ಬಿಪಿ ಅನ್ನು ನಿಯಂತ್ರಣದಲ್ಲಿ ಇಡಬೇಕಾ? ಹಾಗಾದ್ರೆ ಹೀಗೆ ಮಾಡಿ ಸಾಕು ಬಿಪಿ ಜೊತೆಗೆ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೂ ಪರಿಹಾರ ಆಗುತ್ತೆ!ಹೌದು ಯಾವುದೇ ಅನಾರೋಗ್ಯ ಸಮಸ್ಯೆಗಳು ಆಗಿರಲಿ ಅದನ್ನು ಶುರುವಿನಲ್ಲಿಯೇ ಕಾಳಜಿ ಮಾಡಿ ಔಷಧಿ ತೆಗೆದುಕೊಳುವುದರಿಂದ ಸಮಸ್ಯೆ ದೊಡ್ಡದಾಗದೆ ಚಿಕ್ಕದರಲ್ಲಿಯೇ ಹೌದು ಇತ್ತೀಚಿನ ದಿನಗಳಲ್ಲಿಯಂತೂ ಕೆಲವೊಂದು ಸಮಸ್ಯೆಗಳಿಗೆ ಫಸ್ಟ್ ಸ್ಟೇಜ್ ಸೆಕೆಂಡ್ ಸ್ಟೇಜ್ ಅಂತೆಲ್ಲಾ ಇರುತ್ತೆ.
ಆದರೆ ಸಮಸ್ಯೆ ಯಾವ ಸ್ಟೇಜ್ ನಲ್ಲಿ ಇದೆ ಅನ್ನುವುದಕ್ಕಿಂತ ಮೊದಲು ನಮ್ಮ ದೇಹ ನಮಗೆ ಮೊದಲೇ ಎಚ್ಚರ ಕೊಡುತ್ತೆ ಕೆಲವೊಂದು ಸೂಚನೆಗಳನ್ನು ನೀಡುತ್ತಾ ಅದನ್ನು ಅರಿತು ನಾವು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಅದಕ್ಕೆ ತಕ್ಕ ಔಷಧಿಯನ್ನು ಮಾಡಿಕೊಂಡರೆ ಖಂಡಿತವಾಗಿಯೂ ಸಮಸ್ಯೆಗಳು ದೊಡ್ಡದಾಗದೆ ಚಿಕ್ಕಪುಟ್ಟ ಪರಿಹಾರಗಳನ್ನ ಮಾಡಿಕೊಂಡಾಗಲೇ ಅಂತಹ ಅನಾರೋಗ್ಯ ಸಮಸ್ಯೆಗಳಿಂದ ಶಮನ ಪಡೆದುಕೊಳ್ಳಬಹುದು.
ಇವತ್ತಿನ ಪುಟದಲ್ಲಿ ಬ್ಲಡ್ ಪ್ರೆಶರ್ ಹೌದು ಸ್ಟ್ರೆಸ್ ಫುಲ್ ಲೈಫ್ ನಲ್ಲಿ ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋದು ಹೆಚ್ಚಿನ ಮಂದಿಗೆ ಕಾಡುತ್ತಿದೆ ಕೆಲವರಿಗೆ ಹೈ ಬ್ಲಡ್ ಪ್ರೆಶರ್ ಕಾಡಿದರೆ ಇನ್ನೂ ಕೆಲವರಿಗೆ ಲೋ ಬ್ಲಡ್ ಪ್ರೆಶರ್ ಕಾಡುತ್ತಿದೆ.ಹೌದು ಈ ಹೈ ಬ್ಲಡ್ ಪ್ರೆಶರ್ ಅನ್ನು ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಕೆಲವೊಂದು ಔಷಧಿಗಳು ಕೆಲವೊಂದು ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು ಆದರೆ ಲೋ ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋ ಹೆಚ್ಚಿನದಾಗಿ ಆಹಾರದ ಮೂಲಕ ಉತ್ತಮ ಜೀವನ ಶೈಲಿಯನ್ನ ಪಾಲಿಸುವ ಮೂಲಕವೇ ಕಂಟ್ರೋಲ್ ಮಾಡಬೇಕು ಹೊರತು, ಯಾವುದೇ ಚಿಕಿತ್ಸೆ ಪಡೆದುಕೊಂಡರು ಅದು ನಿಮ್ಮ ಜೀವನಶೈಲಿಯ ಮೇಲೆ ನಿರ್ಧಾರವಾಗುತ್ತೆ ನಿಮ್ಮ ಲೋ ಬ್ಲಡ್ ಪ್ರೆಶರ್ ಸಮಸ್ಯೆ.
