ಶ್ರೀ ಸಾಕ್ಷಾತ್ ಲಕ್ಷ್ಮೀದೇವಿಯ ಸಹೋದರಿ ತುಳಸೀದೇವಿ, ತುಲಸೀ ದೇವಿಯು ವಿಷ್ಣುವನ್ನು ವರಿಸಲು ಆಸೆಪಟ್ಟ ಕಾರಣ ಲಕ್ಷ್ಮೀದೇವಿ ಯಿಂದ ಶಾಪಕ್ಕೆ ಒಳಗಾಗುತ್ತಾರೆ ಅದೇ ಸಮಯದಲ್ಲಿ ವಿಷ್ಣುದೇವ ಇದನ್ನೆಲ್ಲ ತಿಳಿದು ತಾನೂ ಕೂಡ ಸಾಲಿಗ್ರಾಮದ ಅವತಾರವನ್ನೆತ್ತಿ ಭೂಮಿಗೆ ಬರುವುದಾಗಿ ತಿಳಿಸಿದ್ದು ಆಕೆಯ ಶಾಪ ನಿವಾರಣೆಗಾಗಿ ವರವೊಂದನ್ನು ನೀಡಿದ್ದರು. ಹೌದು ತುಳಸೀ ದೇವಿಯು ವಿಷ್ಣುವಿನಿಂದ ವರವನ್ನ ಪಡೆದುಕೊಂಡಿತು ಆ ಕಾರಣಕ್ಕಾಗಿಯೇ ಪ್ರತಿಯೊಬ್ಬ ಹಿಂದು ಧರ್ಮ ಪಾಲಿಸುವವರು ತುಳಸಿ ಮಾತೆಯ ಆರಾಧನೆ ಮಾಡುತ್ತಾರೆ ಪ್ರತಿಯೊಬ್ಬರ ಮನೆ ಅಂಗಳದಲ್ಲಿ ತುಳಸಿ ಗಿಡ ರಾರಾಜಿಸುತ್ತಿರುತ್ತದೆ. ಸಂಜೆಯ ಗೋಧೂಳಿ ಸಮಯದಲ್ಲಿ ಯಾರೂ ತುಳಸಿ ಮಾತೆಯ ಆರಾಧನೆ ಮಾಡುತ್ತಾರೆ ತುಳಸೀ ದೇವಿಯ ಮುಂದೆ ತುಪ್ಪದ ದೀಪವನ್ನು ಆರಾಧಿಸುತ್ತಾರೆ ಅಂಥವರ ಮನೆಗೆ ಲಕ್ಷ್ಮೀ ದೇವಿಯು ಸಂತಸದಿಂದ ಪ್ರವೇಶ ಮಾಡುತ್ತಾಳೆ ಎಂಬ ಮಾತು ಸಹ ಇದೆ.
ಆದ್ದರಿಂದ ಲಕ್ಷ್ಮೀದೇವಿಯ ಕೃಪೆಯನ್ನು ಪಡೆಯುವುದಕ್ಕಾಗಿ ತುಳಸೀದೇವಿ ಆರಾಧನೆಯನ್ನು ಕೂಡ ಮಾಡುವುದರಿಂದ ಸಾಕ್ಷಾತ್ ವಿಷ್ಣುವಿನ ಅನುಗ್ರಹವನ್ನು ಕೂಡ ನಾವು ಪಡೆದುಕೊಳ್ಳಬಹುದು. ನಿಮ್ಮ ಮನೆಯ ಮುಂದೆ ತುಳಸಿಗಿಡವಿದ್ದರೆ ಅದರಿಂದ ವೈಜ್ಞಾನಿಕವಾದ ಲಾಭವು ಕೂಡ ಇದೆ ಜತೆಗೆ ಆಧ್ಯಾತ್ಮಿಕ ಹಿನ್ನಲೆ ಸಹ ಇದೆ ನಿಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ನಿಮ್ಮ ಕೆಲಸಗಳು ಅರ್ಧಕ್ಕೆ ನಿಂತಿದ್ದರೆ ಆ ಕೆಲಸಗಳು ಪರಿಪೂರ್ಣ ವಾಗಬೇಕೆಂದರೆ ತುಳಸಿ ದೇವಿಯ ಮುಂದೆ ಈ ಪರಿಹಾರವನ್ನು ಪಾಲಿಸಿ ಬಳಿಕ ನೀವು ಮನೆಯಿಂದ ಆಚೆ ಹೋದರೆ ನಿಮ್ಮ ಎಲ್ಲ ಉತ್ತಮ ಕೆಲಸಗಳು ನಿರ್ವಿಘ್ನವಾಗಿ ಅಡೆತಡೆಗಳಿಲ್ಲದೆ ನೆರವೇರುತ್ತದೆ ಹಾಗಾದರೆ ಬನ್ನಿ ತುಳಸಿ ಗಿಡದ ಆಧ್ಯಾತ್ಮಿಕ ಹಿನ್ನೆಲೆ ಜೊತೆಗೆ ಅದರ ವೈಜ್ಞಾನಿಕ ಲಾಭಗಳನ್ನು ಕೂಡ ತಿಳಿಯೋಣ.
