ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಹೆಣ್ಣುಮಕ್ಕಳ ಪೋಷಕರು ಎಷ್ಟು ಜಾಗರೂಕತೆಯಿಂದ ಇದ್ದರೂ ಸಹ ಸಾಲುವುದಿಲ್ಲ ಅದೇ ರೀತಿ ಹೆಣ್ಣುಮಕ್ಕಳು ವಯಸ್ಸಿಗೆ ಬಂದರೆ ಅವರನ್ನು ಮನೆಯಲ್ಲಿಟ್ಟುಕೊಳ್ಳುವುದು ಸೆರಗಿನಲ್ಲಿ ಇಟ್ಟುಕೊಂಡಿರುವ ಕೆಂಡ ಎಂಬಂತೆ ಪೋಷಕರು ಭಾವಿಸುತ್ತಾರೆ.ಯಾವಾಗ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸುವುದು ಅವರಿಗೆ ಒಳ್ಳೆಯ ಕಡೆ ಸಂಬಂಧ ನೋಡಿ ನಮ್ಮ ಹೆಣ್ಣು ಮಕ್ಕಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಳ್ಳಬೇಕು ಎಂಬುದು ಎಲ್ಲಾ ಹೆಣ್ಣು ಹೆತ್ತ ಪೋಷಕರ ಕನಸು ಕೂಡ ಆಗಿರುತ್ತದೆ. ತಮಗೆ ಏನೇ ಕಷ್ಟಗಳಿರಲಿ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಚೆನ್ನಾಗಿ ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕು ಎಂಬುದು ಪ್ರತಿಯೊಬ್ಬರ ಪೋಷಕರ ಆಸೆಯಾಗಿರುತ್ತದೆ.
ಆದರೆ ಇಲ್ಲೊಬ್ಬ ಯುವತಿಗೂ ಕೂಡ ಮನೆಯಲ್ಲಿ ಮದುವೆ ಮಾಡಿಕೊ ಎಂದು ಒತ್ತಾಯವನ್ನು ಪೋಷಕರು ಮಾಡುತ್ತಲೇ ಇರುತ್ತಾರೆ ಆದರೆ ಆ ಯುವತಿಗೆ ಮಾತ್ರ ಮದುವೆ ಮಾಡಿಕೊಳ್ಳಲು ಇಷ್ಟ ಇರುವುದಿಲ್ಲ ಇದಕ್ಕೆ ಮನೆಯವರು ಪ್ರತಿ ಬಾರಿ ಮದುವೆ ಮಾಡಿಕೋ ಅಂದಾಗಲೂ ಅದಕ್ಕೆ ಒಪ್ಪದೆ ಸಮಯ ತಳ್ಳುತ್ತಾ ಇದ್ದಳು ಆದರೆ ಒಮ್ಮೆ ಆ ಯುವತಿ ಮನೆಯವರು ಮದುವೆ ಮಾಡಿಕೋ ಎಂದು ಒತ್ತಾಯ ಮಾಡಿದಾಗ ಆಕೆ ಮನೆ ಬಿಟ್ಟು ಹೋಗುತ್ತಾಳೆ. ಹೌದು ಮನೆ ಬಿಟ್ಟು ಹೋದ ಆ ಯುವತಿ ಮತ್ತೆ ಬಂದದ್ದು ಹೇಗೆ ಗೊತ್ತಾ ಹೌದು ನೀವು ಕೂಡ ಅಚ್ಚರಿ ಪಡ್ತೀರಾ. ಹೌದು ಸತತ 7ವರ್ಷಗಳ ನಂತರ ಯುವತಿ ಮನೆಗೆ ಬಂದಾಗ ಆಕೆ ದೊಡ್ಡ ಸಾಧನೆ ಮಾಡಿ ಬಂದಿದ್ದಳು.
ಹೌದು ಈ ಯುವತಿಯ ಹೆಸರು ಸಂಜು ರಾಣಿ ಇವರು ಮೂಲತಃ ಮೀರತ್ ನವರು. ಇನ್ನೂ ಇವರ ತಾಯಿ ಅ’ನಾರೋಗ್ಯದಿಂದ 2013 ರಲ್ಲಿ ತೀರಿಕೊಳ್ಳುತ್ತಾರೆ.. ನಂತರ ತಾಯಿಯನ್ನು ಕಳೆದುಕೊಂಡ ಸಂಜುರಾಣಿ ಆರ್ ಜಿ ಕಾಲೇಜಿನಲ್ಲಿ ಪದವಿ ಮುಗಿಸಿ, ದೆಹಲಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತ ಇದ್ದರು. ನಂತರ ಕುಟುಂಬದವರು ಮದುವೆ ಮಾಡಿಕೊಳ್ಳುವಂತೆ ಮನೆಯಲ್ಲಿ ಒ’ತ್ತಾಯ ಮಾಡುತ್ತಾರೆ. ಆದರೆ ಸಂಜು ರಾಣಿಯವರು ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸನ್ನು ಕಟ್ಟಿಕೊಂಡಿದ್ದರು. ಕೊನೆಗೆ ನನಗೆ ಕುಟುಂಬಕ್ಕಿಂತ ಗುರಿ ಮುಖ್ಯ ಎಂದು ಆಲೋಚನೆ ಮಾಡಿ ಮನೆ ಬಿಟ್ಟು ಬರುತ್ತಾರೆ ಹಾಗೆ ಮನೆಬಿಟ್ಟು ಬಂದ ಈಕೆ 7ವರ್ಷಗಳಲ್ಲಿ ಕಷ್ಟಪಟ್ಟು ಓದನ್ನು ಮುಂದುವರಿಸಿ ನಂತರ ಸಾರ್ವಜನಿಕ ಸೇವಾ ಆಯೋಗದ ಪಿ.ಎಸ್.ಸಿ ಪರೀಕ್ಷೆಯನ್ನು ಬರೆದು ಇಂದು ಉತ್ತೀರ್ಣರಾಗಿ ಇದ್ದಾರೆ..
