುಗಳಿಂದ ಜನರು ಕರೆಯುತ್ತಾರೆ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರುಗಳಿಂದ ಗುರುತಿಸುವ ಈ ಎಲೆಗಳನ್ನು ನಮ್ಮ ಲೋಕಲ್ ಭಾಷೆಯಲ್ಲಿ “ಕಾಡು ಬಸಳೆ” ಅಂತ ಕರೆಯುತ್ತಾರೆ.

ಹೌದು ಸಾಮಾನ್ಯವಾಗಿ ಬಸಳೆ ಸೊಪ್ಪನ್ನು ಕೇಳಿದ್ದೇವೆ ಹಾಗೂ ಬಸಳೆ ಸೊಪ್ಪಿನ ಅತ್ಯದ್ಭುತ ಪ್ರಯೋಜನಗಳನ್ನು ಕೂಡ ನಾವು ತಿಳಿದುಕೊಂಡಿದ್ದೇವೆ ಮತ್ತು ಅದರ ರುಚಿಯನ್ನು ಸಹ ಸವಿದಿದ್ದೇವೆ.ಅದರ ಆರೋಗ್ಯಕರ ಪ್ರಯೋಜನಗಳನ್ನು ಕೂಡ ಪಡೆದುಕೊಂಡಿದ್ದೇವೆ, ಮುಖ್ಯವಾಗಿ ಈ ಬಸಳೆಸೊಪ್ಪು ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿರುತ್ತೆ ಆದ್ರೆ ಈ ಕಾಡು ಬಸಳೆ ಈ ಸೊಪ್ಪಿಗಿಂತ ವಿಭಿನ್ನ, ಇದು ಒಗರು ಮತ್ತು ಹುಳಿ ಮಿಶ್ರಿತ ರುಚಿಯನ್ನು ಕೊಡುತ್ತೆ.

ಇವತ್ತಿನ ಮಾಹಿತಿ ಅಲ್ಲಿ ಈ ಕಾಡು ಬಸಳೆಯ ಕುರಿತು ಮಾತನಾಡುತ್ತಿದ್ದೇವೆ, ಇದು ಎಲ್ಲ ಪ್ರಾಂತ್ಯದಲ್ಲಿಯೂ ಬೆಳೆಯುವ ಸೊಪ್ಪು ಆಗಿದೆ. ನಿಮ್ಮ ಮನೆಯಲ್ಲಿಯೂ ಕೂಡ ಬೇಕಾದರೆ ನೀವು ಬೆಳಸಿಕೊಳ್ಳಬಹುದು. ಇದರ ಅತ್ಯದ್ಭುತ ಪ್ರಯೋಜನಗಳನ್ನು ಯಾವಾಗ ಬೇಕಾದರೂ ಆವಾಗ ಪಡೆದುಕೊಳ್ಳಬಹುದು.ಈ ಮೊದಲೇ ಹೇಳಿದಂತೆ ಒಗರು ಮಿಶ್ರಿತ ಹುಳಿ ರುಚಿಯನ್ನು ಹೊಂದಿರುವ ಕಾಡು ಬಸಳೆ ಅತ್ಯದ್ಭುತ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ, ತನ್ನಲ್ಲಿ ಉತ್ತಮವಾದ ವಿಟಮಿನ್ ಖನಿಜಾಂಶಗಳನ್ನೂ ಹೊಂದಿದೆ ಈ ಸೊಪ್ಪು.

ಅಧಿಕವಾದ ವಿಟಮಿನ್ ಸಿ ಜೀವಸತ್ವವನ್ನು ಹೊಂದಿರುವ ಕಾಡು ಬಸಳೆ ಎಂತಹದ್ದೆ ಅನಾರೋಗ್ಯ ಸಮಸ್ಯೆಗೆ ಆಗಲಿ ಬಹಳ ಬೇಗ ಪರಿಹಾರ ಕೊಡುತ್ತೆ, ಮುಖ್ಯವಾಗಿ ಕಾರಣ ಇಲ್ಲದೆ ಕೆಲವೊಮ್ಮೆ ಹೊಟ್ಟೆ ನೋವು ಬರುತ್ತದೆ ಅದಕ್ಕೆ ಯಾವುದೆ ಪರಿಹಾರ ಮಾಡಿದರು ನಿವಾರಣೆಯಾಗುತ್ತಾ ಇರೋದಿಲ್ಲ.ಯಾಕೆಂದರೆ ದೇಹದ ಒಳಗೆ ಏನಾಗಿದೆ ಏನು ಬದಲಾವಣೆ ಆಗಿದೆ ಅಂತ ನಾವು ತಕ್ಷಣವೇ ತಿಳಿದುಕೊಳ್ಳುವುದು ಹೇಗೆ ಅಲ್ವಾ.

