ಹೌದು ಕಳೆದ ತಿಂಗಳು ಕರುನಾಡ ಜನತೆಗೆ ಅತ್ಯಂತ ಕರಾಳ ಸಮಯವಾಗಿತ್ತು ಅಪ್ಪು ಅವರು ಎಷ್ಟು ಆರೋಗ್ಯಕರವಾಗಿದ್ದರೂ ಸಹ, ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು ಜನರಲ್ಲಿ ಆತಂಕವನ್ನು ಮೂಡಿಸಿದೆ ಇನ್ನು ಈಗಾಗಲೇ ಆತಂಕಕ್ಕೆ ಒಳಗಾಗಿರುವ ಯುವಜನತೆ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಅಲ್ಲಿ ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಾ ಇರುವುದನ್ನು ಕಾಣಬಹುದಾಗಿದೆ ಪುನೀತ್ ಅಗಲಿಕೆಯ ನಂತರ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾ ಇರುವ ಮಂದಿ ಬಹಳ ಹೆಚ್ಚಾಗಿದ್ದು ಹೃದಯ ತಪಾಸಣೆ ನಡೆಸುತ್ತಾ ಇರುವ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜಯದೇವ ಆಸ್ಪತ್ರೆಯ ಓಪಿಡಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಧೀಡಿರ್ ಏರಿಕೆಯಾಗಿದೆ.
ಪುನೀತ್ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂಬ ವಿಚಾರ ಯಾವಾಗ ತಿಳಿಯಿತು ಅಂದಿನಿಂದ ಹೊರರೋಗಿಗಳ ಸಂಖ್ಯೆ ಅಲ್ಲಿ ಪ್ರತಿಶತ ಇಪ್ಪತ್ತರಷ್ಟು ಹೆಚ್ಚಿಗೆಯಾಗಿದ್ದು ಅದರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಈ ಆಸ್ಪತ್ರೆಗೆ ಸುಮಾರು ಸಾವಿರ ಸಂಖ್ಯೆಯಲ್ಲಿ ಮಂದಿ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಆದರೆ ಯಾವಾಗಿನಿಂದ ಈ ವಿಚಾರ ಭಾರೀ ವೈರಲ್ ಆಯಿತು, ಸುಮಾರು 1500 ಮಂದಿ ಬಂದಿದ್ದಾರೆ. ವ್ಯಾಯಾಮ ಮಾಡುವವರು ತಮ್ಮ ದೇಹದ ತೂಕಕ್ಕೆ ತಕ್ಕನಾಗಿ ವ್ಯಾಯಾಮ ಮಾಡಬೇಕು, ಆದರೆ ಅದಕ್ಕೆ ಮೀರಿ ತಮ್ಮ ತೂಕಕ್ಕೂ ಹೆಚ್ಚಿನದಾಗಿ ತೂಕ ಎತ್ತುವುದು ಅಥವಾ ವ್ಯಾಯಾಮ ಮಾಡುವುದು ಮಾಡಿದರೆ ಇದು ಹೃದಯದ ಮೇಲೆ ಆಗಲಿ ಅಥವಾ ದೇಹದ ಮೇಲೆ ಆಗಲೇ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದ್ದು, 30ವಯಸ್ಸಿನ ನಂತರ ವರುಷಕೊಮ್ಮೆ ಆದರೂ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಜಯದೇವ ಆಸ್ಪತ್ರೆಯ ಪ್ರಮುಖ ವೈದ್ಯರಾಗಿರುವ ಮಂಜುನಾಥ್ ಅವರು ಸಲಹೆ ನೀಡಿದ್ದಾರೆ.
ಹೌದು ಇಂದಿನ ದಿವಸಗಳಲ್ಲಿ ಮಂದಿ ತಿಳಿಯಬೇಕಾದದ್ದು ಏನು ಅಂದರೆ ಈ ಹೃದಯಾಘಾತ ಎಂಬುದು ಬಹಳ ಭೀಕರವಾಗಿದ್ದು ಈ ಅನಾರೋಗ್ಯ ಸಮಸ್ಯೆಯಿಂದ ಅದೆಷ್ಟೋ ಮಂದಿ ದೇಶದಾದ್ಯಂತ ತಮ್ಮ ಪ್ರಾಣ ಬಿಟ್ಟಿರುವ ವಿಚಾರ ಕೇಳಿದರೆ ಬಹಳ ನೋವಾಗುತ್ತದೆ. ಹೌದು ರಕ್ತವನ್ನು ದೇಹದ ಮೂಲೆಮೂಲೆಗೂ ಪಂಪ್ ಮಾಡುವಂತಹ ನಮ್ಮ ಹೃದಯ ಒಂದು ಕ್ಷಣ ತನ್ನ ಕೆಲಸವನ್ನು ನಿಲ್ಲಿಸಿ ಬಿಟ್ಟರೆ ನಮ್ಮ ಪ್ರಾ…ಣಪಕ್ಷಿ ಹಾರಿ ಹೋಗುವುದರಲ್ಲಿ ಅನುಮಾನವೆ ಇಲ್ಲಾ. ಈ ಕಾರಣಕ್ಕಾಗಿ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಹೆಚ್ಚು ಗಮನ ನೀಡಬೇಕಾಗುತ್ತದೆ ಹಾಗೆ ಈ ಹೃದಯಾಘಾತ ಆಗುವ ಮುನ್ನವೇ ಅಂದರೆ ಅವರ ಅಥವಾ ತಿಂಗಳು ಮುಂಚೆಯೇ ನಮ್ಮ ದೇಹ ನಮ್ಮ ಸೂಚನೆ ನೀಡುತ್ತದೆ.