ಸ್ನೇಹಿತರೆ ಮನೆಯ ಮುಂದೆ ತುಳಸಿಗಿಡವಿದ್ದರೆ ಮನೆಗೆ ಯಾವುದೇ ತರದ ಸೊಳ್ಳೆ ಹುಳ ಹುಪ್ಪಟೆ ಗಳು ಬರುವುದಿಲ್ಲ ಇದು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಲು ಸಹಕರಿಸುತ್ತದೆ ಹಾಗೆ ಗಾಳಿಯಲ್ಲಿರುವ ಆಮ್ಲಜನಕವನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಿರುವ ತುಳಸಿ ಗಿಡವು, ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿಯಾಗಿದೆ. ಆಧ್ಯಾತ್ಮಿಕವಾಗಿ ತುಳಸಿ ಗಿಡದ ಕುರಿತು ಹೇಳುವುದಾದರೆ ತುಳಸಿ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯೊಳಗೆ ಕೆಟ್ಟ ಶಕ್ತಿಯ ಆಗಮನ ವಾಗುವುದಿಲ್ಲ ಹಾಗೆ ಯಾರೂ ಕೂಡ ಈ ತಪ್ಪನ್ನು ಮಾಡದಿರಿ ತುಳಸಿ ಗಿಡವನ್ನು ಸ್ನಾನ ಮಾಡದೆ ಮುಟ್ಟುವುದರಿಂದ ತುಳಸಿ ಗಿಡಕ್ಕೆ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ ಆದ್ದರಿಂದ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು ಮತ್ತು ಪ್ರತಿದಿನ ತುಳಸಿ ಮಾತೆಗೆ ಬೆಳಕಿನ ಸಮಯದಲ್ಲಿ ನೀರನ್ನು ಹಾಕಬೇಕು ಹಾಗೆ ನಿಮಗೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತಲೇ ಇದೆ ನಷ್ಟ ಅನುಭವಿಸುತ್ತ ಇದ್ದೀರಾ ನೋಡುವುದಾದರೆ ಈ ಪರಿಹಾರವನ್ನು ಪಾಲಿಸಿ ಇದರಿಂದ ಖಂಡಿತಾ ನಿಮ್ಮ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗಾದರೆ ಆ ಪರಿಹಾರ ಏನು ಎಂಬುದನ್ನು ನೋಡಲು ಕೆಳಗಿನ ಲೇಖನದಲ್ಲಿ.
ಹೌದು ತುಳಸಿ ಗಿಡಕ್ಕೆ ಒಂದು ಲೋಟದಷ್ಟು ಹಸಿ ಹಾಲನ್ನು ಹಾಕಿ ಮನೆಯಿಂದ ಆಚೆ ಹೋಗಬೇಕು ನೀವು ಯಾವುದೇ ಕೆಲಸ ಕಾರ್ಯಗಳಿಗೆ ಹೋಗುವಾಗ ಆ ಕೆಲಸ ಶುಭ್ರವಾಗಿ ಚರಕ ಬೇಕು ಅಂದರೆ ಈ ಪರಿಹಾರವನ್ನು ಮಾಡಿ ಖಂಡಿತಾ ನಿಮಗೆ ಉತ್ತಮ ಫಲ ಸಿಗುತ್ತದೆ ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ಈ ಪರಿಹಾರವನ್ನು ಯಾರು ಬೇಕಾದರೂ ಕಳುಹಿಸಬಹುದು ಇದರಿಂದ ಖಂಡಿತಾ ಮನೆ ಯಜಮಾನನಿಗೆ ಒಳ್ಳೆಯ ಲಾಭವಂತೂ ಆಗುತ್ತದೆ ಜೀವನದಲ್ಲಿ ಉಂಟಾಗುತ್ತಿರುವ ಹಲವು ಸಮಸ್ಯೆಗಳು ವೃತ್ತಿಪರ ಸಂಕಷ್ಟಗಳು ದೂರವಾಗುತ್ತವೆ. ಈಗ ಈ ಸಣ್ಣ ಪರಿಹಾರವನ್ನ ಪಾಲಿಸಿ ನಿಮಗೆ ತುಳಸಿ ಮಾತೆ ವಿಷ್ಣು ದೇವಾ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.