ನಮಸ್ತೆ ಸ್ನೇಹಿತರೆ ಒಬ್ಬ ತಾಯಿ ತನ್ನ ಮಗುವನ್ನು ಬೆಳೆಸಲು ಅದೆಷ್ಟು ಕಷ್ಟ ಪಡುತ್ತಾಳೆ ಎಂದರೆ 9ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಇಟ್ಟುಕೊಂಡು ಕಾಳಜಿಯಿಂದ ಬೆಳೆಸುವುದಲ್ಲ ಆ ಮಗು ಹುಟ್ಟಿದ ನಂತರವೂ ಕೂಡ ಅಷ್ಟೇ ಕಾಳಜಿ ಮಾಡುವವರು ಅಂದರೆ ಅದು ತಾಯಿಯೊಬ್ಬಳೆ. ಇನ್ನು ಈ ದಿನದ ಲೇಖನದಲ್ಲಿ ಒಬ್ಬ ತಾಯಿಯ ಜಾಗದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಈ ತಾಯಿ ತನ್ನ ಮಗನನ್ನು ಓದಿಸುವುದಕ್ಕಾಗಿ ತನ್ನ ಮಗನ ಕಾಳಜಿ ಮಾಡುವುದಕ್ಕಾಗಿ ತನ್ನ ಮಗನನ್ನು ದೊಡ್ಡ ವ್ಯಕ್ತಿ ಮಾಡುವುದಕ್ಕಾಗಿ ಸಾರಾಯಿ ಮಾಡುವ ಮೂಲಕ ಮಗನನ್ನು ಸಮಾಜದಲ್ಲಿ ದೊಡ್ಡ ವ್ಯಕ್ತಿ ಮಾಡುತ್ತಾಳೆ ಅನಂತರ ಮಗ ಮಾಡಿದ್ದು ಏನು ಗೊತ್ತಾ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.
ಬಡ ಕುಟುಂಬಕ್ಕೆ ಸೇರಿದ ಒಬ್ಬ ಗ’ರ್ಭಿಣಿ ಮಹಿಳೆ ಈ ಸಮಯದಲ್ಲಿಯೇ ಈ ಮಹಿಳೆ ತನ್ನ ಗಂಡನನ್ನು ಕೂಡ ಕರೆದುಕೊಳ್ಳುತ್ತಳೆ. ಇದೆಲ್ಲಾ ಆದ ಬಳಿಕ ಆಕೆಯ ಸಂಬಂಧಿಕರು ಆಕೆಗೆ ಸಹಾಯ ಮಾಡುವುದರ ಬದಲು ಆ ಮಗುವನ್ನು ಮುಗಿಸಿಬಿಡು ಎಂದು ಬಹಳ ಕಷ್ಟವನ್ನು ಕೊಡುತ್ತಾರೆ ಹಿಂಸೆ ನೀಡುತ್ತಾರೆ. ನಂತರ ಇವರ ಹಿಂ’ಸೆ’ಯನ್ನು ತಾಳಲಾರದೇ ತನ್ನ ಹುಟ್ಟೂರಿಗೆ ಬಂದು ಅಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಾಳೆ 1ಹೊತ್ತಿನ ಊಟಕ್ಕೂ ಸಹ ಹಣ ಇರದೆ ತನ್ನ ಜೀವನವನ್ನು ಸಾಗಿಸುತ್ತಾ ತನ್ನ ಜೀವನದಲ್ಲಿ ಸೋಲಬಾರದೆಂಬ ದೃಢ ನಿರ್ಧಾರವನ್ನು ತೆಗೆದುಕೊಂಡು ಕೊನೆಗೆ ಜನವರಿ 7 1988ರಲ್ಲಿ ಆಕೆ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ.. ಆ ಮಗುವೇ ರಾಜೇಂದ್ರ ಭಾರೂದ್. ಆದರೆ ರಾಜೇಂದ್ರ ಅವರ ತಾಯಿ ಕಮಲಾ ಭಾಯಿ ತುಂಬಾ ಚಿಂತೆಗೆ ಹೊಳಗಾಗುತ್ತಾರೆ. ಮಗುವನ್ನು ಹೇಗೆ ಸಾಕಲಿ ಕೈಯಲ್ಲಿ ಒಂದಷ್ಟು ಹಣ ಇಲ್ಲ..
ಮಗುವಿನ ಮುಂದಿನ ಭವಿಷ್ಯ ಹೇಗೆ ಎಂದು ತುಂಬಾ ಯೋಚನೆಯನ್ನು ಮಾಡುತ್ತ ಇರುತ್ತಾರೆ ಆಗಲೇ ಸ್ನೇಹಿತರೊಬ್ಬರು ನೀನು ಮದ್ಯವನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಮಗುವನ್ನು ನೋಡಿಕೊಳ್ಳಲೆಂದು ಸಲಹೆಯನ್ನು ಕೂಡ ನೀಡುತ್ತಾರೆ ಆದರೆ ಕಮಲಾಬಾಯಿಗೆ ಕೆಲಸಮಾಡಲು ಸ್ವಲ್ಪವೂ ಮನಸ್ಸಿರಲಿಲ್ಲ. ಆದರೂ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಿತ್ತು. ನಂತರ ಸರಾ’ಯಿಯನ್ನು ಮಾರುತ್ತಾ ತನ್ನ ಮಗವನ್ನು ನೋಡಿಕೊಳ್ಳುತ್ತಾ ಜೀವನ ನಡೆಸುತ್ತಿರುತ್ತಾಳೆ.. ನಿಧಾನವಾಗಿ ಮಗು ರಾಜೇಂದ್ರ ದೊಡ್ಡವನಾದ. ತನ್ನ ಮನೆಯ ಪರಿಸ್ಥಿತಿ ಏನು ಎಂದು ಅವನಿಗೂ ಸಹ ಅರ್ಥವಾಗತೊಡಗಿತು. ತನ್ನ ತಾಯಿ ಕಷ್ಟವನ್ನು ನೋಡಿದ ರಾಜೇಂದ್ರ ಅವರು ನಾನು ಚೆನ್ನಾಗಿ ಓದಿ ದೊಡ್ಟ ಅಧಿಕಾರಿಯಾಗಬೇಕು ಎಂದು ನಿರ್ಧಾರ ಮಾಡುತ್ತಾನೆ..
