ಹಿರಿಯರಿಗೆ ಕಿರಿಯರಿಗೆ ಯುವಜನತೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಇವರು ಕಲಾವಿದರ ಆರಾಧ್ಯದೈವ ಹೌದು ಅವರೇ ನಟಸಾರ್ವಭೌಮ ರಾಜ್ಕುಮಾರ್. ನಮ್ಮ ಪ್ರೀತಿಯ ನಟ ಹೆಮ್ಮೆಯ ನಟ ರಾಜಕುಮಾರ್ ಅವರು ಏಪ್ರಿಲ್ 24 1929ರಲ್ಲಿ ಜನಿಸಿದರು. ಸ್ಯಾಂಡಲ್ ವುಡ್ ನ ಧ್ರುವತಾರೆ ಅಂತಾನೆ ಇವರನ್ನು ಕರೆಯುತ್ತಾರೆ ಹೌದು ರಾಜಣ್ಣ ಅವರ ನಟನೆಗೆ ಮತ್ತೆ ಯಾರೂ ಸಾಟಿಯಿಲ್ಲ ಅವರ ನಟನೆಗೆ ಅವರೇ ಸರಿಸಾಟಿ ಇವರು ನಟ ಮಾತ್ರ ಅಲ್ಲ ಗಾಯಕರು ಸಹ ಹೌದು. ರಾಜಕುಮಾರ್ ಅವರು 5ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯ ಮಾಡಿ ಕರ್ನಾಟಕದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಯಾಗಿ ಮಿಂಚಿದ್ದರು ಹಾಗೂ ನಮ್ಮ ಕರ್ನಾಟಕಾದ್ಯಂತ ಮಾತ್ರವಲ್ಲಾ ನ್ಯಾಷನಲ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಮಿಂಚಿರುವ ಇವರು ಇವರ ನಟನೆಗೆ ಸೋಲದವರೆ ಇಲ್ಲಾ. ರಾಜಕುಮಾರ್ ಅವರು ಎಂತಹ ಪ್ರತಿಭೆ ಅಂದರೆ ಇವರ ನಟರಾಗಿ ಮಾತ್ರ ಹೆಸರು ಮಾಡದೆ ಹಿನ್ನಲೆಗಾಯಕರಾಗಿಯೂ ಸಹ ಜನಪ್ರಿಯತೆ ಪಡೆದುಕೊಂಡಿದ್ದಾರೆ ಎನ್ನುವ ರಾಜಕುಮಾರ್ ಅವರ ಮಕ್ಕಳ ಬಗ್ಗೆ ಹೆಚ್ಚಿನದಾಗಿ ಹೇಳುವುದೇ ಬೇಡ. ಇವರ ಮಕ್ಕಳು ತನ್ನ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಯಶಸ್ಸು ಗಳಿಸಿರುವ ನಟರುಗಳಾಗಿದ್ದರೆ.
ನಟ ರಾಜಕುಮಾರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನೂ ಪದವಿಯನ್ನು ಪಡೆದು ಕೊಂಡಿದ್ದಾರೆ, ಇನ್ನೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿಯನ್ನು ಪಡೆದಿದ್ದಾರೆ, ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಹಾಗೆ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಕೂಡ ರಾಜಕುಮಾರ್ ಅವರಿಗೆ ಲಭಿಸಿದೆ ಇನ್ನು ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪುರಸ್ಕಾರ ಸಹ ಇವರಿಗೆ ಲಭಿಸಿದೆ. 2000ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ ನಿಂದ ಅಪಹರಣವಾಗಿದ್ದ ರಾಜ್ಕುಮಾರ್ 104 ದಿನಗಳ ನಂತರ ಬಿಡುಗಡೆಯಾಗಿ ಇದ್ದರು ರಾಜಣ್ಣ. ನಟ ರಾಜಕುಮಾರ್ ಅವರು 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಇನ್ನೂ ರಾಜ್ ಕುಮಾರ್ ಅವರ ಪತ್ನಿಯಾಗಿರುವ ಪಾರ್ವತಮ್ಮ ರಾಜಕುಮಾರ್ ಅವರು ಸಹ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ರಾಜಕುಮಾರ್ ಅವರ ತಂದೆ ಅವರು ಪಾರ್ವತಮ್ಮ ಅವರು ಚಿಕ್ಕ ಮಗುವಾಗಿದ್ದಾಗಲೆ ಇವರೇ ನನ್ನ ಸೊಸೆ ಎಂದು ಹೇಳಿಕೊಂಡಿದ್ದರಂತೆ. ನೀನು ಪಾರ್ವತಮ್ಮ ರಾಜಕುಮಾರ್ ದೊಡ್ಮನೆ ಸೊಸೆ ಆಕೆ ಬಂದ ಬಳಿಕ ರಾಜ್ ಕುಮಾರ್ ಅವರ ಪ್ರತಿಯೊಂದು ಯಶಸ್ಸಿಗೂ ಕಾರಣರಾಗಿದ್ದು, ತಮ್ಮ ದೊಡ್ಮನೆ ಗೌರವವನ್ನು ಕಾಪಾಡಿಕೊಳ್ಳಲು ಬಹಳಷ್ಟು ಶ್ರಮಿಸಿದ್ದಾರೆ.