ಅದಕ್ಕಾಗಿ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಒಳಗಿನ ಆರೋಗ್ಯವನ್ನ ಬಹಳ ಬೇಗ ಸುಧಾರಿಸಿ ಬಿಡುತ್ತದೆ. ಅದಕ್ಕೆ ಈ ಕಾಡು ಬಸಳೆ ಸಹಕಾರಿ ನಿಮ್ಮ ಹೊಟ್ಟೆ ನೋವು ಸಮಸ್ಯೆ ಜೀರ್ಣಕ್ರಿಯೆ ಗೆ ಸಂಬಂಧಿಸಿದ ಸಮಸ್ಯೆ ಆಗಿರಲಿ ಜೊತೆಗೆ ಹೊಟ್ಟೆ ಉರಿ ಎದೆ ಉರಿ ಪೈಲ್ಸ್ ಇಂತಹ ತೊಂದರೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಕಾಡು ಬಸಳೆ ಅತ್ಯದ್ಭುತ ಔಷಧಿ ಗುಣ ಹೊಂದಿರುವ ಗಿಡಮೂಲಿಕೆ ಆಗಿದೆ.

ಇದನ್ನು ನೀವು ಕಷಾಯದ ರೂಪದಲ್ಲಿ ಸೇವಿಸಬಹುದು ಅಥವಾ ನೀವು ಬೇಕಾದರೆ ಈ ಸೊಪ್ಪನ್ನು ಪಲ್ಯ ಸಾರು ಮಾಡಿ ಕೂಡ ಸೇವಿಸಬಹುದು.ಹಾಗಾಗಿ ಕಾಡು ಬಸಳೆ ಅತ್ಯದ್ಭುತ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಇದನ್ನು ನೀವೂ ಕೂಡ ಮನೆ ಹಿತ್ತಲಲ್ಲಿ ಅಥವಾ ಮನೆಯ ಟೆರೇಸ್ ನಲ್ಲಿ ಬೆಳೆಸಿಕೊಂಡು ಈ ಎಲೆಗಳ ಪ್ರಯೋಜನವನ್ನ ಪಡೆದುಕೊಳ್ಳುತ್ತಾ ಬನ್ನಿ.

ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ಖರ್ಚೇ ಇಲ್ಲದೆ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಂದರೆಗಳನ್ನು ಕೂಡ ಈ ಕಾಡು ಬಸಳೆ ಸೊಪ್ಪಿನ ಎಲೆಗಳು ದೂರಮಾಡುತ್ತದೆ.ಕಾಡು ಬಸಳೆಯನ್ನು ನಾಯಿ ಪತ್ರೆ ನೀರು ಸೊಪ್ಪು ಅಂತೆಲ್ಲಾ ಕರಿತಾರೆ ಹಾಗೆ ಈ ಕಾಡು ಬಸಳೆ ಸೊಪ್ಪು ರುಚಿಯಲ್ಲಿ ಸ್ವಲ್ಪ ಹುಳಿ ಆಗಿರುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಇದನ್ನು ತಿನ್ನಲು ಜನರು ಮುಖ ಮುರಿದರು ಇದರ ಆರೋಗ್ಯಕರ ಲಾಭಗಳ ದೃಷ್ಟಿಯಿಂದಾಗಿ ಇದನ್ನು ಸೇವನೆ ಮಾಡಬೇಕಿರುತ್ತದೆ. ಹಾಗಾಗಿ ಮುಖಪ ಮುರಿಯದೆ ಈ ಬಸಳೆ ಸೊಪ್ಪಿನ ಪ್ರಯೋಜನ ಪಡೆದುಕೊಂಡರೆ ಮುಂದೆ ಬರುವ ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

 

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

19 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

20 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

20 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

21 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.