ಹೀಗಾಗಿ ಹೃದಯಕ್ಕೆ ಸಂಬಂಧಿಸಿದ ಯಾವುದೇ ತರಹದ ಸಮಸ್ಯೆಗಳು ಎದುರಾದರೂ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಅಂದಹಾಗೆ ಈ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು ಎಂದರೆ ಒತ್ತಡ ಅನಾರೋಗ್ಯ ಹೆಚ್ಚಿಸುವ ಜೀವನಶೈಲಿ, ಅಂದರೆ ಹೆಚ್ಚು ಟ್ರಸ್ಟ್ ತೆಗೆದುಕೊಳ್ಳುವುದರಿಂದ ಇದು ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಜೊತೆಗೆ ಹೃದಯದ ಮೇಲೆ ಸಹ ಪರಿಣಾಮ ಬೀರುತ್ತದೆ ಇನ್ನೂ ಅಡುಗೆ ಎಣ್ಣೆ ಉಪಯೋಗಿಸುವಾಗ ಎಚ್ಚರದಿಂದ ಇರಿ ಏಕೆಂದರೆ ಈ ಅಡುಗೆ ಎಣ್ಣೆ ಸಹ ಆರೋಗ್ಯಕ್ಕೆ ಬಹಳ ಅಡ್ಡ ಪರಿಣಾಮವನ್ನುಂಟು ಮಾಡುವುದರಿಂದ ಹೃದಯದ ಆರೋಗ್ಯವನ್ನು ಕೆಡಿಸುತ್ತದೆ. ಏನೋ ವೈದ್ಯರ ಪ್ರಕಾರ ಈ ಹೃದಯಾಘಾತ ಆಗುವುದಕ್ಕಿಂತ ಮೊದಲು ಸುಮಾರು 4ಬಾರಿ ನಮ್ಮ ದೇಹ ನಮಗೆ ಹಾಗೂ ನಮ್ಮ ದೇಹಕ್ಕೆ ಸೂಚನೆ ನೀಡಿರುತ್ತದೆ.
ರೈತರ ಹೃದಯಾಘಾತ ಕಾಣಿಸಿಕೊಳ್ಳುವು ದಕ್ಕಿಂತ ಮೊದಲು ಯಾವ ಕೆಲಸ ಮಾಡದೇ ಇದ್ದರೂ ಸುಸ್ತಾಗುತ್ತಾ ಇರುತ್ತದೆ ಹಾಗೂ ಸರಿಯಾದ ಸಮಯಕ್ಕೆ ನಿದ್ರೆ ಬಾರದಿರುವುದು ಮತ್ತು ಆಗಾಗ ನಿದ್ರೆಯಿಂದ ಎಚ್ಚರ ಆಗುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ ಇಂತಹ ಯಾವ ಲಕ್ಷಣಗಳು ಕಂಡುಬಂದರೂ ನಿರ್ಲಕ್ಷಿಸಬೇಡಿ ಹಾಗೆ ಸ್ವಾಭಾವಿಕವಾಗಿ ದೇಹ ಹಾಗೂ ಮನಸ್ಸಿನ ಮೇಲೆ ಒತ್ತಡ ಬೀರುವುದು ಸಹಜವಾಗಿರುತ್ತದೆ ಎನೋ ಹೃದಯದ ಮೇಲೆ ಭೀಕರ ಪರಿಣಾಮ ಸಹ ಈ ಸಮಯದಲ್ಲಿ ಬೀರಬಹುದು. ಯಾವ ವ್ಯಕ್ತಿ ಚಿಕ್ಕ ಚಿಕ್ಕ ವಿಷಯಗಳಿಗೂ ತುಂಬಾನೇ ತಲೆಕೆಡಿಸಿಕೊಳ್ಳುತ್ತಾ ಇರುತ್ತಾರೆ .
ಮತ್ತು ಬೇಗನೆ ಸ್ಟ್ರೆಸ್ ಗೆ ಒಳಗಾಗುತ್ತಾನೆ ಇನ್ನು ಡಿಪ್ರೆಷನ್ಗೆ ಒಳಗಾಗಿರುತ್ತಾನೆ ಅಂಥವರಿಗೆ ಹೃದಯಾಘಾತ ಕಾಣಿಸಿಕೊಳ್ಳುವುದು ಹೆಚ್ಚಾಗಿರುತ್ತದೆ. ಏನೋ ಹೃದಯಾಘಾತ ಕಾಣಿಸಿಕೊಳ್ಳುವ ಮುನ್ನ ಕಾಣಿಸಿಕೊಳ್ಳುವ ಮತ್ತೊಂದು ಸೂಚನೆ ಎಂದರೆ ತಮ್ಮ ತೋಳಿನ ಶಕ್ತಿ ಬಹಳ ಕಡಿಮೆಯಾಗಿರುತ್ತದೆ ಮತ್ತು ಬಹಳ ಎಳೆತ ಇರುತ್ತದೆ. ಕ್ರಮೇಣ ಈ ಎಲ್ಲಾ ಅಂಶಗಳು ನಮ್ಮ ಮನಸ್ಸು ಮತ್ತು ಹೃದಯದ ಮೇಲೆ ಪರಿಣಾಮ ಬೀರಿ ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಗೆ ಪ್ರಚೋದನೆಯಾಗುತ್ತದೆ ಎಂದು ಹೇಳುತ್ತಾರೆ ವೈದ್ಯರು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಬೇರೆಯವರಿಗೂ ಸಹ ಈ ಹೃದಯ ಸಂಬಂಧಿ ಮಾಹಿತಿ ಕುರಿತು ತಿಳಿಸಿಕೊಡಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.