ನಮಸ್ಕಾರ ಪ್ರಿಯ ಓದುಗರೆ ಈ ಎಲೆ ನಿಮ್ಮ ಅದೆಷ್ಟು ಅನಾರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ ಗೊತ್ತಾ? ಹೌದು ನಮ್ಮೊಳಗೆ ಅಗಾಧವಾದ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳಿವೆ ಅದರಲ್ಲಿ ಕೆಲವು ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಅವಶ್ಯಕವಾಗಿ ಇರುವಂತಹದ್ದು ಆಗಿದ್ದರೂ, ಇನ್ನೂ ಕೆಲ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಬ್ಯಾಕ್ಟೀರಿಯಾಗಳಾಗಿರುತ್ತವೆ.
ಹಾಗಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದ್ದು ಕೇವಲ ಹೊರಗಿನಿಂದ ಮಾತ್ರ ನಾವು ಸ್ವಚ್ಛವಾಗಿ ಆರೋಗ್ಯಕರವಾಗಿ ಕಂಡರೂ ಒಳಗಿನಿಂದ ಏನಾಗುತ್ತಿದೆ ಎಂಬುದು ನಮಗೆ ಗೊತ್ತಾಗುವುದಿಲ್ಲ ಕೆಲವೊಂದು ಬಾರಿ ನಮ್ಮ ಕೈಮೀರಿ ಹೋದಾಗ ಕೆಲವು ಶರೀರದೊಳಗಿರುವ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗಾಗಿ ಕೆಲವೊಂದು ಆಹಾರ ಪದಾರ್ಥಗಳ ಗುಣಧರ್ಮ ಹೇಗಿರುತ್ತದೆ ಅಂದರೆ ನಿಮಗೆ ಗೊತ್ತಿಲ್ಲದ ಅದೆಷ್ಟು ಅನಾರೋಗ್ಯ ಸಮಸ್ಯೆಗಳಿಗೆ ನಾವು ಸೇವಿಸುವಂತಹ ಆಹಾರ ಮದ್ದಾಗಿರುತ್ತದೆ. ಅಂತಹ ಆಹಾರ ಪದಾರ್ಥಗಳಲ್ಲಿ ಹಾಗೂ ಪ್ರಕೃತಿಯ ವರ ಆಗಿರುವ ಪದಾರ್ಥವಾಗಿರುವ ಇದೊಂದು ಎಲೆ ಬಹಳಷ್ಟು ಸಮಸ್ಯೆಗಳಿಗೆ ವರವಾಗಿದೆ ಅದೇ ವೀಳ್ಯದೆಲೆ.
ಹೌದು ಸ್ನೇಹಿತರೆ ಈ ವಿಳ್ಳೆದೆಲೆ ಎಂಬುದು ಸಾಮಾನ್ಯವಾಗಿ ಧಾರ್ಮಿಕ ಕಾರ್ಯಗಳಲ್ಲಿ ನಾವು ಬಳಸುತ್ತೇವೆ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಯು ಬಳಕೆಯಾಗುವ ವೀಳ್ಯದೆಲೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲ ಇದು ಆರೋಗ್ಯ ವೃದ್ಧಿಗೂ ಕಾರಣ ಆಗುತ್ತದೆ. ಆದಕಾರಣ ವಿಳ್ಳೆದೆಲೆಯ ಬಹು ಮುಖ ಪ್ರಯೋಜನಗಳ ಕುರಿತು ನಾವು ಈ ಮಾಹಿತಿಯ ಮೂಲಕ ತಿಳಿಸಿಕೊಡುತ್ತಿದ್ದೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ ನಿಮ್ಮ ಆರೋಗ್ಯವೃದ್ಧಿಗೆ ವಿಳ್ಳೆಯದೆಲೆ ಹೇಗೆ ಸಹಕಾರಿ ಎಂಬುದನ್ನು ಈ ಪುಟದ ಮೂಲಕ ತಿಳಿಯಿರಿ.