ಇನ್ನೂ ತಾಯಿ ದುಡಿದ ಹಣದಲ್ಲಿ ಮನೆ ನಡೆಸುವುದೇ ಸಾಕಾಗುತ್ತಿತ್ತು ಇನ್ನೂ ತನ್ನ ವಿದ್ಯಾಭ್ಯಾಸಕ್ಕೆ ಏಕೆ ಹಣ ತರುತ್ತಾಳೆ ಎಂದು ಅರ್ಥಮಾಡಿಕೊಂಡ ರಾಜೇಂದ್ರ ಅವರು ಸಣ್ಣಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ತನ್ನ ಓದಿಗಾಗಿ ಹಣ ಕೊಡಿಸುತ್ತಾ ಇದ್ದರೂ ಈ ಕಡೆ ತನ್ನ ತಾಯಿ ಗು ಕೂಡ ಸಹಾಯ ಮಾಡುತ್ತಾ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಓದಿಕೊಳ್ಳುತ್ತಾ ಇದ್ದರು. ಇನ್ನೂ 10ನೇ ತರಗತಿಯಲ್ಲಿ ರಾಜೇಂದ್ರ ಅವರು ಶೇಕಡಾ 85 ಪರ್ಸೆಂಟೇಜ್ ಗೂ ಅಧಿಕ ಅಂಕಗಳನ್ನ ಪಡೆದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದ. ನಂತರ ದ್ವಿತೀಯ ಪಿಯುಸಿಯಲ್ಲಿ 90 ಪರ್ಸೆಂಟ್ ಅಕಂಗಳನ್ನು ಪಡೆದಿದ್ದರು ರಾಜೇಂದ್ರ . ಇನ್ನೂ ರಾಜೇಂದ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಗುರಿ ಅನ್ನೂ ಹೊಂದಿದ್ದರು.
ಅದೇ ರೀತಿ ಮುಂದೆ ಮೆಡಿಕಲ್ ನಲ್ಲಿ ಉತ್ತಮ ಅಂಕಗಳನ್ನು ಪಡೆದು.. 2011 ರಲ್ಲಿ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇಷ್ಟಕ್ಕೆ ಸುಮ್ಮನಿರದ ರಾಜೇಂದ್ರ ಅವರಿಗೆ ಐಎಎಸ್ ಆಗಬೇಕು ಎನ್ನುವ ಆಸೆ ಬರುತ್ತದೆ.. ಅಂದಿನಿಂದಲೇ ಐಎಎಸ್ ತರಬೇತಿಯನ್ನು ಪಡೆದು ಯುಪಿಎಸ್ ಸಿ ಎಕ್ಸಾಮ್ ಬರೆಯುತ್ತಾರೆ. ನಂತರ 2013 ರಲ್ಲಿ ಐಎಎಸ್ ಅಧಿಕಾರಿಯಾಗುವ ಕನಸನ್ನು ಪೂರ್ತಿ ಮಾಡಿಕೊಳ್ಳುತ್ತಾರೆ. ಅದೇ ಊರಿಗೆ ದೊಡ್ಡ ಅಧಿಕಾರಿ ಆಗಿ ಬಂದ ರಾಜೇಂದ್ರ ಅವರನ್ನು ಅವರ ಕುಟುಂಬದವರೆಲ್ಲಾ ಮನೆಗೆ ಬಂದು ಅವರ ಸಾಧನೆಯನ್ನು ಕೊಂಡಾಡುತ್ತ ಇನ್ನೂ ತನ್ನ ಮಗ ಸಾಧನೆ ಮಾಡಿದ್ದಾನೆ ಎಂದು ತಿಳಿದು ಕಮಲಾಬಾಯಿಯವರ ಖುಷಿಗೆ ಪಾರವೇ ಇರಲಿಲ್ಲ ಆಕೆಯ ಕಣ್ಣೀರಿನಲ್ಲಿ ಸಂತಸ ಕಾಣಿಸುತ್ತಾ ಇತ್ತು. ರಾಜೇಂದ್ರ ಅವರ ಈ ಸಾಧನೆಯ ಈ ಕಥೆಯನ್ನು ನಿಜಕ್ಕೂ ಪ್ರತಿಯೊಬ್ಬರು ಕೂಡ ತಿಳಿಯಲೇಬೇಕು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಈ ಕಥೆಯನ್ನು ತಿಳಿಸಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.