ವಿಪರೀತ ಡ್ಯಾಂಡ್ರಫ್ ಆಗಿದೆ ಅದನ್ನೂ ತಡೆಗಟ್ಟುವುದಕ್ಕೆ ಮನೆಮದ್ದು ಬೇಕು ಎಂದಲ್ಲಿ ನೀವೂ ಕೂಡ ಈ ಮನೆ ಮಧ್ಯೆ ಗಾಗಿ ಹುಡುಕಾಟ ನಡೆಸುತ್ತಾ ಇದ್ದಲ್ಲಿ ಈ ಪರಿಹಾರವನ್ನು ಮಾಡಿ ನಿಮ್ಮ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಇದರಿಂದ ಕೂದಲು ಕೂಡ ಉತ್ತಮವಾಗಿ ಬೆಳವಣಿಗೆ ಆಗುತ್ತದೆ ಹಾಗಾದರೆ ಮಾಹಿತಿ ಕುರಿತು ಇನ್ನಷ್ಟು ವಿಚಾರ ತಿಳಿಯೋಣ ಈ ಕೆಳಗಿನ ಪುಟದಲ್ಲಿ.
ಹೌದು ಈ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಅದು ಡ್ಯಾಂಡ್ರಫ್ ಸಮಸ್ಯೆ ಅಂದರೆ ಯಾರಿಗೆ ಆದರೂ ಭಯ ಆಗುತ್ತೆ ಯಾಕೆ ಅಂದರೆ ವಿಪರೀತ ತಲೆ ಕಡಿತ ಬರುತ್ತಾ ಇರುತ್ತದೆ ಹಾಗೂ ಈ ಸಮಸ್ಯೆ ಹೆಚ್ಚಾದಾಗ ಆದು ನಮ್ಮ ಮುಖದ ತ್ವಚೆ ಗೂ ಕೂಡ ಹಾನಿ ಮಾಡುತ್ತದೆ ಹೇಗೆ ಅಂದರೆ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾದಾಗ ಅದರ ಹುಟ್ಟು ತ್ವಚೆಯ ಮೇಲೆ ಬಿದ್ದು ಮೊಡವೆ ಸಮಸ್ಯೆಯನ್ನು ಉಂಟು ಮಾಡುತ್ತೆ ವಿಪರೀತ ಕೆರೆತ ಬರುತ್ತದೆ ಹಾಗಾಗಿ ಡ್ಯಾಂಡ್ರಫ್ ಸಮಸ್ಯೆ ರ ನಿರ್ಲಕ್ಷಿಸ ಬೇಡಿ ಇದು ಮುಂದಿನ ದಿನಗಳಲ್ಲಿ ಹೆಚ್ಚು ಹೇರ್ ಫಾಲ್ ಆಗುವ ತೊಂದರೆಯನ್ನು ಉಂಟು ಮಾಡುತ್ತೆ.
ಈ ಡ್ಯಾಂಡ್ರಫ್ ಸಮಸ್ಯೆ ಉಂಟಾಗುವುದಕ್ಕೆ ನಾನಾ ಕಾರಣಗಳಿಗೆ ಕೆಲವರು ಕೂದಲನ್ನು ಸರಿಯಾಗಿ ಪೋಷಣೆ ಮಾಡುತ್ತಾ ಇರುವುದಿಲ್ಲ ಕೂದಲನ್ನು ಸರಿಯಾಗಿ ತೊಳೆಯದ ಇರುವುದಿಲ್ಲ ಮತ್ತು ಕೂದಲಿಗೆ ಎಣ್ಣೆ ಹಚ್ಚದ ಇರುವಾಗ ಸ್ಕ್ಯಾಲ್ಪ್ ಡ್ರೈ ಆಗಿ ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ.ಅಷ್ಟೆ ಅಲ್ಲಾ ಯಾವಾಗ ಧೂಳು ಪ್ರದೂಷಣೆ ಇರುವ ಜಾಗಗಳಲ್ಲಿ ನಾವು ಓಡಾಡಿರುತ್ತೇವೆ ಆಗಲೂ ಕೂಡ ಈ ಕೂದಲು ಮೇಲೆ ದೂಳು ಕುಳಿತು ಅದು ಡ್ಯಾಂಡ್ರಫ್ ಆಗಿ ಪರಿಣಮಿಸಿ ವಿಪರೀತ ತಲೆಯ ಭಾಗದಲ್ಲಿ ಕಡಿತ ಉಂಟಾಗುವುದು ಹೇರ್ ಫಾಲ್ ಹೀಗೆಲ್ಲ ಆಗುತ್ತೆ ಇದಕ್ಕಾಗಿ ಎಷ್ಟೊಂದು ಜನ ನೂರಾರು ರೂಪಾಯಿಗಳ ಶ್ಯಾಂಪುಗಳನ್ನು ಬಳಕೆ ಮಾಡಿರ್ತಾರೆ ಯಾವುದರಿಂದಲೂ ಪರಿಹಾರ ಸಿಕ್ಕಿರುವುದಿಲ್ಲ.
