ರಾಜ ರಾಣಿ ವೇದಿಕೆಯ ಮೇಲೆ ತಮ್ಮ ಮಗುವನ್ನು ನೆನೆದು ಕಣ್ಣೀರಿಟ್ಟ ಸಮೀರ್ ಆಚಾರ್ಯ ದಂಪತಿ ಅದಕ್ಕೆ ಕಾರಣ ಅವರ ಜೀವನದಲ್ಲಿ ನಡೆದ ಈ ಕರಾಳ ಘಟನೆ …!!!

74

ಬಿಗ್ ಬಾಸ್ ಮನೆಗೆ ಸಮೀರ್ ಆಚಾರ್ಯ ಅವರು ಬಂದು ಬಹಳ ಪ್ರಖ್ಯಾತಿ ಪಡೆದುಕೊಂಡು ಹೋಗಿದ್ದರು ಹೌದು ಸೀಸನ್ ಐದಕ್ಕೆ ಸ್ಪರ್ಧಿ ಆಗಿ ಬಂದಿದ್ದ ಸಮೀರಾಚಾರ್ಯ ಅವರು ಬಿಗ್ ಬಾಸ್ ಮನೆಯೊಳಗೆ ಉತ್ತಮವಾಗಿ ಆಟವಾಡಿದರು ಸದಾಕಾಲ ವ್ಯಕ್ತಿವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಈ ಸ್ಪರ್ಧೆಯು ಟಾಪ್ ಆರನೇ ಸ್ಥಾನವನ್ನು ಪಡೆದುಕೊಂಡು ನಂತರ ಎಲಿಮಿನೇಟ್ ಆಗಿದ್ದರು. ಬಿಗ್ ಬಾಸ್ ಮನೆಗೆ ಬಂದ ನಂತರ ಈ ಸ್ಪರ್ಧೆ ಅಂದರೆ ಸಮೀರಾಚಾರ್ಯ ಹೆಚ್ಚು ಪ್ರಖ್ಯಾತಿ ಪಡೆದುಕೊಂಡವರು ಅಷ್ಟೇ ಅಲ್ಲ ಇವರು ಮೈಸೂರಿಗೆ ದಂಪತಿಗಳ ಸಮೇತ ಹೋದಾಗ ನಿವೇದಿತಾ ಗೌಡ ಹಾಗೂ ಚಂದನ್ ಅವರನ್ನ ಭೇಟಿ ಮಾಡಲೆಂದು ಹೋದಾಗ ಅಡ್ರಸ್ ಕಳೆದುಕೊಂಡು ನಂತರ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಸಹಾಯದಿಂದ ನಿವೇದಿತಾ ಗೌಡ ಅವರ ಮನೆ ತಲುಪಿದ್ದರು ಈ ದಂಪತಿಗಳು.

ಈ ವಿಚಾರವಾಗಿಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ದಂಪತಿಗಳು ಕೋಟ್ಯಾಧಿಪತಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮಕ್ಕೆ ಬಂದ ನಂತರವೂ ಕೂಡ ಸಮೀರಾಚಾರ್ಯ ಅವರು ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ತಪ್ಪು ಉತ್ತರವನ್ನು ನೀಡಿ ವೈರಲ್ ಆಗಿದ್ದರೂ ಹೀಗೆ ಆಗಾಗ ವೈರಲ್ ಆಗುತ್ತಲೇ ಇದ್ದ ಈ ಜೋಡಿಗಳು ಇದೀಗ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತೆ ಇರುವಂತಹ ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಬಂದಿದ್ದಾರೆ.

