ಅಪ್ಪುವಿನ ಡೈ ಹಾರ್ಟ್ ಫ್ಯಾನ್ ಎಂದಿದ್ದ ಅನುಶ್ರೀ ಅಪ್ಪು ಅವರ ಅಗಲಿಕೆಯ ಒಂದೇ ತಿಂಗಳಿನ ಒಳಗೆ ಇವರು ಮಾಡಿರುವ ಕೆಲಸ ನೋಡಿ ಇದನ್ನ ನೋಡಿದ ಅಭಿಮಾನಿಗಳು ಕೂಡ ಅನುಶ್ರೀ ಅವರನ್ನು ಎಲ್ಲಾ ಬರೀ ಡವ್ ಅಂತಿರೋದು ಯಾಕೆ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.ಹೌದು ಅಪ್ಪು ಅವರ ಅಗಲಿಕೆಯಿಂದ ಅದೆಷ್ಟೋ ಮಂದಿ ನೋವು ನೋವು ತಿಂದಿದ್ದರು ಅಷ್ಟೇ ಅಲ್ಲ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿದ್ದರೂ ಇನ್ನೂ ಕೆಲವರು ಹೃದಯಾಘಾತದಿಂದ ಪ್ರಾಣ ಬಿಟ್ಟಿರುವುದು,
ಕೂಡ ಉಂಟು ಇಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ದೊಡ್ಮನೆಯವರು ಅಭಿಮಾನಿಗಳ ಬಳಿ ಅಂಗಲಾಚಿ ಬೇಡಿಕೊಂಡಿದ್ದರು. ಹೌದು ಅಪ್ಪು ನಮ್ಮ ಕರುನಾಡ ರಾಜಕುಮಾರನಾಗಿದ್ದನು ಕೇವಲ ನಟನಾ ಕ್ಷೇತ್ರಕ್ಕೆ ಮಾತ್ರ ಅವರು ಸೀಮಿತವಾಗಿರಲಿಲ್ಲ ಅವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು ಎಲ್ಲರೂ ಪ್ರೀತಿಸುವಂತಹ ವ್ಯಕ್ತಿಯಾಗಿದ್ದರು ಯಾಕೆಂದರೆ ಅಪೂರ್ವ ದೊಡ್ಮನೆ ಮಗನಾಗಿದ್ದರೂ ಆ ದೊಡ್ಡತನ ಎಂಬುದು ಹಕ್ಕು ಅವರಲ್ಲಿ ರಕ್ತಗತವಾಗಿ ಬಂದಿತ್ತು ಅಪ್ಪು ಬಲಗೈ ಮಾಡಿದ ಕೆಲಸ ಎಡಗೈಗೆ ಗೊತ್ತಾಗಬಾರದು ಎಂಬ ವ್ಯಕ್ತಿತ್ವವುಳ್ಳವರು.
ಅವರು ಎಷ್ಟು ಅನಾಥ ಮಕ್ಕಳನ್ನು ಸಾಕುತ್ತಿದ್ದರು ಎಷ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಹಣ ನೀಡುತ್ತಿದ್ದರು ಹಾಗೆ ಗೋಶಾಲೆಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು ಹೀಗಿರುವಾಗ ಅಂತಹ ವ್ಯಕ್ತಿಯನ್ನು ಕಳೆದುಕೊಂಡಾಗ ಯಾರಿಗೆ ತಾನೆ ನೋವು ಉಂಟಾಗುವುದಿಲ್ಲ. ಯಾವುದೇ ಸಮಯದಲ್ಲಾದರೂ ಅಪ್ಪು ಅವರನ್ನ ನೆನಪಿಸಿಕೊಂಡರೆ ನಮ್ಮ ಕಣ್ಮುಂದೆ ಅವರ ಛಾಯೆ ಬರುವುದು ಅವರ ನಗುಮುಖ ಸದಾ ಎಲ್ಲಾ ಕಡೆ ನಗುಮುಖದಿಂದಲೆ ಸಹನೆಯಿಂದಲೇ ಇರುತ್ತಿದ್ದ ಅಪ್ಪು, ಈ ಸಮಾಜದಲ್ಲಿ ಆ ನಗು ಮುಖದಿಂದ ಅವರ ಒಳ್ಳೆಯತನದಿಂದ ಒಳ್ಳೆಯ ಕೆಲಸಗಳಿಂದ ಜೀವಂತವಾಗಿರುತ್ತಾರೆ.