ಇನ್ನೂ ಸಂಜನಾ ಎಳು ವರ್ಷದಲ್ಲಿ ತಮ್ಮ ಗುರಿ ಅನ್ನು ತಲುಪಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಹೌದು ಬಹಳ ಕಷ್ಟಪಟ್ಟು ಮುಂದೆ ಬಂದಿರುವ ಸಂಜು ಮನೆಬಿಟ್ಟು ಹೋದಾಗ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ನೋಡಿ. ನಾನು ಮನೆಬಿಟ್ಟಾಗ ಕೈಯಲ್ಲಿ ಒಂದು ರೂಪಾಯಿ ಸಹ ಇರಲಿಲ್ಲ ಕೊನೆಗೆ ಕಷ್ಟಪಟ್ಟು ಒಂದು ಬಾಡಿಗೇ ರೂಮ್ ತೆಗೆದುಕೊಂಡೆ ಬಳಿಕ ಮಕ್ಕಳಿಗೆ ಟ್ಯೂಶನ್ ಮಾಡುತ್ತ ಇದ್ದ ಹಾಗೆ ಖಾಸಗಿ ಶಾಲೆಯಲ್ಲಿ ಪಾರ್ಟ್ ಟೈಮ್ ಟೀಚರ್ ಆಗಿ ಕೂಡ ಕೆಲಸ ಮಾಡಿ ಇದರ ಜೊತೆಯಲ್ಲಿ ವಿದ್ಯಾಭ್ಯಾಸವನ್ನು ಕೂಡ ಮಾಡಿಕೊಂಡು ಪರೀಕ್ಷೆಯನ್ನು ಬರೆದಿದ್ದೇನೆ ಎಂದು ಸಂಜು ಹೇಳಿಕೊಂಡಿದ್ದಾಳೆ ಮತ್ತು ಈ ಸಮಯದಲ್ಲಿಯೇ ನಾನು ಓದಿಕೊಂಡು ಪರೀಕ್ಷೆ ಉತ್ತೀರ್ಣಳಾಗಿ ದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ನನಗೆ ಜಿಲ್ಲಾಧಿಕಾರಿ ಆಗುವ ಕನಸು ಇದೆ ಎಂದು ತಮ್ಮ ಸಾಧನೆಯ ಹಾದಿ ಅನ್ನು ತಿಳಿಸುತ್ತಾ ಮುಂದಿನ ಗುರಿಯನ್ನು ತಿಳಿಸಿದ್ದಾರೆ. ನೋಡಿದಿರಲ್ಲ ಸ್ನೇಹಿತರ ಮನೆ ಬಿಟ್ಟು ಬಂದ ಯುವತಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಜೊತೆಯಲ್ಲಿ ಮಕ್ಕಳಿಗೂ ಸಹ ಟ್ಯೂಶನ್ ಮಾಡುತ್ತ ತಾನು ಕೂಡ ಇದೇ ಸಮಯದಲ್ಲಿ ಓದಿಕೊಳ್ಳುವ ಮೂಲಕ ಇದೀಗ ದೊಡ್ಡ ಅಧಿಕಾರಿ ಆಗಿದ್ದಾಳೆ ನಿಜಕ್ಕೂ ಸಂಜನಾಳ ಧೈರ್ಯವನ್ನ ಮೆಚ್ಚಲೆಬೇಕು ಜೊತೆಗೆ ಆಕೆ ಮನೆಯವರ ವಿರೋಧ ವ್ಯಕ್ತಪಡಿಸಿ ವಿದ್ಯಾಭ್ಯಾಸವನ್ನು ಮಾಡಿದರು ಆಕೆ ಆಕೆಯ ಗುರಿಯನ್ನು ಸಲ್ಲಿಸಿದ್ದಾಳೆ ನಿಜಕ್ಕೂ ಇಂತಹ ಹೆಣ್ಣು ಮಕ್ಕಳು ಸಮಾಜದಲ್ಲಿ ಅದೆಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾಳೆ ನೀವು ತಪ್ಪದೆ ಈ ಮಾಹಿತಿ ಕುರಿತು ಕಮೆಂಟ್ ಮಾಡಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.