ರಾಜ ರಾಣಿ ಎಂಬ ಕಾರ್ಯಕ್ರಮಕ್ಕೆ ಬಂದಿರುವ ಈ ದಂಪತಿಗಳು ಟಾಸ್ಕ್ ವೊಂದರಲ್ಲಿ ಉತ್ತಮ ಜೀವನದ ಅತ್ಯಂತ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ ಹೌದು ವೇದಿಕೆ ಮೇಲೆ ಸಮೀರಾಚಾರ್ಯ ಅವರ ಪತ್ನಿಯಾಗಿರುವ ಶ್ರಾವಣಿ ಅವರು ತುಂಬಾ ಭಾವುಕರಾಗಿದ್ದರು ಹೌದು ಮಗುವಿನ ವಿಚಾರವಾಗಿ ನೀಡಿದ ಟಾಸ್ಕ್ ಅಲ್ಲಿ ಶ್ರಾವಣಿ ಅವರು ಬಹಳ ಭಾವುಕರಾಗಿ ತಾವು ಅನುಭವಿಸುತ್ತಾ ಇರುವ ನೋವೊಂದರ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು ಫ್ರೆಂಡ್ಸ್ ಕಳೆದ 3ವರ್ಷದ ಹಿಂದೆ ಶ್ರಾವಣಿ ಅವರಿಗೆ 3ತಿಂಗಳು ಇರುವಾಗಲೇ ಮಗುವಿನ ಹೃದಯದ ಬಡಿತ ಇಲ್ಲವೆಂದು ವೈದ್ಯರು ವಿಚಾರವನ್ನು ತಿಳಿಸಿದ್ದರು ಇನ್ನೂ ಆ ಸಮಯದಲ್ಲಿ ಮಗುವನ್ನು ತಗಿಸಬೇಕಾಗಿತ್ತು. ಈ ವಿಚಾರವನ್ನು ಕುರಿತು ವೇದಿಕೆ ಮೇಲೆ ಈ ದಂಪತಿಗಳು ಈ ಕಹಿ ಘಟನೆಯನ್ನು ಹಂಚಿಕೊಂಡಾಗ ವೇದಿಕೆಯ ಮೇಲಿರುವವರು ಕೂಡ ಕಣ್ಣೀರು ಇಟ್ಟಿದ್ದರೋ ಹೌದು ತಾಯಿಯೊಬ್ಬಳಿಗೆ ಮಗು ಅದೆಷ್ಟು ಒಲವು ಅಂದರೆ ತಾಯ್ತನ ಎಂಬುದು ಮಹಿಳೆಗೆ ಪ್ರಮುಖವಾದ ಘಟ್ಟ ಆಗಿರುತ್ತದೆ ಆಕೆಯ ಜೀವನ ಪರಿಪೂರ್ಣ ಎನಿಸಿಕೊಳ್ಳಬೇಕೆಂದರೆ ಆಕೆ ತಾಯಿ ಆದಾಗ ಮಾತ್ರ ಆಕೆಯ ಜೀವನಕ್ಕೆ ಸಾರ್ಥಕತೆ ಸಿಗುವುದು ಎಂದು ಸಮಾಜ ಭಾವಿಸುತ್ತದೆ.

ತನ್ನ ಮಗುವನ್ನು ಕಳೆದುಕೊಂಡು ಬಹಳ ಬೇಸರದಿಂದ ಈ ದಂಪತಿಗಳು ಇದೀಗ ರ ಸರಣಿ ಕಾರ್ಯಕ್ರಮದಲ್ಲಿ ನೀಡಿದ್ದ ಟಾಸ್ಕ್ ನಿಂದಾಗಿ ಆ ಹಳೆಯ ಘಟನೆಯನ್ನು ಮತ್ತು ನೆನಪಿಸಿಕೊಳ್ಳುವಂತಾಯಿತು ಅಷ್ಟೇ ಅಲ್ಲ ಈ ವೇದಿಕೆ ಮೇಲೆ ಶ್ರಾವಣಿ ಅವರು ತಮ್ಮ ಪತಿಗೆ ತನಗೆ ಮಗುವೊಂದು ಬೇಕು ಅಂತ ಸಹ ಕೇಳಿಕೊಂಡಿದ್ದು ಅಲ್ಲಿಯ ಜನರಿಗೆ ಇನ್ನಷ್ಟು ಭಾವುಕರನ್ನಾಗಿಸಿತ್ತು. ಸಮೀರಾಚಾರ್ಯ ಹಾಗೂ ಶ್ರಾವಣಿ ಅವರಿಗೆ ಆದಷ್ಟು ಬೇಗ ಅವರ ಆಸೆ ಈಡೇರಲಿ ಎಂದು ನಾವು ಕೂಡ ಕೇಳಿಕೊಳ್ಳೋಣ ಧನ್ಯವಾದ.