ದೇಹ ಶುದ್ಧಿಯಾಗ ಬೇಕೆಂದಲ್ಲಿ ಈ ಡ್ರಿಂಕ್ ಅನ್ನು ಸೇವಿಸಿ ಇದರಿಂದ ದೇಹದಲ್ಲಿರುವ ಟಾಕ್ಸಿಕ್ ಅಂಶ ಹೊರಹಾಕಬಹುದು ಜೊತೆಗೆ ಶರೀರದ ಒಳಗೆ ಇರುವ ಬೇಡದಿರುವ ಅಂಶ ಹೊರ ಹೋಗಲು ಈ ಮನೆಮದ್ದು ಸಹಕಾರಿ ಆಗಿರುತ್ತದೆ ಇದನ್ನು ಮಾಡುವ ವಿಧಾನ ತಿಳಿಯೋಣ ಬನ್ನಿ ಜೊತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳು ಈ ಪರಿಹಾರದಿಂದ ಏನೆಲ್ಲ ದೊರೆಯುತ್ತದೆ ಎಂಬುದನ್ನು ಕೂಡ ತಿಳಿಯೋಣ ಇವತ್ತಿನ ಲೇಖನಿಯಲ್ಲಿ.ಹೌದು ನಾವು ಎಷ್ಟೇ ದುಡಿದರೂ ನಾವು ಎಷ್ಟು ಖುಷಿಯಾಗಿದ್ದರೂ ನಮಗೆ ಕೊನೆಯದಾಗಿ ಬೇಕಾಗಿರುವುದು ಉತ್ತಮ ಆರೋಗ್ಯ ಅಷ್ಟೇ. ಹೌದು ನಮ್ಮ ಉತ್ತಮ ಆರೋಗ್ಯಕ್ಕಾಗಿ ನಾವು ಖುಷಿಯಾಗಿರಬೇಕು ನಾವು ಕಷ್ಟಪಟ್ಟು ದುಡಿಯಬೇಕು.
ಆದರೆ ಕಷ್ಟಪಟ್ಟು ದುಡಿದರೂ ನಾವು ಆರೋಗ್ಯಕರವಾಗಿರಬೇಕು ಹಾಗಾಗಿ ಆರೋಗ್ಯ ಉತ್ತಮವಾಗಿರುವುದಕ್ಕೆ ಈ ದಿನ ನಾವು ಒಂದೊಳ್ಳೆ ಉತ್ತಮ ಮನೆಮದ್ದು ತಿಳಿಸಿಕೊಡುತ್ತಿದ್ದೇವೆ ಈ ಮನೆಮದ್ದನ್ನು ಪಾಲಿಸುವುದರಿಂದ ನಿಮಗೆ ಅಪಾರ ಆರೋಗ್ಯಕರ ಲಾಭಗಳು ಆಗುತ್ತದೆ ಅದೇನು ಅಂತ ನಾವು ತಿಳಿಸಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಡೀರಿ ಈ ಉತ್ತಮ ಮನೆಮದ್ದು ಮಾಡುವುದರಿಂದ ನಿಮಗೆ ರಕ್ತ ಶುದ್ಧಿಯಾಗುವುದು ಜೊತೆಗೆ ಕರುಳು ಸ್ವಚ್ಛ ಆಗುವುದರೊಂದಿಗೆ ಜೀರ್ಣಶಕ್ತಿ ಉತ್ತಮವಾಗಿ ನಡೆಯುತ್ತದೆ ಹಾಗಾಗಿ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಆರೋಗ್ಯವೃದ್ಧಿಗೆ ಮಾಡಿಕೊಳ್ಳುವ ಉತ್ತಮ ಡ್ರಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಬೆಲ್ಲ ನಿಂಬೆ ರಸ ಮತ್ತು ನೀರು ಹೌದು ಬೆಲ್ಲವನ್ನು ಅದಷ್ಟು ಶುದ್ಧವಾದ ಬೆಲ್ಲವನ್ನೇ ತೆಗೆದುಕೊಳ್ಳಿ.ಈ ಮನೆಮದ್ದು ಮಾಡುವಾಗ ಬೆಲ್ಲವನ್ನ ಮೊದಲು ಸ್ವಚ್ಛ ಮಾಡಿಕೊಂಡು ಆದಷ್ಟು ಆರ್ಗ್ಯಾನಿಕ್ ಬಲ ತೆಗೆದುಕೊಂಡರೆ ಇನ್ನಷ್ಟು ಉತ್ತಮ ಹಾಗೆ ನೀರನ್ನು ಕುದಿಯಲು ಇಡಿ ಈ ನೀರಿಗೆ ಬೆಲ್ಲವನ್ನು ಹಾಕಿ, ನೀರಿನಲ್ಲಿ ಬೆಲ್ಲವನ್ನು ಕರಗಿಸಿ ಇಟ್ಟುಕೊಳ್ಳಬೇಕು ಬಳಿಕ ಈ ನೀರನ್ನು ಒಮ್ಮೆ ಶೋಧಿಸಿಕೊಳ್ಳಿ ಯಾಕೆಂದರೆ ಒಮ್ಮೊಮ್ಮೆ ಬೆಲ್ಲದಲ್ಲಿ ಕಲ್ಲು ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಕೊಂಡ ಬಳಿಕ ಅದನ್ನು ಶೋಧಿಸಿಕೊಂಡು ಇಟ್ಟುಕೊಳ್ಳಿ.
