ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಬೆಳೆದುಕೂಳ್ಳುವ ಈ ಗಿಡ ಔಷಧಿಗಳ ಕಣಜ , ಇದನ್ನ ಸರಿಯಾಗಿ ಬಳಸಿದ್ರೆ ನಿಮ್ಮ ದೇಹ ಕಬ್ಬಿಣದ ತರಹ ಗಟ್ಟಿ ಇರುತ್ತೆ…

“ಉತ್ತರಾಣಿ ಇವಳು ಔಷಧೀಯ ಗಣಿ”…..ಹಾವು ಚೇಳು ನಾಯಿ ಕಚ್ಚಿದರೆ, ದಿಢೀರನೆ ಈ ಉತ್ತರಾಣಿಯ ಪ್ರಯೋಜನ ಪಡೆದುಕೊಳ್ಳಿ ಅತಿಬೇಗ ನೋವು ಉರಿವೂತ ಕಡಿಮೆಯಾಗುತ್ತದೆ…ನಮಸ್ಕಾರಗಳು ಓದುಗರೆ, ನೀವು ಉತ್ತರಾಣಿ ಗಿಡದ ಬಗ್ಗೆ ಕೇಳಿದ್ದೀರಾ? ಹೌದು ಬಹಳಷ್ಟು ಮಂದಿಗೆ ಈ ಉತ್ತರಾಣಿ ಗಿಡ ಪರಿಚಯ ಇರುವುದಿಲ್ಲ, ಆದರೆ ಅವಶ್ಯಕವಾಗಿ ಬೇಕಾಗುತ್ತದೆ ಅಗಾಧವಾದ ಅನಾರೋಗ್ಯ ಸಮಸ್ಯೆಗಳಿಗೆ ಇದರ ಚಿಕ್ಕ ಎಲೆ ಬೀಜಗಳಿಂದಲೇ ಪರಿಹಾರ ಕೊಡುತ್ತೆ. ಹೇಗೆ ಅಂತ ತಿಳಿಯೋಣ ಬನ್ನಿ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಈ ಉತ್ತರಾಣಿ ಒಳ್ಳೆಯ ಔಷಧೀಯ ಗಿಡಮೂಲಿಕೆ ಇದು ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ. ಹಾಗಾಗಿ ಎಷ್ಟೋ ಅನಾರೋಗ್ಯ ಸಮಸ್ಯೆಗಳಿಗೆ ಇದೊಂದು ಗಿಡ ನೆಡುವುದರಿಂದ ಉತ್ತರಾಣಿ ಗೆ ಆಯುರ್ವೇದದಲ್ಲಿ ಔಷಧಾಲಯಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ.

ಅಷ್ಟೇ ಅಲ್ಲ ವಿನಾಯಕನ ಚತುರ್ಥಿಯಲ್ಲಿ ಬಳಸುವ ಪ್ರಮುಖ ಎಲೆ ಈ ಉತ್ತರಾಣಿಯ ಎಲೆ ಆಗಿರುತ್ತದೆ. ವಿಶೇಷವೇನೆಂದರೆ ಪೂಜೆಗಳ ಕ್ರಮದಲ್ಲಿ ಆರನೆಯ ಸ್ಥಾನವನ್ನು ಪಡೆದುಕೊಂಡಿದೆ ಈ ಉತ್ತರಾಣಿ.ಹಾವು ಚೇಳು ಕಡಿದಾಗ ಅದರ ನೋವು ಎಷ್ಟಿರುತ್ತದೆ ಮತ್ತು ಭಯ ಎಷ್ಟಿರುತ್ತದೆ ಅಂತ ಗೊತ್ತೇ ಇದೆ ಅಲ್ವಾ. ಹೌದು ಹಾವು ಅಥವಾ ಚೇಳು ಕಡಿದಾಗ ಬಹಳ ಬೇಗ ವಿಷ ದೇಹಕ್ಕೆ ಏರುತ್ತದೆ ಅಂತಹ ಸಮಯದಲ್ಲಿ ಈ ಉತ್ತರಾಣಿ ಎಲೆಯ ರಸವನ್ನು ಕಚ್ಚಿದ ಭಾಗಕ್ಕೆ ಲೇಪನ ಮಾಡುವುದರಿಂದ ಉರಿ ನೋವು ಬೇಗ ಕಡಿಮೆಯಾಗುತ್ತದೆ ಮತ್ತು ಬೇಗನೆ ವಿಷ ಏರದಂತೆ ಇದು ನೋಡಿಕೊಳ್ಳುತ್ತೆ.

ಸಂಸ್ಕೃತದಲ್ಲಿ ಉತ್ತರಾಣಿ ವಿಶೇಷ ಹೆಸರಿದೆ ಅಪಮಾರ್ಗ ಅಥವಾ ಕರ ಮಂಜರಿ ಅಂತ ಇದನ್ನ ಕರೆಯುತ್ತಾರೆ ಇದರ ಎಲೆಯ ರಸ ಸೇವನೆಯಿಂದ ಕಸದ ಬಾಧೆ ನಿವಾರಣೆಯಾಗುತ್ತದೆ ದೇಹ ಉಬ್ಬುವ ಹಾಗೆ ಆಗುತ್ತಿದ್ದರೆ ಅಂತಹ ಬಾಧೆಗಳಿಂದಲೂ ಪರಿಹಾರ ಕೊಡುತ್ತೆ ಉತ್ತರಾಣಿ.