ಪ್ರತಿಯೊಬ್ಬರಿಗೂ ಗೊತ್ತಿದೆ ಗಾಜನೂರಿನ ಪರಿಚಯವು ಸಹಾಯದ ಯಾವುದೋ ರಾಜನ ಅವರ ಹುಟ್ಟೂರು ಗಾಜನೂರು ಹಾಗೆ ಹಲವು ಚಿತ್ರೀಕರಣವು ಸಹ ಈ ಗಾಜನೂರಿನಲ್ಲಿ ನಡೆದಿದೆ. ಅಪ್ಪನನ್ನು ಕಳೆದುಕೊಂಡ ಬಳಿಕ ರಾಜಕುಮಾರ್ ಅವರ ಮಕ್ಕಳು ಅವರ ತಂದೆಯ ಹುಟ್ಟೂರನ್ನು ಮರೆಯಲಿಲ್ಲ ಹೌದು ಅವರ ಹುಟ್ಟೂರಿನಲ್ಲೇ ಇರುವ ಮನೆಯನ್ನು ಹಾಗೇ ಜೋಪಾನವಾಗಿ ನೋಡಿಕೊಳ್ಳುತ್ತಾ ಅಂದರೆ ರಾಜಕುಮಾರ್ ಅವರು ಹುಟ್ಟಿದಂತಹ ಮನೆಯನ್ನು ಹಾಗೆ ಕಾಪಾಡಿಕೊಂಡು ಬಂದಿರುವ ಈ ಮೂವರು ಮಕ್ಕಳು ತಮ್ಮ ತಂದೆಯವರ ನೆನಪಿಗಾಗಿ ಮನೆಯನ್ನು ಜೋಪಾನವಾಗಿ ಉಳಿಸಿಕೊಂಡಿದ್ದಾರೆ ಹಾಗೆ ಆಗಾಗ ಈ ಮೂವರು ಮಕ್ಕಳು ಗಾಜನೂರಿಗೆ ಭೇಟಿ ನೀಡಿ ಅಲ್ಲಿಯ ಜನರ ಕ್ಷೇಮ ಸಮಾಚಾರವನ್ನು ತಿಳಿದುಕೊಳ್ಳುತ್ತಾ ಇರುತ್ತಾರೆ ಅಷ್ಟೇ ಅಲ್ಲ ಗಾಜನೂರಿನಲ್ಲಿ ದೊಡ್ಡ ಬಂಗಲೆಯನ್ನು ಸಹ ಹೊಂದಿದ್ದಾರೆ ರಾಜ್ಕುಮಾರ್ ಕುಟುಂಬದವರು. ಹೌದು ರಾಜಕುಮಾರ್ ಕುಟುಂಬದವರು ಅಂದ್ರೆ ದೊಡ್ಮನೆ ಅವರು ಆಗಾಗ ಗಾಜನೂರಿನ ಈ ಬಂಗಲೆಗೆ ಬಂದು ಅಲ್ಲಿ ಸ್ವಲ್ಪ ಸಮಯ ಕಳೆದು ಹೋಗುತ್ತಾ ಇರುತ್ತಾರೆ ಅಂದ್ಹಾಗೆ ಪುನೀತ್ ರಾಜಕುಮಾರ್ ಅವರು ಸಹ ತಮ್ಮ ತಂದೆಯ ನೆನಪಾದಾಗಲೆಲ್ಲಾ ತಮ್ಮ ತಂದೆ ಊರಿಗೆ ಹೋಗಿ ಸಮಯ ಕಳೆದು ಬರುತ್ತಿದ್ದರಂತೆ. ಇನ್ನೂ ದೊಡ್ಮನೆ ಕುಟುಂಬ ಗಾಜನೂರಿಗೆ ಭೇಟಿ ನೀಡಿದ ಈ ಫೋಟೋ ಅನ್ನೂ ನೀವು ಸಹ ಈ ಲೇಖನದಲ್ಲಿ ಕಾಣಬಹುದು.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.