ಇವತ್ತಿನ ಮಾಹಿತಿಯಲ್ಲಿ ಈ ಹೈ ಬ್ಲಡ್ ಪ್ರೆಶರ್ ಕುರಿತು ಮಾತನಾಡುತ್ತಿದ್ದೇವೆ ಹಾಗಾಗಿ ಈ ಬ್ಲಡ್ ಪ್ರೆಶರ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ಯಾವ ಮನೆಮದ್ದನ್ನು ಪಾಲಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಈ ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋದು ಹಲವು ಕಾರಣಗಳಿಂದ ಉಂಟಾಗುತ್ತದೆ ಅದು ನಮ್ಮ ಆಹಾರ ಪದ್ಧತಿ ಅಥವಾ ನಮ್ಮ ಜೀವನಶೈಲಿ ಮೇಲೆ ಆಧಾರಿತವಾಗಿರುತ್ತದೆ.
ಹೈ ಬ್ಲಡ್ ಪ್ರೆಶರ್ ಲೋ ಬ್ಲಡ್ ಪ್ರೆಶರ್ ಯಾವುದೇ ಇದ್ದರೂ ನೇರವಾಗಿ ಇದು ಹೃದಯದ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಇಂತಹ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಳಜಿ ಮಾಡಿಪರಿಹಾರ ಮಾಡುವ ವಿಧಾನ ;ಮೊದಲಿಗೆ ಈ ವಿಧಾನವನ್ನು ಎಲ್ಲರೂ ಕೂಡ ಪಾಲಿಸಬಹುದು ಯಾವುದೆಂದರೆ, 2 ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಆ ಅಂಜೂರವನ್ನು ನೀರಿನ ಸಮೇತ ಸೇವನೆ ಮಾಡಬೇಕು.
ಹೌದು ಅಂಜೂರ ಬಹಳ ಉತ್ತಮವಾದ ಒಣಹಣ್ಣು ಇದು ಆರೋಗ್ಯವನ್ನು ವೃದ್ಧಿ ಮಾಡುವುದಲ್ಲದೆ ಬ್ಲಡ್ ಪ್ರಶರ್ ನಂತಹ ಸಮಸ್ಯೆಯನ್ನು ಕೂಡ ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿರುತ್ತದೆ.ಮತ್ತೊಂದು ವಿಧಾನ ಏನು ಅಂದರೆ ನಿಮಗೆ ಬ್ಲಡ್ ಪ್ರೆಶರ್ ಜೊತೆಗೆ ಕೊಲೆಸ್ಟ್ರಾಲ್ ಸಮಸ್ಯೆ ಇದೆ ಸ್ಥೂಲಕಾಯ ಸಮಸ್ಯೆ ಇದೆ ಅಂದರೆ ಅದಕ್ಕಾಗಿ ಈ ಸರಳ ಪರಿಹಾರವನ್ನು ಮಾಡಿಕೊಳ್ಳಿ. ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ರಕ್ತಶುದ್ಧಿ ಆಗುವುದರ ಜೊತೆಗೆ ಬ್ಲಡ್ ಪ್ರೆಶರ್ ಕೂಡ ನಿಯಂತ್ರಣದಲ್ಲಿಡುತ್ತದೆ ಹಾಗು ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಜೊತೆಗೆ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಈ ವಿಧಾನ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.
ಅದೇನಪ್ಪಾ ಅಂದರೆ ಎಲ್ಲರಿಗೂ ಕೂಡ ಕರಿಬೇವು ಬಹಳ ಬೇಗ ಸಿಗುತ್ತದೆ ಹಾಗಾಗಿ ಕರಿಬೇವಿನ ಎಲೆ ಯಿಂದಲೇ ನಾವು ಈ ಪರಿಹಾರವನ್ನು ಮಾಡುತ್ತಿರುವುದು ಕರಿಬೇವು ಎಂತಹ ಶಕ್ತಿಯನ್ನು ಹೊಂದಿದೆ ಅಲ್ವಾ. ಇದು ರಕ್ತದಲ್ಲಿ ಇರುವ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲ ಬಿಪಿಯನ್ನು ಕೂಡಾ ನಿಯಂತ್ರಣದಲ್ಲಿಡುತ್ತದೆ.
ಈ ಮನೆಮದ್ದನ್ನು ಬೆಳಿಗ್ಗೆ ಎದ್ದು ನೀವು ಮಾಡಿಕೊಳ್ಳಬಹುದು ನೀರನ್ನು ಕುದಿಸುವಾಗ ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ನೀರು ಬಣ್ಣ ಬದಲಾಗುವವರೆಗೂ ನೀರನ್ನು ಕುದಿಸಿ ಶೋಧಿಸಿಕೊಂಡು ಖಾಲಿ ಹೊಟ್ಟೆಗೆ ಕುಡಿಯುತ್ತ ಬನ್ನಿ ಇದರಿಂದ ಮುಖ್ಯವಾಗಿ ನಿಮಗೆ ಬ್ಲಡ್ ಪ್ರೆಶರ್ ಮಾತ್ರ ಅಲ್ಲ ಮಲಬದ್ಧತೆ ಅಂತಹ ಸಮಸ್ಯೆಯಿಂದ ಕೂಡ ಪರಿಹಾರ ಸಿಗುತ್ತೆ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.