ಆದರೆ ಇಂದು ನಾವು ಮನೆಯಲ್ಲೇ ಮಾಡಬಹುದಾದ ಪರಿಣಾಮಕಾರಿಯಾದ ಪರಿಹಾರ ಒಂದರ ಬಗ್ಗೆ ತಿಳಿಸಿಕೊಡುತ್ತೇವೆ, ಇದಕ್ಕಾಗಿ ಬೇಕಾಗಿರುವುದು ಮೊಸರು ಮೆಂತ್ಯ ಕೊಬ್ಬರಿ ಎಣ್ಣೆ ಹಾಗೂ ಕರಿಬೇವು.ಮೊದಲಿಗೆ ರಾತ್ರಿ ಮೆಂತ್ಯೆ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು ಈ ರುಬ್ಬಿ ಪೇಸ್ಟ್ ಮಾಡಿ ಕೊಳ್ಳುವಾಗ ಕರಿಬೇವನ್ನು ಕೂಡ ಇದರೊಟ್ಟಿಗೆ ಹಾಕಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಮೊಸರು ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕಿ ಎಲ್ಲವನ್ನು ಮತ್ತೊಮ್ಮೆ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಕೂದಲಿಗೆ ಅಲ್ಲ ಮುಖ್ಯವಾಗಿ ಕೂದಲಿನ ಬುಡಕ್ಕೆ ಲೇಪ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿ ಒಂದು ಗಂಟೆಯ ಬಳಿಕ ತಲೆ ಸ್ನಾನವನ್ನು ಮಾಡಬೇಕು.
ಇದೇ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಮತ್ತು ವಾರಕ್ಕೆ ಎರಡರಿಂದ ಮೂರು ಬಾರಿ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ನೆಪ ಮಾಡಿ ಮಸಾಜ್ ಮಾಡಬೇಕು ಹಾಗೂ ವಾರಕ್ಕೊಮ್ಮೆ ಈ ಮೇಲೆ ತಿಳಿಸಿದಂತಹ ಪರಿಹಾರವನ್ನೂ ಮಾಡಬೇಕು.
ಈ ರೀತಿಯಾಗಿ ಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಮಾಡಿಕೊಳ್ಳಬಹುದು ಆದರೆ ಡ್ಯಾಂಡ್ರಫ್ ಸಮಸ್ಯೆ ಎಂಬುದು ಮತ್ತೆ ಮತ್ತೆ ಕಾಡುವ ತೊಂದರೆಯಾಗಿರುವುದರಿಂದ ನಾವು ಸದಾ ಕೂದಲಿನ ಪೋಷಣೆ ಮಾಡುತ್ತಾ ಇರಬೇಕು, ಇಲ್ಲವಾದರೆ ಮತ್ತೆ ಡ್ಯಾಂಡ್ರಫ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಮೇಲೆ ತಿಳಿಸಿದಂತಹ ಪರಿಹಾರ ಕೇವಲ ಹೊಟ್ಟಿನ ಸಮಸ್ಯೆಗೆ ಮಾತ್ರವಲ್ಲ ಕೂದಲು ಉದುರುವ ಸಮಸ್ಯೆಯನ್ನು ಕೂಡಲೇ ಪರಿಹರಿಸುತ್ತೆ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.