ಹೀಗಿರುವಾಗ ಅಪ್ಪು ಅವರ ಕಟ್ಟಾ ಅಭಿಮಾನಿ ನಾನು ಎಂದು ಹೇಳಿಕೊಳ್ಳುತ್ತಿದ್ದ ಅನುಶ್ರೀ ಅವರು ಮಾಡಿರುವ ಕೆಲಸಕ್ಕೆ ಅಭಿಮಾನಿಗಳು ಬೇಸರ ಉಂಟು ಮಾಡಿದ್ದಾರೆ ಅದೇನು ಅಂತ ಹೇಳ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಸ್ನೇಹಿತರ ಅನುಶ್ರೀ ಮಾತ್ರವಲ್ಲ ಬಹಳಷ್ಟು ಮಂದಿ ಅಪ್ಪು ಅವರ ಪಟ್ಟ ಅಭಿಮಾನಿಗಳಿದ್ದಾರೆ, ಅಪ್ಪು ಇನ್ನಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಅವರನ್ನು ನೋಡಲು ಆಸ್ಪತ್ರೆಯ ಬಳಿ ಓಡೋಡಿ ಬಂದಿದ್ದರು.
ಅಷ್ಟೇ ಅಲ್ಲ ಇಡೀ ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕವೇ ಸ್ತಬ್ಧವಾಗಿದ್ದು ಅಪ್ಪು ಅವರನ್ನ ನೋಡಲು ಮೂಲೆ ಮೂಲೆ ಯಿಂದ ಅವರ ಅಂತಿಮ ದರ್ಶನಕ್ಕಾಗಿ ಬಂದಿದ್ದರು. ಅಪ್ಪು ಅವರ ಅಗಲಿಕೆಯ ಬಳಿಕ ಎಲ್ಲ ವಾಹಿನಿಗಳಲ್ಲಿಯೂ ಅಪ್ಪು ಅವರಿಗೆ ಅವರ ಅಗಲಿಕೆಗೆ ಶಾಂತಿ ಕೋರಲಾಗಿತ್ತು ಅದೇ ವೇಳೆ ವೇದಿಕೆ ಮೇಲೆ ಅನುಶ್ರೀ ಅವರು ಅವರಿಲ್ಲದೆ ನಾನು ಹೇಗಿರಲಿ ಅವರು ನನ್ನ ಫೇವರೇಟ್ ನಟ ನನ್ನ ಫೇವರೆಟ್ ವ್ಯಕ್ತಿ ನನ್ನ ತಾಯಿಯನ್ನು ಬಿಟ್ಟರೆ ನನಗೆ ತುಂಬ ಇಷ್ಟ ಅಂದ್ರೆ ಅಪ್ಪು ಮಾತ್ರ ಅಂತ ಹೇಳಿಕೊಂಡಿದ್ದರು.
ಆದರೆ ಅಪ್ಪು ಅವರು ಅಗಲಿದ ಬಳಿಕ ಇನ್ನೂ ಒಂದು ತಿಂಗಳೇ ಕಳೆದಿರಲಿಲ್ಲ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದ ಅನುಶ್ರೀ ಅವರನ್ನ ಕಂಡು ಇವರು ಅಪ್ಪು ಅಭಿಮಾನಿಯಾ ಎಂದು ಎಲ್ಲರೂ ಕೂಡ ಪ್ರಶ್ನೆ ಮಾಡಿದ್ದರು. ಇತ್ತ ಅನುಶ್ರೀ ಅವರ ಬಗ್ಗೆ ಅಭಿಮಾನಿಗಳು ಹೀಗೆ ಮಾತಾಡುವಾಗ ಕೆಲವರು ಇವರ ಕುರಿತು ಬೇಸರ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಇದೆಲ್ಲಾ ಡವ್ವು ಅಂತ ಹೇಳಿದ್ದರು. ಆದರೆ ವೇದಿಕೆ ಮೇಲೆ ಅನುಶ್ರೀ ಅವರು ಕುಣಿದು ಕುಪ್ಪಳಿಸಿದ್ದು ಎಷ್ಟು ಸರಿ ಎಷ್ಟು ತಪ್ಪು ಈ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.