ಕಷ್ಟ ಸಮಸ್ಯೆ ಇದ್ದವರು, ಇದರ ಪ್ರಯೋಜನ ಪಡೆದುಕೊಳ್ಳುತ್ತ ಬನ್ನಿ ಇದರಿಂದ ಕುಷ್ಟ ತಡೆಯಬಹುದು ಅಷ್ಟೆಲ್ಲಾ ಕಜ್ಜಿ ತುರಿಕೆಯ ಬದುಕು ಈ ಎಲೆಯ ರಸವನ್ನು ಲೇಪನ ಮಾಡುವುದರಿಂದ ತುರಿಕೆಯಂತಹ ಸಮಸ್ಯೆ ಕೂಡ ಚರ್ಮ ಸಂಬಂಧಿ ಸಮಸ್ಯೆ ಸಹ ಬಹಳ ಬೇಗ ಕಡಿಮೆಯಾಗುತ್ತದೆ.ಹಾಲಿನಲ್ಲಿ ಉತ್ತರಾಣಿಯ ಬೀಜಗಳನ್ನು ಕುದಿಸಿ ಅದನ್ನು ಶೋಧಿಸಿ ಬಳಿಕ ಕುಡಿಯುವುದರಿಂದ ಹೊಟ್ಟೆ ನೋವು ಬಹಳ ಬೇಗ ಶಮನವಾಗುತ್ತದೆ. ಅಜೀರ್ಣ ಸಂಬಂಧಿ ಸಮಸ್ಯೆಗಳಿದ್ದರೆ ಯೋಚಿಸಬೇಡಿ ಈ ಉತ್ತರಾಣಿ ಬೇರಿನ ಪುಡಿಯನ್ನು ಬಿಸಿನೀರಿಗೆ ಸ್ವಲ್ಪ ಮಿಶ್ರ ಮಾಡಿ ಕುಡಿಯಿರಿ ಅಜೀರ್ಣ ಎದೆಉರಿ ಹೊಟ್ಟೆ ಉಬ್ಬರಿಸುವುದು ಇಂತಹ ಸಮಸ್ಯೆಗಳು ನಿವಾರಣೆಯಾಗುತ್ತೆ.

ಮುಖ್ಯವಾಗಿ ಮಕ್ಕಳು ರಸ್ತೆಯಲ್ಲಿ ಓಡಾಡುವಾಗ ಅಚಾನಕ್ಕಾಗಿ ಹುಚ್ಚುನಾಯಿ ಕಡಿದು ಬಿಡುತ್ತೆ ಅಂದುಕೊಳ್ಳಿ ಆಗ ಹೈಡ್ರೋಫೋಬಿಸಿಟಿ ಎಂಬ ಸಮಸ್ಯೆ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ ಆಗ ಉತ್ತರಾಣಿಯ ಬೀಜಗಳ ಪ್ರಯೋಜನ ಪಡೆದುಕೊಳ್ಳಬೇಕು ಇದರ ಬೀಜಗಳ ಕಷಾಯ ಸೇವಿಸುವುದು ಇದರ ಜೊತೆಗೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಇಂತಹ ಪರಿಸ್ಥಿತಿಯಲ್ಲಿ ಉಂಟಾಗುವ ಆಘಾತಕಾರಿ ಸಮಸ್ಯೆಗಳನ್ನು ಬೇಗ ಪರಿಹಾರ ಮಾಡಿಕೊಳ್ಳಬಹುದು.ಅಸ್ತಮಾದಂತಹ ಸಮಸ್ಯೆಯಿಂದ ಬಳಲುವವರಿಗೆ ಸಾಮಾನ್ಯವಾಗಿ ಉಸಿರಾಟದ ತೊಂದರೆ ಇರುತ್ತದೆ, ಅಂಥವರು ಉತ್ತರಾಣಿಯ ಬೇರಿನ ಚೂರ್ಣ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ ಈ ಸಮಸ್ಯೆಯಿಂದ ಕೂಡ ಶಮನ ಪಡೆದುಕೊಳ್ಳಬಹುದು.

ಚರ್ಮ ಸಂಬಂಧಿ ಯಾವುದೇ ಸಮಸ್ಯೆಗಳಿದ್ದರೂ ಈ ಉತ್ತರಾಣಿ ಗಿಡದ ಚೂರ್ಣ ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ ಮತ್ತು ಕಜ್ಜಿ ತುರಿಕೆ ಗಾಯ ಅಥವಾ ಬೆವರುಸಾಲೆ ಕೂಡ ಇಂತಹ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಹಕಾರಿ ಈ ಗಿಡದ ಚೂರ್ಣ.ಹಾಗಾಗಿ ಉತ್ತರಾಣಿ ಇವಳು ಔಷಧೀಯ ಗಣಿ ಇದರ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳುವ ಮೂಲಕ ಬರುವ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ ಆರೋಗ್ಯಕರ ಜೀವನ ನಡೆಸಿ ಧನ್ಯವಾದ…

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

1 day ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

1 day ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

1 day ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

1 day ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

1 day ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.