ಈಗ ಈ ಶೋಧಿಸಿಕೊಂಡ ಬೆಲ್ಲದ ನೀರಿಗೆ ನಿಂಬೆ ರಸವನ್ನು 1 ಚಮಚದಷ್ಟು ಮಿಶ್ರಮಾಡಿ ಈ ಡ್ರಿಂಕ್ ಅನ್ನು ನೀವು ಬೆಳಿಗ್ಗೆ ಉಷಾ ಪ್ರದಾನದ ಬಳಿಕ ಸೇರಿಸಬೇಕು ಹೌದು ಇದರಲ್ಲೇನಿದೆ ಚಮತ್ಕಾರ ಅಂತ ನೀವು ಅಂದುಕೊಳ್ಳುತ್ತಿದ್ದರೆ, ಇದರಲ್ಲಿ ನೀವು ಅಪಾರ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಈ ಡ್ರಿಂಕ್ ಅನ್ನು ನೀವು ಬೆಳಿಗ್ಗೆ ಸಮಯ ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಹೌದು ಇದರ ಜೊತೆಗೆ ಇದರಲ್ಲಿ ಬಳಸಿರುವುದು ನಾವು ಶುದ್ಧವಾದ ಬೆಲ್ಲ ಈ ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ ಹಾಗಾಗಿ ಕಬ್ಬಿಣದ ಅಂಶ ರಕ್ತದ ಕೊರತೆಯನ್ನು ಅಂದರೆ ಹಿಮೋಗ್ಲೋಬಿನ್ ಕೊರತೆಯನ್ನು ನಿವಾರಿಸುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ತಪ್ಪದೆ ಮಾಡಬಹುದಾದ ಮನೆಮದ್ದು ಇದಾಗಿರುತ್ತದೆ ದಿನಬಿಟ್ಟು ದಿನ ಬೇಕಾದರೂ ನೀವು ಪಾಲಿಸಿಕೊಂಡು ಬರಬಹುದು ಉತ್ತಮ ಆರೋಗ್ಯ ಲಾಭಗಳು ನಿಮಗೆ ಸಿಗುತ್ತದೆ.
ಇದರ ಜೊತೆಗೆ ಈ ಮನೆಮದ್ದನ್ನು ಪಾಲಿಸುವುದರಿಂದ ಕರುಳು ಸುದ್ದಿಯಾಗುತ್ತದೆ ಇದರಿಂದ ಯಾವುದೇ ಕಾರಣಕ್ಕೂ ಕರುಳು ಸಂಬಂಧಿ ತೊಂದರೆಗಳು ಬರುವುದಿಲ್ಲ ಮಲಬದ್ಧತೆ ಮೂಲವ್ಯಾಧಿ ಜೀರ್ಣ ಶಕ್ತಿಗೆ ಸಂಬಂಧಿಸಿದ ತೊಂದರೆಗಳು ಇವ್ಯಾವುದೂ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ ಹಾಗೂ ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದ್ದರಿಂದ ಪುರುಷರು ಮಹಿಳೆಯರು ಎನ್ನದೆ ಎಲ್ಲರೂ ಕೂಡ ಮಾಡಬಹುದಾದ ಪರಿಹರ ಇದಾಗಿರುತ್ತದೆ, ಇದನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.