ವೀಳ್ಯದೆಲೆ ಸಾಮಾನ್ಯವಾಗಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತಹ ಪದಾರ್ಥವಾಗಿದೆ ವಿಳ್ಳೆದೆಲೆ ಅನ್ನು ಸಾಮಾನ್ಯವಾಗಿ ಊಟದ ಬಳಿಕ ಅಡಿಕೆ ಸುಣ್ಣದೊಂದಿಗೆ ಸೇವಿಸುತ್ತಾರ ಇನ್ನೂ ಕೆಲವರು ವೀಳೆದೆಲೆಗೆ ಕೊಬ್ಬರಿ ಸಕ್ಕರೆ ಸುಣ್ಣ ಅಡಿಕೆ ಅಂತಹ ಪದಾರ್ಥಗಳನ್ನು ಸೇರಿಸಿ ಬೀಡಾ ರೀತಿಯಲ್ಲಿಯು ಕೂಡ ತಿಂತಾರೆ ಇದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಗೊತ್ತಾ.
ಹೌದು ಊಟದ ಬಳಿಕ ವಿಳ್ಳೆದೆಲೆ ಹಾಕಿದರೆ ಕೆಲವರಿಗೆ ಊಟ ಸಂಪೂರ್ಣವಾದಂತೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ ಎಂಬ ನಂಬಿಕೆ ಅಂದಿನ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ ಗರ್ಭಿಣಿ ಸ್ತ್ರೀಯರಿಗೂ ಕೂಡ ವಿಳ್ಳೆದೆಲೆಯನ್ನು ಬರೆಯುವ ಜೊತೆಗೆ ಕೊಡುತ್ತಾರೆ ಇದರ ಅರ್ಥವೇನೆಂದರೆ ವಿಳ್ಳೆದೆಲೆ ಆರೋಗ್ಯಕ್ಕೆ ಬಲು ಪ್ರಯೋಜನಕಾರಿ ಲಾಭಗಳನ್ನ ಕೊಡುತ್ತದೆ ಎಂದು.
ವೀಳ್ಯದೆಲೆ ವಾತದ ಸಮಸ್ಯೆಗೆ ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಬಾಯಲ್ಲಿ ಹುಣ್ಣಾಗಿದೆ ಅಂದರೆ ಗಂಟಲು ನೋವು ಕೆಮ್ಮು ಶೀತಕ್ಕೆ ಉಪಶಮನವನ್ನು ನೀಡುವಂತಹ ಪ್ರಭಾವಶಾಲಿ ಮನೆ ಮದ್ದಾಗಿದೆ. ಇದನ್ನು ಯಾವ ರೀತಿ ಸೇವಿಸಿದರೆ ಯಾವ ರೋಗಗಳು ನಮ್ಮ ಬಳಿ ಬಳಿ ಬರುವುದಿಲ್ಲ ಗೊತ್ತಾ ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಂಡು ಅದನ್ನು ಪಾತ್ರೆಯೊಂದಕ್ಕೆ ಹಾಕಿ ವಿಳ್ಳೆದೆಲೆ ಅನ್ನು ಸಣ್ಣಗೆ ಕತ್ತರಿಸಿ ನೀರಿನೊಳಗೆ ಹಾಕಬೇಕು.
ಆದರೆ ಯಾವುದೇ ಕಾರಣಕ್ಕೂ ತೊಟ್ಟನ್ನು ಬಳಸಬೇಡಿ, ಯಾಕೆಂದರೆ ತೊಟ್ಟು ಆರೋಗ್ಯಕ್ಕೆ ಒಳ್ಳೆಯದಾಗಿರುವುದಿಲ್ಲ ಹಾಗಾಗಿ ತೊಟ್ಟು ಬಿಸಾಡಿ ವಿಳ್ಳೆದೆಲೆ ಅನ್ನು ಮಾತ್ರ ನೀರಿನೊಳಗೆ ಹಾಕಿ ಕುದಿಸಿ. ಶೋಧಿಸಿ ಬಳಿಕ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುತ್ತ ಬನ್ನಿ ಇದರಿಂದ ಉದರ ಸಂಬಂಧಿ ಸಮಸ್ಯೆ ಆಗಲಿ ಅಥವಾ ಚಳಿಗಾಲ ಮಳೆಗಾಲದಲ್ಲಿ ಕಾಡುವ ಕೆಮ್ಮು ಶೀತಕ್ಕೆ ಆಗಲಿ ಉತ್ತಮ ಔಷಧಿ ಆಗಿ ಪರಿಣಮಿಸಿ, ನಿಮಗೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.